ಏಷ್ಯನ್ ಕ್ರೀಡಾಕೂಟ : ಯೋಗೇಶ್ವರ್ ಗೆ ಚಿನ್ನ, ರಾಜ್ಯದ ಅಥ್ಲೀಟ್ ಪೂವಮ್ಮಗೆ ಕಂಚು

Monday, September 29th, 2014
Share
Yogeshwar Poovamma

ಇಂಚೆನ್ : ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ಪುರುಷರ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ತೋರಿದರೆ ರಾಜ್ಯದ ಅಥ್ಲೀಟ್ ಎಂ.ಆರ್.ಪೂವಮ್ಮ ಮಹಿಳೆಯರ 400 ಮೀ. ಓಟದಲ್ಲಿ ಕಂಚಿನ ಪದಕ್ ಪಡೆದಿದ್ದಾರೆ. ಪಂಜಾಬಿನ ಖುಷ್‌ಬಿರ್‌ ಕೌರ್ ಅವರು ಮಹಿಳೆಯ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದು, 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾನುವಾರ 9ನೇ ದಿನವೂ ಭಾರತದ ಪರ ಭರ್ಜರಿ ಪದಕ ಬೇಟೆಯಾಡಿದರು.

ಯೋಗೇಶ್ವರ್ ಅವರ ಚಿನ್ನದ ಸಾಧನೆಯೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಪೂವಮ್ಮ ಅವರು ನಿಗದಿತ ಗುರಿಯನ್ನು 52.36 ಸೆ.ಗಳಲ್ಲಿ ಕ್ರಮಿಸಿದರು.

ಬೆಳ್ಳಿ ಪದಕ: ಖುಷ್‌ಬಿರ್‌ ಕೌರ್ ಅವರು ಮಹಿಳಾ ವಿಭಾಗದ 20 ಕಿ.ಮೀ ದೂರದ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು.

21 ವರ್ಷದ ಕೌರ್ ಅವರು 1:33:07 ನಿಮಿಷಗಳಲ್ಲಿ ನಿಗದಿತ ದೂರವನ್ನು ತಲುಪಿದರು. 1:31:06 ನಿಮಿಷಗಳಲ್ಲಿ ಗುರಿ ತಲುಪಿದ ಚೀನಾದ ಲು ಕ್ಸಿಯುಝಿ ಚಿನ್ನದ ಪದಕ ಗೆದ್ದರು.

18 ಕಿ.ಮೀ ವರೆಗೂ ಮೂರನೇ ಸ್ಥಾನದಲ್ಲಿದ್ದ ಕೌರ್‌ ಬಳಿಕದ ಎರಡು ಕಿ.ಮೀ ದೂರದಲ್ಲಿ ವೇಗ ಹೆಚ್ಚಿಸಿಕೊಂಡು ಬೆಳ್ಳಿ ಪದಕ ಪಡೆದರು.

ಟೆನಿಸ್‌ನಲ್ಲಿ ಮೂರು ಕಂಚು: ಭಾರತದ ಟೆನಿಸ್‌ ಆಟಗಾರರು ಪದಕ ಗೆಲ್ಲುವಲ್ಲಿ ಹಿಂದೆ ಬೀಳಲಿಲ್ಲ. ಮೂರು ಕಂಚು ಜಯಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭರವಸೆಯ ಆಟಗಾರ ಯೂಕಿ ಭಾಂಬ್ರಿ ಕಂಚು ಗೆದ್ದರು. ಪುರುಷರ ಡಬಲ್ಸ್‌ನಲ್ಲಿ ದಿವಿಜ್‌ಶರಣ್ ಅವರ ಜತೆಗೂಡಿದ ಭಾಂಬ್ರಿ ಭಾರತಕ್ಕೆ ಮತ್ತೊಂದು ಕಂಚು ತಂದಿತ್ತರು.

ಇನ್ನು, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಹಾಗೂ ಪ್ರಾರ್ಥನಾ ಥೋಂಬರೆ ಅವರು ಕಂಚಿನ ಪದಕ ಗೆದ್ದರು.

ನಿರಾಸೆ: ಭಾರತೀಯ ಮಹಿಳಾ ತಂಡ ಆರ್ಚರಿ ಸ್ಪರ್ಧೆಯ ರಿಕರ್ವ್‌ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವನ್ನೂ ಕಳೆದುಕೊಂಡು ನಿರಾಸೆ ಅನುಭವಿಸಿದರು.

ಭಾನುವಾರ 6 ಪದಕ (ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚು) ಸೇರಿ ಭಾರತ ಒಟ್ಟು ನಾಲ್ಕು ಬಂಗಾರ, ಆರು ಬೆಳ್ಳಿ ಹಾಗೂ 24 ಕಂಚಿನ ಪದಕಗಳೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಚೆಲುವಿಯ ಮನ ಕದ್ದರೆ 800 ಕೋಟಿ ವರದಕ್ಷಿಣೆ

Monday, January 27th, 2014
Share

Gigi

ಹಾಂಕಾಂಗ್: ನೋಡಲು ರಾಜಕುಮಾರಿಯಂತಿರುವ ಹಾಂಕಾಂಗ್‌ನ ಹುಡುಗಿಗೆ ವರ ಬೇಕಾಗಿದೆ. ಈಕೆಯ ಪಾಣಿಗ್ರಹಣ ಮಾಡಿದ ಅದೃಷ್ಟವಂತ ನಿಜಕ್ಕೂ ದಿನಬೆಳಗಾಗುವುದರೊಳಗೆ ಕುಬೇರನಾಗುತ್ತಾನೆ. ಹೆಣ್ಣು ಮತ್ತು ಹೊನ್ನು ಇನ್ನೇನು ಬೇಕು? ಸ್ವರ್ಗಕ್ಕೆ ಕಿಚ್ಚು ಹಚ್ಚುವ ಹುರುಪು ಈಗಲೇ ಬಂದರೆ ಕೊಂಚ ತಾಳಿ ಮಾವ, ಮಗಳು ಹೇಳುವ ಕಂಡೀಷನ್‌ಗಳನ್ನು ಕೇಳಿ.

ಹಾಂಕಾಂಗ್ ಉದ್ಯಮಿ ಸೆಸಿಲ್ ಚಾವೊ, ತನ್ನ ಮಗಳ ಹೃದಯ ಗೆಲ್ಲುವ ಹುಡುಗನಿಗೆ 130 ಮಿಲಿಯನ್ ಡಾಲರ್ (815 ಕೋಟಿ ರೂ) ವರದಕ್ಷಿಣೆ ನೀಡುವುದಾಗಿ ಘೋಷಿಸಿದ್ದಾರೆ. ವಿವಾಹಿತರಿಗೂ ಚಾನ್ಸ್ ಇದೆ ಎಂದು ಅವರೇ ಹೇಳಿದ್ದಾರೆ.

2012ರಲ್ಲಿ 60 ಮಿಲಿಯನ್ ಡಾಲರ್ ಕೊಡುವುದಾಗಿ ಪ್ರಕಟಿಸಿದ್ದರು. ಜಗತ್ತಿನಾದ್ಯಂತ ಇಪ್ಪತ್ತು ಸಾವಿರ ಯುವಕರು ನಾ ಮುಂದು ತಾ ಮುಂದು ಎಂದು ಹಸೆಮಣೆ ಏರಲು ಸಜ್ಜಾಗಿದ್ದರು. ಉಹೂಂ ಸೆಸಿಲ್ ಸುಪುತ್ರಿ ಗಿಗಿ ಎಲ್ಲರನ್ನೂ ಒಲ್ಲೆಂದಳು.

ಏಕೆಂದರೆ ಆಕೆ ಸಲಿಂಗಕಾಮಿ. 2 ವರ್ಷಗಳ ಹಿಂದೆ 9 ವರ್ಷದ ಗೆಳತಿ ಇವಾ ಜತೆಯಲ್ಲಿ ಮದುವೆ ಆಗಿಬಿಟ್ಟಿದ್ದಾಳೆ. ಇದಕ್ಕೆ ಹಾಂಕಾಂಗ್‌ನಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕೆ ಫ್ರಾನ್ಸ್‌ಗೆ ಹೋಗಿ ಲಗ್ನ ಮಾಡಿಕೊಂಡಿದ್ದಳು. ಆದರೆ ಎಲ್ಲ ಸಹೃದಯಿ ಅಪ್ಪಂದಿರಂತೆ, ತನ್ನ ಮಗಳು ಎಲ್ಲರಂತೆ ಸಂಸಾರವಂದಿಗಳಾಗಬೇಕು. ಮಕ್ಕಳನ್ನು ಹೆರಬೇಕು. ತಾನು ಅಜ್ಜನಾಗಬೇಕು ಎಂಬ ಆಸೆಯಿಂದ ಸೆಸಿಲ್ ಈ ಪ್ರಕಟಣೆ ಹೊರಡಿಸಿದ್ದಾರೆ.

