Blog Archive

ಕಲ್ಲಾಪು : ಹಾಸಿಗೆಯ ಗೋಡಾನ್ ನಲ್ಲಿ ಅಗ್ನಿ ದುರಂತ

Saturday, October 19th, 2019
Agni

ಉಳ್ಳಾಲ : ಕಲ್ಲಾಪು ಪಟ್ಲದಲ್ಲಿ ಹಾಸಿಗೆ ಶೇಖರಿಸಿಟ್ಟಿದ್ದ ಗೋಡಾನ್‌ವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ಸಂಭವಿಸಿದೆ. ತೊಕ್ಕೊಟ್ಟಿನ ಸಪ್ನಾ ಎಂಟರ್ ಪ್ರೈಸಸ್‌ಗೆ ಸೇರಿದ ಗೋಡಾನ್ ಇದಾಗಿದೆ. ಬೆಂಕಿಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.  

ಮಂಜೇಶ್ವರ : ಬೆಂಕಿಗಾಹುತಿಯಾದ ಅಲ್ಫಾ ಬೇಕರಿ

Monday, September 9th, 2019
alfaa-bekari

ಮಂಜೇಶ್ವರ : ಮಂಜೇಶ್ವರ ಒಳಗಿನ ಪೇಟೆಯಲ್ಲಿ ಬೇಕರಿಯೊಂದು ಶಾರ್ಟ್ ಸೆಕ್ಯೂರ್ಟ್ ನಿಂದ ಉಂಟಾದ ಬೆಂಕಿಯಿಂದಾಗಿ ಸಂಪೂರ್ಣ ಬೆಂಕಿ ಗಾಹುತಿಯಾದ ಘಟನೆ ತಡರಾತ್ರಿ ನಡೆದಿದೆ. ಸೋಮವಾರ ಬೆಳಗ್ಗೆ ಪತ್ರಿಕೆ ಹಾಕುತ್ತಿದ್ದ ವ್ಯಕ್ತಿ ಅಂಗಡಿಯೊಳಗಿಂದ ಹೊಗೆ ಬರುತ್ತಿರುವುದ್ದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಹಮೀದ್ ಮಾಲಕತ್ವದ ಅಲ್ಫಾ ಬೇಕರಿಯ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಉಪ್ಪಳದಿಂದ ತಲುಪಿದ ಅಗ್ನಿಶಾಮಕ ದಳ ಹಾಗೂ ಮಂಜೇಶ್ವರ ಪೊಲೀಸರು ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದರು.    

ಬಂಟ್ವಾಳ ಸಿಪಿಐ ಕಚೇರಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

Thursday, January 3rd, 2019
Bantwala CPI

ಬಂಟ್ವಾಳ : ಸಿಪಿಐ ಬಂಟ್ವಾಳ ಸಮಿತಿಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಗುರುವಾರ ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ‌. ಬಿ.ಸಿ.ರೋಡಿನ ಬೈಪಾಸ್ ನ ನಾಲ್ಕು ಮಾರ್ಗದ ಬಳಿ ಕಾರ್ಯಾಚರಿಸುತ್ತಿರುವ ಕಮ್ಯುನಿಸ್ಟ್ ಬಂಟ್ವಾಳ ಸಮಿತಿಯ ಕಚೇರಿಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಘಟನೆಯಿಂದ ಕಚೇರಿಯೊಳಗಿದ್ದ ಪಕ್ಷಕ್ಕೆ ಸಂಬಂಧಪಟ್ಟ ಕಡತಗಳು ಹಾಗೂ ಮುಖ್ಯವಾದ ಅರ್ಜಿಗಳು, ವಿದ್ಯಾರ್ಥಿ ವೇತನದ ಸಂಬಂಧಿಸಿದ ದಾಖಲೆಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ […]

ಮುಂಬೈನಲ್ಲಿ ಸಣ್ಣ ವಿಮಾನ ಪತನ..ಐವರ ದುರ್ಮರಣ!

Thursday, June 28th, 2018
mumbai

ಮುಂಬೈ: ಪರಿಕ್ಷಾರ್ಥ ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವೊಂದು ಮುಂಬೈನ ಜನನಿಬಿಡ ಪ್ರದೇಶದ ನಿರ್ಮಾಣ ಹಂತದ ಬಿಲ್ಡಿಂಗ್ ಬಳಿ ಅಪ್ಪಳಿಸಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಐವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಜುಹು ಏರ್ ಪೋರ್ಟ್ ನಿಂದ ಟೇಕ್ ಆಫ್ ಆಗಿದ್ದ ವಿಮಾನ ಘಾಟ್ಕೋಪರ್ದ ಸರ್ವೋದಯ ನಗರದ ಬಳಿ ಲ್ಯಾಂಡಿಂಗ್ ಆಗುವ ವೇಳೆ ನೆಲಕ್ಕೆ ಅಪ್ಪಳಿಸಿದೆ. ಮಧ್ಯಾಹ್ನ 1.15ಕ್ಕೆ ಅಪಘಾತ ಸಂಭವಿಸಿದ್ದು, ನಾಲ್ವರ ಮೃತದೇಹಗಳನ್ನು ಹೀಗಾಗಲೇ ಹೊರ ತರಲಾಗಿದೆ. ಬೀಚ್ಕ್ರಾಫ್ಟ್ ಕಿಂಗ್ ಏರ್ C90 ಟರ್ಬೊಪ್ರೊಪ್ ನ ವಿಮಾನ ಅಪಘಾತಕ್ಕೀಡಾಗಿದೆ ಎಂದು ಗುರುತಿಸಲಾಗಿದೆ. ಈ […]

ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಯೊಂದರಲ್ಲಿ ಅಗ್ನಿ ಅವಘಡ: 2 ಲಕ್ಷ ರೂ. ಮೌಲ್ಯದ ವಸ್ತುಗಳು ಭಸ್ಮ

Saturday, January 21st, 2017
Shart Sharcute

ಮಂಗಳೂರು: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಬೈಲು ಎಂಬಲ್ಲಿ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ವಸ್ತುಗಳು ಭಸ್ಮವಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಶಾರ್ಟ್‌ ಸರ್ಕ್ಯೂಟ್‌ನಿಂದ ಇಲ್ಲಿಯ ಸುರೇಶ್ ಆಚಾರ್ಯ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ ಮನೆಯ ಛಾವಣಿ ಹಾಗೂ ಮನೆಯೊಳಗಿನ ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಬೆಂಕಿಗಾಹುತಿಯಾಗಿವೆ. ಈ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯ ಮುಖಂಡ ಮಿತ್ತಬೈಲು ವಾಸುದೇವ ನಾಯಕ್ ತಕ್ಷಣ […]

ಶಾರ್ಟ್‌ ಸರ್ಕ್ಯೂಟ್‌ನ ಪರಿಣಾಮ ಟೈಲರಿಂಗ್‌ ಅಂಗಡಿಯಲ್ಲಿ ಅಗ್ನಿ ಅವಘಡ

Saturday, December 31st, 2016
Tailor shop

ಮಂಗಳೂರು : ಶಾರ್ಟ್‌ ಸರ್ಕ್ಯೂಟ್‌ನ ಪರಿಣಾಮ ಸಂಭವಿಸಿದ ಅಗ್ನಿ ಅವಘಡದಲ್ಲಿ ಟೈಲರಿಂಗ್‌ ಅಂಗಡಿಯಲ್ಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಬಟ್ಟೆಗಳು ಬೆಂಕಿಗಾವುತಿಯಾಗಿರುವ ಘಟನೆ ಮೂಡುಬಿದಿರೆಯ ಇರುವೈಲುವಿನಲ್ಲಿ ನಡೆದಿದೆ. ರವಿ ಎಲ್ ಸುವರ್ಣ ಎಂಬುವರಿಗೆ ಸೇರಿದೆ ಎನ್ನಲಾದ ನಿರ್ಮಲು ಟೈಲರಿಂಗ್‌ ಅಂಗಡಿಯಲ್ಲಿಯೇ ಈ ಘಟನೆ ನಡೆದಿದೆ. ಹೊಸ ಬಟ್ಟೆಗಳು ಸೇರಿದಂತೆ 5 ಹೊಲಗೆ ಯಂತ್ರಗಳು ಬೆಂಕಿಯಲ್ಲಿ ಸುಟ್ಟಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.

