Blog Archive

ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ಸಂಭ್ರಮದ ಹೋಳಿ ಆಚರಣೆ

Wednesday, March 11th, 2020
holi

ಮಂಗಳೂರು : ಬಂಟರಯಾನೆ ನಾಡವರ ಮಾತೃ ಸಂಘದ ಆಡಳತಕೊಳಪಟ್ಟ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ಕಳೆದ ೭೦ ವರ್ಷದ ಇತಿಹಾಸದಲ್ಲೆ ಮೊದಲ ಬಾರಿಗೆ ಹೋಳಿ ಹುಣ್ಣಿಮೆಯ ಪ್ರಯುಕ್ತ ಹೋಳಿ ಹಬ್ಬವನ್ನು ಆಚರಿಸಲಾಯಿತು. ಸಮಿತಿಯ ಸದಸ್ಯರಾದ ಡಾ|| ಅಮೃತ ಭಂಡಾರಿ ಪ್ರಾಧ್ಯಾಪಕರು ಎ.ಜೆ ಮೆಡಿಕಲ್ ಕಾಲೇಜು, ಸಂಚಾಲಕರಾದ ಉಷಾ.ಎಚ್.ಬಲ್ಲಾಳ್ ಈ ಸಂಭ್ರಮದ ಕ್ಷಣವನ್ನು ದೀಪ ಹಚ್ಚಿ ಬಣ್ಣ ಎರೆಚುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಸ್ತುತ ಆರೋಗ್ಯ ಕ್ಷೇತ್ರದಲ್ಲಿ ಎಲ್ಲರ ನಿದ್ದೆಗೆಡಿಸುತ್ತಿರುವ ಕೊರೋನಾ ವೈರಸ್ ರೋಗದ ಲಕ್ಷಣ […]

ಪುತ್ತೂರು : ಸಂತ್ರಸ್ತೆ ವಿದ್ಯಾರ್ಥಿನಿ ದಾಖಲಾದ ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ

Sunday, July 7th, 2019
nagalakshmi

ಮಂಗಳೂರು : ಪೊಲೀಸರು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಹಠಾತ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾನೂನಿನ ತಿಳಿವಳಿಕೆ ನೀಡಬೇಕು ಆಗ ಅತ್ಯಾಚಾರದಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಸುಲಭ ಸಾಧ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಅವರು ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ದಾಖಲಾಗಿರುವ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದರು. ಕರಾವಳಿ ಜಿಲ್ಲೆಯಲ್ಲಿ ಅತ್ಯಾಚಾರ, ಸಾಮೂಹಿಕ ಅತ್ಯಾಚಾರದಂಥ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಇಂತಹ ಕೃತ್ಯಗಳನ್ನು ತಡೆಗಟ್ಟಲು ಎಲ್ಲ […]

ಪುತ್ತೂರು : ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್

Wednesday, July 3rd, 2019
Abvp-Girl

ಪುತ್ತೂರು : ಪುತ್ತೂರು ಕಾಲೇಜಿನ ವಿದ್ಯಾರ್ಥಿನಿ ಯೊಬ್ಬಳಿಗೆ ಗಾಂಜಾ ನೀಡಿ ನಾಲ್ಕು ಮಂದಿ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯವಿವೇಕಾನಂದ ಕಾಲೇಜಿನ  ನಾಲ್ವರು ವಿದ್ಯಾರ್ಥಿಗಳು ತಮ್ಮದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಅಮಲು ಬರುವಂತೆ ಮಾಡಿ ಅತ್ಯಾಚಾರ ನಡೆಸಿರುವುದಲ್ಲದೆ, ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ವಿಚಾರ […]

