ಪಾಲಿಕೆಯಲ್ಲಿ ವಿರೋಧ ಪಕ್ಷದ ಬಿಜೆಪಿ ಸದಸ್ಯರಿಂದ ಧರಣಿ, ಮೇಯರ್ ಕಣ್ಣೀರು

Tuesday, October 31st, 2017
mayor

ಮಂಗಳೂರು: ಫ್ಲ್ಯಾಟ್ ನ ಸೆಕ್ಯುರಿಟಿ ಗಾರ್ಡ್ ಮಗುವಿನ ಮೇಲೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅವರು  ಹಲ್ಲೆ ಮಾಡಿದ್ದಾಗಿ ಆರೋಪಿಸಿ ವಿರೋಧ ಪಕ್ಷದ ಬಿಜೆಪಿ ಸದಸ್ಯರು ಪಾಲಿಕೆ ಸಭೆ ನಡೆಯಲು ಅವಕಾಶ ನೀಡದೇ ಇದ್ದಾಗ, ಕಟೀಲು ದುರ್ಗಾ ಪರಮೇಶ್ವರಿ ಮೇಲೆ ಆಣೆ ಇಟ್ಟು ಕಣ್ಣೀರು ಹಾಕಿದ ಘಟನೆ ನಡೆಯಿತು. ವಿರೋಧ ಪಕ್ಷದವರು ಧರಣಿ ಆರಂಭಿಸಿದ್ದರಿಂದ ೧೦.೩೦ಕ್ಕೆ ಆರಂಭವಾಗಬೇಕಿದ್ದ ಸಭೆ ಆರಂಭ ಆಗಲಿಲ್ಲ. ಮೇಯರ್ ಡೌನ್ ಡೌನ್ ಎಂದು ಕೂಗುತ್ತ ಮೇಯರ್ ಪೀಠದ ಎದುರು ಜಮಾಯಿಸಿದರು. ಇದಕ್ಕೆ […]

ಮೇಯರ್ ಅವರಿಗೆ ಅವರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳ ದುಸ್ಥಿತಿ ಏಕೆ ಕಾಣುತ್ತಿಲ್ಲ ?

Friday, October 13th, 2017
mayor kavitha sanil

  ಮಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಅಕ್ರಮ ಮಸಾಜ್ ಪಾರ್ಲರ್ ಗಳ ವಿರುದ್ಧ ಸಮರ ಸಾರಿದ್ದ ಮಂಗಳೂರಿನ ಮೇಯರ್ ಕವಿತಾ ಸನಿಲ್ ಇತ್ತೀಚೆಗೆ ಅಕ್ರಮ ಫ್ಲಾಟ್ ಗಳ ಮೇಲೆ ದಾಳಿ ಆರಂಭಿಸಿದ್ದಾರೆ. ಮಂಗಳೂರು ಮೇಯರ್ ಅವರ ಈ ಡೇರ್ ಡೆವಿಲ್ ವ್ಯಕ್ತಿತ್ವಕ್ಕೆ ಹ್ಯಾಟ್ಸ್ ಆಫ್ ಅನ್ನಲೇಬೇಕು . ಆದರೆ ಈ ಎಲ್ಲ ಅಕ್ರಮಗಳ ವಿರುದ್ಧ ತಿರುಗಿ ಬಿದ್ದಿರುವ ಮೇಯರ್ ಅವರಿಗೆ ಅವರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳ ದುಸ್ಥಿತಿ ಏಕೆ ಕಾಣುತ್ತಿಲ್ಲ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಮಂಗಳೂರು ಮಹಾನಗರ […]

