ಕೋಳಿ ಇನ್ನಿತರ ವಸ್ತು ಇಟ್ಟು ರಸ್ತೆ ಮಧ್ಯೆಯೇ ವಾಮಾಚಾರ – ಭಯಭೀತರಾದ ಜನ

Saturday, June 26th, 2021
black magic

ಚಿಕ್ಕಮಗಳೂರು: ಕೋಳಿ, ನಿಂಬೆಹಣ್ಣು, ಮೊಟ್ಟೆ, ಹೊಸ ಬಟ್ಟೆ, ಅನ್ನ, ತೆಂಗಿನಕಾಯಿ, ಅರಿಶಿನ-ಕುಂಕುಮ, ಮೂರು ತರದ ದಾರ, ಬಳೆ, ತಲೆಗೂದಲು ಇಟ್ಟು ರಸ್ತೆ ಮಧ್ಯೆಯೇ ವಾಮಾಚಾರ ಮಾಡಿರುವ ಘಟನೆ  ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ರಂಗನೇಹಳ್ಳಿ ಗ್ರಾಮದಲ್ಲಿ ನಡೆದಿದೆ. ರಂಗೇನಹಳ್ಳಿ ಗ್ರಾಮದಿಂದ ಬರಗೇನಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಈ ವಾಮಾಚಾರ ನಡೆಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಕೃಷಿ ಕೆಲಸಕ್ಕೆ ಜಮೀನಿಗೆ ಹೋಗುವ ರೈತರು ಇದನ್ನ ಕಂಡು ಕಂಗಾಲಾಗಿದ್ದಾರೆ. ವಾಮಾಚಾರ ನಡೆಸಿದ ದುಷ್ಕರ್ಮಿಗಳು ವಾಮಾಚಾರದ ಬಳಿಕ ವಿವಿಧ ವಸ್ತುಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ. ನೇರ […]

ಪಂಚಾಯತ್ ಚುನಾವಣೆ ವೇಳೆ ವಿಟ್ಲ ಪರಿಸರದಲ್ಲಿ ಅಲ್ಲಲ್ಲಿ ವಾಮಾಚಾರ

Thursday, December 24th, 2020
BlackMagic

ವಿಟ್ಲ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ವೇಳೆ ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ತೆಂಗಿನಕಾಯಿಯಲ್ಲಿ ವಾಮಾಚಾರ ಮಾಡಿರುವುದು ಪತ್ತೆಯಾಗಿದ್ದು ಬಿಜೆಪಿ ಕಾರ್ಯಕರ್ತರು ಕುಳಾಲಿನ ಕಾರಣಿಕ ಶಕ್ತಿ ಶ್ರೀ ವಾರಹಿ ದೈವದ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಹಿಂಭಾಗದಲ್ಲಿ ಯಾವುದೋ ಲಿಪಿಯಲ್ಲಿ ಬರೆಯಲಾಗಿದೆ.  ಇದನ್ನು ಬಿಜೆಪಿ ಅಭ್ಯರ್ಥಿಯ ಎದುರಾಳಿ ನಡೆಸಿರಬಹುದಾದ ಶಂಕೆ ವ್ಯಕ್ತವಾಗಿದೆ. ಬಿಜೆಪಿ ಅಭ್ಯರ್ಥಿಯ ಮನೆ ಸಂಪರ್ಕ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಿಗೆ ಯಾವುದೋ ಲಿಪಿಯಲ್ಲಿ ಬರೆದು ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಕಂಡುಬಂದಿದೆ. ಬಂಡಮುಗೇರು […]

