ಕದ್ರಿ ಶ್ರೀ ಮಂಜುನಾಥ ದೇವರ ವಾರ್ಷಿಕ ಮಹೋತ್ಸವ ಆರಂಭ, ಜನವರಿ 21ರಂದು ಶ್ರೀಮನ್ಮಹಾರಥೋತ್ಸವ

Friday, January 15th, 2021
Kadri jatre

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ  14 ಗುರುವಾರ ಸಂಜೆ ಧ್ವಜಾರೋಹಣದೊಂದಿಗೆ ಆರಂಭವಾಗಿದ್ದು, ಜನವರಿ  24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ದೇವಳದ ಕೆರೆಗಳಲ್ಲಿ ಗುರುವಾರ ಬೆಳಗ್ಗೆ 5ಗಂಟೆಯಿಂದ ತೀರ್ಥಸ್ನಾನ ನಡೆದಿದ್ದು, ಸಹಸ್ರಾರು ಭಕ್ತಾರು ಭಾಗವಹಿಸಿದ್ದರು. ಸಂಜೆ 6.30ರ ವೇಳೆಗೆ ಏಳುಪಟ್ಟಣ ಮೊಗವೀರ ಮಹಾಸಭಾದವರಿಂದ ಧ್ವಜಸ್ತಂಭ ಆರೋಹಣ ನೆರವೇರಿದ್ದು, ಮಹಾಪೂಜೆ ನಡೆಯಿತು. ಬಳಿಕ ಮಲರಾಯ ದೈವದ ಭಂಡಾರ ಆಗಮನವಾಯಿತು. ರಾತ್ರಿ ಧ್ವಜಬಲಿ, ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವ ಬಲಿ, ಭೂತ ಬಲಿ, ಕಂಚುದೀಪ […]

ಕದ್ರಿ ಶ್ರೀ ಮಂಜುನಾಥ ದೇವರ ವಾರ್ಷಿಕ ಮಹೋತ್ಸವ

Wednesday, January 23rd, 2019
Kadri Manjunataha

ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವ ಜನವರಿ 15 ರಿಂದ ನಡೆಯುತ್ತಿದ್ದು  ಸಾವಿರಾರು ಭಕ್ತರು ಮಂಜುನಾಥನ ದರ್ಶನ ಪಡೆದರು. ಜಾತ್ರೋತ್ಸವದ  ಅಂಗವಾಗಿ ಮಂಗಳವಾರ ಮನ್ಮಹಾರಥೋತ್ಸವ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ದೇವರ ಉತ್ಸವಮೂರ್ತಿ ರಥಾರೋಹಣವಾಯಿತು. ಸಂಜೆ ಶ್ರೀಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವ, ಮಹಾಪೂಜೆ, ಭೂತಬಲಿ ಮತ್ತು ಕವಾಟ ಬಂಧನ ಜರಗಿತು. ಜ. 23ರಂದು ಅವಭೃಥ ಉತ್ಸವ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಶ್ರೀ ಮಂಜುನಾಥ ದೇವರ ಕವಾಟೋದ್ಘಾಟನೆ ಮತ್ತು ಮಹಾಪೂಜೆ ಅನಂತರ ತುಲಾಭಾರ […]

ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ಸಂಜೆ ಸಮಾಪನ

Friday, January 31st, 2014
attur church

ಕಾರ್ಕಳ: ಉಡುಪಿ ಧರ್ಮಾಧ್ಯಕ್ಷ ಅ|ವಂ|ಡಾ| ಜೆರಾಲ್ಡ್‌ ಲೋಬೊ ಅವರ ನೇತೃತ್ವ ದಲ್ಲಿ ಕಳೆದ ಮೂರು ದಿನಗಳಿಂದ ‘ಕ್ರಿಸ್ತಕೇಂದ್ರಿತ ಕುಟುಂಬ: ವಿಶ್ವಾಸದ ತೊಟ್ಟಿಲು’ ಎಂಬ ಸಂದೇಶದೊಂದಿಗೆ ನಡೆಯುತ್ತಿದ್ದ ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ಸಂಜೆ 5.30ರ ಕೊನೆಯ ದಿವ್ಯ ಬಲಿಪೂಜೆಯೊಂದಿಗೆ ಸಮಾಪನಗೊಂಡಿತು. ಗುರುವಾರ ದೇವಮಾತೆಯ ಬಲಿಪೂಜೆಯ ಬಳಿಕ ಮಾತನಾಡಿದ ಅವರು, ಕುಟುಂಬಗಳು ಸಮಾಜದ, ನಾಡಿನ ಹಾಗೂ ವಿಶ್ವದ ಬುನಾದಿ. ಅದುದರಿಂದ ನಮ್ಮ ಕುಟುಂಬಗಳು ಪಿತ, ಸುತ ಮತ್ತು ಪವಿತ್ರಾತ್ಮದ ದೈವಿಕ ಕುಟುಂಬದಂತೆ. ಏಸು […]