ನಗರದ ಎಲ್ಲಾ ಆರೈಕೆ ಕೇಂದ್ರಗಳಲ್ಲಿ ಆಕ್ಸಿಜೆನ್ ಕಾನ್ಸ್ಂಟ್ರೇಟರ್ ಲಭ್ಯ: ಆರ್ ಅಶೋಕ್ ಹೇಳಿಕೆ

Thursday, May 13th, 2021
R Ashoka

ಬೆಂಗಳೂರು  : “ಹಾಸಿಗೆ ನೀಡದೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾದ ತಕ್ಷಣ ಹಲವು ಆಸ್ಪತ್ರೆಗಳು ತಮ್ಮ ಬಳಿಯಿರುವ ಹಾಸಿಗೆಗಳನ್ನ ನೀಡಲು ಮುಂದೆ ಬರುತ್ತಿವೆ. ಇದರಿಂದ ಲಭ್ಯ ಬೆಡ್ ಗಳ ಸಂಖ್ಯೆ ಹೆಚ್ಚಾಗಲಿದೆ,” ಎಂದು ಕಂದಾಯ ಸಚಿವರಾದ ಆರ್ ಅಶೋಕ್ ಅವರು ತಿಳಿಸಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡ್‍ನ ರೆಫೆರೆಲ್ ಆಸ್ಪತ್ರೆಯಲ್ಲಿ ಸಿದ್ಧಗೊಂಡಿರುವ ಕೋವಿಡ್ ಆರೈಕೆ ಕೇಂದ್ರ ಹಾಗೂ ಇದೇ ವಾರ್ಡ್‍ನಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯಭವನ ಸ್ಥಳಕ್ಕೆ ಬೇಟಿ ನೀಡಿದ […]

ಪ್ರೀತಿಸಿ ಮದುವೆಯಾಟ ಆಡಿದ ಗಂಡು ಹರಿಶಿನ ಮೈ ಆರುವ ಮುನ್ನವೇ ಇನ್ನೊಂದು ಮದುವೆ ಹಸಮಣೆಗೆ!

Thursday, May 13th, 2021
Kolara

ಕೋಲಾರ: ಪ್ರೀತಿಸಿ ಮದುವೆಯಾಟ ಆಡಿದ ಪತಿ ಮಹಾಶಯನೊಬ್ಬ ಅದರ ಬೆನ್ನಲ್ಲೇ ಇನ್ನೊಂದು ಪುನರ್ ವಿವಾಹಕ್ಕೆ ಮುಂದಾದ ವಿಚಿತ್ರ ಪ್ರಕರಣವೊಂದು ಇಲ್ಲಿದೆ. ಈ ಪ್ರಕರಣದಲ್ಲಿ ತನ್ನ ನೂತನ ಗಂಡನ ಹುಚ್ಚಾಟಕ್ಕೆ ಬೆಚ್ಚಿದ ನೂತನ ವಧು ಎಸ್ಪಿ ಕಚೇರಿ ಮುಂದೆ ಏಕಾಂಗಿಯಾಗಿ ಕುಳಿತು ಪ್ರತಿಭಟಿಸಿದ ಮುಂದುವರೆದ ಭಾಗವೂ ಇದ್ದು, ಸಧ್ಯಕ್ಕೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಪಿಳ್ಳಪ್ಪನ ಮಗ ಮಹೇಶ್ ಅದೇ ಗ್ರಾಮದ ಮುನಿಯಪ್ಪನ ಮಗಳನ್ನು ಸುಮಾರು 4 ವರ್ಷಗಳ ಹಿಂದೆ ಮನೆಯಲ್ಲಿ ಯರೂ ಇಲ್ಲದ ಸಮಯ […]

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ 160 ಆಕ್ಸಿಜೆನ್ ಕಾನ್ಸ್‍ಂಟ್ರೇಟರ್ ವಿತರಣೆ – ಸಚಿವ ಶ್ರೀ ಆರ್ ಅಶೋಕ್

Wednesday, May 12th, 2021
oxygen

ಬೆಂಗಳೂರು :  ಆಕ್ಸಿಜೆನ್ ಅಭಾವ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ಇಂದು ದೇವನಹಳ್ಳಿಯ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಕೋವಿಡ್ ಆರೈಕೆ ಕೇಂದ್ರಗಳಿಗೆ 160 ಆಕ್ಸಿಜೆನ್ ಕಾನ್ಸ್‍ಂಟ್ರೇಟರ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್ ಅಶೋಕ್ ಅವರು, ಕೋವಿಡ್ ಸೋಂಕಿತರಿಗೆ ಆಕ್ಸಿಜೆನ್ ಅಭಾವ ಅಧಿಕವಾಗಿ ಕಾಡುತ್ತಿದೆ. ಈ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲ್ಲೂಕಿಗೆ 40 […]