ಜೆ.ಆರ್.ಲೋಬೊ ರವರ ಜನಪ್ರಿಯತೆಯನ್ನು ಸಹಿಸದೇ ವಿರೋಧ ಪಕ್ಷದಿಂದ ವಾಮಾಚಾರ : ಮಹಾಬಲ ಮಾರ್ಲ

Saturday, May 5th, 2018
jr lober

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಜೆ.ಆರ್. ಲೋಬೊ ರವರನ್ನು ಶಾಸಕರನ್ನಾಗಿ ಈ ಕ್ಷೇತ್ರದ ಜನತೆ ಆಯ್ಕೆ ಮಾಡಿದರು. ಕಳೆದ 5 ವರ್ಷಗಳ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಜೆ.ಆರ್. ಲೋಬೊ ಮಾಡಿದ ಅಭಿವೃದ್ಧಿಯು ಜನಮನ್ನಣೆಯನ್ನು ಗಳಿಸಿದೆ. ಇವರ ಜನಪರ ಒಲವನ್ನು ಅರಿತ ಮತ್ತು ಸೋಲಿನ ಭೀತಿಯಿಂದ ಮತ್ತು ಇವರ ಜನಪ್ರಿಯತೆಯನ್ನು ಸಹಿಸದ ವಿರೋಧಿಗಳು ಜೆ.ಆರ್. ಲೋಬೊ ವಿರುದ್ದ ವಾಮಾಚಾರ ಮಾಡುವ ಮೂಲಕ ಅವರು ವಿಕೃತ ಮನಸನ್ನು ತೊರ್ಪಡಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ನಂದಿಗುಡ್ಡದ […]

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರ ಮೇಲೆ ವಾಮಾಚಾರ, ವೋಟಿಗಾಗಿ ದುಡ್ಡಿನ ಕಂತೆ ಎಸೆಯುತ್ತಾರೆ

Tuesday, May 1st, 2018
Vasanth Bangera

ಬೆಳ್ತಂಗಡಿ : ಈ ಬಾರಿ ಕಾಂಗ್ರೆಸ್ಸ್‌ನ್ನು ಹೇಗಾದರು ಮಾಡಿ ಸೋಲಿಸ ಬೇಕು, ಅದಕ್ಕಾಗಿ ನಮ್ಮ ಕಾರ್ಯಕರ್ತರ ಮೇಲೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಗೆಳೆಯರು ವಾಮಾಚಾರ ಮಾಡುತ್ತಾರೆ ಎಂದು ವಸಂತ ಬಂಗೇರ ಆರೋಪಿಸಿದ್ದಾರೆ. ಹರೀಶ್ ಪೂಂಜಾ ಗೆಳೆಯ ಪಿಡಬ್ಲೂಡಿ ಕಾಂಟ್ಟ್ರಾಕ್ಟರ್ ರಾಜೇಶ್ ಶೆಟ್ಟಿ ಮದ್ದಡ್ಕ ಎಂಬವರು ಕಾಂಗ್ರೆಸ್ಸ್ ಕಾರ್ಯಕರ್ತರಾದ ನಗರ ಪಂಚಾಯತ್ ಅಧ್ಯಕ್ಷ ನಾರಾಯಣ ರಾವ್ ಮತ್ತು ಗೇರು ಕಟ್ಟೆ ಕರೀಂ ಅವರ ಮನೆಯ ಮುಂದೆ ವಾಮಾಚಾರ ಮಾಡಿದ್ದಾರೆ. ಗೇರು ಕಟ್ಟೆ ಕರೀಂ ಅವರ ಮನೆಯ ಮುಂದೆ […]

ಡಿಸಿ ಕಚೇರಿ ಎದುರಲ್ಲೇ ವಾಮಾಚಾರ!