ಮೀನು ಮಾರುಕಟ್ಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

Wednesday, October 11th, 2017
fish market

ಮಂಗಳೂರು:ಮೇಯರ್ ಕವಿತಾ ಸನಿಲ್  ನಗರದ ಸ್ಟೇಟ್ ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು  ಮಂಗಳವಾರ ಉದ್ಘಾಟಿಸಿದರು. ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ ತಾತ್ಕಾಲಿಕ ಮೀನು ಮಾರುಕಟ್ಟೆಯ ಮೇಲ್ಚಾವಣೆ ಕುಸಿದು ಮಳೆಗಾಲದಲ್ಲಿ ಧಾರಾಕಾರ ಮಳೆ ಮಾರುಕಟ್ಟೆಯ ಒಳಗೆ ಸುರಿಯುತ್ತಿದ್ದು, ಇದರಿಂದ ಮೀನು ಮಾರಾಟಗಾರಿಗೆ ಹಾಗೂ ಗ್ರಾಹಕರಿಗೆ ತುಂಬಾ ಸಮಸ್ಯೆಯಾಗಿತ್ತು. ನೆಲಕ್ಕೆ ಹಾಸಲಾದ ಕಲ್ಲ ಚಪ್ಪಡಿಗಳು ಅಲ್ಲಿಲ್ಲಿ ಕಿತ್ತು ಹೋಗಿ ಒಳಗಡೆ ರಾಡಿ ತುಂಬಿತ್ತು. ಈ ಕುರಿತು ಮೀನು ಮಾರಾಟಗಾರರು ಹಲವು ಬಾರಿ ಮಂಗಳೂರು […]

ಮೇಯರ್ ಕವಿತಾ ಸನಿಲ್: ನಗರದ ಅನಧಿಕೃತ ಫ್ಲಾಟ್ ಗಳ ವಿರುದ್ಧ ಸಮರ

Tuesday, October 10th, 2017
mayor

ಮಂಗಳೂರು: ಪಾಲಿಕೆಯಲ್ಲಿ ಡೋರ್ ನಂಬರ್ ಆಗದೆ ಅಕ್ರಮವಾಗಿ ವಾಸವಿರುವ ಫ್ಲ್ಯಾಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಕವಿತಾ ಸನಿಲ್ ಮುಂದಾಗಿದ್ದಾರೆ.  ಮಂಗಳೂರು ಮೇಯರ್ ಕವಿತಾ ಸನಿಲ್ ಏಕಾಏಕಿ ನಗರದ ಹೊರವಲಯದ ಮೇರಿಹಿಲ್ ನ ಪಿಂಟೋಸ್ ಗಾರ್ಡನ್ ಎಂಬಲ್ಲಿರುವ ವೆಲಂಕಣಿ ಎಬೋರ್ಡ್ ಹೆಸರಿನ ಫ್ಲಾಟ್ ಗಳ ಮೇಲೆ ದಾಳಿ ನಡೆಸಿದರು.ಮಂಗಳೂರಿನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದ ಮಂಗಳೂರು ಮೇಯರ್ ಕವಿತಾ ಸನಿಲ್ ಈಗ ನಗರದ ಅನಧಿಕೃತ ಫ್ಲಾಟ್ ಗಳ ವಿರುದ್ಧ ಸಮರ ಸಾರಿದ್ದಾರೆ. ವೆಲಂಕಣಿ ಎಬೋರ್ಡ್ ಪ್ಲಾಟ್ […]

ಮಳೆಗಾಲದಲ್ಲಿ ಹೊಟೇಲ್ ಮಾಲಕರು ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು : ಮೇಯರ್ ಕವಿತಾ ಸನಿಲ್

