ಪೆಟ್ರೋಲ್ ಬಂಕ್ ಗೆ ನುಗ್ಗಿ ಕಂಪ್ಯೂಟರ್, ಸಿಸಿ ಕ್ಯಾಮೆರಾ ದೋಚಿದ ಕಳ್ಳರು

Monday, January 25th, 2021
Vitla petropl Pump

ವಿಟ್ಲ:  ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಕಳವುಗೈದ ಘಟನೆ ಭಾನುವಾರ  ತಡರಾತ್ರಿ ನಡೆದಿದೆ. ಬಂಕ್ ನ ಕಚೇರಿಯ ಬೀಗ ಒಡೆದು ನುಗ್ಗಿದ ದರೋಡೆಕೋರರು ಕಂಪ್ಯೂಟರ್ ಮತ್ತು ಸಿಸಿ ಕ್ಯಾಮೆರಾಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ದೋಚಿದ್ದಾರೆ. ಕಚೇರಿಯ ಎಲ್ಲಾ ಲಾಕರ್ ಗಳನ್ನು ಒಡೆದು ಅಸ್ತವ್ಯಸ್ತ ಮಾಡಿದ್ದಾರೆ. ಸುಮಾರು 2 ಲಕ್ಷದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲ ಸಮಯದ ಹಿಂದೆ ಕುದ್ದುಪದವಿನಲ್ಲಿರುವ […]

ಜಿಲ್ಲೆಯ ಹಲವೆಡೆ ಪೆಟ್ರೋಲ್ ಬಂಕ್ ಕಳವು​​​​ ಮಾಡುತ್ತಿದ್ದ ಮೂವರ ಬಂಧನ

Saturday, October 3rd, 2020
Petrol Pump Robers

ಮಂಗಳೂರು : ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್ ಕಳವು ಸೇರಿದಂತೆ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಕಂಕನಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕೆ. ಸಿ. ರೋಡ್ನ ಮುಹಮ್ಮದ್ ಸುಹೈಲ್ ಯಾನೆ ಅಶ್ರಫ್ (19), ಆಶಿಕ್ (19) ಮತ್ತು ಮಂಗಳೂರಿನ ಫಳ್ನೀರ್ನ ಮುಹಮ್ಮದ್ ಅರ್ಫಾನ್ (20) ಬಂಧಿತ ಆರೋಪಿಗಳು. ಬಂಧಿತರಿಂದ ನಗದು, ಮಾರಕಾಯುಧ, ಹೆಲ್ಮೆಟ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸೆ.20ರ ರಾತ್ರಿ ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಕಳವು ನಡೆಸಿದ್ದರು‌. ಈ […]

ಬೆಂಗಳೂರು : ಪೆಟ್ರೋಲ್​ ಬಂಕ್​ನಲ್ಲಿ ನಡುರಾತ್ರಿ ಹೊತ್ತಿ ಉರಿದ ಬಸ್; ತಪ್ಪಿದ ಭಾರೀ ಅನಾಹುತ

Thursday, January 30th, 2020
benki

ಬೆಂಗಳೂರು : ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ಬಸ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ನಡೆದಿದೆ. ಬುಧವಾರ ನಡುರಾತ್ರಿ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರೆಲ್ಲರೂ ಆತುರಾತುರವಾಗಿ ಕೆಳಗೆ ಇಳಿದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. 34 ಜನರು ಪ್ರಯಾಣಿಸುತ್ತಿದ್ದ ಎಂಎಸ್ಎಸ್ ಎಂಬ ಖಾಸಗಿ ಬಸ್ ಬೆಂಗಳೂರಿನಿಂದ ಕೊಯಮತ್ತೂರಿಗೆ ಹೊರಟಿತ್ತು. ಬುಧವಾರ ರಾತ್ರಿ 11 ಗಂಟೆಗೆ ಮಡಿವಾಳದ ಭಾರತ್ ಪೆಟ್ರೋಲ್ ಬಂಕ್ಗೆ ಡೀಸೆಲ್ ಹಾಕಿಸಿಕೊಳ್ಳಲು ಬಂದಿದ್ದ ಚಾಲಕ ಬಸ್ ಸ್ಟಾರ್ಟ್ ಮಾಡುತ್ತಿದ್ದಂತೆ ಇಂಜಿನ್ನಲ್ಲಿ ಬೆಂಕಿ […]

