Blog Archive

ಬ್ಲಾಕ್ ಫಂಗಸ್ ಇಂಜೆಕ್ಷನ್ ಕೂಡಲೇ ಹಂಚಿಕೆ ಮಾಡಲು ಕೇಂದ್ರಕ್ಕೆ ಮನವಿ

Saturday, May 22nd, 2021
Amphotericin-B

ಬೆಂಗಳೂರು : ರಾಜ್ಯಕ್ಕೆ ಮ್ಯೂಕೊರ್‍ಮೈಕೋಸಿಸ್ (ಬ್ಲಾಕ್ ಫಂಗಸ್) ಕಾಯಿಲೆಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬಳಸಲಾಗುತ್ತಿರುವ ಲಿಪೊಸೊಮಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ನ್ನು ಕೂಡಲೇ ಹಂಚಿಕೆ ಮಾಡಬೇಕು ಎಂದು ಕಂದಾಯ ಸಚಿವ ಆರ್ ಅಶೋಕ ಅವರು ಪತ್ರ ಬರೆದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. “ದೇಶದಲ್ಲಿ ಕರ್ನಾಟಕ ಎರಡನೇ ಅತೀ ಹೆಚ್ಚು ಕೋವಿಡ್ ಪಾಸಿಟಿವ್ ಸೋಂಕಿತರನ್ನ ಹೊಂದಿದ ರಾಜ್ಯವಾಗಿದೆ ಹಾಗೂ ಪಾಸಿಟಿವಿಟಿ ದರ ಕಳೆದ ವಾರಕ್ಕಿಂತಲು ಶೇ. 30ರಷ್ಟು ಹೆಚ್ಚಳವಾಗಿದೆ. […]

ಕೋವಿಡ್ ರೋಗಿಯ ಮೃತದೇಹ ಇಟ್ಟು 5.23 ಲಕ್ಷ ರೂ. ಬಿಲ್ ಕೇಳಿದ ಮಂಗಳೂರಿನ ಇಂದಿರಾ ಆಸ್ಪತ್ರೆ

Tuesday, May 18th, 2021
indira-hospital

ಮಂಗಳೂರು : ಕೋವಿಡ್ ನಂತಹ ಮಾರಣಾಂತಿಕ ಸಾಂಕ್ರಾಮಿಕ ರೋಗಬಂದಾಗಲೂ ಬಡವರಿಂದ ಕಿತ್ತು ತಿನ್ನುವ ಆಸ್ಪತೆಗಳು ನಮ್ಮ ನಗರದಲ್ಲಿ ತಲೆ ಎತ್ತಿವೆ.  ಸಾಂಕ್ರಾಮಿಕ ರೋಗಗಳಿಗೆ ಉಚಿತ ಚಿಕಿತ್ಸೆ ನೀಡಬೇಕಾದ ಖಾಸಗಿ ಆಸ್ಪತ್ರೆಗಳು ಬಡವರ ರಕ್ತ ಹೀರುವ ದೈತ್ಯ ಲೂಟಿಕೋರ ಕೇಂದ್ರಗಳಾಗಿ ಬೆಳೆದಿವೆ. ಈ ಸುಲಿಗೆ ಕೋರರನ್ನು ಕೇಳುವವರೇ ಇಲ್ಲ. ಜನ ಲಾಕ್ ಡೌನ್ ನಿಂದ ಊಟಕ್ಕೂ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಇವರಿಗೆ ಬಡವರ ಹೆಣವನ್ನಿಟ್ಟು ವ್ಯಾಪಾರ ಮಾಡುವುದೇ ಕಾಯಕ. ನಗರದ ಖಾಸಗಿ ಆಸ್ಪತ್ರೆಯೊಂದು ಕೋವಿಡ್ ರೋಗಿಯ ಮೃತದೇಹ ಬಿಟ್ಟು ಕೊಡಲು 5.23 […]