Cecil-Chao
”ನನ್ನ ಮಗಳ ವೈಯಕ್ತಿಕ ಬದುಕಿನ ಆಯ್ಕೆಗಳಿಗೆ ನಾನು ಅಡ್ಡಿ ಪಡಿಸಲು ಇಚ್ಛಿಸುವುದಿಲ್ಲ. ನಮ್ಮ ವಂಶ ಉದ್ಧಾರವಾಗಿ ಮೊಮ್ಮಕ್ಕಳೊಂದಿಗೆ ನಾನು ಆಡಬೇಕು. ಜತೆಗೆ ಅಳಿಯ, ನನ್ನ ಉದ್ಯಮವನ್ನೂ ಸುಸೂತ್ರವಾಗಿ ನಡೆಸಬೇಕು,” ಇದೇ ನನ್ನ ಕನಸು ಎನ್ನುತ್ತಾರೆ ಅವರು. ಭಾವಿ ಅಳಿಯನಿಗೆ ವರದಕ್ಷಿಣೆ ಮೊತ್ತ ಏರಿಕೆ ಮಾಡಿದ ಅಪ್ಪನ ಬಗ್ಗೆ ಮಗಳು ಮುನಿಸಿಗೊಂಡಿದ್ದಾಳೆ. ಪುರುಷ ಪ್ರತಿಸ್ಪರ್ಧಿ ಬರುವುದನ್ನು ಇವಾ ಕೂಡ ಅಸಂತೋಷಗೊಂಡಿದ್ದಾಳೆ.

”ಒಬ್ಬ ಹುಡುಗನನ್ನು ಸಂಗಾತಿಯಾಗಿ ಸ್ವೀಕರಿಸಿ ಜೀವನ ಸವೆಸಲು ತಯಾರಿದ್ದೇನೆ. ನನ್ನ ಮೇಲಿರುವ ಪ್ರೀತಿಯಿಂದ ಅಪ್ಪ ಮಾಡುತ್ತಿರುವ ವಿಭಿನ್ನ ಪ್ರಯತ್ನಕ್ಕೆ ನನ್ನ ವಿರೋಧವಿಲ್ಲ. ಆದರೆ, ಹಣದಾಸೆಗೆ ನನ್ನನ್ನು ಇಷ್ಟ ಪಡುವ ವ್ಯಕ್ತಿಯನ್ನು ನಾನೊಲ್ಲೆ. ಡ್ಯಾಡಿ ಐಲವ್‌ಯೂ. ಆದರೆ ಪದೇ ಪದೇ ವರದಕ್ಷಿಣೆ ಘೋಷಣೆ ಮಾಡುವುದನ್ನು ನಿಲ್ಲಿಸಿ,” ಎಂದು ಗಿಗಿ ತಿಳಿಸಿದ್ದಾಳೆ.

ಸಿನಿಮಾ ಆಗಲಿದ್ದಾಳೆ ಗಿಗಿ
ಉದ್ಯಮಿ ಸೆಸಿಲ್ ಮತ್ತು ಆತನ ಮಗಳು ಗಿಗಿ ಬದುಕಿನ ಬಗ್ಗೆ ಸಿನಿಮಾವೊಂದು ತೆರೆಗೇರಲು ಸಿದ್ಧವಾಗುತ್ತಿದೆ. ಬ್ರಿಟನ್‌ನ ಖ್ಯಾತ ನಿರ್ದೇಶಕ ಸಚ ಬಾರೊನ್ ಕೊಹೆನ್ ಈ ಕುರಿತು ಸಿನಿಮಾ ತೆಗೆಯಲು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ.

ಗಿಗಿ ಕರಾರು
ತನಗೆ ತಕ್ಕ ವರನನ್ನು ಹುಡುಕಲು ಉದ್ಯಮಿ ಸೆಸಿಲ್ ಮಾಡುತ್ತಿರುವ ಪ್ರಯತ್ನದ ಬಗ್ಗೆ ಬೇಡ ಬೇಡ ಎನ್ನುತ್ತಲೇ ಒಪ್ಪಿಗೆ ಸೂಚಿಸಿರುವ ಆಕೆ, ಹಣದಾಸೆಗೆ ವಿವಾಹವಾಗುವ ಹುಡುಗನನ್ನು ಒಲ್ಲೆ ಎನ್ನುತ್ತಿದ್ದಾಳೆ. ಹಾಗಾಗಿ ಗಿಗಿ ವಿವಾಹವಾಗುವ ಹುಡುಗ ಧರ್ಮಾರ್ಥ ಕಾರ್ಯಗಳಿಗಾಗಿ ಸ್ಥಾಪಿಸಿರುವ ಟ್ರಸ್ಟ್‌ವೊಂದಕ್ಕೆ ತನಗೆ ವರದಕ್ಷಿಣೆಯಾಗಿ ಬಂದ ಹಣವನ್ನು ಕೊಡಬೇಕೆಂಬುದು ಕರಾರು ಹಾಕಿದ್ದಾಳೆ. ನೆನೆಗುದಿಗೆ ಬಿದ್ದಿದ್ದ ರಂಗಮಂದಿರ, ಅಂಬೇಡ್ಕರ್‌ ಭವನ, ಸರ್ವಿಸ್‌ ಬಸ್‌ ನಿಲ್ದಾಣ ಈ ವರ್ಷದಲ್ಲಿ ನಿರ್ಮಾಣ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಅವರು ವಿವರಿಸಿದರು.

ವಿರೇಂದ್ರ ಹೆಗ್ಗಡೆಯವರಿಂದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗೆ ಚಾಲನೆ

Friday, December 20th, 2013
Share
Alvas Nudisiri Virasat

ಮೂಡಬಿದಿರೆ : ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ನ್ನು ಡಾ. ಡಿ ವಿರೇಂದ್ರ ಹೆಗ್ಗಡೆಯವರು ಗುರುವಾರ ಸಂಜೆ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆಳ್ವ ಆವರಣದಲ್ಲಿ ಸಂಜೆ 6.30 ರ ವೇಳೆಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಬತ್ತಕ್ಕೆ ಹಾಲೆರೆಯುವ ಮೂಲಕ ಇತರ ಗಣ್ಯರು ಉದ್ಘಾಟನೆಗೆ ಜತೆಗೂಡಿದರು.

ಸಂಜೆ 3.30ಕ್ಕೆ ಸಾಂಸ್ಕ್ರತಿಕ ಮೆರವಣಿಗೆ ಆರಂಭಗೊಂಡಿತು. ಜನಪದ ಕಲಾವಿದೆ ನಾಡೋಜ ಸುಕ್ರಿ ಬೊಮ್ಮಗೌಡ ಮೆರವಣಿಗೆಯನ್ನು ಉದ್ಘಾಟಿಸಿದರು. ಮೆರವಣಿಗೆಯು ಚೌಟರ ಅರಮನೆಯಿಂದ ಹೊರಟು ವೆಂಕಟ್ರಮಣ ದೇವಸ್ಥಾನ, ಹನುಮಾನ್ ದೇವಸ್ಥಾನದ ಮುಂಭಾಗದಿಂದ ಸಾಗಿ, ಮೂಡುಬಿದಿರೆ ಪಟ್ಟಣದ ಮೂಲಕ ವಿದ್ಯಾಗಿರಿಗೆ ತಲುಪಿತು.

80 ನುಡಿಸಿರಿ ವಿರಾಸತ್ ಘಟಕಗಳ ಅದ್ಯಕ್ಷರುಗಳು, ಪದಾಧಿಕಾರಿಗಳು, ಊರಿನ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಜಾನಪದ ಕಲಾವಿದರು, 100 ಕ್ಕೂ ಹೆಚ್ಚು ತಂಡಗಳು , ಸ್ಕೌಟ್ಸ್ ಅಂಡ್ ಗೈಡ್ಸ್ , ಎನ್ ಸಿ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಡೊಳ್ಳುಕುಣಿತದ ಕಲಾವಿದರು, ಕೊರಗರ ಡೋಲು, ಜನ ವೀರಭದ್ರ ಕುಣಿತದ ಕಲಾವಿದರು, ಕಲ್ಲಡ್ಕ ಗೊಂಬೆಯಾಟದ ಕಲಾವಿದರು, ಅಟಿಕಳೆಂಜಗಳು, ದುಡಿಕುಣಿತ ಕಲಾವಿದರು, ದಫ್, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕ ಕಲಾವಿದರು, ಯಕ್ಷಗಾನದ ವಿವಿಧ ವೇಷಗಳು, ಬಂಜಾರ ನೃತ್ಯಗಾರ್ತಿಯರು, ತಟ್ಟೀರಾಯ, ಸೋಮನ ಕುಣಿತ, ಹುಲಿವೇಷ, ಕೇರಳದ ವೇಷಗಳು, ತೆಯ್ಯಂ, ಕಥಕ್ಕಳಿ, ಕೇರಳದ ಮಹಿಳಾ ಚೆಂಡೆ ಬಳಗ, ತ್ರಿವರ್ಣ ಧ್ವಜ , ಹಾಲಕ್ಕಿ, ಕರಗ, ಶಂಖಧ್ವನಿ, ಕಂಸಾಳೆ, ನಂದಿಧ್ವಜ, ಪಟದ ಕುಣಿತ, ಕೊಡಗಿನ ಉಮ್ಮತ್ತಾಟು, ಕೋಲಾಟ, ಮರಗಾಲು ಕುಣಿತ, ಕಂಗೀಲು, ಶ್ರೀಲಂಕಾದ ಡ್ರಮ್ಸ್ ಹೀಗೆ ಸುಮಾರು 5000 ಕಲಾವಿದರು ಸೇರಿದಂತೆ 7000ದಷ್ಟು ಜನ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಶ್ವ ನುಡಿಸಿರಿ ವಿರಾಸತ್ ನ ರೂವಾರಿ ಎಂ.ಮೋಹನ್ ಆಳ್ವ ಹಾಗೂ ಇನ್ನಿತರ ಗಣ್ಯರು ಮೆರವಣಿಗೆಯಲ್ಲಿ ಸಾಗಿ ಬಂದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಲಾಕೃತಿಗಳು, ಕಲಾಕಾರರು ವೇದಿಕೆಯಲ್ಲಿ ತಮ್ಮ ಪ್ರದರ್ಶನ ನೀಡಿದರು.

