Blog Archive

ಐದು ವರ್ಷದ ಮಗಳೊಂದಿಗೆ ಬಾವಿಗೆ ಹಾರಿದ ತಾಯಿ

Friday, August 3rd, 2018
suicide

ಮಂಗಳೂರು : ಮಗಳಿಗೆ ಅನಾರೋಗ್ಯ ಎಂದು ತಾಯಿ – ಮಗಳು ಅತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರ ಹೊರವಲಯದ ಮುಲ್ಕಿ ಸಮೀಪದ ಗೇರುಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಸುಜಾತ(48), ಕೃತಿಕಾ(5) ಅತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. 5 ವರ್ಷದ ಬಾಲಕಿ ಕೃತಿಕಾ ಕಳೆದ ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತಿದ್ದಳು. ಈ ಹಿನ್ನೆಲೆಯಲ್ಲಿ ತಾಯಿ ಸುಜಾತ ನೊಂದಿದ್ದು, ತಾಯಿ ಮತ್ತು ಮಗಳ ಆತ್ಮಹತ್ಯೆಗೆ ಇದೇ ಕಾರಣ ಎಂದು ಹೇಳಲಾಗುತ್ತಿದೆ. ಗುರುವಾರ ಮನೆಯಲ್ಲಿ ಯಾರು ಇಲ್ಲದ […]

ವೀಲ್ ಚೇರ್ ಸಿಗದೇ ರೋಗಿಯನ್ನು ಕೈಯಲ್ಲಿಯೇ ಹೊತ್ತು ನಿಂತ ಅಮಾನವೀಯ ಘಟನೆ..!

Tuesday, July 24th, 2018
chikmagaluru

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳು ಪರದಾಟ ಪಡುತ್ತಿದ್ದು ವೀಲ್ ಚೇರ್ ಸಿಗದೇ ರೋಗಿಯನ್ನು ಕೈಯಲ್ಲಿಯೇ ಹೊತ್ತು ನಿಂತ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ನರಳಾಡುತ್ತಿದ್ದ ವೃದ್ಧೆಯನ್ನು ವೀಲ್ ಚೇರ್ ಸಿಗದೇ ಕೈಯಲ್ಲಿಯೇ ಎತ್ತಿಕೊಂಡು ಡಾಕ್ಟರ್ ಬಳಿ ಸಂಬಂಧಿಕರು ಕರೆದುಕೊಂಡು ಬಂದಿದ್ದಾರೆ. ಸುಮಾರು 10 ನಿಮಿಷಗಳ ಕಾಲ ವೃದ್ಧೆಯನ್ನು ಎತ್ತಿಕೊಂಡೇ ನಿಂತಿದ್ದಾರೆ. ವೀಲ್ ಚೇರ್ ಇದ್ದರೂ ರೋಗಿಗಳಿಗೆ ವೀಲ್ ಚೇರ್ ನೀಡದೇ ಸಿಬ್ಬಂದಿಗಳು ಸತಾಯಿಸುತ್ತಿದ್ದಾರೆ,ಲಂಚ […]

