ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ರಿಂದ ಪೆರಾಜೆ ನಿಧನಕ್ಕೆ ಸಂತಾಪ

Friday, September 26th, 2014
Peraje Srinivas Rao

ಮಂಗಳೂರು: ಹಿರಿಯ ಸಹಕಾರಿ ಧುರೀಣ ಶ್ರೀ ಪೆರಾಜೆ ಶ್ರೀನಿವಾಸ ರಾಯರ ನಿಧನಕ್ಕೆ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ರವರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಯುತರ ನಿಧನದಿಂದ ಸಹಕಾರಿ ರಂಗವು ಒಂದು ಅನಘ್ರ್ಯ ರತ್ನವನ್ನು ಕಳೆದುಕೊಂಡಂತಾಗಿದೆ. ಶ್ರೀಯುತ ಪೆರಾಜೆ ಶ್ರೀನಿವಾಸ ರಾಯರು ಮತ್ತು ದಿವಗಂತ ಮೊಳಹಳ್ಳಿ ಶಿವರಾಯರಂತಹ ಸಹಕಾರಿ ದಿಗ್ಗಜರಿಂದಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು ಸಹಕಾರಿ ಸಂಸ್ಥೆಗಳು ದೃಢವಾಗಿ ಬೆಳದು ನಿಂತಿದೆ. ಇಂದು ದೈವಾಧೀನರಾದ ಶ್ರೀ ಪೆರಾಜೆ ಶ್ರೀನಿವಾಸ ರಾಯರ  ಅಗಲುವಿಕೆಯಿಂದ […]

ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಬಲಪಡಿಸಲು ಹರೀಶ್ ಆಚಾರ್ ಕರೆ

Friday, July 11th, 2014
Harish Achar

ಮಂಗಳೂರು : ಸಹಕಾರಿ ಕ್ಷೇತ್ರಗಳ ಎಲ್ಲಾ ರಂಗಗಳನ್ನು ಬಲಪಡಿಸಬೇಕಾಗಿದೆ. ಸಹಕಾರಿ ರಂಗದಲ್ಲಿ ಮಹಿಳಾ ಕ್ಷೇತ್ರ, ಕೈಗಾರಿಕಾ ಕ್ಷೇತ್ರ, ಮೀನುಗಾರಿಕಾ ಕ್ಷೇತ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕ್ಷೇತ್ರಗಳನ್ನು ಹೆಚ್ಚು ಸಕ್ಷಮವಾಗಿ ಮತ್ತು ಪರಿಣಾಮಕಾರಿಯಾಗಿ ಬೆಳಸಬೇಕಾಗಿದೆ. ಇಂತಹ ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಒತ್ತು ನೀಡುವ ಮುಖಾಂತರ ಸಹಕಾರಿ ರಂಗವನ್ನು ಬಲಪಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯಕ್ರಮ ಗಳನ್ನು ಹಾಕಿಕೊಳ್ಳಲಿದೆ ಎಂದು ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶ್ರೀ […]

ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿ ಶ್ರೀ ಹರೀಶ್ ಆಚಾರ್ ಆಯ್ಕೆ

Tuesday, June 3rd, 2014
KMF

ಮಂಗಳೂರು : ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ, ಮಂಗಳೂರು ಇದರ 2014-15 ರಿಂದ ಮುಂದಿನ 5 ಸಹಕಾರಿ ವರ್ಷಗಳಿಗೆ ಅಧ್ಯಕ್ಷರಾಗಿ ವಿಶ್ವಕರ್ಮ ಸಹಕಾರಿ ಬ್ಯಾಂಕ್ ಲಿ., ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಸುಂದರ ಗೌಡ ಇಚ್ಚಿಲ (ಉಜಿರೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರು) ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಹೊನ್ನಯ್ಯ ಇವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ನೂತನ ಆಡಳಿತ ಮಂಡಳಿಯ ಅಭಿನಂದನಾ ಸಮಾರಂಭವು ದ. ಕ. ಜಿಲ್ಲಾ ಕೇಂದ್ರ […]