ಉದ್ಘಾಟನಾ ಮಾತುಗಳನ್ನಾಡಿದ ಡಾ. ಡಿ ವಿರೇಂದ್ರ ಹೆಗ್ಗಡೆಯವರು ರಾಜ್ಯದ ವಿವಿಧ ಅಚಾರಗಳನ್ನು ಒಂದು ಸಣ್ಣ ಪಟ್ಟಣ್ದಲ್ಲಿ ಕ್ರೋಡಿಕರಿಸಿ ಅದನ್ನು ವಿಶ್ವದೆಲ್ಲೆಡೆ ಪಸರಿಸುವ ಆಳ್ವರ ಈ ಸಾಧನೆ ಮಹತ್ತರವಾದುದು, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಈ ಕಾರ್ಯಕ್ರಮ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

Alvas Nudisiri Virasat
Alvas Nudisiri Virasat
Alvas Nudisiri Virasat
Alvas Nudisiri Virasat
Alvas Nudisiri Virasat
Alvas Nudisiri Virasat

ಇಂಡಿಯಾ ಫ್ರಟೆರ್ನಿಟಿ ಫೋರಂ ನೇತೃತ್ವದಲ್ಲಿ ಪೂರ್ವ ವಲಯದಾದ್ಯಂತ ಬೃಹತ್ ಇಫ್ತಾರ್ ಸಂಗಮ

Thursday, August 1st, 2013
Share

India Fraternity Forum Hosts Iftar Partyದಮ್ಮಾಮ್ ( ಸೌದಿ ಅರೇಬಿಯಾ) : ಇಂಡಿಯಾ ಫ್ರಟೆರ್ನಿಟಿ ಫೋರಂ ಪೂರ್ವ  ವಲಯದ ನೇತೃತ್ವದಲ್ಲಿ ದಮ್ಮಾಮ್ , ಜುಬೈಲ್ ,ಹಪರಲ್ ಭಾತಿನ್  ಹಾಗೂ ಅಲ್ ಹಸ್ಸಾಗಳಲ್ಲಿ ಬೃಹತ್ ಇಫ್ತಾರ್ ಕೂಟಗಳನ್ನು ಆಯೋಜಿಸಲಾಗಿತ್ತು.

ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರ  ಸಾಮಾಜಿಕ ಸೇವೆಯಲ್ಲಿ  ಮಂಚೂಣಿಯಲ್ಲಿರುವ ಇಂಡಿಯಾ ಫ್ರಟೆರ್ನಿಟಿ ಫೋರಂ ಭಾರತದ ಹಲವು  ರಾಜ್ಯಗಳ ಸದಸ್ಯರನ್ನೊಳಗೊಂಡಿದೆ.

India Fraternity Forum Hosts Iftar Partyದಮ್ಮಾಂ ಹಾಗೂ ಹಫರಲ್  ಬಾತಿನ್ನಲ್ಲಿ ಸಲೀಂ ಜಿ. ಕೆ.  ರವರು,   ಜುಬೈಲ್ ನಲ್ಲಿ ಪರ್ವೇಜ್ ಅಹ್ಮದ್ ಬಿಹಾರ್,  ಮತ್ತು ಅಲ್  ಹಸ್ಸಾ ದಲ್ಲಿ ಅಬ್ದು ಸ್ಸುಭಾನ್  ರವರು  ಪವಿತ್ರ  ರಂಝಾನ್ ತಿಂಗಳ ಶ್ರೇಷ್ಠತೆ , ಗುರಿ ಹಾಗೂ ರಂಝಾನ್ ಉಪವಾಸ ವ್ರತದ ಮಹತ್ವಗಳ ಸಂದೇಶಗಳನ್ನು ನೀಡಿದರು.

ದಮ್ಮಾಮ್ ನಾಹ್ದ ಕ್ಲಬ್ ನಲ್ಲಿ  ಏರ್ಪಡಿಸಿದ ಇಫ್ತಾರ್ ನಲ್ಲಿ ಸುಮಾರು 275   ಕ್ಕಿಂತಲೂ ಹೆಚ್ಚು  ಜನ , ಜುಬೈಲ್ ನ ಮರಾಫಿಕ್ ಬೀಚ್ ಕ್ಯಾಂಪ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರೂ ಮಕ್ಕಳೂ  ಸೇರಿದಂತೆ  400  ರಷ್ಟು  ನಾಗರೀಕರು ಪಾಲ್ಗೊಂಡರು. ಅಲ್ ಹಸ್ಸಾದ ಇಸ್ತ್ರಾ ಅಲ್  ಮಲಿಕಿಯಲ್ಲಿ  ಆಯೋಜಿಸಿದ್ದ ಇಫ್ತಾರ್ ಸಂಗಮದಲ್ಲಿ ಸುಮಾರು 280 ಮಂದಿ ಹಾಗೂ  ಹಫರಲ್  ಬಾತಿನ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 100 ರಷ್ಟು  ನಾಗರೀಕರು ಭಾಗವಹಿಸಿದರು.

India Fraternity Forum Hosts Iftar Partyಫಯಾಝ್  ಎನ್. ದಮ್ಮಾಂ ನಲ್ಲಿ  ,  ಸಲೀಂ  ಜುಬೈಲ್ ನಲ್ಲಿ , ಅಕ್ಬರ್   ಅಲ್ ಹಸ್ಸಾ ದಲ್ಲಿ  ಮತ್ತು  ಅಶ್ರಫ್ ಕೆ.  ಹಫರಲ್  ಬಾತಿನ್ನಲ್ಲಿ ಐ.ಎಫ್.ಎಫ್. ನ ಸ್ಥೂಲ ಮಾಹಿತಿ ನೀಡಿ  ಕಾರ್ಯಕ್ರಮ ನಿರ್ವಹಿಸಿದರು.

ನರ್ಸ್ ಜೆಸಿಂತಾ ಕಾನೂನು ಹೋರಾಟ, ಆರ್ಥಿಕ ಸಂಕಷ್ಟದಲ್ಲಿ ಕುಟುಂಬ

Friday, March 8th, 2013
Share

jacintha saldanha legal caseಲಂಡನ್ : ಇಂಗ್ಲೆಂಡ್ ರಾಜಮನೆತನದ ಅಧೀನದಲ್ಲಿರುವ ಕಿಂಗ್‌ ಎಡ್ವರ್ಡ್ಸ್‌ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆಸಲ್ಲಿಸುತ್ತಿದ್ದ  ಉಡುಪಿ ಶಿರ್ವಾ ಮೂಲದ ನರ್ಸೆ ಜೆಸಿಂತಾ ರೇಡಿಯೋ ಜಾಕಿಗಳ ತಮಾಷೆಯ ಕರೆಗೆ ಬೇಸತ್ತು ಆತ್ಮಹತೆ ಮಾಡಿಕೊಂಡಿದ್ದರು. ಇದೀಗ ಆಕೆಯ ಆಕೆಯ ಸಾವಿನ ಪ್ರಕರಣದ ಕುರಿತಾಗಿ ಸರಕಾರದ ಕಾನೂನಿನ ನೆರವನ್ನು ಪಡೆಯಲು ಆಕೆಯ ಕುಟುಂಬ ನಿರಾಕರಿಸಿದೆ.

ಜೆಸಿಂತಾ ಸಾವಿನ ಪ್ರಕರಣ ಇನ್ನು ನಿಗೂಡ ವಾಗಿಯೇ ಉಳಿದಿದ್ದು, ಸರಕಾರ ನೀಡುವ ಕಾನೂನು ನೆರವನ್ನು ಕುಟುಂಬ ನಿರಾಕರಿಸಿರುವ ಹಿನ್ನಲೆಯಲ್ಲಿ ಜೆಸಿಂತಾ ಕುಟುಂಬ ವೇ ಕಾನೂನು ತಜ್ಞ್ಯರಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿ ಮಾಡಬೇಕಾಗುವ ಅನಿವಾರ್ಯತೆ ಇದೆ ಆದರೆ ಜೆಸಿಂತಾ ಕುಟುಂಬ ವಕೀಲರ ವೆಚ್ಚ ಕೂಡ ಭರಿಸಲು ಹಣವಿಲ್ಲದೇ ಪರದಾಡುತ್ತಿದ್ದು, ಇದು ಕಾನೂನು ಹೋರಾಟಕ್ಕೆ ಅಡ್ಡಿಯಾಗಿದೆ.

