ಕಟೀಲು ದೇವಸ್ಥಾನದಲ್ಲಿ ಕೋಟ್ಯಂತರ ಅವ್ಯಹಾರ, ಆರೋಪಿತರಿಗೆ ಜಾಮೀನು

Sunday, July 19th, 2020
kateelu

ಮೂಡಬಿದ್ರೆ  : ಕಟೀಲು ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಅವ್ಯಹಾರ ನಡೆಯುತ್ತಿದೆ, ವಿಶೇಷ ಪೂಜೆ, ಯಕ್ಷಗಾನ ಮೇಳದ ಹೆಸರಲ್ಲಿ ಹಣ ವಸೂಲಿ,  ಚಿನ್ನದ ರಥ ಸೇವೆಗೆ ಹಣ ವಸೂಲಿ, ಚಂಡಿಕಾ ಯಾಗ.  ಹೋಮದ  ಹೆಸರಲ್ಲಿ ಹಣ ವಸೂಲಿ ನೆಡೆಯುತ್ತಿದೆ ಎಂದು  ಅಲ್ಲದೆ ಸಾರ್ವಜನಿಕರ ದುಡ್ಡು ದೇವರ ಹೆಸರಲ್ಲಿ ಅಸ್ರಣ್ಣ ಕುಟುಂಬದ ಮನೆ ಸೇರುತ್ತದೆ.  ಸರಕಾರೀ ದೇವಸ್ಥಾನದಲ್ಲಿ ವಸೂಲಿ ಒಂದು ಕಡೆಯಾದರೆ ಅದಕ್ಕೆ ರಶೀದಿ ಬೇರೆಯೇ ತೋರಿಸಲಾಗುತ್ತಿತ್ತು ಎಂದು ತನಿಖಾ ವರದಿ ಮಾಡಲಾಗಿತ್ತು. ಈ ಬಗ್ಗೆ ಅಸ್ರಣ್ಣ ಕುಟುಂಬಸ್ಥರು ನ್ಯಾಯಾಲಯದಲ್ಲಿ ಒಂದು ಕೋಟಿ […]

ಸಂಜೆ 5 ಗಂಟೆಗೆ ಬಜ್ಪೆ ತಲುಪಲಿರುವ ಬಿ.ಎ.ಮೊಹಿದಿನ್‌ ಮೃತದೇಹ

Tuesday, July 10th, 2018
bajpe

ಮಂಗಳೂರು: ಮಂಗಳವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಮಾಜಿ ಸಚಿವ ಬಿ.ಎ.ಮೊಹಿದಿನ್‌ರ ಪಾರ್ಥಿವ ಶರೀರವು ವಿಶೇಷ ಎಸ್ಕಾರ್ಟ್ ವಾಹನದ ಬೆಂಗಾವಲಿನೊಂದಿಗೆ ಮಂಗಳೂರಿಗೆ ತರಲಾಗುತ್ತಿದ್ದು, ಸಂಜೆ ಸುಮಾರು 5 ಗಂಟೆಗೆ ಬಜ್ಪೆಗೆ ಮೃತದೇಹ ತಲುಪಿಲಿದೆ. ಧಾರ್ಮಿಕ ವಿಧಿ ವಿಧಾನದ ಬಳಿಕ ಬಜ್ಪೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಜ್ಪೆಯಲ್ಲಿ 623 ಲೋಡ್ ಅಕ್ರಮ ಮರಳು ಪತ್ತೆ, ದಂದೆಯಲ್ಲಿ ಪೊಲೀಸರು ಶಾಮೀಲು

Friday, June 8th, 2018
Sand

ಮಂಗಳೂರು  : ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಎಸ್ ಪರಶಿವಮೂರ್ತಿ ರವರಿಗೆ ಕಂದಾವರ ಗ್ರಾಮ,, ಬಡಗುಳಿಫಾಡಿ ಗ್ರಾಮ, ಮೂಡುಪೆರಾರ ಎಂಬಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಬೀಟ್ ಸಿಬ್ಬಂದಿಗಳ ಖಚಿತ ಮಾಹಿತಿಯಂತೆ ಪೊಲೀಸ್ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಕಂದಾವರ ಗ್ರಾಮ, ಬಡಗುಳಿಫಾಡಿ ಗ್ರಾಮ, ಮೂಡುಪೆರಾರ ಎಂಬಲ್ಲಿಗೆ ಗುರುವಾರ ದಾಳಿ ನಡೆಸಿದಾಗ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರು ಕಡೆ ಸುಮಾರು 623 ಲೋಡ್ ಗಳಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಕಂಡು ಬಂದಿದ್ದು ,ಸದ್ರಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿರುತ್ತದೆ. ಸದ್ರಿ ಮರಳನ್ನು […]