ಕುಂದಾಪುರ : ಗೋವನ್ನು ಅಪಹರಿಸಿದ ಕಳ್ಳರು; ಸಿಸಿಕ್ಯಾಮರಾದಲ್ಲಿ ಸೆರೆ

Friday, October 4th, 2019
Udupi

ಉಡುಪಿ : ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗೋವಿನ ಕಳ್ಳತನ ಅವ್ಯಾಹತವಾಗಿ ಮುಂದುವರಿದಿದೆ. ಕುಂದಾಪುರ ತಾಲೂಕಿನ ಅಂಪಾರು ಎಂಬಲ್ಲಿನ ಪೆಟ್ರೋಲ್ ಬಂಕ್ ಬಳಿಯಿದ್ದ ಜಾನುವಾರನ್ನು ಕಾರಿನಲ್ಲಿ ತುಂಬಿಸಿ ದುಷ್ಕರ್ಮಿಗಳು ಕದ್ದು ಹೋದ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯಗಳು ಪೆಟ್ರೋಲ್ ಬಂಕ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುಂದಾಪುರ-ಸಿದ್ದಾಪುರ ಹೆದ್ದಾರಿಯ ಸಮೀಪವೇ ಇರುವ ಅಂಪಾರು ಪೆಟ್ರೋಲ್ ಬಂಕಿನಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಎದುರು ಕಾರು ನಿಂತಿರುತ್ತದೆ. ಕಾರಿನಿಂದ ಇಬ್ಬರು ಇಳಿಯುತ್ತಾರೆ. ಬಂಕ್ ಎದುರು ಮಲಗಿದ್ದ ದನವನ್ನು […]

ರಾತ್ರಿ ಹೊತ್ತು ನಿಲ್ಲಿಸಿದ್ದ ಬಸ್ಸಿಗೆ ಕಲ್ಲು : ಮೂವರ ಬಂಧನ

Wednesday, September 18th, 2019
Mulky

ಮಂಗಳೂರು : ನಗರದ ಹೊರವಲಯದ ಕಿನ್ನಿಗೋಳಿ ಹಾಗೂ ಕಟೀಲು ಪರಿಸರದಲ್ಲಿ ರಾತ್ರಿ ಹೊತ್ತು ನಿಲ್ಲಿಸಿದ್ದ ಒಟ್ಟು 5 ಬಸ್ಸುಗಳಿಗೆ ಕಳೆದ ಸೆ.4ರ ಮುಂಜಾನೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಮುಲ್ಕಿ ಹಾಗೂ ಬಜ್ಪೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಟ್ವಾಳ ತಾಲ್ಲೂಕಿನ ಬುಡೋಳಿ ಪೆರಾಜೆ ನಿವಾಸಿಗಳಾದ ಶಂಶೀರ್(27), ಅಬ್ದುಲ್ ಸತ್ತಾರ್(21) ನರಿಕೊಂಬು ನೆಹ್ರೂ ನಗರ ನಿವಾಸಿ ಮಹಮ್ಮದ್ ರಿಯಾಝ್(28) ಬಂಧಿತ ಆರೋಪಿಗಳು. ಬಂಧಿತರಿಂದ ಕಲ್ಲು ತೂರಾಟಕ್ಕೆ ಬಳಸಿದ್ದರೆನ್ನಲಾದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೆ.4ರಂದು […]

ಸ್ಕೂಟಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಯುವಕನೋರ್ವ ಪರಾರಿ..!