ತನ್ನ ಕಾಯಿಲೆಯನ್ನು ಮನೆಯವರಿಗೆ ತಿಳಿಸದೆ ಜೀವ ಕಳಕೊಂಡ ವಿದ್ಯಾರ್ಥಿನಿ

Monday, July 30th, 2018
Yakshitha

ಮೂಡಬಿದಿರೆ : ವಿದ್ಯಾರ್ಥಿನಿಯೊಬ್ಬಳು ತನಗೆ ಖಾಯಿಲೆ ಇದ್ದರೂ ಮನೆಯವರಿಗೆ ತಿಳಿಸದೆ ಮುಚ್ಚಿಟ್ಟ ಪರಿಣಾಮ ಆಕೆ ತನ್ನ ಜೀವವನ್ನೇ ತೆರಬೇಕಾಯಿತು. ಆಕೆಗಿನ್ನೂ ಹತ್ತೊಂಬತ್ತು ವರ್ಷಪ್ರಾಯ ಮೂಡಬಿದ್ರೆಯ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವತೀಯ ಬಿಕಾಂ ವಿದ್ಯಾರ್ಥಿನಿ. ಮೂಡಬಿದ್ರೆಯ ನೀರ್ಕರೆಯ ಅಶ್ವತ್ಥಪುರ ನಿವಾಸಿ ಕೃಷ್ಣ ಪುಜಾರಿ ಎಂಬವಳ ಮಗಳು ಯಕ್ಷಿತಾ ಎಂಬವಳು ಮೃತ ಪಟ್ಟ ದುರ್ದೈವಿ. ಆಕೆಯ ಅಶ್ವಸ್ಥತೆಯ ಬಗ್ಗೆ ಸ್ವತಃ ಆಕೆಗೆ ಮಾತ್ರ ತಿಳಿದಿತ್ತು. ಸಕ್ಕರೆಕಾಯಿಲೆ ಮತ್ತು ರಕ್ತದೊತ್ತಡ ಆಕೆಯನ್ನು ಕಾಡುತ್ತಿತ್ತು. ಆಕೆಗೆ ಸುಸ್ತಾಗುತ್ತಿತ್ತು, ಸರಿಯಾದ ಸಮಯಕ್ಕೆ […]

ಬಿಬಿಎಂಪಿ ಟ್ರಕ್ ಚಾಲಕನ ಎಡವಟ್ಟಿಗೆ ವಿದ್ಯಾರ್ಥಿಯೋರ್ವಳು ಬಲಿ

Tuesday, January 23rd, 2018
sahitya

ಬೆಂಗಳೂರು: ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಟ್ರಕ್ ಚಾಲಕನ ಎಡವಟ್ಟಿಗೆ ವಿದ್ಯಾರ್ಥಿಯೋರ್ವಳು ಬಲಿಯಾದ ಘಟನೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಜ.22 ರಂದು ಬೆಳಿಗ್ಗೆ ನಡೆದಿದೆ. ಖಾಸಗಿ ಕಾಲೇಜೊಂದರಲ್ಲಿ ಆರ್ಕಿಟೆಕ್ಚರ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಸಾಹಿತ್ಯ(24) ಮೃತ ದುರ್ದೈವಿ. ರಾಜಾಜೀನಗರದಲ್ಲಿ ವಾಸವಿರುವ ಸಾಹಿತ್ಯ, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಖಾಸಗಿ ಆರ್ಚಿಟೆಕ್ಟ್ ಕಂಪನಿಯೊಂದರಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದರು. ಬೆಳಿಗ್ಗೆ ಕಂಪನಿಗೆ ತಮ್ಮ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಬಿಬಿಎಂಪಿ ಟ್ರಕ್ ಆಕೆಯ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. […]

ಪಿಯುಸಿ ಓದುತ್ತಿದ್ದಾಗಲೇ ರಿಜಿಸ್ಟರ್‌ ಮ್ಯಾರೇಜ್‌… ಮಂಗಳೂರಲ್ಲಿ ವಿದ್ಯಾರ್ಥಿನಿ ನಾಪತ್ತೆ!