Friday, June 2nd, 2017
mayor kavitha

ಮಂಗಳೂರು : ಮಳೆಗಾಲದಲ್ಲಿ ಹೊಟೇಲ್ ಮಾಲಕರು ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಸೂಕ್ಷ್ಮ ಜೀವಿಗಳು ಹಾಗೂ ರೋಗ ವಾಹಕಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ವಿಶೇಷವಾಗಿ ಎಚ್ಚರಿಕೆ ವಹಿಸಬೇಕು ಎಂದು ಮೇಯರ್ ಕವಿತಾ ಸನಿಲ್ ಸೂಚನೆ ನೀಡಿದ್ದಾರೆ. ಮನಾಪ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಸಲಹೆ ನೀಡಿದ ಅವರು, ಹೊಟೇಲ್ ಮಾಲಕರು ಗ್ರಾಹಕರಿಗೆ ಬಿಸಿ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು ಎಂದರು. ಕಳೆದ ಬಾರಿ ಮನಪಾ ವತಿಯಿಂದ ಹಲವು ಬಾರಿ ನಗರದ ಕೆಲವೆಡೆ […]

ಮಂಗಳೂರು : ಮೇಯರ್‌ ಆಗಿ ಜೆಸಿಂತಾ ವಿಜಯಾ ಆಲ್ಫ್ರೆಡ್ ಉಪಮೇಯರ್‌ ಆಗಿ ಪುರುಷೋತ್ತಮ ಚಿತ್ರಾಪುರ ಆಯ್ಕೆ

Friday, March 13th, 2015
Mcc Mayor

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಕಾಂಗ್ರೆಸ್‌ನ ಜೆಸಿಂತಾ ವಿಜಯಾ ಆಲ್ಫ್ರೆಡ್ ಹಾಗೂ ಉಪಮೇಯರ್‌ ಆಗಿ ಪುರುಷೋತ್ತಮ ಚಿತ್ರಾಪುರ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣೆಗೆ ಪಾಲಿಕೆ ಪರಿಷತ್‌ನಲ್ಲಿ ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ರೂಪಾ ಡಿ. ಬಂಗೇರಾ ಹಾಗೂ ಕಾಂಗ್ರೆಸ್‌ನಿಂದ ಜೆಸಿಂತಾ ವಿಜಯಾ ಆಲ್ಫ್ರೆಡ್ ಸ್ಪರ್ಧಿಸಿದ್ದರು. ರೂಪಾ ಡಿ. ಬಂಗೇರ ಪರವಾಗಿ 20, ಜೆಸಿಂತಾ ಪರವಾಗಿ 37 ಮಂದಿ ಮತ ಚಲಾವಣೆಯಾಯಿತು. ಈ ಮೂಲಕ ಜೆಸಿಂತಾ ಮೇಯರ್‌ ಆಗಿ ಆಯ್ಕೆ ಆದರು. ಮೈಸೂರು ಪ್ರಾದೇಶಿಕ ಆಯುಕ್ತರಾದ […]

ಮನಪಾ ಮೇಯರ್‌ ಆಗಿ ಮಹಾಬಲ ಮಾರ್ಲ

Thursday, March 13th, 2014
Mahabala-Morley

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 25ನೇ ಮೇಯರ್‌ ಆಗಿ ಕಾಂಗ್ರೆಸ್‌ ಸದಸ್ಯ ಮಹಾಬಲ ಮಾರ್ಲ ಅವರು ಮಾ. 13ರಂದು  ಆಯ್ಕೆಯಾಗಿದ್ದಾರೆ. ಕವಿತಾ ಅವರು ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ  ಚುನಾವಣೆಯಲ್ಲಿ  ಬಿಜೆಪಿಯಿಂದ ಸ್ಪರ್ಧಿಸಿದ ತಿಲಕ್‌ರಾಜ್‌ ಅವರು 20 ಮತಗಳನ್ನು ಪಡೆದರೆ ಮಾರ್ಲ ಅವರು 37 ಮತಗಳನ್ನು ಪಡೆದು ಜಯಶಾಲಿಯಾದರು. ಮಹಾಬಲ ಮಾರ್ಲ  ಅವರು ಕದ್ರಿ ಪದವು ವಾರ್ಡ್‌ನಿಂದ ಮೂರು ಬಾರಿ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೈಸೂರು ಪ್ರಾದೇಶಿಕ ಆಯುಕ್ತರು ಚುನಾವಣೆ […]