ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಇಬ್ಬರ ಬಂಧನ

Saturday, December 22nd, 2018
arrested

ಮಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಡಿ. 19ರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪಣಂಬೂರು ಠಾಣಾ ಸಿಬ್ಬಂದಿ ರಾತ್ರಿ 2.30ಕ್ಕೆ ತೋಟಬೆಂಗ್ರೆಯ ಸರ್ಕಾರಿ ಶಾಲೆಯ ಬಳಿ ತಲುಪುತ್ತಿದ್ದಂತೆ ಅಲ್ಲಿದ್ದ 4 ಪುಂಡರು ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಇಂದು ಬಂಧಿಸಿದ್ದಾರೆ. ಮಂಗಳೂರು ತೋಟಬೆಂಗ್ರೆಯ ವಿಜೀತ್ ಯಾನೆ ಶಿವರಾಜ್ ಕುಮಾರ್, ಉಳ್ಳಾಲ […]

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು 56 ನೇ ಹುಟ್ಟುಹಬ್ಬದ ಸಂಭ್ರಮ..!

Thursday, July 12th, 2018
shivrajkumar

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ತಮ್ಮ 56 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಮಾನ್ಯತಾ ಟೆಕ್ ಪಾರ್ಕಿನಲ್ಲಿರುವ ಶಿವಣ್ಣ ನಿವಾಸದಲ್ಲಿ ಕುಟುಂಬದವರು ಹಾಗೂ ಆಪ್ತರು ಶಿವಣ್ಣನ ಬರ್ತಡೇ ಆಚರಿಸಿದರು. ನಿನ್ನೆ ರಾತ್ರಿಯಿಂದಲೇ ಶಿವಣ್ಣ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪತ್ನಿ ಗೀತಾ, ಮಕ್ಕಳು, ಸ್ನೇಹಿತರೊಂದಿಗೆ ಶಿವಣ್ಣ ಅವರಿಗಾಗಿ ತರಿಸಿದ್ದ ವಿಶೇಷ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ರಾತ್ರಿಯೇ ಹುಟ್ಟುಹಬ್ಬದ ಶುಭಾಶಯ ಕೋರಲು ಬಹಳಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಶಿವಣ್ಣ ಮನೆ ಮುಂದೆ ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು […]

2ನೇ ಬಾರಿ ಹೆಚ್‌ಡಿಕೆ- ಸುದೀಪ್‌ ಭೇಟಿ… ಗರಿಗೆದರಿದ ಕುತೂಹಲ

Monday, April 2nd, 2018
kiccha-sudeep

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಏರುತ್ತಿರುವ ಬೆನ್ನಲ್ಲೇ ಕನ್ನಡ ಚಿತ್ರರಂಗದ ಬಹುಮುಖ ತಾರೆ ಕಿಚ್ಚ ಸುದೀಪ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರನ್ನ 2ನೇ ಬಾರಿ ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಹೌದು,ಇಂದು ನಟ ಸುದೀಪ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನೆಗೆ ಭೇಟಿ ನೀಡಿದರು. ಉಭಯ ಕುಶಲೋಪರಿ ವಿಚಾರಿಸಿದರು, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗು ನಟ ನಿಖಲ್ ಜೊತೆ ಉಪಹಾರ ಸೇಚಿಸಿದರು. ನಂತರ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಹೆಚ್‌ಡಿಕೆ ಕುಟುಂಬದ […]

ಐಪಿಎಲ್‌‌ ಕನ್ನಡ ಸ್ಟಾರ್‌‌ ಸ್ಪೋರ್ಟ್‌‌ ರಾಯಭಾರಿಯಾಗಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌

Wednesday, March 28th, 2018
shivraj-kumar

ಬೆಂಗಳೂರು: ಸ್ಟಾರ್‌ ನೆಟವರ್ಕ್‌ನ ಸ್ಟಾರ್‌‌ ಸ್ಪೋರ್ಟ್‌‌ ಕನ್ನಡದಲ್ಲಿ ಪ್ರಸಾರವಾಗಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ರಾಯಭಾರಿಯಾಗಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಆಯ್ಕೆಯಾಗಿದ್ದಾರೆ. ಸ್ಟಾರ್‌ ಇಂಡಿಯಾ ಇದೇ ಮೊದಲ ಸಲ ನಾಲ್ಕು ಪ್ರಾದೇಶಿಕ ಭಾಷೆಗಳಾಗಿರುವ ತಮಿಳು, ತೆಲಗು, ಬಂಗಾಳಿ ಹಾಗೂ ಕನ್ನಡದಲ್ಲಿ ಸ್ಟೋರ್ಟ್ಸ್‌ ಚಾನೆಲ್‌ ಪ್ರಸಾರ ಮಾಡಲು ಮುಂದಾಗಿದೆ. ಜತೆಗೆ ಪ್ರಸಕ್ತ ಸಾಲಿನ ಐಪಿಎಲ್‌ ಪ್ರಸಾರ ಮಾಡಲು ಸಹ ಅವು ಮುಂದಾಗಿವೆ. ಹೀಗಾಗಿ ಕನ್ನಡದ ರಾಯಭಾರಿಯಾಗಿ ನಟ ಶಿವರಾಜ್‌ ಕುಮಾರ್‌ ಆಯ್ಕೆಗೊಂಡಿದ್ದಾರೆ. ಇನ್ನು ತಾವೂ ರಾಯಭಾರಿಯಾಗಿ ಆಯ್ಕೆಗೊಂಡಿರುವುದಕ್ಕೆ ಸಂಬಂಧಿಸಿದಂತೆ […]