Monday, November 5th, 2018
petrol

ಚಿಕ್ಕಮಗಳೂರು: ಸ್ಕೂಟಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಯುವಕನೋರ್ವ ಪರಾರಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದ್ದು, ಬಾಳೆಹೊನ್ನೂರಿನ ಶ್ರೀರಂಭಾಪುರಿ ಸವಿ೯ಸ್ ಸ್ಟೇಷನ್ಗೆ ಸ್ಕೂಟಿಯಲ್ಲಿ ಬಂದ ಯುವಕ 300 ರೂ. ಪೆಟ್ರೋಲ್ ಹಾಕಿಸಿ ಹಣ ಪಾವತಿಸದೆ ಪರಾರಿಯಾಗಿದ್ದಾನೆ. ಹಣ ನೀಡದೆ ಯುವಕ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೊದಲಿಗೆ ಎಟಿಎಂ ಕಾರ್ಡ್ ಕೊಟ್ಟಿದ್ದಾನೆ. ಆದರೆ ಅದರಲ್ಲಿ ಹಣ ಇಲ್ಲದ ಕಾರಣ ಪೆಟ್ರೋಲ್ ಬಂಕ್ನವರು ಯುವಕನ ಬಳಿ ಹಣ ಕೇಳಿದ್ದಾರೆ. […]

ಅ. 12ರ ರಾತ್ರಿ 12ಗಂಟೆಯಿಂದ ಪೆಟ್ರೋಲ್ ಬಂಕ್ ಬಂದ್ :ಪೆಟ್ರೋಲಿಯಂ ವರ್ತಕರ ಸಂಘ

Wednesday, October 11th, 2017
petrol bunk

ಮಂಗಳೂರು: ಅಖಿಲ ಭಾರತ ಪೆಟ್ರೋಲಿಯಂ ವರ್ತಕರ ಸಂಘ ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ ಕರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪೆಟ್ರೋಲಿಯಂ ವರ್ತಕರ ಸಂಘ `ಡಿಕೆಯುಪಿಡಿಎ’ ಸಂಪೂರ್ಣ ಬೆಂಬಲ ಪ್ರಕಟಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಸತೀಶ್ ಎನ್.ಕಾಮತ್, ಅ. 12ರ ರಾತ್ರಿ 12ಗಂಟೆಯಿಂದ ಮರುದಿನ ಮಧ್ಯರಾತ್ರಿ 12 ಗಂಟೆಯವರೆಗೆ ಎರಡೂ ಜಿಲ್ಲೆಗಳ ಪೆಟ್ರೋಲ್ ಬಂಕ್‌ಗಳು ಮುಚ್ಚಿರುತ್ತವೆ. ಆ ದಿನ ಬಂಕ್‌ಗಳು ಇಂಧನ ಮಾರಾಟ ಮತ್ತು ಖರೀದಿ ಮಾಡದೆ ರಾಷ್ಟ್ರ ವ್ಯಾಪ್ತಿಯ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದರು. ಪೆಟ್ರೋಲಿಯಂ ಇಲಾಖೆ ಮುಷ್ಕರಕ್ಕೆ […]

ಮಂಗಳೂರಿನಲ್ಲಿ ನಟೋರಿಯಸ್‌ ರೌಡಿ ಕಾಲಿಯಾ ರಫೀಕ್‌ ಬರ್ಬರ ಹತ್ಯೆ

Wednesday, February 15th, 2017
Kaliya-Rafik

ಮಂಗಳೂರು: ನಗರದಲ್ಲಿ ನಟೋರಿಯಸ್‌ ರೌಡಿ ಕಾಲಿಯಾ ರಫೀಕ್‌ (35) ಮೇಲೆ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರನ್ನ ಮತ್ತೆ ಬೆಚ್ಚಿ ಬೀಳಿಸಿದೆ. ರೌಡಿ ರಫೀಕ್‌ ಹಾಗೂ ಆತನ ಸಂಬಂಧಿ ಸೇರಿದಂತೆ ನಾಲ್ವರು ಕಾರಿನಲ್ಲಿ ಮಂಗಳೂರಿನತ್ತ ಬರುತ್ತಿದ್ದಾಗ ಉಪ್ಪಳದ ರೌಡಿ ನೂರ್ ಅಲಿ ತಂಡ ದಾಳಿ ನಡೆಸಿದೆ. ಇಲ್ಲಿಯ ಕೋಟೆಕಾರು ಪೆಟ್ರೋಲ್ ಬಂಕ್‌ನಲ್ಲಿ ಅಡ್ಡಗಟ್ಟಿದ ನೂರ್‌ ಅಲಿ ತಂಡ ಮೊದಲು ಕಾರಿಗೆ ಲಾರಿಯಿಂದ ಡಿಕ್ಕಿ ಹೊಡೆಸಿದ್ದಾರೆ ಎನ್ನಲಾಗಿದೆ. ಆಗ ರಫೀಕ್‌ ಮತ್ತು ತಂಡದವರು ಕೂಡಲೇ […]