ಸಂಜೆವಾಣಿ ಮಂಗಳೂರಿನ ಬ್ರಾಂಚ್ ಮ್ಯಾನೇಜರ್ ಕೋವಿಡ್ ಗೆ ಬಲಿ

Friday, May 14th, 2021
vijaya Rao

ಮಂಗಳೂರು : ‌ ಸಂಜೆವಾಣಿ ಮಂಗಳೂರಿನ ಬ್ರಾಂಚ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ವಿಜಯ್ ರಾವ್ ಗುರುವಾರ ರಾತ್ರಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ವಿಜಯ್ ರಾವ್ (56) ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಉಸಿರಾಟದ ತೀವ್ರ ಸಮಸ್ಯೆಯಿಂದ ನಿನ್ನೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೂಲತಃ ಕಾರ್ಕಳ ಬೈಲೂರು ನಿವಾಸಿ ಯಾಗಿರುವರ ಇವರು ಮಂಗಳೂರಿನ ಎಕ್ಕೂರು ಸಮೀಪ ನೆಲೆಸಿದ್ದರು. ಮೊದಲಿಗೆ ನೇತ್ರಾವತಿ ವಾರ್ತಾ ಪತ್ರಿಕೆಯಲ್ಲಿ ಮಾರ್ಕೆಟಿಂಗ್ ಹುದ್ದೆಯಲ್ಲಿದ್ದ ಇವರು ಹಲವು ವರ್ಷಗಳ ಕಾಲ ಸಂಜೆವಾಣಿ  ಪತ್ರಿಕೆಯಲ್ಲಿ […]

ನಗರದ ಎಲ್ಲಾ ಆರೈಕೆ ಕೇಂದ್ರಗಳಲ್ಲಿ ಆಕ್ಸಿಜೆನ್ ಕಾನ್ಸ್ಂಟ್ರೇಟರ್ ಲಭ್ಯ: ಆರ್ ಅಶೋಕ್ ಹೇಳಿಕೆ

Thursday, May 13th, 2021
R Ashoka

ಬೆಂಗಳೂರು  : “ಹಾಸಿಗೆ ನೀಡದೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾದ ತಕ್ಷಣ ಹಲವು ಆಸ್ಪತ್ರೆಗಳು ತಮ್ಮ ಬಳಿಯಿರುವ ಹಾಸಿಗೆಗಳನ್ನ ನೀಡಲು ಮುಂದೆ ಬರುತ್ತಿವೆ. ಇದರಿಂದ ಲಭ್ಯ ಬೆಡ್ ಗಳ ಸಂಖ್ಯೆ ಹೆಚ್ಚಾಗಲಿದೆ,” ಎಂದು ಕಂದಾಯ ಸಚಿವರಾದ ಆರ್ ಅಶೋಕ್ ಅವರು ತಿಳಿಸಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡ್‍ನ ರೆಫೆರೆಲ್ ಆಸ್ಪತ್ರೆಯಲ್ಲಿ ಸಿದ್ಧಗೊಂಡಿರುವ ಕೋವಿಡ್ ಆರೈಕೆ ಕೇಂದ್ರ ಹಾಗೂ ಇದೇ ವಾರ್ಡ್‍ನಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯಭವನ ಸ್ಥಳಕ್ಕೆ ಬೇಟಿ ನೀಡಿದ […]

ಹೆಣ್ಣು ಕೊಟ್ಟ ಮಾವನ ಕಪಾಳ ಕ್ಕೊಡೆದು ಸಾಯಿಸಿದ ಅಳಿಯ

Saturday, January 2nd, 2021
Shiek Aboobakkar

ಕಾರ್ಕಳ :  ಹತ್ತು ದಿನದ ಹಿಂದೆ ಮಗಳನ್ನು ಮದುವೆಯಾಗಿದ್ದ ಅಳಿಯನೊಬ್ಬ ಮಾವನ ಕಪಾಳಕ್ಕೆ ಬಾರಿಸಿದ್ದೇ ಅಲ್ಲದೆ ಮರ್ಮಾಂಗಕ್ಕೂ ತುಳಿದು ಸಾಯಿಸಿದ ಘಟನೆ ಬಂಗ್ಲೆಗುಡ್ಡೆಯ  ಹಂಚಿಕಟ್ಟೆ ಫ್ಲಾಟ್ ಒಂದರಲ್ಲಿ ನಡೆದಿದೆ. ಕ್ಷುಲಕ ಕಾರಣದಿಂದ ಉಂಟಾದ ಜಗಳದಲ್ಲಿ ಶೇಖ್ ಅಬೂಬಕ್ಕರ್ (57) ಜೀವ ಕಳೆದುಕೊಂಡವರು. ಶೇಖ್ ಅಬೂಬಕ್ಕರ್ ಹಾಗೂ ಅವರ ಅಳಿಯ ತೌಫಿಕ್ ನಡುವೆ ಡಿಸೆಂಬರ್ 31ರ ರಾತ್ರಿ 8.00ಗಂಟೆಗೆ ಫ್ಲಾಟ್‌‌ನಲ್ಲಿ  ಜಗಳ ಏರ್ಪಟ್ಟಿತ್ತು. ಮಾತಿಗೆ ಮಾತು ವಿಕೋಪಕ್ಕೆ ತಿರುಗಿದಾಗ ತೌಫಿಕ್ ತನ್ನ ಮಾವ ಶೇಖ್ ಅಬೂಬಕ್ಕರ್‌‌ನ ಎಡ ಕೆನ್ನೆಗೆ ಹೊಡೆದು ಬಲವಾಗಿ […]