ನಾಲ್ಕು ಆಸ್ಕರ್‌ ಪ್ರಶಸ್ತಿಗಳನ್ನು ದೋಚಿದ ಲೈಫ್ ಆಪ್‌ ಪೈ

Monday, February 25th, 2013
Share

Life of Piಲಾಸ್‌ ಏಂಜಲಿಸ್‌ : ಈ ಬಾರಿಯ 85ನೇ ಅಕಾಡೆಮಿ ಆಸ್ಕರ್‌ ಪ್ರಶಸ್ತಿ ಭಾನುವಾರ ರಾತ್ರಿ ಘೋಷಣೆಯಾಗಿದ್ದು, ನಾವೆಯ ಭಾರತೀಯ ಯುವಕನ ಜೀವನ್‌ಮರಣ ಹೋರಾಟವನ್ನು ಚಿತ್ರಿಸುವ ಲೈಫ್ ಆಪ್‌ ಪೈ ಚಲನಚಿತ್ರ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಮೂಲ ಸಂಗೀತ, ಅತ್ಯುತ್ತಮ ಛಾಯಾಗ್ರಹಣ ಹಾಗೂ ಅತ್ಯುತ್ತಮ ವಿಷುವಲ್ ಎಫೆಕ್ಟ್ ಸಹಿತ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆ, “ಅರ್ಗೋ” ಅತ್ಯುತ್ತಮ ಚಿತ್ರ ಪುರಸ್ಕಾರಕ್ಕೆ ಪಾತ್ರಗಿದೆ.

ಭಾರತದ ಕಥಾವಸ್ತುವನ್ನೊಳಗೊಂಡ ‘ಲೈಫ್ ಆಫ್ ಪೈ’ ಚಿತ್ರವನ್ನು ಆಂಗ್ ಲೀ ನಿರ್ದೇಶಿಸಿದ್ದು, ಭಾರತೀಯರಾದ ಸೂರಜ್ ಶರ್ಮಾ, ಇರ್ಫಾನ್ ಖಾನ್, ಟಬು ಮುಂತಾದವರು ನಟಿಸಿದ್ದಾರೆ.

ಲೈಫ್ ಆಫ್ ಪೈ ನಿರ್ದೇಶನಕ್ಕೆ ಆಂಗ್‌ ಲೀ ಅವರಿಗೆ ಶ್ರೇಷ್ಠ ನಿರ್ದೇಶಕ ಆಸ್ಕರ್‌ ಪ್ರಶಸ್ತಿ ದೊರಕಿದೆ. ಕ್ಲಾಡಿಯೋ ಮಿರಾಂಡಾ ಅವರಿಗೆ ಶ್ರೇಷ್ಠ ಸಿನೆಮಾಟೋಗ್ರಫಿ ಆಸ್ಕರ್‌ ಪ್ರಶಸ್ತಿ ಲಭಿಸಿದೆ. ಶ್ರೇಷ್ಠ ದೃಶ್ಯ ಪರಿಣಾಮಕ್ಕಾಗಿರುವ ಪ್ರಶಸ್ತಿ ವರ್ಗದಲ್ಲಿ ಜೋ ಲಿಟೇರಿ, ಎರಿಕ್‌ ಸೇನ್‌ಡನ್‌, ಡೇವಿಡ್‌ ಕ್ಲೇಟನ್‌ ಮತ್ತು ಆರ್‌ ಕ್ರಿಸ್ಟೋಫ‌ರ್‌ ಪುರಸ್ಕೃತರಾಗಿದ್ದಾರೆ.

ಲೈಫ್ ಆಫ್ ಪೈ ಸಂಗೀತ ನಿರ್ದೇಶಕ ಮೈಕೆಲ್‌ ಡ್ಯಾನಾ ಅವರು ಶ್ರೇಷ್ಠ ಮೂಲ ಸಂಗೀತ ವರ್ಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನಾ ಅವರ ಪತ್ನಿ ಭಾರತೀಯ ಮೂಲದ ಅಪರ್ಣಾ ಡ್ಯಾನಾ. ಈ ಚಿತ್ರದಲ್ಲಿನ ಜನಪ್ರಿಯ ಜೋಗುಳ ಹಾಡನ್ನು ಮೈಕೆಲ್‌ ಅವರು ಹಾಡುಗಾರ್ತಿ ಬಾಂಬೆ ಜಯಶ್ರೀ ಅವರೊಂದಿಗೆ ಜಂಟಿಯಾಗಿ ಬರೆದಿದ್ದು ಜಯಶ್ರೀ ಅವರೇ ಆ ಹಾಡನ್ನು ಹಾಡಿದ್ದಾರೆ. ಜಯಶ್ರೀ ಅವರಿಗೆ ಆಸ್ಕರ್‌ ಬರುವುದೆಂಬ ನಿರೀಕ್ಷೆ ಮಾತ್ರ ಹುಸಿಯಾಗಿರುವುದು ನಿರಾಶೆಗೆ ಕಾರಣವಾಗಿದೆ.

ಇನ್ನುಳಿದಂತೆ ಲೆಸ್ ಮಿಸರೆಬಲ್ಸ್ ಚಿತ್ರವು 3 ಹಾಗೂ ‘ಲಿಂಕನ್’ ಚಿತ್ರ 2 ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಎಟಿಎಂ ಹಣ ಎಗರಿಸಿದ ಚಾಲಕಿ ಕಳ್ಳರ ತಂಡ, ಗಂಟೆಯೊಳಗೆ ಹಿಡಿದ ಪೊಲೀಸರು

Friday, December 16th, 2011
Share

ATM Thieves

ಮಂಗಳೂರು : ನಗರದ ಹಂಪನಕಟ್ಟೆಯ ವಿಲಾಗ್ರೀಸ್ ಬಳಿ ಕೆಎಂಸಿ ಡೆಂಟಲ್‌ ಕಾಲೇಜು ಕಟ್ಟಡದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಟಿಎಂ ಯಂತ್ರಕ್ಕೆ ನಗದು ತುಂಬಿಸಲು ಬಂದಿದ್ದ ಪ್ರೋ ಇಂಟರ್ಯಾಕ್ಟಿವ್‌ ಸರ್ವೀಸಸ್‌ನ ಆಮ್ನಿ ವಾಹನದಿಂದ ಹಣವಿದ್ದ ಪೆಟ್ಟಿಗೆಯನ್ನು ಗುರುವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ
ಕಳ್ಳರು ಅಪಹರಿಸಿ ಪರಾರಿಯಾಗಿದ್ದಾರೆ.

ಚಾಲಕಿ ಕಳ್ಳರ ತಂಡ ಎಟಿಎಂ ಬಳಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಚಾಲಕ ಮಾತ್ರ ಇರುವುದನ್ನು ಗಮನಿಸಿ ಅಲ್ಲಿಗೆ ಬಂದ ತಂಡದ ವ್ಯಕ್ತಿಯೊಬ್ಬ ಹತ್ತು ರೂ.ಗಳ ಸುಮಾರು 25 ನೋಟುಗಳನ್ನು ಕಾರಿನ ಪಕ್ಕದಲ್ಲಿ ನೆಲಕ್ಕೆ ಎಸೆದು ‘ನಿಮ್ಮ ಹಣ ಬಿದ್ದಿದೆ, ನೋಡಿ’ ಎಂದು ಚಾಲಕನ ಬಳಿ ಹೇಳಿದ. ಆಗ ಚಾಲಕ ಕಾರಿನಿಂದ ಇಳಿದು ಕೆಳಗೆ ಬಿದ್ದಿರುವ ನೋಟುಗಳು ತಮ್ಮದೇ ಆಗಿರಬಹುದು ಎಂದು ಒಂದೊಂದೇ ನೋಟುಗಳನ್ನು ಹೆಕ್ಕ ತೊಡಗಿದ. ವಾಹನದಲ್ಲಿದ್ದ ಇಬ್ಬರು ಹಣವನ್ನು ತುಂಬಿಸಲು ಗನ್‌ಮ್ಯಾನ್‌ ಬೆಂಗಾವಲಿನಲ್ಲಿ ಎಟಿಎಂ ಒಳಗೆ ತೆರಳಿದ್ದರು. ಅಷ್ಟರಲ್ಲಿ ಅಲ್ಲಿದ್ದ ಅಪರಿಚಿತ ವ್ಯಕ್ತಿ ಆಮ್ನಿ ವಾಹನದ ಹಿಂಬದಿಯ ಬಾಗಿಲಿನ ಗಾಜು ಪುಡಿಗೈದು ಒಳಗಿದ್ದ ಹಣದ ಪೆಟ್ಟಿಗೆಯನ್ನು ಎತ್ತಿ ಅಪಹರಿಸಿಕೊಂಡು ಓಡಿ ಹೋದ. ಆತನ ಜತೆಗೆ ಬೇರೆ ಎಷ್ಟು ಮಂದಿ ಇದ್ದರು ಎಂದು ತತ್‌ಕ್ಷಣಕ್ಕೆ ಗಮನಿಸಲು ಸಾಧ್ಯವಾಗಿಲ್ಲ. ಆಮ್ನಿ ವಾಹನದ ಚಾಲನು ಕೆಳಗೆ ಬಿದ್ದುಕೊಂಡಿದ್ದ ನೋಟುಗಳನ್ನು ಹೆಕ್ಕಿ ಬರುವಷ್ಟರಲ್ಲಿ ಕಳ್ಳರು ತಮ್ಮ ಕೃತ್ಯವನ್ನು ಸಲೀಸಾಗಿ ಪೂರೈಸಿ ಅಲ್ಲಿಂದ ಕಾಲ್ಕಿತ್ತಿದ್ದರು.