Friday, December 15th, 2017
puc-girl

ಮಂಗಳೂರು: ದ್ವೀತಿಯ ಪಿಯುಸಿ ಓದುತ್ತಿರುವಾಗಲೇ ಪ್ರಿಯಕರನೊಂದಿಗೆ ರಿಜಿಸ್ಟರ್‌‌ ಮ್ಯಾರೇಜ್‌ ಆಗಿದ್ದ ವಿದ್ಯಾರ್ಥಿನಿ ದಿಢೀರ್‌‌ ನಾಪತ್ತೆಯಾಗಿರುವ ಪ್ರಕರಣ ನಗದರದಲ್ಲಿ ಬೆಳಕಿಗೆ ಬಂದಿದೆ. ಆಕೆಯನ್ನು ಯುವಕನ ಕಡೆಯವರು ಅಪಹರಿಸಿದ್ದಾರೆ ಎಂದು ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ನಗರದ ಪ್ರತಿಷ್ಠಿತ ಕಾಲೇಜೊಂದರ ಈ ವಿದ್ಯಾರ್ಥಿನಿಯನ್ನು ಆಕೆಯ ಪ್ರಿಯಕರನ ಕಡೆಯವರು ಅಪಹರಣ ಮಾಡಿದ್ದಾರೆ ಎಂದು ಆಕೆಯ ತಂದೆ ಕಾವೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಮೂಲತಃ ಹಾಸನದವಳಾದ ಈಕೆ, ಪ್ರಸ್ತುತ ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಇತ್ತೀಚೆಗೆ ಜಗದೀಶ್ ಕುಲಾಲ್ ಎಂಬಾತನೊಡನೆ […]

ಬಲ್ಮಠ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ವಂಚಿಸಿದ ಅಟೆಂಡರ್

Friday, July 17th, 2015
Balmatta attender

ಮಂಗಳೂರು : ಬಲ್ಮಠ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಬಸ್‌ಪಾಸ್ ಮಾಡಿಸುವ ಸಲುವಾಗಿ ವಿದ್ಯಾರ್ಥಿಗಳಿಂದ ಹಣ ಪಡೆದು ಬಸ್‌ಪಾಸ್ ಮಾಡದೆ, ಹಣವನ್ನು ವಾಪಾಸು ನೀಡದೆ ವಂಚಿಸಿರುವ ಕಾಲೇಜಿನ ಅಟೆಂಡರ್ ರತ್ನಾಕರವರ ವಿರುದ್ಧ ಇಂದು ವಿದ್ಯಾರ್ಥಿನಿಯರು ದಿಗ್ಬಂಧಿಸಿ ಪ್ರತಿಭಟಿಸಿದರು. ವಿದ್ಯಾರ್ಥಿನಿಯರು ಕಾಲೇಜಿನ ಅಟೆಂಡರ್ ವಂಚನೆ ಮಾಡುವ ಉದ್ದೇಶದಿಂದ ಸುಮಾರು 19 ವಿದ್ಯಾರ್ಥಿನಿಯರಿಂದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಪಡೆದು ಅಲ್ಲದೇ ಕರ್ತವ್ಯದ ವೇಳೆ ಪಾನಮತ್ತರಾಗಿರುತ್ತಾರೆ. ಹಾಗಾಗಿ ಕೂಡಲೇ ಹಣ ಹಿಂದಿರುಗಿಸಬೇಕು. ಮತ್ತು ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಪಟ್ಟುಹಿಡಿದರು. ಕಾಲೇಜಿನ […]

ವಿದ್ಯಾರ್ಥಿನಿಯೊಂದಿಗೆ ಹಾಸಿಗೆ ಹಂಚಲು ಲಕ್ಷಗಳ ಡೀಲು!

