ಜನಾರ್ಧನ ಪೂಜಾರಿ ಕಾಲಿಡಿದ ಕಾಂಗ್ರೆಸ್ ಅಭ್ಯರ್ಥಿಗಳ ಗುಟ್ಟೇನು ?

Saturday, April 21st, 2018
Moideen bava

ಬಂಟ್ವಾಳ : ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್  ಕಾಂಗ್ರೆಸ್ ಮುಖಂಡ, ಜನಾರ್ಧನ  ಪೂಜಾರಿ ಅವರ ಆಶೀರ್ವಾದಕ್ಕಾಗಿ  ರಮಾನಾಥ ರೈ , ಕಾಪು ಶಾಸಕ ವಿನುಕುಮಾರ್ ಸೊರಕೆ, ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ, ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಮೊಯಿದ್ದೀನ್ ಬಾವಾ, ಮಂಗಳೂರು ಕ್ಷೇತ್ರದ ಅಭ್ಯರ್ಥಿ ಯು.ಟಿ.ಖಾದರ್,  ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ  ಹಾಗೂ ಶನಿವಾರ  ಅಭಯಚಂದ್ರ ಜೈನ್ ಅವರ ನಿವಾಸಕ್ಕೆ ತೆರಳಿ ಕಾಲಿಗೆರಗಿ ಬಂದಿದ್ದಾರೆ. ಕಳೆದ ಐದು ವರ್ಷಗಳಿಂದ ಪೂಜಾರಿಯವರ ಆರೋಗ್ಯ ವಿಚಾರಿಸದ, ಅವರ ಮನೆಗೂ ಪ್ರವೇಶಿಸದ […]

ಸಚಿವ ರಮಾನಾಥ್ ರೈ ಮತ್ತು ಮುಖ್ಯಮಂತ್ರಿ ಈ ಇಬ್ಬರಿಗೂ ಶನಿ ಹಿಡಿದಿರಬೇಕು : ಪೂಜಾರಿ

Sunday, August 13th, 2017
Poojary

ಮಂಗಳೂರು: ಕಲ್ಲಡ್ಕ ಶಾಲೆಗಳಿಗೆ ಅನ್ನದಾನದ ಅನುದಾನ ಕಡಿತಗೊಳಿಸಿದ್ದು ತಪ್ಪು. ಮಕ್ಕಳ ಊಟವನ್ನು ಸರ್ಕಾರ ಕಸಿದುಕೊಂಡಿದೆ. ಸಚಿವ ರಮಾನಾಥ್ ರೈ ಮತ್ತು ಮುಖ್ಯಮಂತ್ರಿ ಈ ಇಬ್ಬರಿಗೂ ಶನಿ ಹಿಡಿದಿರಬೇಕು! ರೈ ಮಾಡಿದ ತಪ್ಪನ್ನು ದೇವರೂ ಸಹ ಕ್ಷಮಿಸೋದಿಲ್ಲ. ಸಚಿವ ರೈ ಸಿಎಂ ಕಾಲು ಹಿಡಿದು ಕ್ಷಮಾಪಣೆ ಕೇಳಲಿ. ಅನುದಾನದ ನಿಷೇಧದ ಆದೇಶವನ್ನು ಹಿಂಪಡೆಯಬೇಕು. ಶಾಲೆಯಲ್ಲಿ ಅನ್ನದಾನವನ್ನು ಮುಂದುವರೆಸಬೇಕೆಂದು ಪೂಜಾರಿ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ   ಪೂಜಾರಿ. ಸಿಎಂ ಸಿದ್ದರಾಮಯ್ಯಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನಿಡೋಕೆ ಸಮಯ ಸಿಗುತ್ತಿಲ್ಲ. ರಾಜ್ಯದ […]

ಪತಿಯನ್ನು ಕಳೆದುಕೊಂಡ ಮಹಿಳೆಯರಿಂದ ಹೋಮದ ಪೂರ್ಣಾಹುತಿ

Tuesday, October 4th, 2011
Janardhana-poojary

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ, ಮಂಗಳೂರು ದಸರಾ ಸಂಭ್ರಮದಲ್ಲಿ ಸೋಮವಾರ ಪತಿಯನ್ನು ಕಳೆದುಕೊಂಡ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಮಾಜದಲ್ಲಿ ನೆಲೆಯೂರಿರುವ ಅನಿಷ್ಟ ಪದ್ಧತಿಯೆನಿಸಿ ಕೊಂಡ ವಿಧವಾ ಪದ್ದತಿಯನ್ನು ಧಿಕ್ಕರಿಸಲು ಪತಿಯನ್ನು ಕಳೆದುಕೊಂಡ ಸುಮಾರು 2,500 ಮಹಿಳೆಯರ ಪಾಲ್ಗೊಳ್ಳುವಿಕೆಯೊಂದಿಗೆ ಚಂಡಿಕಾಹೋಮ, ಬೆಳ್ಳಿ ರಥೋತ್ಸವ ನಡೆಸಿ ವಿಧವೆಯರಿಗೆ ಸೀರೆ, ಕುಂಕುಮ, ಹೂವು, ಬಳೆಯನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಬಿ. ಜನಾರ್ದನ ಪೂಜಾರಿ ಅವರು, ಹೋಮದ ಸಂಕಲ್ಪ ವಿಧಿಯನ್ನು ನೆರವೇರಿಸಿದ ಬಲಿಕ ಮಾತನಾಡಿ ಭಾರತದಲ್ಲಿ […]

ಸೋನಿಯಾ ಗಾಂಧಿ ಗುಣಮುಖರಾಗಲು ಪೂಜಾರಿ ನೇತೃತ್ವದಲ್ಲಿ ಉರುಳು ಸೇವೆ

Sunday, August 7th, 2011
Janardhana Poojary/ಪೂಜಾರಿ ನೇತೃತ್ವದಲ್ಲಿ ಉರುಳು ಸೇವೆ

ಮಂಗಳೂರು : ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಿ ಭಾರತಕ್ಕೆ ಮರಳಿ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ವಿಶೇಷ ಪೂಜೆ ಹಾಗೂ ಉರುಳು ಸೇವೆ ಜರಗಿತು. ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಿ ಭಾರತಕ್ಕೆ ಮರಳಿ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ […]