Blog Archive

ಭಟ್ಕಳ ಸಮೀಪದ ಮುಗ್ಳಿಹೊಂಡದಲ್ಲಿ ಭೀಕರ ಅಪಘಾತ ಬೈಕ್ ಸವಾರರಿಬ್ಬರ ಸಾವು

Wednesday, March 13th, 2013
Bhatkal bike accsident

ಕುಂದಾಪುರ : ಭಟ್ಕಳದ ಹೊಟೇಲ್ ವೊಂದರಲ್ಲಿ ಪಾರ್ಟಿ ಮುಗಿಸಿ ಶಿರೂರಿನ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಬೈಕ್ ಸವಾರರಿಬ್ಬರು ಭಟ್ಕಳ ಸಮೀಪದ ಮುಗ್ಳಿಹೊಂಡ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಬೈಂದೂರು ಸಮೀಪದ ಶಿರೂರಿನ ಮಾರ್ಕೆಟ್ ರಸ್ತೆ ನಿವಾಸಿಗಳಾದ ಹುರೈಸ್(೧೮) ಹಾಗೂ ತನೀರ್ ಅಧಮ್(೧೮) ಮೃತ ಬೈಕ್ ಸವಾರರಾಗಿದ್ದಾರೆ. ಹುರೈಸ್ ಹಾಗೂ ತನೀರ್ ಅಧಮ್ ಭಟ್ಕಳದ ಹೊಟೇಲ್ ವೊಂದರಲ್ಲಿ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮುಗ್ಳಿಹೊಂಡ ಎಂಬಲ್ಲಿ ಎದುರಿನಿಂದ […]

ಯೆಯ್ಯಾಡಿ : ಬೈಕ್ ಗೆ ಬೊಲೆರೋ ಡಿಕ್ಕಿ, ಚಾಲಕ ಪರಾರಿ

Tuesday, March 5th, 2013
Yeyyadi bike accsident

ಮಂಗಳೂರು : ಯೆಯ್ಯಾಡಿ ಸಮೀಪದ ಶರ್ಬತ್ ಕಟ್ಟೆ ಬಳಿ ಬೊಲೆರೋ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ವಾಹನ  ಚಾಲಕ ಪರಾರಿಯಾದ ಘಟನೆ ನಿನ್ನೆ  ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿ ಸ್ಥಳೀಯ ದಂಡಕೇರಿ ನಿವಾಸಿ ರಿತೇಶ್ (30) ಎನ್ನಲಾಗಿದೆ. ಅಪಘಾತದಿಂದ ಬೈಕ್ ನುಜ್ಜುಗುಜ್ಜಾಗಿದ್ದು,  ಕದ್ರಿ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ನಾಗಾರಾಜ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಪರಾರಿಯಾದ ವಾಹನ ಚಾಲಕನನ್ನು ಹಾಗೂ ವಾಹನವನ್ನು ಕಂಡು ಹಿಡಿಯಲು […]

ಉಡುಪಿ : ತೆಂಕ ಎರ್ಮಾಳ್ ನಲ್ಲಿ ಭೀಕರ ರಸ್ತೆ ಅಪಘಾತ ತಾಯಿ ಮಗನ ಸಾವು

Friday, February 1st, 2013
car truck accsident atTenka Ermal

ಉಡುಪಿ  : ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಂ ನ ನಿವಾಸಿಗಳಾದ ಜಾಯ್ ಸೆಬಾಸ್ಟಿಯನ್ ಹಾಗೂ ಅವರ ತಾಯಿ ಇಳಿ ಕುಟ್ಟಿ ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಕೇರಳದಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉಡುಪಿ ತಾಲುಕಿನ ತೆಂಕ ಎರ್ಮಾಳ್ ನಲ್ಲಿ ಈ ಅಪಘಾತ ಸಂಭವಿಸಿದೆ. ಜಾಯ್ ಸೆಬಾಸ್ಟಿಯನ್ ಅವರು ಕಾರ್ಕಳದ ಹೆಬ್ರಿಯಲ್ಲಿ ವಾಸವಾಗಿದ್ದು ತಮ್ಮ ಊರಿಗೆ ತನ್ನ ಹೆತ್ತವರೊಂದಿಗೆ ತೆರಳಿ ವಾಪಾಸು ಬರುವಾಗ ಉಡುಪಿಯಿಂದ ಬರುತ್ತಿದ್ದ ಲಾರಿ ಅವರು ಪ್ರಯಾಣಿಸುತ್ತಿದ್ದ […]