ಶಿವಮೊಗ್ಗದಲ್ಲಿ ನಡೆದ ದೊಡ್ಮನೆ ಮದುವೆ: ಸಂಭ್ರಮ ಸಡಗರದಲ್ಲಿ ರಾಜ್ ಕುಟುಂಬ

Monday, March 26th, 2018
rajkumar

ಶಿವಮೊಗ್ಗ: ವರನಟ ಡಾ. ರಾಜ್‌‌‌‌‌‌‌‌‌‌ಕುಮಾರ್ ಕುಟುಂಬದಲ್ಲಿ ಮತ್ತೊಂದು ಮದುವೆಯ ಸಂಭ್ರಮ ಸಡಗರಕ್ಕೆ ಶಿವಮೊಗ್ಗ ಇಂದು ಸಾಕ್ಷಿಯಾಯ್ತು. ಡಾ. ರಾಜ್‌‌‌‌‌‌‌‌‌‌ಕುಮಾರ್ ಪುತ್ರಿ ಲಕ್ಷ್ಮಿ ಅವರ ಪುತ್ರ ಷಣ್ಮುಖ (ಶಾನ್ ) ಸಾಗರದ ಖ್ಯಾತ ವಕೀಲ ಬರೂರು ನಾಗರಾಜ್ ಮಗಳು ಸಿಂಧು ಅವರ ವಿವಾಹ ಶಿವಮೊಗ್ಗದ ನವಿಲೆಯ ಸರ್ಜಿ ಇಂಟರ್‌‌‌‌‌‌‌‌‌‌‌‌ನ್ಯಾಷನಲ್ ಕನ್ವೆನ್ಷನ್ ಹಾಲ್‌‌‌ನಲ್ಲಿ ನಡೆಯಿತು. ಈ ಶುಭ ಸಮಾರಂಭಕ್ಕೆ ಡಾ. ರಾಜ್‌‌‌‌‌‌‌‌‌‌ಕುಮಾರ್ ಇಡೀ ಕುಟುಂಬವೇ ಆಗಮಿಸಿತ್ತು. ನಟ ಶಿವರಾಜ್‌‌‌‌ಕುಮಾರ್, ಪುನೀತ್ ರಾಜ್‌‌‌‌‌‌ಕುಮಾರ್, ರಾಘವೇಂದ್ರ ರಾಜ್‌‌‌‌‌‌‌‌‌‌‌‌‌‌‌‌‌‌ಕುಮಾರ್, ವಿಜಯ್ ರಾಘವೇಂದ್ರ, ರಾಮ್ ಕುಮಾರ್ […]

ಚಿತ್ರ ನಟ ಶ್ರೀ ಶಿವರಾಜ್ ಕುಮಾರ್ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ

Saturday, September 16th, 2017
Shivarajkumar

ಮಂಗಳೂರು : ಕದ್ರಿ ಸ್ಟಾರ್ ನೈಟ್ ಗೆ ಆಗಮಿಸಿದ ಚಲನಚಿತ್ರ ನಟ ಶ್ರೀ ಶಿವರಾಜ್ ಕುಮಾರ್ ರವರು ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ಇತ್ತು ವಿಶೇಷ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಶಾರಾದ ಶ್ರೀ ಹೆಚ್.ಎಸ್. ಸಾಯಿರಾಮ್, ನಮ್ಮ ಕುಡ್ಲ ಚಾನೆಲ್ ನ ಶ್ರೀ ಮೋಹನ್ ಕರ್ಕೇರ ಹಾಗೂ ಕ್ಶೇತ್ರದ ಮ್ಯಾನೇಜರ್ ಶ್ರೀ. ವಿನೀತ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು

ಕನ್ನಡದಲ್ಲಿಯೇ ಉತ್ತಮ ಚಿತ್ರಕಥೆಗಳಿದ್ದು ಡಬ್ಬಿಂಗ್ ‍ನ ಅವಶ್ಯಕತೆ ಇಲ್ಲ : ಶಿವರಾಜ್ ಕುಮಾರ್

Friday, March 3rd, 2017
Kuttapady Kuttape

ಮಂಗಳೂರು : ಕಟ್ಟಪಾಡಿ ಕಟ್ಟಪ್ಪ ತುಳು ಚಿತ್ರದ ಆಡಿಯೋ  ರೆಕಾರ್ಡಿಂಗ್ ಮುಹೂರ್ತ ಕಾರ್ಯಕ್ರಮವನ್ನು  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬುಧವಾರ ಮಾರ್ಚ್ 01 ರಂದು ಬಲ್ಮಠದಲ್ಲಿರುವ ಕ್ಯಾಡ್ ಸ್ಟುಡಿಯೋದಲ್ಲಿ  ಉಧ್ಘಾಟಿಸಿದರು. ಈ  ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ‘ಬರಪೀಡಿತ ಎಂದು ಘೋಷಣೆಯಾದ ನಂತರ ಮೊದಲ ಬಾರಿ ಮಂಗಳೂರಿಗೆ ಭೇಟಿ ನೀಡಿದ್ದೇನೆ. ನೀರು, ಗಡಿ ವಿಷ್ಯದಲ್ಲಿ ನಾವು ಒಗ್ಗಟ್ಟಾಗಿ ಇರಬೇಕು . ಮಂಗಳೂರು ಅಷ್ಟೇ ಅಲ್ಲ, ಮಂಡ್ಯ, ಕೊಪ್ಪಳ ಸಹ ಬರಪೀಡಿತ ಜಿಲ್ಲೆಯಾಗಿದೆ. ಬರಮುಕ್ತ ನಾಡನ್ನ ನಾವು ಕಟ್ಟಬೇಕಾಗಿದೆ. ನಾವು […]

ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್

Tuesday, May 14th, 2013
Shivraj Kumar

ಮಂಗಳೂರು : ಅಕ್ಷಯ ತದಿಗೆ ಮತ್ತು ಬಸವ ಜಯಂತಿಯ ವಿಶೇಷ ದಿನವಾದ ಸೋಮವಾರ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ರವರು ಕುಂಟುಂಬ ಸಮೇತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ  ನಗರಕ್ಕೆ ಆಗಮಿಸಿದ್ದ ಅವರ ಜೊತೆಯಲ್ಲಿ ಪತ್ನಿ ಗೀತಾ, ಹಿರಿಯ ನಟ ಚಂದ್ರಶೇಖರ್, ಗುರುದತ್ ಹಾಗು ಇತರರು ಆಗಮಿಸಿದ್ದರು. ಶ್ರೀ ಕ್ಷೇತ್ರದ ಪರವಾಗಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ರವರು ಶಿವರಾಜ್ ಕುಮಾರ್ […]

ಶಿವರಾಜ್ ಕುಮಾರ್ 101ನೇ ಚಿತ್ರ

Saturday, November 27th, 2010
Shivaraj Kumar Priya Mani

ಬೆಂಗಳೂರು : ಶಿವರಾಜ್ ಕುಮಾರ್ 101ನೇ ಚಿತ್ರ ಕ್ಕೆ ನಾಯಕಿಯಾಗಿ ಬಹುಭಾಷಾ ತಾರೆ ಪ್ರಿಯಾಮಣಿ ನಟಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ‘ರಾಮ್’ ಚಿತ್ರದ ಮೂಲಕ ಕನ್ನಡಕ್ಕೆ ಬಂದು ಸುದೀಪ್,ಗೋಲ್ಡನ್ ಸ್ಟಾರ್ ಗಣೇಶ್   ಚಿತ್ರಗಳಲ್ಲಿ ಪ್ರೇಕ್ಷಕರ ಗಮನ ಸೆಳೆದು, ಶಿವರಾಜ್ ಕುಮಾರ್ ಜೊತೆ ನಟಿಸುತ್ತಿರುವ ನಾಲ್ಕನೇ ಚಿತ್ರ ಇದಾಗಿರುವುದು ವಿಶೇಷ. ಪ್ರೇಮ್ ನಿರ್ದೇಶನದ ‘ಜೋಗಯ್ಯ’ ಶಿವರಾಜ್ ಕುಮಾರ್ ಅವರ 100 ನೇ ಚಿತ್ರವಾಗಿತ್ತು,  ಈಗ 101ನೇ ಚಿತ್ರವೂ ಘೋಷಣೆಯಾಗಿದೆ. ಹೆಸರಿಡದ ಈ ಚಿತ್ರಕ್ಕೆ ಸೂಪರ್ ಹಿಟ್ ಸಂಗೀತ ನಿರ್ದೇಶಕ ಗುರುಕಿರಣ್ […]