ಅಪ್ಪ-ಅಮ್ಮನ ಜೀವ ಉಳಿಸಿದ 8ರ ಹರೆಯದ ಹುಡುಗಿ

Wednesday, October 12th, 2016
bajpe

ಬಜಪೆ: ಇಲ್ಲಿನ ಹೋಲಿ ಫ್ಯಾಮಿಲಿ ಶಾಲೆಯ ಪಕ್ಕದ ಬೀಬಿಜಾನ್‌ ಯಾನೆ ಮೆಹರುನ್ನಿಸ್‌ ಅವರ ಮನೆಯ ಬಾವಿಗೆ ಹಾಕಿದ ಪಂಪು ಕೆಟ್ಟು ಹೋಗಿದೆ ಎಂದು ಅದನ್ನು ಸರಿಪಡಿಸಲು ಹೋದ ಮನೆಯ ಕೆಲಸದ ಚಿತ್ರದುರ್ಗದ ಪ್ಯಾರಿ ಜಾನ್‌ (23) ಜಾರಿ ಬಾವಿಗೆ ಬಿದ್ದ ಕಾರಣ ಅವರನ್ನು ರಕ್ಷಿಸಲು ಬಾವಿಗೆ ಹಾರಿದ ಆಕೆಯ ಪತಿ ಹುಸೇನ್‌(25)ನ್ನು ಅವರ ಮಗಳು 8ರ ಹರೆಯದ ಸೀಮಾಳ ಸಮಯಪ್ರಜ್ಞೆಯಿಂದಾಗಿ, ಸಾರ್ವಜನಿಕರು, ಬಜಪೆ ಪೊಲೀಸರು ಮತ್ತು ಕದ್ರಿ ಅಗ್ನಿಶಾಮಕ ದಳ ಸಿಬಂದಿ ಸಹಾಯದಿಂದಾಗಿ ಪ್ರಾಣಾಪಾಯದಿಂದ ಬದುಕುಳಿದ ಘಟನೆ […]

ಬಾವಿಯಲ್ಲಿ ಇಬ್ಬರು ಸಹೋದರರ ಮೃತ ದೇಹಗಳು ಪತ್ತೆ

Saturday, October 8th, 2016
kasargod

ಕಾಸರಗೋಡು: ಕಳೆದ ಒಂದು ದಿನದಿಂದ ನಾಪತ್ತೆಯಾಗಿದ್ದ ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ನ ಸತೀಶ್ (40) ಮತ್ತು ಸಹೋದರ ಸಜಿತ್ (36) ಮೃತದೇಹಗಳು ಗುರುವಾರ ರಾತ್ರಿ ಬಾವಿಯಲ್ಲಿ ಪತ್ತೆಯಾಗಿವೆ. ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ಮೂಲದ ಸತೀಶ್ ಬಸ್ ಚಾಲನೆ ಮಾಡುತ್ತಿದ್ದು. ಸಜಿತ್ ಲಾರಿ ಚಾಲಕನಾಗಿದ್ದ. ಇವರಿಬ್ಬರು ಕಳೆದು ಒಂದು ದಿನದಿಂದ ಕಾಣೆಯಾಗಿದ್ದರು. ಮನೆಯವರ ಹುಡುಕಾಟದಲ್ಲಿ ದಾರಿ ಮಧ್ಯೆ ಇರುವ ಬಾವಿಯಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು. ಇವರ ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ […]