ಟ್ರಾವೆಲ್ ಏಜೆನ್ಸಿಗೆ ಪೊಲೀಸ್ ದಾಳಿ: ನಕಲಿ ದಾಖಲೆಪತ್ರ, ಮೊಹರು, ಕಂಪ್ಯೂಟರ್ಗಳು, 1.32 ಲಕ್ಷ ರೂ. ವಶ

Wednesday, November 9th, 2016
travel agency

ಉಪ್ಪಳ: ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗೀ ಟ್ರಾವೆಲ್ ಏಜೆನ್ಸಿ ಸಂಸ್ಥೆಗೆ ಪೊಲೀಸರು ನಡೆಸಿದ ದಾಳಿಯಲ್ಲಿ ಹಲವು ಅನಧಿಕೃತ ದಾಖಲೆಪತ್ರ, ಕಂಪ್ಯೂಟರ್‌ಗಳು ಹಾಗೂ ಮೊಹರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಓರ್ವನ್ನು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಲಾಗುತ್ತಿದೆ. ಸೋಮವಾರ ಸಂಜೆ 5.30ಕ್ಕೆ ಆರಂಭಗೊಂಡ ಪೊಲೀಸ್ ಕಾರ್ಯಾಚರಣೆ ರಾತ್ರಿ 8.30ರ ವರೆಗೆ ಮುಂದುವರಿದಿದೆ. ಮಂಗಳವಾರ ಕೂಡಾ ತಪಾಸಣೆ ಅಗತ್ಯವುಳ್ಳ ಹಿನ್ನೆಲೆಯಲ್ಲಿ ಸಂಸ್ಥೆಗೆ ಮೊಹರುಗೊಳಿಸಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಉಪ್ಪಳ ಮೆಹಬೂಬ್ ಪೆಟ್ರೋಲ್ ಬಂಕ್ ಸಮೀಪ ಪೆರಿಂಗಡಿ ನಿವಾಸಿ ಅನ್ಸಾರ್ ಎಂಬಾತನ ಮಾಲಕತ್ವದಲ್ಲಿ ಕಳೆದ […]

ಪೆರುವಾಡು-ಪೆಟ್ರೋಲ್ ಬಂಕ್ ಬಳಿ ಬೆಂಕಿ

Saturday, January 9th, 2016
fire

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಪೆರುವಾಡು ಪೆಟ್ರೋಲ್ ಬಂಕ್ ಸಮೀಪದ ಹಿತ್ತಿಲಿಗೆ ಗುರುವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಭೀತಿ ಸೃಷ್ಟಿಸಿದ ವಾತಾವರಣ ಉಂಟಾಗಿದೆ. ಪೆಟ್ರೋಲ್ ಬಂಕ್ ಹತ್ತಿರದ ಖಾಸಗೀ ವ್ಯಕ್ತಿಯೊಬ್ಬರ ಹಿತ್ತಿಲಿನಲ್ಲಿ ಕಾಣಿಸಿಕೊಂಡ ಬೆಂಕಿ. ಹಿತ್ತಿಲಿನಲ್ಲಿದ್ದ ಸುಮಾರು 25ಕ್ಕೂ ಹೆಚ್ಚು ತೆಂಗಿನ ಮರಗಳು ಸೇರಿದಂತೆ ಅನೇಕ ಮರಗಳು ಹೊತ್ತಿ ಉರಿದು ನಾಶಗೊಂಡಿವೆ. ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇದ್ದು, ಭಾರೀ ಅನಾಹುತ ಸಂಭವಿಸುವ ಅಪಾಯ ಎದುರಾಗಿದ್ದು, ಸ್ಥಳೀಯರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ಹಿತ್ತಿಲಿಗೆ ಬೆಂಕಿ ತಗುಲಿದ ಕೆಲವೇ ಗಂಟೆಗಳಲ್ಲಿ ಕಾಸರಗೋಡು […]