ಕುಂಪಲ ಬೈಪಾಸ್ ಅಫಘಾತ : ಬಾಲಕ ಸಾವು

Saturday, December 5th, 2020
Ayan

ಮಂಗಳೂರು :  ಕುಂಪಲ ಬೈಪಾಸ್‌ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬಾಲಕ ಡಿ.5ರ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತಪಟ್ಟ ಬಾಲಕನನ್ನು ಬಶೀರ್‌‌‌‌‌ ಅಹ್ಮದ್‌ ಹಾಗೂ ರಿಯಾನ್‌ ದಂಪತಿಗಳ ಹಿರಿಯ ಪುತ್ರ ಐಯಾನ್‌ (16) ಎಂದು ಗುರುತಿಸಲಾಗಿದೆ. ಇವರು ಕುಂಪಲ ಬೈಪಾಸ್‌ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಡಿ..4ರ ಶುಕ್ರವಾರದಂದು ಸಂಜೆ ಐಯಾನ್‌‌ ತನ್ನ ಮನೆಯ ಮುಂದಿನ ರಸ್ತೆ ದಾಟುತ್ತಿದ್ದ ಸಂದರ್ಭ ತಲಪಾಡಿಯಿಂದ ಮಂಗಳೂರು ಕಡೆ  ಹೋಗುತ್ತಿದ್ದ ರಿಟ್ಜ್‌‌ ಕಾರು […]

ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವ ದಿಂದ ಬಸುರಿ ಹೆಂಗಸು ಸಾವು

Friday, October 16th, 2020
chandrakala

ಸುಳ್ಯ :  ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ  ದಾಖಲು ಮಾಡಲಾಗಿದ್ದ ಮಹಿಳೆಯೊಬ್ಬರು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವರದಿಯಾಗಿದೆ. ಹೆರಿಗೆ ವೇಳೆ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟ ಮಹಿಳೆಯನ್ನು ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ಅವರ ಪುತ್ರಿ ಚಂದ್ರಕಲಾ (25) ಎಂದು ಗುರುತಿಸಲಾಗಿದೆ. ಸುಳ್ಯ ತಾಲೂಕಿನ ಮರ್ಕಂಜದಿಂದ ಚಂದ್ರಕಲಾ  ಅವರನ್ನು ಎರಡು ವರ್ಷಗಳ ಹಿಂದೆ ಪುತ್ತೂರಿನ ಕಾವುಗೆ ಮದುವೆ ಮಾಡಿಕೊಡಲಾಗಿತ್ತು. ಚಂದ್ರಕಲಾ ಅವರನ್ನು  ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಸಲಾಗಿತ್ತು. ಅಲ್ಲಿ ಹೆರಿಗೆ ವೇಳೆ ರಕ್ತದೊತ್ತಡ ಕಡಿಮೆಯಾಗಿ ಮತ್ತು […]

ಖಾಸಗಿ ಆಸ್ಪತ್ರೆಗಳು ಕೋವಿಡ್‌ ನಿರ್ವಹಣೆಗೆ ಶೇ. 50ರಷ್ಟನ್ನು ಸರಕಾರಕ್ಕೆ ಬಿಟ್ಟು ಕೊಡಲೇಬೇಕು : ಶ್ರೀನಿವಾಸ ಪೂಜಾರಿ