ಗಣಪತಿ ವಿಸರ್ಜನೆ ವೇಳೆ ತುಂಗಾ ನದಿಯಲ್ಲಿ ತೆಪ್ಪ ಮಗುಚಿ 13 ಮಂದಿ ನೀರುಪಾಲು

Thursday, September 8th, 2016
ganesha-idol

ಶಿವಮೊಗ್ಗ: ಗಣಪತಿ ವಿಸರ್ಜನೆ ವೇಳೆ ತುಂಗಾ ನದಿಯಲ್ಲಿ ತೆಪ್ಪ ಮಗುಚಿ 13 ಮಂದಿ ನೀರುಪಾಲಾದ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಗಣಪತಿ ವಿಸರ್ಜಿಸಲು ತೆಪ್ಪದಲ್ಲಿ ಸುಮಾರು 33 ಮಂದಿ ಹೋಗಿದ್ದು, 13 ಮಂದಿ ನದಿಯಲ್ಲಿ ಮುಳುಗಿದ್ದರೆ, ಉಳಿದ 20 ಮಂದಿ ಈಜಿ ದಡ ಸೇರಿದ್ದಾರೆ. ರಾತ್ರಿ 7 ಗಂಟೆಯವರೆಗೆ 7 ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಶವಗಳ ಪತ್ತೆಗೆ ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಯಲಿದೆ. ಮೃತಪಟ್ಟವರೆಲ್ಲರೂ ಹಾಡೋನಹಳ್ಳಿ ಗ್ರಾಮದವರೇ ಆಗಿದ್ದು, […]

ಸಹಪಾಠಿಗಳೊಂದಿಗೆ ಮಾನ್ಯದ ದೇವರಕೆರೆಯ ಕೆರೆಗಿಳಿದ ಯುವಕ ಮೃತ್ಯು

Monday, July 25th, 2016
Shiyasi

ಬದಿಯಡ್ಕ: ಸಹಪಾಠಿಗಳೊಂದಿಗೆ ಮಾನ್ಯದ ದೇವರಕೆರೆಯ ಕೆರೆ ನೀರಿನಲ್ಲಿ ಸ್ನಾನಕ್ಕಿಳಿದ ವೇಳೆ ಯುವಕ ಮುಳುಗಿ ಮೃತಪಟ್ಟಘಟನೆ ಭಾನುವಾರ ನಡೆದಿದೆ. ಮಧ್ಯಾಹ್ನದ ವೇಳೆ ಸ್ನಾನಕ್ಕಿಳಿದು ಕಾಣದಾದ ಯುವಕನ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಎರಿಯಾಲ್ ಎಡಚ್ಚೇರಿಯ ಎ ಎಂ ಮಹಮ್ಮುದ್ ಸೈಫುನ್ನೀಸಾ ದಂಪತಿ ಪುತ್ರ ಶಿಯಾಸಿ(21) ಮೃತಪಟ್ಟ ದುರ್ದೈವಿ. ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕನ ಮೃತದೇಹವನ್ನು ಅಗ್ನಿಶಾಮಕ ದಳದ ಸಹಾಯದಿಂದ ಮೇಲಕ್ಕೆತ್ತಲಾಯಿತು. ರಜಾದಿನ ಆದಿತ್ಯವಾರದಂದು ಸಹಪಾಠಿಗಳೊಂದಿಗೆ ಪುಟ್‌ಬಾಲ್ ಆಡಲು ತೆರಳಿದ್ದ ಶಿಯಾಸ್ ಆಟದ ನಂತರ ಸ್ನಾನ ಮಾಡಲೆಂದು ನೀರಿನ ಕೆರೆಗೆ ಇಳಿದಿದ್ದ ಎನ್ನಲಾಗಿದೆ, […]