ಅಡ್ಯಾರು ಬಳಿ ಅಪಘಾತ ಚಾಲಕ ಪವಾಡ ಸದೃಶ ಪಾರು

Thursday, December 13th, 2012
Accident in Adyar

ಮಂಗಳೂರು : ಗುರುವಾರ ಬೆಳಿಗ್ಗೆ ಮಧ್ಯಪ್ರದೇಶದಿಂದ ಮಂಗಳೂರಿಗೆ ದೊಡ್ಡದಾದ ಕಬ್ಬಿಣದ ಕೊಳವೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಗರದ ಹೊರವಲಯದ ಅಡ್ಯಾರು ಸಹ್ಯಾದ್ರಿ ಕಾಲೇಜಿನ ಬಳಿ ಅಪಘಾತಕ್ಕೀಡಾಗಿ ಚಾಲಕನು ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ. ಲಾರಿಯ ಮುಂದೆ ಚಲಿಸುತ್ತಿದ್ದ ಕಾರೊಂದು ಅನಿರೀಕ್ಷಿತವಾಗಿ ತಿರುಗಿದ ಸಂದರ್ಭದಲ್ಲಿ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕನು ಬ್ರೇಕ್ ಹಾಕಿದ ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಲಾರಿಯು ಮುಂದಿನ ಲಾರಿಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿದ್ದ ಕೊಳವೆಗಳು ಮುಂದಕ್ಕೆ ಜಾರಿ ಚಾಲಕನು ಕುಳಿತುಕೊಳ್ಳುವ […]

ಕೊಟೇಶ್ವರದ ಬಳಿ ಭೀಕರ ರಸ್ತೆ ಅಪಘಾತ ಬೈಕ್ ಸವಾರನ ಸಾವು

Monday, December 10th, 2012
Bus bike collision

ಕುಂದಾಪುರ : ರವಿವಾರ ರಾತ್ರಿ 9.30 ರ ಸುಮಾರಿಗೆ ಕುಂದಾಪುರದ ಕೋಟೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಖಾಸಗಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮ್ರತಪಟ್ಟಿದ್ದಾನೆ. ಮೃತ ಬೈಕ್ ಸವಾರ ಅಂಪಾರು ಮೂಲದ ಸತೀಶ್ ಶೆಟ್ಟಿ(28) ಎಂಬುವವರಾಗಿದ್ದಾರೆ. ಸತೀಶ್ ಮೂಲತಃ ಅಂಪಾರಿನವರಾಗಿದ್ದು ಕಳೆದ ಕೆಲ ವರ್ಷಗಳಿಂದ ಹೈದರಾಬಾದಿನಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ತಂದೆ ಶೇಖರ ಶೆಟ್ಟಿಯವರ ನಿಧನದ ಸಲುವಾಗಿ ಊರಿಗೆ ಆಗಮಿಸಿದ ಅವರು ತೆಕ್ಕಟ್ಟೆಯ ಹೋಟೇಲ್ವೊಂದರಲ್ಲಿ […]

ಬೆಂಗಳೂರು – ಬಂಟ್ವಾಳ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಬೀಕರ ಅಪಘಾತ ಒಂದೇ ಕುಟುಂಬದ 6 ಮಂದಿ ದುರ್ಮರಣ

Friday, December 7th, 2012
mishap near Kushalnagar

ಕುಶಾಲನಗರ :ಗುರುವಾರ ಸಂಜೆ ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗು ಒಂದೇ ಕುಟುಂಬದ 6 ಮಂದಿ ಸದಸ್ಯರು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟ ಘಟನೆ ಬೈಲುಕೊಪ್ಪದ ಸಮೀಪ ಬೆಂಗಳೂರು- ಬಂಟ್ವಾಳ ರಾಜ್ಯ ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ. ಸುಂಟಿಕೊಪ್ಪದ ಕಾರ್ಪೆಂಟರ್ ಶಫಿ (43), ಪತ್ನಿ ರಮೀಜಾ (36) ಪುತ್ರರಾದ ಇರ್ಫಾನ್‌ (19), ಇಮ್ರಾನ್‌ (16), ಪುತ್ರಿ ತಸ್ಮಿಯಾ (13), ಕಿರಿಯ ಪುತ್ರ ಮೂರು ವರ್ಷದ ಆಫಾನ್‌, ಶಫಿ ಅವರ ತಮ್ಮ […]