Wednesday, February 5th, 2014
vomachara

ಮೈಸೂರು: ನಗರ  ಪ್ರದೇಶವಾದ  ಮೈಸೂರುನಲ್ಲಿ  ಇತ್ತೀಚಿನ ದಿನಗಳಲ್ಲಿ ವಾಮಾಚಾರ ಹೆಚ್ಚಾಗಿದೆ. ವಿದ್ಯಾವಂತರು ಸಹ ವಾಮಾಚಾರದಂಥ ಮೂಢನಂಬಿಕೆಯನ್ನು ಅನುಸರಿಸುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎದುರು ವಾಮಾಚಾರ ಮಾಡಿಸಿರುವುದು ಮಂಗಳವಾರ ಪತ್ತೆಯಾಗಿದೆ. ಸೋಮವಾರ ರಾತ್ರಿ ಯಾರೋ ವಾಮಾಚಾರ ಮಾಡಿಸಿ, ಜಿಲ್ಲಾಧಿಕಾರಿ ಕಚೇರಿಯಿಂದ ಮಹಾರಾಣಿ ಕಾಲೇಜಿನತ್ತ ಹೋಗುವ ರಸ್ತೆಯ ಮಧ್ಯಭಾಗದಲ್ಲಿ ಇರಿಸಿದ್ದಾರೆ.ಬಟ್ಟೆಯೊಂದರಲ್ಲಿ ಅದೇನನ್ನೋ ಸುತ್ತಿಟ್ಟಿದ್ದಾರೆ. ಅದಕ್ಕೆ ಅರಿಶಿನನ, ಕುಂಕುಮ ಹಚ್ಚಿದ್ದಾರೆ. ಅಲ್ಲದೆ, ತೆಂಗಿನ ಕಾಯೊಂದನ್ನು ಒಡೆಯಲಾಗಿದೆ. ಆ ಮಾರ್ಗವಾಗಿ ಸಂಚರಿಸುವವರು ವಾಮಾಚಾರವನ್ನು ನೋಡಿ ಆತಂಕಗೊಳ್ಳುತ್ತಿದ್ದಾರೆ. ಮಹಾರಾಣಿ ಮಹಿಳಾ […]

ಮಂಗಳೂರು ಮಹಾನಗರಪಾಲಿಕೆಗೆ ವಾಮಾಚಾರ ಮಂತ್ರಿಸಿದ ತಗಡು, ನಿಂಬೆಹಣ್ಣು, ಕುಂಬಳಕಾಯಿ ಪತ್ತೆ

Tuesday, July 5th, 2011
Vamachara/ವಾಮಾಚಾರ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಕಚೇರಿಯೆದುರು ಇಂದು ಮುಂಜಾನೆ ವಾಮಾಚಾರ ನಡೆಸಿರುವ ಕುರುಹುಗಳು ಪತ್ತೆಯಾಗಿದೆ. ಮೇಯರ್ ಪ್ರವೀಣ್ ಕುಮಾರ್ ಅವರ ಕಾರು ನಿಲ್ಲುವ ಜಾಗದಲ್ಲಿ ಮಂತ್ರಿಸಿದ ತಗಡು,ನಿಂಬೆಹಣ್ಣು,  ಕುಂಬಳಕಾಯಿಯನ್ನು ಕಡಿದು ಅದಕ್ಕೆ ಕುಂಕುಮ ಸುರಿಯಲಾಗಿದೆ.ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿ ಎದುರುಗಡೆ ಮುಂಜಾನೆ ಕಾವಲು ಕಾಯುವ ವಾಚ್‌ಮೆನ್‌ಗೆ ವಾಮಾಚಾರದ ಕುರುಹು ಪತ್ತೆಯಾಗಿವೆ.ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪಾಲಿಕೆಗೆ ವಾಚ್‌ಮೆನ್‌ ಇದ್ದರೂ,ರಾತ್ರಿಯ ವೇಳೆ ಯಾರೋ ವಾಚ್‌ಮೆನ್ ಕಣ್ಣು ತಪ್ಪಿಸಿ ವಾಮಾಚಾರ ಮಾಡಿರಬಹುದು ಎನ್ನಲಾಗಿದೆ. ಸ್ಥಳದಲ್ಲಿ ಪೂಜೆ ನಡೆಸಿರುವ ಕುರುಹು ಕೂಡಾ […]