ATM Thieves

ಒಟ್ಟು 32 ಲಕ್ಷ ರೂ, ಹಣ ಇದ್ದು, ಈ ಪೈಕಿ 25 ಲಕ್ಷ ರೂ. ಮಾತ್ರ ವಾಹನದ ಒಳಗಿದ್ದ ಪೆಟ್ಟಿಗೆಯಲ್ಲಿತ್ತು. ಉಳಿದ ಹಣ ಇನ್ನೊಂದು ಸೂಟ್‌ಕೇಸ್‌ನಲ್ಲಿ ಎಟಿಎಂನಲ್ಲಿ ತುಂಬಿಸುವುದಕ್ಕಾಗಿ ಕೊಂಡು ಹೋಗಿದ್ದವರ ಬಳಿ ಇತ್ತು.

ತತ್‌ಕ್ಷಣ ಪೊಲೀಸ್‌ ಕಂಟ್ರೊಲ್‌ ರೂಂಗೆ ಮಾಹಿತಿ ರವಾನೆಯಾಗಿತ್ತು. ಕಾರ್ಯಾಚರಣೆಗೆ ಇಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದೇ ಅಲ್ಲದೆ ಎಲ್ಲಾ ಠಾಣೆಗಳಿಗೆ ಮಾಹಿತಿ ರವಾನಿಸಿದರು. ಪಿಸಿಆರ್‌ ವಾಹನ, ಬೈಕ್‌ ಮತ್ತು ಜೀಪ್‌ಗ್ಳಲ್ಲಿ ಓಡಾಡಿದರು. ಮಂಗಳೂರು ನಗರವನ್ನು ರೌಂಡ್‌ ಅಪ್‌ ಮಾಡಿದರು. ಹಣ ಅಪಹರಿಸಿದ ಮಂದಿ ಯಾವ ಕಡೆಗೆ ಹೋಗಿದ್ದಾರೆ ಎಂದು ಖಚಿತವಾಗಿ ತಿಳಿಯದೆ ಇದ್ದ ಕಾರಣ ಅಲ್ಲಿಲ್ಲಿ ನಾಕಾಬಂದಿ ವ್ಯವಸ್ಥೆ ಮಾಡಲಾಯಿತು.

ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್‌ಐ ಸೋಮಯ್ಯ, ಸಿಬಂದಿ ಶಿವ, ಮೋಹನ್‌, ರಾಜೇಶ್‌, ಉದಯ ಅವರನ್ನೊಳಗೊಂಡ ತಂಡ ರಾಷ್ಟ್ರೀಯ ಹೆದ್ದಾರಿ 75ರ ಕಣ್ಣೂರು ಬಳಿ ಪುತ್ತೂರು ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ತಡೆದು ನಿಲ್ಲಿದಾಗ ಒಬ್ಬ ವ್ಯಕ್ತಿ ಬಸ್ಸಿನಿಂದ ಇಳಿದು ಓಡಲಾರಂಭಿಸಿದ. ಸಂಶಯಗೊಂಡ ಪೊಲೀಸರು ಆತನನ್ನು ಬೆನ್ನಟ್ಟಿದರು. ಕೆಲವು ಪೊಲೀಸರು ಬಸ್ಸಿನ ಒಳಗೆ ತಪಾಸಣೆ ನಡೆಸಿದರು. ಬಸ್ಸಿನಲ್ಲಿ ಸುಮಾರು 2 ಅಡಿ ಎತ್ತರದ ಮತ್ತು 1 ಅಡಿ ಅಗಲದ ಕಬ್ಬಿಣದ ಪೆಟ್ಟಿಗೆ ಪತ್ತೆಯಾಗಿದ್ದು, ಅದನ್ನು ಹಿಡಿದುಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಓಡಲೆತ್ನಿಸಿದ ಇನ್ನಿಬ್ಬರನ್ನು ಮತ್ತು ಮೊದಲೇ ಬಸ್ಸಿನಿಂದ ಇಳಿದು ಓಡುತ್ತಿದ್ದವನನ್ನು ಊರಿನ ಜನರ ಸಹಕಾರದಿಂದ ಪೊಲೀಸರು ಬಂಧಿಸಿದರು.

ಆರೋಪಿಗಳು ಪೆಟ್ಟಿಗೆಯ ಬೀಗ ಒಡೆದು ಮುರಿಯಲು ಬಹಳಷ್ಟು ಪ್ರಯತ್ನ ನಡೆಸಿದ್ದಾರೆ. ಕಲ್ಲು ಅಥವಾ ಆಯುಧದಿಂದ ಹೊಡೆದ ಗುರುತುಗಳು ಬೀಗದ ಮೇಲೆ ಪತ್ತೆಯಾಗಿವೆ. ಆದರೆ ಬೀಗ ಒಡೆಯಲು ಸಾಧ್ಯವಾಗಿಲ್ಲ.

ATM Thieves Press Meet

ಈಗ 4 ಮಂದಿಯನ್ನು ಬಂಧಿಸಲಾಗಿದೆ. ಅವರು ತಮಿಳನಾಡಿನವರು ಎಂದು ತಿಳಿದು ಬಂದಿದೆ. ಅವರ ವಿಳಾಸ ಮತ್ತು ಇತರ ವಿವರಗಳು ತನಿಖೆಯ ಬಳಿಕ ಬೆಳಕಿಗೆ ಬರಬೇಕಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪುನಃ ಪೊಲೀಸ್‌ ಕಸ್ಟಡಿಗೆ ಪಡೆಯಲಾಗುವುದು. ಈ ಕಳ್ಳರ ಜಾಲದ ಇನ್ನೂ ಇಬ್ಬರು ಇರ ಬೇಕೆಂದು ಶಂಕಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್‌ ಅಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 12.15ರ ವೇಳೆಗೆ ಹಣ ಅಪಹರಣ ಸಂಭವಿಸಿದೆ. 1 ಗಂಟೆ ವೇಳೆಗೆ ಕಣ್ಣೂರಿನಲ್ಲಿ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಇಂತಹ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರು (ಡಿಜಿಪಿ) 20,000 ರೂ. ಬಹುಮಾನ ಘೋಷಿಸಿದ್ದಾರೆ. ಮಂಗಳೂರು ಪೊಲೀಸ್‌ ಅಯುಕ್ತರ ನೆಲೆಯಲ್ಲಿ ತಾನು 10,000 ರೂ. ನಗದು ಬಹುಮಾನ ನೀಡುತ್ತೇನೆ ಎಂದು ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ರಘುರಾಮ ಶೆಟ್ಟಿ ಅವರು ಪೊಲೀಸರ ದಕ್ಷತೆಯ ಕಾರ್ಯಾಚರಣೆಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಮೇಲಧಿಕಾರಿಗಳ ಅನುಮೋದನೆ ಪಡೆದು ಕಾರ್ಯಾಚರಣೆ ನಡೆಸಿದ ಸಿಬಂದಿಗೆ ಸೂಕ್ತ ಬಹುಮಾನ ನೀಡುವುದಾಗಿ ಅವರು ತಿಳಿಸಿದರು.

‘ಬ್ಯಾಂಕಿನವರು ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಬೇಕು; ಇಂತಹ ಘಟನೆ ಮರುಕಳಿಸಬಾರದು. ಅವರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸ ಬೇಕು’ ಎಂದು ಹೇಳಿದ ಸೀಮಂತ್‌ ಕುಮಾರ್‌ ಸಿಂಗ್‌ ಬ್ಯಾಂಕಿನವರು ವಹಿಸ ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಲ್ಲಾ ಬ್ಯಾಂಕುಗಳ ಅಧಿಕಾರಿಗಳನ್ನು ಕರೆಸಿ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದರು.