ಭಾರೀ ಮಳೆಗೆ ಬಜ್ಪೆ ಸಮೀಪದ ತೊಟ್ಟಿಲಗುರಿಯಲ್ಲಿ ನಾಲ್ಕು ಮಂದಿ ಮೃತ

Tuesday, June 18th, 2013
ಭಾರೀ ಮಳೆಗೆ ಬಜ್ಪೆ ಸಮೀಪದ ತೊಟ್ಟಿಲಗುರಿಯಲ್ಲಿ  ನಾಲ್ಕು ಮಂದಿ ಮೃತ

ಮಂಗಳೂರು :  ನಿರಂತರವಾಗಿ ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬಜ್ಪೆ ಸಮೀಪದ ತೊಟ್ಟಿಲಗುರಿ ಬಳಿ ಆವರಣ ಗೋಡೆಯೊಂದು ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ದುರ್ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಸುಂದರಿ(60), ಸುಂದರ(62), ಬೇಬಿ(50) ಮತ್ತು ಚೈತ್ರಾ(13) ಈ ದುರ್ಘಟನೆ ಮೃತಪಟ್ಟವರಾಗಿದ್ದಾರೆ. ಅಶ್ವಿತಾ(14), ಅಶ್ವಿನಿ(18), ಆಶಾ(38), ವೀನಾ(50), ಅಶ್ವಥ್(11), ಶಾಂಭವಿ(12) ಮತ್ತು ಶೇಖರ್(48) ಗಾಯಗೊಂಡಿದ್ದಾರೆ. ಮೃತಪಟ್ಟ ಚೈತ್ರಾ ಈ ಮನೆಗೆ ನಿನ್ನೆ ಭೇಟಿ ನೀಡಿ ಅಲ್ಲೇ ಮಲಗಿದ್ದರು. ಗೃಹ […]

ಬಜ್ಪೆ ಕಿನ್ನಿಪದವು ಬಳಿ ಮರದ ಸೊಂಟೆಯಿಂದ ಹೊಡೆದು ವ್ಯಕ್ತಿಯ ಕೊಲೆ

Friday, February 15th, 2013
ಬಜ್ಪೆ ಕಿನ್ನಿಪದವು ಬಳಿ ಮರದ ಸೊಂಟೆಯಿಂದ ಹೊಡೆದು ವ್ಯಕ್ತಿಯ ಕೊಲೆ

ಮಂಗಳೂರು : ವ್ಯಕ್ತಿಯೋರ್ವನನ್ನು ಮರದ ಸೊಂಟೆಯಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿದ ಘಟನೆ ಫೆಬ್ರವರಿ 13ರ ಬುಧವಾರ ರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿ ಮುಡ್ಕೂರು ಸಮೀಪದ ಸಂಕಲಕರಿಯದ ನಿವಾಸಿ ಯಶವಂತ ಮಡಿವಾಳ(38).  ಬಜ್ಪೆ ಠಾಣಾ ವ್ಯಾಪ್ತಿಯಲ್ಲಿರುವ ಕಿನ್ನಿಪದವು  ಶ್ರೀ ಮಹಾಕಾಳಿ ದೈವಸ್ಥಾನದ ಬುಧವಾರ ಕೋಲಕ್ಕೆ ಬಂದಿದ್ದ ಈತ ನಾಪತ್ತೆಯಾಗಿದ್ದ. ನಾಪತ್ತೆಯಾದ ಯಶವಂತ ಮಡಿವಾಳನ ರಕ್ತಸಿಕ್ತವಾದ ಮೃತ ದೇಹ ಗುರುವಾರ ಮಧ್ಯಾಹ್ನದ ವೇಳೆಗೆ ಕಿನ್ನಿಪದವು ಮಹಾಕಾಳಿ ದೈವಸ್ಥಾನದ ಸಮೀಪದ ಧರ್ಮರಾಜ ಎಂಬರಿಗೆ ಸೇರಿದ ನಿರ್ಮಾಣಹಂತದ ಮನೆಯೊಂದರಲ್ಲಿ ಪತ್ತೆಯಾಗಿದೆ. ದವಡೆಗೆ ಮರದ ಸೊಂಟೆಯಿಂದ ಹೊಡೆದು […]