ರಿಯಾಲಿಟಿ ಚೆಕ್ ಮಾಡಿ ಖಾಸಗಿ ಆಸ್ಪತ್ರೆಗಳಿಂದ ಹಾಸಿಗೆ ವಶಪಡಿಸಿಕೊಳ್ಳಿ

Wednesday, May 12th, 2021
Bommai

ಬೆಂಗಳೂರು :   ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳು ಸರ್ಕಾರಕ್ಕೆ ನಿಗದಿತ ಹಾಸಿಗೆಗಳನ್ನ ನೀಡದೆ ವಂಚಿಸುತ್ತಿರುವ ಕುರಿತಂತೆ ಕಂದಾಯ ಸಚಿವರಾದ ಆರ್ ಅಶೋಕ್, ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಇನ್ನೂ ಕೂಡಾ ಸರ್ಕಾರಕ್ಕೆ ನಿಗದಿತ ಬೆಡ್ ಗಳನ್ನ ನೀಡದೆ ತಪ್ಪು ಮಾಹಿತಿ ನೀಡುತ್ತಿರುವ ಕುರಿತಂತೆ ಪ್ರಮುಖವಾಗಿ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು […]

ಬಿ.ಬಿ.ಎಂ.ಪಿ. ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಆಹಾರ ಪೊಟ್ಟಣಗಳ ವಿತರಣೆ

Tuesday, May 11th, 2021
Indira Canteen

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ದಿನಾಂಕ:12-05-2021 ರಿಂದ ಬಡವರ್ಗದ ಜನರು, ವಲಸಿಗರು, ಕೂಲಿ ಕಾರ್ಮಿಕರಿಗೆ ದಿನದ ಮೂರೊತ್ತು (ಬೆಳಗಿನ ಉಪಹಾರ, ಮಧ್ಯಾಹ್ನದ ಹಾಗೂ ರಾತ್ರಿ ಊಟ) ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಉಚಿತ ಆಹಾರ ಪೊಟ್ಟಣಗಳನ್ನು ಲಾಕ್ಡೌನ್ ಅವಧಿ ಮುಗಿಯುವವರೆಗೂ ಅಂದರೆ ದಿನಾಂಕ: 12-05-2021 ರಿಂದ 24-05-2021ರ ವರೆಗೆ ವಿತರಿಸಲಾಗುವುದು. ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರದ ಪೊಟ್ಟಣಗಳನ್ನು ಪಡೆಯಲು ಬರುವ ಫಲಾನುಭವಿಗಳು ಗುರುತಿನ ಚೀಟ (ಮತದಾರರ ಉರುತಿನ ಚೀಟಿ, […]

ಪತ್ರಕರ್ತರೇ ಹುಷಾರ್..! : ಡಿಸೆಂಬರ್ ವರೆಗೂ ತಪ್ಪಿದ್ದಲ್ಲ ಡೆಡ್ಲಿ ಕಾಟ..

Saturday, May 1st, 2021
Manjunatha

ಬೆಂಗಳೂರು: ಕೊರೊನಾದಿಂದ ಮುಕ್ತಿ ಯಾವಾಗ ಎನ್ನುವವರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಡೆಡ್ಲಿ ಕಾಟ ಡಿಸೆಂಬರ್ ವರೆಗೂ ತಪ್ಪಿದ್ದಲ್ಲ ಹಾಗಾಗಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಸೋಂಕು ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪರಿಪಾಲನೆ ಮಾಡದೆ ಹೋದರೆ, ಸಮಸ್ಯೆ ಇನ್ನೂ ತೀವ್ರವಾಗಿ ಕಾಡಬಹುದು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೆಚ್ಚರಿಕೆ ವಿಷಯದ ಬಗ್ಗೆ ಅವರು […]

ರಾಘವೇಂದ್ರ ನಾಮಸ್ಮರಣೆಯ ಫಲ

Thursday, April 29th, 2021
Raghavendra

ಲೇಖನ: ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ 9945410150 ಕಲಿಯುಗದ ಕಾಮಧೇನು ಭಕ್ತರ ಪಾಲಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿಗಳು. ಕಡು ಕಷ್ಟದ ಸಮಯದಲ್ಲಿ ರಾಯರನ್ನು ನೆನೆಸಿಕೊಂಡರೆ ಆ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಬಗೆಹರಿಸಿಕೊಡುವ ಗುರುವರ್ಯರು. ದೈವಾಂಶ ಸಂಭೂತರಾದ ರಾಯರು ಇಂದಿಗೂ ಸಹ ಬೃಂದಾವನ ಅವಸ್ಥೆಯಲ್ಲಿ ಇದ್ದುಕೊಂಡು ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಮಹಾನ್ ಯತಿವರ್ಯರು. ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿಯೇ ಅಪಾರವಾದ ಶಕ್ತಿ-ಸಾಮರ್ಥ್ಯಗಳು ಕೂಡಿದೆ, ಶ್ರೀಯರ ಹೆಸರನ್ನು ನೆನೆಸಿಕೊಂಡರೆ ಸಾಕು ಶಕ್ತಿ ಸಂಚಲನ ಕೊಳ್ಳುವುದು ನಿಶ್ಚಿತ. ರಾ - ಎನ್ನಲು ರಾಶಿ ದೋಷಗಳು […]

ಖ್ಯಾತ ಜ್ಯೋತಿಷಿ ಗಿರಿಧರಭಟ್ ಅವರ ದಿನಭವಿಷ್ಯ ಮತ್ತು ಮಾರ್ಗದರ್ಶನ

Thursday, April 29th, 2021
Raghavendra

ಶ್ರೀ ಗುರು ರಾಘವೇಂದ್ರ ಸ್ವಾಮಿ ಸ್ಮರಣೆ ಮಾಡುತ್ತ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಉದ್ಯೋಗ ಪ್ರಾಪ್ತಿ, ಅನಗತ್ಯ ಮಾತುಗಳು, ