ಮಹಾತ್ಮಾ ಗಾಂಧೀಜಿಯವರು ಕಟ್ಟಾ ಹಿಂದೂವಾದಿಯಾಗಿದ್ದರು : ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​

Tuesday, February 18th, 2020
RSS

ನವದೆಹಲಿ : ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಕಟ್ಟಾ ಹಿಂದೂವಾದಿಯಾಗಿದ್ದರು ಎಂದು ಆರ್ಎಸ್ಎಸ್ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಎನ್ಸಿಇಆರ್ಟಿಯ ಮಾಜಿ ನಿರ್ದೇಶಕ ಜೆ.ಎಸ್.ರಜಪೂತ್ ಅವರ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ಗಾಂಧೀಜಿ ಭಾರತವನ್ನು ಅರಿತುಕೊಳ್ಳುವ ಸಲುವಾಗಿ ಪೂರ್ತಿ ದೇಶವನ್ನು ಸುತ್ತಿದರು. ಅವರು ಹಿಂದೂ ಎಂದು ಹೇಳಿಕೊಳ್ಳಲು ಎಂದೂ ಅಂಜುತ್ತಿರಲಿಲ್ಲ. ನಾನು ಕಟ್ಟಾ ಸನಾತನೀ ಹಿಂದೂ ಎಂದು ಅವರು ಹೇಳಿಕೊಂಡಿದ್ದರು. ಹಾಗೆಯೇ ಬೇರೆ ಧರ್ಮಗಳನ್ನೂ ಗೌರವಿಸುತ್ತಿದ್ದರು.” ಎಂದು ಹೇಳಿದರು. ಗಾಂಧೀಜಿಯನ್ನು ಇಂದಿನವರಿಗೆ ಹೋಲಿಕೆ […]

‘ಭಾರತದ ಪ್ರತಿಯೊಬ್ಬ ನಾಗರಿಕನೂ ಹಿಂದುವೇ’ : ಮೋಹನ್​ ಭಾಗವತ್​​

Thursday, December 26th, 2019
RSS

ಹೈದರಾಬಾದ್ : ಭಾರತದ ಪ್ರತಿಯೊಬ್ಬ ನಾಗರೀಕನೂ ಹಿಂದುವೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ಧಾರೆ. ಇಂದು ಹೈದರಾಬಾದ್‍ನಲ್ಲಿ ಆರ್ಎಸ್ಎಸ್ನ ಕಾರ್ಯಾಗಾರದಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಭಾರತದ ಎಲ್ಲಾ 130 ಕೋಟಿ ಜನರೂ ಹಿಂದೂಗಳೇ. ಯಾವುದೇ ಭಾಷೆ ಮಾತಾಡಲಿ; ಯಾವುದೇ ದೇವರನ್ನಾದರೂ ನಂಬಲಿ; ಭಾರತದಲ್ಲಿ ಯಾವುದೇ ಮೂಲೆಯಲ್ಲಾದರೂ ನೆಲೆಸಿರಲಿ ಎಲ್ಲರೂ ಹಿಂದುಗಳೇ ಎಂಬ ಸಂದೇಶ ಸಾರಿದ್ದಾರೆ. ಭಾರತದ ಜಲ, ಕಾಡು, ಪ್ರಾಣಿ, ಮಣ್ಣನ್ನು ಹಿಂದೂ ಪ್ರೀತಿಸುತ್ತಾನೆ. ನಿಜವಾದ […]

ಭಾರತದಲ್ಲಿ ಧರ್ಮಾಧಾರಿತ ಆಡಳಿತ ನಡೆಯುತ್ತಿದೆ: ಮೋಹನ್‌ ಭಾಗವತ್‌

Wednesday, March 28th, 2018
mohan-bagvath

ಮಂಗಳೂರು: ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ವಿಚಾರ ಇಟ್ಟುಕೊಂಡು ರಾಷ್ಟ್ರಾಡಳಿತ ನಡೆಯುತ್ತಿದ್ದರೆ ನಮ್ಮ ದೇಶದಲ್ಲಿ ಧರ್ಮಾಧಾರಿತವಾಗಿ ಆಡಳಿತ ನಡೆಯುತ್ತಿದೆ. ಧರ್ಮ ಇಲ್ಲವಾದರೆ ಈ ದೇಶವೇ ಇಲ್ಲವಾಗುತ್ತದೆ. ಧರ್ಮ ಈ ದೇಶದ ಉಸಿರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು. ವಿಟ್ಲ ಸಮೀಪದ ಮೂರುಕಜೆ ಮೈತ್ರೇಯಿ ಗುರುಕುಲದಲ್ಲಿ ತೆಂಗಿನ ಸಿಂಗಾರ ಅರಳಿಸುವುದರೊಂದಿಗೆ ಅರ್ಧ ಮಂಡಲೋತ್ಸವಕ್ಕೆ ಇಂದು ಚಾಲನೆ ನೀಡಿದರು. ಧರ್ಮದ ತಳಹದಿಯಲ್ಲಿ ನಡೆಯುತ್ತಿರುವ ನಮ್ಮ ದೇಶದ ಜ್ಞಾನ ಮತ್ತು ವಿಜ್ಞಾನ […]

ಆತ್ಮಗೌರವ, ಸ್ವಾಭಿಮಾನ, ನಿಸ್ವಾರ್ಥ ಸೇವೆಯಿಂದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ : ಮೋಹನ್ ಭಾಗವತ್

Monday, February 4th, 2013
RSS Vibhag Sanghik

ಮಂಗಳೂರು : ಯುವಜನತೆಯೇ ದೇಶದ ಶಕ್ತಿ, ಯುವಜನತೆ ಕೈಗೆತ್ತಿಕೊಂಡ ಸದಾಶಯದ ಕಾರ್ಯಗಳೆಲ್ಲವೂ ಗುರಿ ತಲುಪುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಾರ್ಗದರ್ಶನವನ್ನು ನೀಡುತ್ತಿದೆ. ಆತ್ಮಗೌರವ, ಸ್ವಾಭಿಮಾನ, ಪರರ ಹಿತಕ್ಕಾಗಿ ನಿಸ್ವಾರ್ಥ ಸ್ಪಂದನದ ಕರ್ತವ್ಯವನ್ನು ಪ್ರತಿಯೋರ್ವನೂ ನಿರ್ವಹಿಸಿದಾಗ ತೇಜಸ್ವಿಯಾದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ. ಎಂದು ರಾಷ್ಟ್ರೀಯ ಸ್ವಯಂಸೇವ ಸಂಘದ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಹೇಳಿದರು. ಬಜಪೆ ಸಮೀಪದ ಕೆಂಜಾರು ಬಳಿ ಭಾನುವಾರ ಸಂಘದ ಮಂಗಳೂರು ವಿಭಾಗದ ವತಿಯಿಂದ ನಡೆದ ಆರ್‌ಎಸ್‌ಎಸ್‌ನ ಸಾಂಘಿಕ್ ಕಾರ್ಯಕ್ರಮದಲ್ಲಿ  ಭಾಗವಹಿಸಿ ಅವರು ಮಾತನಾಡಿದರು. ಸಚ್ಚ್ಯಾರಿತ್ರ್ಯದಿಂದ ಕೂಡಿದ ಸಂಘಟನೆಯಿಂದ […]