Wednesday, April 22nd, 2015
stella

ಮಂಗಳೂರು : ನಾನು ಆಲ್ವಿನ್ ಲಸ್ರಾದೊ, ನನ್ನ ಮಗಳನ್ನು ನಾನು ನಿಮ್ಮೊಂದಿಗೆ ಮಲಗಿಸಲು ತಯಾರಿದ್ದೇನೆ. ನನ್ನ ಮಗಳಿಗೆ ಇನ್ನೂ ಭರ್ತಿ ೧೮ ತುಂಬಿಲ್ಲ. ನೀವು ಒಮ್ಮೆ ನೋಡಿದರೆ ಹುಚ್ಚು ಹಿಡಿದವರ ಹಾಗೆ ಆಗುತ್ತಿರಿ. ನನಗೆ ಹಣ ಬೇಕು. ಹೀಗೆ ಆಲ್ವಿನ್ ಲಸ್ರಾದೊ ತನ್ನ ಸುಂದರ ಮಗಳು ಸ್ಟೆಟ್ಲಾಳನ್ನು ಮಾರಲು ಮಂಗಳೂರಿನ ಶ್ರೀಮಂತ ಉದ್ಯಮಿಗಳ ಮುಂದೆ ಮಾರ್ಕೆಟಿಂಗ್ ಮಾಡಲು ಇಳಿಯುತ್ತಾರೆ. ಇದನ್ನು ಓದುತ್ತಿದ್ದಂತೆ ನಿಮಗೆ ಆಲ್ವಿನ್ ಮೇಲೆ ಅಸಹ್ಯ ಹುಟ್ಟಬಹುದು. ಹಿಡಿಶಾಪ ಹಾಕುವ ಮನಸ್ಸಾಗಬಹುದು. ಇಂತವರು ತಂದೆ ಆಗಲು […]

ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಇಬ್ಬರು ಆರೋಪಿಗಳ ಬಂಧನ

Monday, July 22nd, 2013
Kerala Rapist

ಕಾಸರಗೋಡು:  ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಗೆ ಬಿಡುವುದಾಗಿ ಹೇಳಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ತನ್ನ ಗೆಳೆಯನ ಜೊತೆ ಸೇರಿ ಅತ್ಯಾಚಾರ ಮಾಡಿದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಾರಡ್ಕ ನಿವಾಸಿ ಆಟೋರಿಕ್ಷಾ ಚಾಲಕ ಇಬ್ರಾಹಿಂ ಬಾಲಕಿಯನ್ನು ಜು.17ರಂದು ಬಲವಂತವಾಗಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ತನ್ನ ಗೆಳೆಯ ಖಾಲಿದ್ ನೊಂದಿಗೆ ಜನವಾಸವಿಲ್ಲದ ಮನೆಯಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಲಭಿಸಿದ ದೂರಿನನ್ವಯ ತನಿಖೆ ನಡೆಸಿದಾಗ ಆರೋಪಿಗಳ ಹೆಸರು ಬಹಿರಂಗವಾಗಿದೆ.

ಮಣಿಪಾಲದಲ್ಲಿ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಖಂಡಿಸಿ ಅಭಾವಿಪದಿಂದ ಬೃಹತ್ ಪ್ರತಿಭಟನೆ

Sunday, June 23rd, 2013
abvp students protest

ಮಂಗಳೂರು : ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಮಂಗಳೂರು ಅಭಾವಿಪವು ಬೆಸೆಂಟ್ ಕಾಲೇಜು ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನಾ ಸಭೆಯನ್ನು ನಡೆಸಿತು. ನೂರಾರು ವಿದ್ಯಾರ್ಥಿ/ ವಿದ್ಯಾರ್ಥಿನಿಯರು  ಪ್ರತಿಭಟನೆಯಲ್ಲಿ ಭಾಗವಹಿಸಿ ಅತ್ಯಾಚಾರ ಪ್ರಕರಣದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ, ಅಭಾವಿಪದ ಮಾಜಿ ರಾಜ್ಯ ಕಾರ್ಯದರ್ಶಿ ರವಿಚಂದ್ರ ಪಿ.ಎಂ. ಇದೊಂದು ಹೇಯ ಕೃತ್ಯವಾಗಿದ್ದು, ಸರಕಾರ 24 ತಾಸೊಳಗೆ ಆರೋಪಿಗಳನ್ನು […]