ರೌಡಿಶೀಟರ್ ಇಂದ್ರಜಿತ್ ಕೊಲೆ, ಎಂಟು ಮಂದಿ ಪೊಲೀಸರ ವಶಕ್ಕೆ

Friday, November 27th, 2020
Indrajeet

ಮಂಗಳೂರು : ರೌಡಿಶೀಟರ್ ಇಂದ್ರಜಿತ್‌ನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕುದ್ರೋಳಿ ಕರ್ನಲ್ ಗಾರ್ಡನ್ ಬಳಿ ಬುಧವಾರ ತಡರಾತ್ರಿ ರೌಡಿಶೀಟರ್ ಇಂದ್ರಜಿತ್ (28) ಕೊಲೆಯಾಗಿತ್ತು. ಸ್ನೇಹಿತನೊಬ್ಬನ ವಿವಾಹದ ಮೆಹಂದಿ ಕಾರ್ಯಕ್ರಮಕ್ಕೆಂದು ಇಂದ್ರಜಿತ್ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಮನೆಯಿಂದ ಹೊರಹೋಗಿದ್ದು, ಅಲ್ಲಿಂದ ಮರಳಿ ಬರುವ ಸಂದರ್ಭ ಕಾದು ಕುಳಿತಿದ್ದ ಹಂತಕರು ಈ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ. ಬರ್ಕೆ ಪೊಲೀಸರು […]

ಜೈಲಿನಲ್ಲಿ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದ ಮೂವರ ಬಂಧನ

Thursday, December 1st, 2016
Ganja

ಮಂಗಳೂರು: ಜೈಲಿನಲ್ಲಿ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದ ಮೂವರನ್ನು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಬಂಧಿಸಲಾಗಿದೆ. ಸ್ಟೀವನ್, ಪ್ರಶಾಂತ್, ಸೂರಜ್ ಬಂಧಿತ ಆರೋಪಿಗಳು. ಇವರು ತೊಕ್ಕೊಟ್ಟು ಸಮೀಪದ ಕುತ್ತಾರ್ ನಿವಾಸಿಗಳು. ಇವರು ಉಳ್ಳಾಲ ಮೂಲದ ಕೈದಿಗೆ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ. ಜೈಲು ಸಿಬಂದಿ ಮಾಹಿತಿಯಂತೆ ಬರ್ಕೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕ್‌‌ಗಳಲ್ಲಿ ಸಾಲ ಪಡೆದು ವಂಚಿಸುತ್ತಿದ್ದ ಜಾಲ ಪತ್ತೆ

Wednesday, November 30th, 2016
Lorry

ಮಂಗಳೂರು: ಲಾರಿ ಚಾಸಿಸ್ ಮತ್ತು ಇಂಜಿನ್ ನಂಬರ್ ಬದಲಾಯಿಸಿ, ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕ್‌‌ಗಳಲ್ಲಿ ಸಾಲ ಪಡೆದು ವಂಚಿಸುತ್ತಿದ್ದ ಜಾಲವೊಂದನ್ನು ಬರ್ಕೆ ಪೊಲೀಸರು ಬಯಲಿಗೆಳೆದಿದ್ದಾರೆ. ಬಂಧಿತರನ್ನ ಕುಲಶೇಖರದ ಅನಿಲ್ ಕಿರಣ್ ನರೋನ್ಹಾ, ಮರೋಳಿಯ ಸುಧೀರ್, ಉಳಾಯಿಬೆಟ್ಟು ಮಂಜಗುಡ್ಡೆಯ ನವೀನ್ ನರೋನ್ಹಾ ಯಾನೆ ಮೆಲ್ವಿನ್ ನರೋನ್ಹಾ, ಪಾವೂರು ಮಜ್ಜಕಟ್ಟೆ ವಲ್ಲಿ ಯಾನೆ ವಲೇರಿಯನ್ ಡಿ. ಸೋಜಾ ಹಾಗೂ ಜಬ್ಬಾರ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್, […]

ಬ್ಯಾಂಕ್ ಮೆನೇಜರ್‌ರನ್ನು ದರೋಡೆಗೈಯಲು ಹೊಂಚುಹಾಕಿದ್ದ ಆರು ಮಂದಿಯ ಬಂಧನ

Thursday, September 29th, 2016
honey-trap

ಮಂಗಳೂರು: ಯುವತಿಯನ್ನು ಮುಂದಿಟ್ಟುಕೊಂಡು ಬ್ಯಾಂಕ್ ಮೆನೇಜರ್‌ ಒಬ್ಬರಿಗೆ ಪಂಗನಾಮ ಹಾಕಲು ಹೋಗಿದ್ದ ಓರ್ವ ಯುವತಿ ಸೇರಿದಂತೆ ಆರು ಮಂದಿಯನ್ನು ಉರ್ವ ಹಾಗೂ ಬರ್ಕೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಯುವತಿಯರನ್ನು ಬಳಸಿಕೊಂಡು ನಗರದ ಬಳ್ಳಾಲ್‌ಬಾಗ್ ನಿವಾಸಿ ಬ್ಯಾಂಕ್ ಮೆನೇಜರ್‌ರನ್ನು ದರೋಡೆಗೈಯಲು ಹೊಂಚುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಸೆರೆ ವಿಧಿಸಿ ಆದೇಶ ನೀಡಿದೆ. ಬಂಧಿತರನ್ನು ತೃಪ್ತಿ ಕುಲಾಲ್ ಕೋಟೆಕಾರ್, ಅವಿನಾಶ್ ಕೊಣಾಜೆ, […]

ಬಲ್ಲಾಳ್ ಬಾಗ್ ಶೂಟೌಟ್ ಆರು ಮಂದಿ ಆರೋಪಿಗಳ ಬಂಧನ

Wednesday, August 7th, 2013
Ballalbagh-shoot-out

ಮಂಗಳೂರು :  ನಗರದ – ಮಣ್ಣಗುಡ್ಡ  ರಸ್ತೆಯಲ್ಲಿ  ಆಗಸ್ಟ್ 2 ರಂದು ಉದ್ಯಮಿಯ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆನ್ನು  ಬರ್ಕೆ ಪೊಲೀಸರು  ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಾದ ಸೂರಿಂಜೆಯ ನಿತೀಷ್‌ಕುಮಾರ್ ಯಾನೆ ಲಿಂತು(20), ಸತೀಷ್ ಯಾನೆ ಸಚ್ಚು (28) ಮರೋಳಿಯ ದೀಕ್ಷಿತ್ ಯಾನೆ ದಿಕ್ಷ್(26), ಬಜ್ಪೆಯ ಪದ್ಮ ರಾಜ್ ಯಾನೆ ಪದ್ದು(24), ಸೋಮೇಶ್ವರದ ಚೋನಿಯ ಯಾನೆ ಕೇಶವ (23)ಮತ್ತು ಕಂಕನಾಡಿಯ ಅನಿಲ್ (30) ಬಂಧಿತ ಆರೋಪಿಗಳಾ ಗಿದ್ದಾರೆ.  ಇವರು ಈ ಹಿಂದೆ ಹಲವಾರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು , ನಿತೀಶ್‌ […]