ಕಣ್ಣೂರಿನಲ್ಲಿ ಆರೋಪಿಗಳನ್ನು ಪತ್ತೆಮಾಡಿ ಬಂಧಿಸುವಲ್ಲಿ ಸಹಕರಿಸಿದ ಸ್ಥಳೀಯ ಜನರನ್ನು ಸಮ್ಮಾನಿಸಲಾಗುವುದು ಎಂದು ಅಯುಕ್ತರು ತಿಳಿಸಿದರು.

ಪೊಲೀಸ್‌ ಅಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ತನ್ನ ವಾಹನದಲ್ಲಿ ಮಧ್ಯಾಹ್ನ ಕಣ್ಣೂರು ಕಡೆಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಪಂಪ್‌ವೆಲ್‌ನಲ್ಲಿ 12.40ರ ವೇಳೆಗೆ ತನ್ನ ವಾಹನಕ್ಕೆ ಮುಂದೆ ಹೋಗಲು ದಾರಿ ಬಿಡಲಿಲ್ಲ ಎಂದು ಅಡ್ಯಾರ್‌ ಕಡೆಗೆ ಹೋಗುತ್ತಿದ್ದ ಖಾಸಗಿ ಸಿಟಿ ಬಸ್ಸಿನ ಚಾಲಕ ಮಧು ಅವರ ಮೇಲೆ ಅಯುಕ್ತರ ಜತೆಗಿದ್ದ ಪೊಲೀಸ್‌ ಅಧಿಕಾರಿ ಒಬ್ಬರು ಹಲ್ಲೆ ನಡೆಸಿದರು ಎಂದು ಆರೋಪಿಸಿ ಬಸ್‌ ಸಿಬಂದಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಪಂಪ್‌ವೆಲ್‌ ವೃತ್ತದಲ್ಲಿ ರಸ್ತೆ ತಡೆ ಮಾಡಿದರು. ಇದರಿಂದಾಗಿ ಸುಮಾರು ಒಂದುವರೆ ಗಂಟೆ ಕಾಲ ಈ ಪ್ರದೇಶದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.

ಪೊಲೀಸ್‌ ಅಯುಕ್ತರು ಸ್ಥಳಕ್ಕೆ ಬರಬೇಕು ಮತ್ತು ಹಲ್ಲೆ ಎಸಗಿದರೆನ್ನಲಾದ ಪೊಲೀಸರು ಕ್ಷಮೆ ಯಾಚಿಸಬೇಕು ಮತ್ತು ಹಲ್ಲೆಗೊಳಗಾದ ಬಸ್‌ ಸಿಬಂದಿಯನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟುಹಿಡಿದು ಕುಳಿತರು. ಕೊನೆಗೂ ಅಯುಕ್ತರು ಸ್ಥಳಕ್ಕೆ ತೆರಳಿ ಬಸ್‌ ಸಿಬಂದಿ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆ ಹರಿಸಿದರು. ಈ ನಡುವೆ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಪೊಲೀಸರು ಲಾಠಿ ಚಾರ್ಚ್‌ ಮಾಡಿ ಜನರನ್ನು ಚದುರಿಸಿದರು.

ವಾಹನ ಸಂಚಾರ ಅಸ್ತವ್ಯಸ್ತಗೊಂಡ ಕಾರಣ ಮಧ್ಯಾಹ್ನದ ವೇಳೆ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಯಿತು. ಪಂಪ್‌ವೆಲ್‌ನಿಂದ ಕಂಕನಾಡಿ- ಬೆಂದೂರ್‌ವೆಲ್‌, ನಂತೂರು, ತೊಕ್ಕೋಟು, ಪಡೀಲ್‌ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸಮಸ್ಯೆ ಸೌಹಾರ್ದಯತವಾಗಿ ಬಗೆಹರಿದಿದೆ. ಬಸ್‌ ಚಾಲಕನನ್ನು ಪೊಲೀಸರು ಬಿಡಗಡೆ ಮಾಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಬಸ್‌ ಬಂದ್‌ನಂತಹ ಯಾವುದೇ ಚಳವಳಿ ನಡೆಸುವ ಉದ್ದೇಶವಿಲ್ಲ ಎಂದು ಕಾರ್ಮಿಕ ಪರಿಷತ್‌ನ ಬಸ್‌ ನೌಕರರ ಸಂಘದ ಅಧ್ಯಕ್ಷ ಐವನ್‌ ಡಿ’ಸೋಜಾ ತಿಳಿಸಿದ್ದಾರೆ.
ಕೃಪೆ : ಉದಯವಾಣಿ ಪತ್ರಿಕೆ

ಲಂಡನ್‌ ನಲ್ಲಿ ಹಿಂಸಾಚಾರದಲ್ಲಿ ಹೌಸ್‌ ಆಫ್‌ ರೀವ್‌ ಗೆ ಬೆಂಕಿ

Wednesday, August 10th, 2011
Share

London-Riot/ಲಂಡನ್‌ ನಲ್ಲಿ ಹಿಂಸಾಚಾರ

ಲಂಡನ್‌ : ಲಂಡನ್‌ ನಲ್ಲಿ ಕಳೆದ ಮೂರು ದಿನಗಳಿಂದ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಉಪ ನಗರದಲ್ಲಿರುವ ಶತಮಾನದಷ್ಟು ಹಳೆಯ ಅಂಗಡಿ ಬೆಂಕಿಗಾಹುತಿಯಾಗಿದೆ. ಕ್ರೋಯ್‌ಡೋನ್‌ನಲ್ಲಿದ್ದ ಹೌಸ್‌ ಆಫ್‌ ರೀವ್‌ 144 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿತ್ತು. ನಗರದಾದ್ಯಂತ ಹಿಂಸಾಚಾರ ನಡೆಸುತ್ತಿದ್ದ ದುಷ್ಕರ್ಮಿಗಳು ಈ ಅಂಗಡಿಯನ್ನು ಮಂಗಳವಾರ ಲೂಟಿ ಮಾಡಿ ಬೆಂಕಿ ಹಚ್ಚಿದ್ದಾರೆ.

ಅಂಗಡಿ ಬೆಂಕಿಗಾಹುತಿಯಾಗಿದ್ದರಿಂದ ಮನನೊಂದು ಗದ್ಗದಿತರಾಗಿ ಮಾತನಾಡಿದ ಅಂಗಡಿಯ ಮಾಲೀಕ ಗ್ರಾಹಂ ರೀವ್ಸ್‌, ನಾನು ಈ ಅಂಗಡಿಯನ್ನು ನಡೆಸುತ್ತಿದ್ದ ಐದನೇ ತಲೆಮಾರಿನವರು, ನನಗೂ ಇಬ್ಬರು ಹೆಣ್ಣುಮಕ್ಕಳಿದ್ದು, ಅವರು ಆರನೇ ಪೀಳಿಗೆಯವರಾಗಿದ್ದಾರೆ ಎಂದು ಹೇಳಿದ್ದಾರೆ.

ಎಡ್ವಿನ್‌ ರೀವ್ಸ್‌ ಅವರು ಕ್ರೋಯ್‌ಡೋನ್‌ನಲ್ಲಿ 1867ರಲ್ಲಿ ಅಂಗಡಿಯನ್ನು ಪ್ರಾರಂಭಿಸಿದರು. ವ್ಯಾಪಾರ ಅಭಿವೃದ್ಧಿಯಾಗಿದ್ದರಿಂದ ಅಂಗಡಿಯು ಮುಂದಿನ ಪೀಳಿಗೆಗೂ ಹಸ್ತಾಂತರವಾಯಿತು. ನಾನು ಈ ಅಂಗಡಿಯನ್ನೇ ಅವಲಂಬಿಸಿದ್ದು, ನನ್ನ ಜೀವನದ ಬಹು ಬಾಗವನ್ನು ಇಲ್ಲೇ ಕಳೆದಿದ್ದೇನೆ, ಅಂಗಡಿಯನ್ನು ಹಾಳುಮಾಡಿರುವುದು ನನಗೆ ಆಘಾತ ಮೂಡಿಸಿದೆ ಎಂದು ಗ್ರಾಹಂ ರೀವ್ಸ್‌ ಹೇಳಿದರು. ಲೂಟಿಕೋರರು ಅಂಗಡಿಗೆ ಬೆಂಕಿ ಹಚ್ಚಿದ್ದರಿಂದ ತಮ್ಮ ಪತ್ನಿಯೂ ಆಘಾತಕ್ಕೊಳಗಾಗಿದ್ದಾರೆ. ಅಂಗಡಿಯಿಂದ ಯಾವುದೇ ವಸ್ತುಗಳನ್ನು ಕಳವು ಮಾಡಲಾಗಿಲ್ಲ ಆದರೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎಂದು ಅವರು ಹೇಳಿದರು.

ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾ

Sunday, April 3rd, 2011
Share

ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾಮುಂಬೈ : 28 ವರ್ಷಗಳ ಬಳಿಕ ಭಾರತವು  ಮುಂಬೈಯ ಕಿಕ್ಕಿರಿದ ವಾಂಖೇಡೆ ಕ್ರೀಡಾಂಗಣದಲ್ಲಿ 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತು. ಶನಿವಾರ ನಡೆದ ಫೈನಲ್ ಪಂದ್ಯವು ಏಷ್ಯಾದ ಪ್ರಬಲ ತಂಡಗಳೆರಡರ  ಹೋರಾಟಕ್ಕೆ ಸಾಕ್ಷಿಯಾಗಿ ಭಾರತವು 1983ರ ಏಪ್ರಿಲ್ 2ರ ಶನಿವಾರ ಮಾಡಿದ ಸಾಧನೆಯನ್ನೇ ಅದೇ ವಾರ ಅದೇ ತಾರೀಕಿನಲ್ಲಿ 28 ವರ್ಷಗಳ ಬಳಿಕ ಪುನರಾವರ್ತಿಸಿ, ಏಕದಿನ ಕ್ರಿಕೆಟ್ ನಲ್ಲಿ ನಂ.1 ಪಟ್ಟಕ್ಕೇರಿತು.
ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾಶ್ರೀಲಂಕಾ ಒಡ್ಡಿದ 275 ರನ್ನುಗಳ ಬೆಂಬತ್ತಿದ ಭಾರತ, ಅಂತಿಮವಾಗಿ 48.2 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು ಧೋನಿ ಅವರ ಭರ್ಜರಿ ಸಿಕ್ಸರ್‌ನೊಂದಿಗೆ 277 ರನ್ ದಾಖಲಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೆರಿತು.  ಆರಂಭದಲ್ಲೇ ಆಘಾತ ಉಂಟಾಯಿತಾದರು, ನಿಧಾನವಾಗಿ ಚೇತರಿಸಿ ವಿಜಯದ ನಗೆ ಬೀರಿ, ಎರಡನೇ ಬಾರಿಗೆ ಕ್ರಿಕೆಟ್ ಜಗತ್ತಿನ ಸಾಮ್ರಾಟನಾಗಿ ಮೆರೆಯಿತು.
ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾಜವಾಬ್ದಾರಿಯುತವಾಗಿ ಆಟವಾಡಿದ  ಗಂಭೀರ್ ಅವರ ಆಕರ್ಷಕ 97 ರನ್ ಹಾಗೂ ಕೊನೆಗೂ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಅತ್ಯಂತ ಅಗತ್ಯವಿದ್ದಾಗಲೇ ತಮ್ಮ ಜವಾಬ್ದಾರಿಯುತ ‘ನಾಯಕನ’ ಆಟ ಪ್ರದರ್ಶಿಸಿದ ಮಹೇಂದ್ರ ಸಿಂಗ್ ಧೋನಿ ಅವರ ಅಜೇಯ 91 ರನ್ನುಗಳ (79 ಎಸೆತಗಳಲ್ಲಿ) ಅಮೂಲ್ಯ ಕೊಡುಗೆಗಳು ಭಾರತದ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದವು.
ಮಹೇಂದ್ರ ಸಿಂಗ್ ಧೋನಿ ಮತ್ತು ಗಂಭೀರ್ 19.4 ಓವರುಗಳಲ್ಲಿ 109 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಒದಗಿಸಿದ್ದರು. ಧೋನಿ ಅವರ ನಾಯಕನಾಟದಲ್ಲಿ 8 ಬೌಂಡರಿಗಳು ಹಾಗೂ ಎರಡು  ಸಿಕ್ಸರ್‌ಗಳಿದ್ದವು.
ಲಸಿತ್ ಮಾಲಿಂಗ ಆರಂಭದಲ್ಲಿ ಎರಡು ವಿಕೆಟ್ ಕಬಳಿಸಿದ್ದು ಬಿಟ್ಟರೆ, ಯಾವುದೇ ಹಂತದಲ್ಲಿ ಶ್ರೀಲಂಕಾ ಬೌಲರುಗಳು ಭಾರತೀಯ ದಾಂಡಿಗರಿಗೆ ಸವಾಲೆನಿಸಲಿಲ್ಲ. ಆದರೆ, ದೊಡ್ಡ ಹೊಡೆತಗಳಿಗೆ ಅವಕಾಶ ಕೊಡುತ್ತಿರಲಿಲ್ಲ. ಕೊನೆಯಲ್ಲಿ, ಸಚಿನ್-ಸೆಹ್ವಾಗ್‌ರನ್ನು ಔಟ್ ಮಾಡಿದ್ದ ಇದೇ ಲಸಿತ್ ಮಾಲಿಂಗ ಎಸೆತಗಳನ್ನು ಬೌಂಡರಿಗೆ ಚಚ್ಚುವ ಮೂಲಕ ಯುವರಾಜ್ ಸಿಂಗ್ ಮತ್ತು ಧೋನಿ ಇಬ್ಬರೂ ಸೇಡು ತೀರಿಸಿಕೊಂಡರು.
33ರ ಮೊತ್ತದಲ್ಲಿದ್ದಾಗ ಕ್ಯಾಚ್‌ನಿಂದ ಜೀವದಾನ ಪಡೆದಿದ್ದ ಗಂಭೀರ್, ನಿಧಾನವಾಗಿಯೇ ಇನ್ನಿಂಗ್ಸ್ ಕಟ್ಟುತ್ತಾ, ತಮ್ಮ ಏಕದಿನ ವೃತ್ತಿ ಜೀವನದ 10ನೇ ಶತಕದಿಂದ ವಂಚಿತರಾದರು. ಅವರು 42ನೇ ಓವರಿನಲ್ಲಿ ಪೆರೇರಾ ಎಸೆತದಲ್ಲಿ ಅನಗತ್ಯ ಹೊಡೆತಕ್ಕೆ ಮುಂದಾಗಿ ಬೌಲ್ಡ್ ಔಟ್ ಆಗುವ ಮೊದಲು 122 ಎಸೆತಗಳಲ್ಲಿ 97 ರನ್ ಸೇರಿಸಿದ್ದರು. ಇದರಲ್ಲಿ 9 ಬೌಂಡರಿಗಳಿದ್ದವು.
ಆರಂಭಿಕರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡುಲ್ಕರ್ ಅವರನ್ನು ಬಲುಬೇಗನೇ ಕಳೆದುಕೊಂಡ ಭಾರತಕ್ಕೆ ಅರ್ಧ ಶತಕ ಸಿಡಿಸಿದ ಗೌತಮ್ ಗಂಭೀರ್ ಆಧಾರವಾಗಿದ್ದರು. ವಿರಾಟ್ ಕೋಹ್ಲಿ ಮತ್ತು ನಾಯಕ ಧೋನಿ ಜೊತೆಗೆ ಅವರು ಆಕರ್ಷಕ ಜೊತೆಯಾಟವನ್ನು ಪ್ರದರ್ಶಿಸಿ, ಭಾರತದ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಿದರು.
7ನೇ ಓವರಿನ ಮೊದಲ ಎಸೆತದಲ್ಲೇ ಸಚಿನ್ ನಿರ್ಗಮಿಸುವುದರೊಂದಿಗೆ ಭಾರತವು 31 ರನ್ನುಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಸ್ಥಿತಿಗೆ ತಲುಪಿತ್ತು. ಮಾಲಿಂಗ ಎಸೆತದಲ್ಲಿ ಸಚಿನ್ ಅವರು ವಿಕೆಟ್ ಕೀಪರ್ ಸಂಗಕ್ಕಾರ ಅವರ ಕೈಗೆ ಕ್ಯಾಚಿತ್ತು ನಿರ್ಗಮಿಸುವಾಗ, ಇಡೀ ವಾಂಖೇಡೆ ಸ್ಟೇಡಿಯಂ ಮೌನವಾಗಿತ್ತು. ತಮ್ಮದೇ ನೆಲದ ಸಿಡಿಲಮರಿಯು ಇಷ್ಟು ಬೇಗನೇ ಹೋಗಿದ್ದು, ಶತಕಗಳ ಶತಕ ದಾಖಲಿಸುತ್ತಾರೆ ಎಂದೆಲ್ಲಾ ಕನಸು ಕಾಣುತ್ತಿದ್ದ ಮಂದಿಗೆ ತೀವ್ರ ನಿರಾಶೆ ಮೂಡಿಸಿತು. ಬಹುಶಃ ಇದು ಸಚಿನ್ ಅವರ ಕೊನೆಯ ವಿಶ್ವಕಪ್ ಆಗಿರುವುದೂ ಅಭಿಮಾನಿಗಳ ತೀವ್ರ ನೋವಿಗೆ ಕಾರಣ.
ಆರಂಭಿಕರಿಬ್ಬರ ನಿರ್ಗಮನದ ಬಳಿಕ ಗೌತಮ್ ಗಂಭೀರ್ ಮತ್ತು ವಿರಾಟ್ ಕೋಹ್ಲಿ ತಂಡಕ್ಕೆ ಆಧಾರವಾದರು. ಇಬ್ಬರೂ ಕೂಡ ಆಗಾಗ್ಗೆ ಬೌಂಡರಿಗಳನ್ನು ಬಾರಿಸುತ್ತಾ, ರನ್‌ಗಳನ್ನು ಕದಿಯುತ್ತಾ, 20ನೇ ಓವರಿನಲ್ಲಿ ತಂಡವು 100 ರನ್ ಒಟ್ಟುಗೂಡಿಸಲು ನೆರವಾದರು. ಭಾರತಕ್ಕೆ ವ್ಯತಿರಿಕ್ತವಾಗಿ ಶ್ರೀಲಂಕಾದ ಫೀಲ್ಡಿಂಗ್ ತೀರಾ ಕೆಟ್ಟದಾಗಿದ್ದು, ಹಲವು ಬೌಂಡರಿಗಳು ಹರಿದುಬಂದವು. ಅಂತೆಯೇ ಗಂಭೀರ್ ಕೂಡ 33 ರನ್ ಮಾಡಿದ್ದಾಗ ಕುಲಶೇಖರ ಕೈಯಲ್ಲಿ ಕ್ಯಾಚ್‌ನಿಂದ ಜೀವದಾನ ಪಡೆದಿದ್ದರು.
3ನೇ ವಿಕೆಟಿಗೆ ಇವರಿಬ್ಬರೂ 15.3 ಓವರುಗಳಲ್ಲಿ 83 ರನ್ನುಗಳ ಜತೆಯಾಟ ಪ್ರದರ್ಶಿಸಿ, ಭಾರತ ತಂಡವನ್ನು ಆಧರಿಸಿದ್ದರು. ಆದರೆ 49 ಎಸೆತಗಳಲ್ಲಿ 35 ರನ್ ಮಾಡಿದ್ದ ಕೋಹ್ಲಿ 22ನೇ ಓವರಿನಲ್ಲಿ ದಿಲ್ಶಾನ್ ಅವರ ಆಕರ್ಷಕ ಕ್ಯಾಚ್‌ಗೆ ಬಲಿಯಾದರು. ಆಗ ತಂಡದ ಮೊತ್ತ 3 ವಿಕೆಟ್ ನಷ್ಟಕ್ಕೆ 114. ಅದೇ ಹೊತ್ತಿಗೆ ಗಂಭೀರ್ 56 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರಲ್ಲದೆ, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ 4000 ರನ್ ಪೂರೈಸಿದ 11ನೇ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದರು.
ಬಳಿಕ, ಯುವರಾಜ್ ಸಿಂಗ್ ಬದಲು ತಾವೇ 3ನೇ ವಿಕೆಟಿಗೆ ಬಂದು ಗಂಭೀರ್ ಜೊತೆಗೂಡಿದ ನಾಯಕ ಮಹೇಂದ್ರ ಸಿಂಗ್ ಧೋನಿ, 10 ಓವರು (60 ಎಸೆತ)ದಲ್ಲಿ 50 ರನ್ ಸೇರಿಸಿದರು. 30ನೇ ಓವರಿನಲ್ಲಿ ಭಾರತದ 150 ರನ್ನುಗಳು ಬಂದವು. ಅಂದರೆ ಒಟ್ಟು 179 ಎಸೆತಗಳಲ್ಲಿ 150 ರನ್ನುಗಳು ಹರಿದುಬಂದಿದ್ದವು. ಪಾನೀಯ ವಿರಾಮದ ವೇಳೆಗೆ ಭಾರತವು 32 ಓವರುಗಳಲ್ಲಿ 165 ರನ್ ಮಾಡಿತ್ತು. ಇವರಿಬ್ಬರೂ ಸೇರಿಕೊಂಡು ಒಂದೊಂದೇ ರನ್ನುಗಳನ್ನು ಕದಿಯುತ್ತಾ, ಮಧ್ಯೆ ಮಧ್ಯೆ ಬೌಂಡರಿಗಳನ್ನು ಬಾರಿಸುತ್ತಾ, ಅರಿವಿಲ್ಲದಂತೆಯೇ ಶ್ರೀಲಂಕನ್ನರಿಗೆ ಒತ್ತಡ ಹೇರಿದರು.
ರನ್ನುಗಳು ಹರಿದುಬರತೊಡಗಿದಂತೆಯೇ, ಅಗತ್ಯವಿರುವ ರನ್ ರೇಟ್ ಕೂಡ ಓವರಿಗೆ 6ರ ಆಸುಪಾಸಿನಲ್ಲೇ ಓಲಾಡುತ್ತಿತ್ತು. ಧೋನಿಯವರಂತೂ ವಿಶ್ವಕಪ್‌ನಲ್ಲಿ ಇದುವರೆಗೆ ಹೇಳಿಕೊಳ್ಳುವಂತಹಾ ಆಟವಾಡಲಿಲ್ಲ. ಫೈನಲ್ ಪಂದ್ಯದಲ್ಲಾದರೂ ಆಡುವರೇ ಎಂಬ ಅಭಿಮಾನಿಗಳ ಅಭಿಲಾಷೆಗೆ ಸ್ಪಂದಿಸುವಂತೆ, ಹೆಚ್ಚೇನೂ ಚೆಂಡು ವೇಸ್ಟ್ ಮಾಡದೆ ಆಟವಾಡುತ್ತಾ, ಒಂದೊಂದೇ ರನ್ನುಗಳನ್ನು ಕಸಿಯತೊಡಗಿದ್ದರು. ಧೋನಿ ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6000 ರನ್ ಪೂರೈಸಿ ಹೊಸ ದಾಖಲೆ ಬರೆದರಲ್ಲದೆ, ವಿಶ್ವಕಪ್ ಕ್ರಿಕೆಟಿನಲ್ಲಿ ತಮ್ಮ ಇದುವರೆಗಿನ ವೈಯಕ್ತಿಕ ಗರಿಷ್ಠ ಮೊತ್ತವಾದ 34ನ್ನೂ ಬದಲಾಯಿಸಿ ಅರ್ಧ ಶತಕ ದಾಖಲಿಸಿದರು.