ಮಂಗಳೂರು ನಾಗೂರಿ ಮೂಲದ ವಿಕ್ಟರ್ ಮೆಂಡೋನ್ಸಾ ಮುಂಬಯಿಯಲ್ಲಿ ನಿಧನ

Tuesday, September 29th, 2015
Victor

ಮಂಗಳೂರು : ಅಂಧೇರಿ ಪೂರ್ವದ ಸಾಕಿನಾಕ ಅಲ್ಲಿನ ಚಕ್ರ ಹೊಟೇಲ್‌ನಲ್ಲಿ ಕ್ಯಾಪ್ಟನ್ ಆಗಿ ನೌಕರಿಯಲ್ಲಿದ್ದ ಮಂಗಳೂರಿನ ಅವಿವಾಹಿತ ವಿಕ್ಟರ್ ಮೆಂಡೋನ್ಸಾ (68.) ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಂಕನಾಡಿ ಅಲ್ಲಿನ ನಾಗೂರಿ ನಿವಾಸಿ ಎನ್ನಲಾದ ಜೋಸೆಫ್ ಮೆಂಡೋನ್ಸಾರ ಪುತ್ರ ವಿಕ್ಟರ್ ಸುಮಾರು ಮೂರುವರೆ ದಶಕಗಳಿಂದ ಸಾಕಿನಾಕ ಅಲ್ಲಿನ ಹೆಸರಾಂತ ಹೊಟೇಲು ಚಕ್ರ ಇದರಲ್ಲಿ ಕ್ಯಾಪ್ಟನ್ ಆಗಿ ಸೇರಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಅಸಾಯಕರೆಣಿಸಿ ಅಸ್ವಸ್ಥರಾಗಿ ಬಳಲುತ್ತಿದ್ದ ವಿಕ್ಟರ್ ಅವರನ್ನು ಮರೋಲ್‌ನಾಕಾ ಅಲ್ಲಿನ ಮುಕುಂದ್ […]

ಬಿಸಿರೋಡು ಕೈಕಂಬಕ್ಕೆ ಹೋದವರು ಕಾಣೆ

Friday, July 10th, 2015
Sulaiman

ಬಂಟ್ವಾಳಃ  ಮಂಗಳವಾರ ದಿನಾಂಕ 07 ರಂದು ಮದ್ಯಾಹ್ನ 2-30 ಗಂಟೆಗೆ ತನ್ನ ಮನೆ ಬಿ.ಮೂಡ ಗ್ರಾಮದ ಪರ್ಲಿಯಾ ಎಂಬಲ್ಲಿಂದ ಸುಲೈಮಾನ್‌ (58) ರವರು ಬಿಸಿರೋಡು ಕೈಕಂಬಕ್ಕೆ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಸುಲೈಮಾನ್‌ ಅವರ ಪ್ರಾಯ 58 ವರ್ಷ, ಎತ್ತರ: 5.3 ಅಡಿ, ಬಣ್ಣ: ಬಿಳಿ ಮೈ,  ಗೊತ್ತಿರುವ ಭಾಷೆ :ಕನ್ನಡ, ತುಳು, ಬ್ಯಾರಿ, ಉರ್ದು, ಬಟ್ಟೆಬರೆ: ಗೆರೆಗಳುಳ್ಳ ಲುಂಗಿ, ಮತ್ತು ಶರ್ಟು. ಇವರು ಪಿರ್ಯಾದಿದಾರರಾದ ಅಬ್ದುಲ್ ಸಮದ್‌ ಎಂಬವರ ತಂದೆಯಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಹೇಳಿದ್ದಾರೆ.

ಲೊಕೇಶ್ ಬಿ.ಅವಿೂನ್ ದೊಡ್ಡಿಕಟ್ಟೆ ನಿಧನ

Wednesday, January 22nd, 2014
Lokesh-B.-Amin

ಮುಂಬಯಿ : ಮುಂಬಯಿಯಲ್ಲಿನ ಹೆಸರಾಂತ ಜೆಮಿನಿ ಟೈಲರ್ಸ  ಮಾಜಿ ಪಾಲುದಾರ, ಸುಪ್ರಸಿದ್ಧ ಹೈವೇ ಟೈಲರ್ಸ ನ ಮಾಲಕ ಲೊಕೇಶ್ ಬಿ. ಅವಿೂನ್ (86.) ಅಲ್ಪ ಕಾಲದ ಅನಾರೋಗ್ಯದಿಂದ ಮತ್ತು ವೃದ್ಧಾಪ್ಯದಿಂದ ಇಂದಿಲ್ಲಿ ಬುಧವಾರ (22.01.2014) ಮುಂಜಾನೆ ಘಾಟ್ಕೋಪರ್ನ ಆಶಿರ್ವಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಮೂಲತಃ ಮಂಗಳೂರು ತಾಲೂಕಿನ ಬಜ್ಪೆ ದೊಡ್ಡಿಕಟ್ಟೆ ಮೂಲದವರಾಗಿದ್ದು, ಮುಂಬಯಿಯ ಮಾಟುಂಗದ ಮೊಗಲ್ ಲೇನ್ ನಿವಾಸಿಯಾಗಿದ್ದರು. ಲೊಕೇಶ್ ಅವಿೂನ್ ಅವರು ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ಇದರ ಸ್ಥಾಪಕ ಸದಸ್ಯರಾಗಿದ್ದು, ಬಿಲ್ಲವರ ಎಸೋಸಿಯೇಶನ್ನ ಮುಂಬಯಿ ಇದರ ಸೇವಾದಳದ ಸಕ್ರೀಯ […]

ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ನಿಧನ

Monday, December 23rd, 2013
GS Shivarudrappa

ಬೆಂಗಳೂರು : ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರು ಸೋಮವಾರ ಮಧ್ನಾಹ್ನ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಕೆಲ ಕಾಲದಿಂದ ಬಳಲುತ್ತಿದ್ದ ಶಿವರುದ್ರಪ್ಪ ಅವರು ಬನಶಂಕರಿ ಎರಡನೇ ಹಂತದಲ್ಲಿರುವ ಸ್ವಗೃಹದಲ್ಲಿ ಮಧ್ಯಾಹ್ನ 12.16ರ ಸುಮಾರಿಗೆ ನಿಧನರಾಗಿದ್ದಾರೆ. ಹಿರಿಯ ಕವಿ, ಲೇಖಕ, ಸಂಶೋಧನೆಕಾರ, ಜನಮೆಚ್ಚಿದ ಕವಿ ಶಿವರುದ್ರಪ್ಪ ಅವರು ಪತ್ನಿಯರಾದ ರುದ್ರಾಣಿ, ಪದ್ಮ ಹಾಗೂ ಪುತ್ರರಾದ ಜಯದೇವ್, ಶಿವಪ್ರಸಾದ್, ಪುತ್ರಿ ಜಯಂತಿ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ. 1926ರ ಫೆಬ್ರವರಿ 7 ರಂದು ಜನಿಸಿದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರು ಶಿಕಾರಿಪುರದಲ್ಲಿ […]

ವೈಶಾಲಿ ಕಾಸರವಳ್ಳಿ ಅಂತಿಮ ಯಾತ್ರೆ

Tuesday, September 28th, 2010
ವೈಶಾಲಿ ಕಾಸರವಳ್ಳಿ

ಬೆಂಗಳೂರು  : ಕನ್ನಡ ಚಿತ್ರರಂಗದಲ್ಲಿ ಬೆಳ್ಳಿ ಪರದೆ ಮತ್ತು  ಕಿರುತೆರೆ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ ಹಿರಿಯ ನಟಿ  ವೈಶಾಲಿ ಕಾಸರವಳ್ಳಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಾಲ್ಕು ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ. ವೈಶಾಲಿ ಕಾಸರವಳ್ಳಿ ದೀರ್ಘ ಕಾಲದ ಅನಾರೋಗ್ಯದಿಂದ ಚೇತರಿಸದೆ ಸೋಮವಾರ ನಿಧನರಾಗಿದ್ದಾರೆ. ರಂಗಭೂಮಿಯಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ವೈಶಾಲಿ ಕಾಸರವಳ್ಳಿ ನಿರ್ದೇಶಕಿ, ವಸ್ತ್ರವಿನ್ಯಾಸಕಿ ನಟಿಯೂ ಆಗಿದ್ದರು, ಪತಿ, ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ, ಪುತ್ರಿ ಅನನ್ಯ ಹಾಗೂ ಪುತ್ರ ಅಪೂರ್ವ ಅವರನ್ನು ಅಗಲಿದ್ದಾರೆ. […]