Friday, August 7th, 2020
srinivas-poojary

ಮಂಗಳೂರು: ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಕಾಲೇಜುಗಳು ಕೋವಿಡ್‌ ನಿರ್ವಹಣೆಗೆ ತಮ್ಮ ಹಾಸಿಗೆ ಸಾಮರ್ಥ್ಯದ ಶೇ. 50ರಷ್ಟನ್ನು ಸರಕಾರಕ್ಕೆ ಬಿಟ್ಟು ಕೊಡಲೇಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಎ.ಜೆ. ಆಸ್ಪತ್ರೆ ಹಾಗೂ ಶ್ರೀನಿವಾಸ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕ ಆರೋಗ್ಯ ರಕ್ಷಣೆ ಸರಕಾರದ ಆದ್ಯತೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸರಕಾರದೊಂದಿಗೆ ಸಹಕರಿಸಬೇಕು. ರಾಜ್ಯ ಸರಕಾರವು ಆಯುಷ್ಮಾನ್‌ ಯೋಜನೆಯಡಿ ಕೋವಿಡ್‌ ರೋಗಿಗಳಿಗೆ ಉಚಿತ […]

ಕೋವಿದ್ ಇದೆ ಎಂದು ಸುಳ್ಳು ವರದಿ ನೀಡಿ 89 ಸಾವಿರ ಬಿಲ್! ಕರ್ ಕೊಂಡು ಹೋದವರಿಗೂ 21 ಸಾವಿರ ಬಿಲ್ ವಸೂಲಿ ಮಾಡಿದ ಮಂಗಳೂರಿನ ಆಸ್ಪತ್ರೆ

Tuesday, July 28th, 2020
dinesh adkar

ಮಂಗಳೂರು : ಎದೆನೋವು ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅದೇ ಸಂದರ್ಭದಲ್ಲಿ ಅವರನ್ನು ಕೊವಿಡ್ ತಪಾಸಣೆ ಮಾಡಿ ನಿಮಗೆ ಪಾಸಿಟೀವ್ ಇದೆ ಎಂದು ವರದಿಕೊಟ್ಟಿದ್ದಾರೆ. ಸಂಶಯಗೊಂಡ ಅವರು ಮರುದಿನ ಬೇರೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ನೆಗೆಟೀವ್ ಬಂದಿದೆ. 89 ಸಾವಿರ ಬಿಲ್ಲಿನ ಜೊತೆಗೆ ಅವರನ್ನು ನೋಡಿಕೊಳ್ಳಲು ಬಂದವರಿಗೂ  ಕೋವಿದ್ ತಪಾಸಣೆಯ ನೆಪದಲ್ಲಿ 21 ಸಾವಿರ ಬಿಲ್ ಹಾಕಿದ ಪ್ರಕರಣವೊಂದು ನಡೆದಿದೆ. ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಾಲಕ ದಿನೇಶ್ ಅಡ್ಕಾರ್ ಎಂಬವರು ಜುಲೈ 21 ನೇ ತಾರೀಕಿನಂದು […]

22 ಮಂದಿ ಕೊರೋನಾ ಸೋಂಕಿತರಿಂದ ಪಡೆದ 24 ಲಕ್ಷ ಹಣವನ್ನು ಹಿಂತಿರುಗಿಸಿದ ಖಾಸಗಿ ಆಸ್ಪತ್ರೆ

Tuesday, July 28th, 2020
Roopa IGP

ಬೆಂಗಳೂರು : ರಾಜರಾಜೇಶ್ವರಿ ನಗರ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಕೊರೋನಾ ಚಿಕಿತ್ಸೆ ಸಲುವಾಗಿ 22 ಮಂದಿ ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ 24 ಲಕ್ಷ ಹಣವನ್ನು ಸೋಮವಾರ ಮರಳಿಸಿದೆ. ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ ಮತ್ತು ಐಜಿಪಿ ಡಿ.ರೂಪಾ ನೇತೃತ್ವದ ತಂಡ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಆಸ್ಪತ್ರೆ ಎಚ್ಛೆತ್ತು ಕೊಂಡು ಹಣ ಮರಳಿಸಿದೆ. ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ರೂಪಾ ಅವರು ಎಚ್ಚರಿಕೆ ನೀಡಿದ್ದರು. ನಮ್ಮ ತಂಡಕ್ಕೆ […]