ಹಿಂದೂ ದೇವರು ಮತ್ತು ದೇವತೆಗಳನ್ನು ಶೂಗಳ ಮೇಲೆ ಚಿತ್ರಿಸಿದ ಅಮೇರಿಕ ಶೂ ಕಂಪೆನಿ

Wednesday, September 22nd, 2010
Share

ವಾಷಿಂಗ್ಟನ್ : ಹಿಂದೂಗಳು ಪೂಜಿಸುವ ದೇವರು ಮತ್ತು ದೇವತೆಗಳನ್ನು ಕಾಲಿಗೆ ಹಾಕುವ ಶೂಗಳಿಗೆ ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ  ಹಿಂದೂ ಸಮುದಾಯದಿಂದ ತೀವ್ರ ಆಕ್ಷೇಪ ಕ್ಕೆ ಗುರಿಯಾಗಿದೆ.
ಅಮೆರಿಕದ ಗಿಟಾರ್  ವಾದಕ ದಿವಂಗತ ಜಿಮಿ ಹೆಂಡ್ರಿಕ್ಸ್ ಹೆಸರಿನಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಲಾಗಿತ್ತು . ಹಿಂದೂಗಳ ವಿರೋಧ ಹಾಗೂ ಪ್ರತಿಭಟನೆಗೆ ಮಣಿದ ಅಮೆರಿಕ ಮೂಲದ ಶೂ ಕಂಪನಿ ಶೂಗಳನ್ನು ಮಾರಾಟ ಮಾಡದೆ ಮಾರುಕಟ್ಟೆಯಿಂದ ವಾಪಸ್ ಪಡೆದಿದೆ.
ಶೂನಲ್ಲಿ ಹಿಂದೂ ದೇವರ ಚಿತ್ರಗಳನ್ನು ಚಿತ್ರಿಸಿದ್ದಕ್ಕೆ ಹಿಂದೂ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ಕ್ಷಮೆಯಾಚಿಸಿದ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ವಿಶೇಷ ಡಿಸೈನ್‌ನ ಶೂಗಳನ್ನು ವಾಪಸ್ ಪಡೆದಿರುವುದಾಗಿ ಅಮೆರಿಕನ್ ಶೂ ಕಂಪೆನಿ ತಿಳಿಸಿದೆ.
ಇದು ಉದ್ದೇಶಪೂರ್ವಕವಾಗಿ ನಡೆದ ಅಪರಾಧವಲ್ಲ  ಈ ತಪ್ಪಿಗಾಗಿ ಹಿಂದೂ ಸಮುದಾಯದವರಲ್ಲಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಶೂ ಕಂಪನಿಯ ವಕ್ತಾರೆ ಜೆಸ್ಸಿಕಾ ಹೇಳಿದ್ದಾರೆ.
ಹೂಸ್ಟನ್ ಮೂಲದ ಮಹಿಳೆ ಬೆಥ್ ಕುಲಕರ್ಣಿ ಈ ಪ್ರಕರಣಕ್ಕೆ  ಧ್ವನಿ ಎತ್ತಿದ್ದರು.  ಹಿಂದೂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಶೂ ಕಂಪನಿ ಇ-ಮೇಲ್ ಮೂಲಕ ಕ್ಷಮಾಪಣೆಯನ್ನು ಕೇಳಿದೆ.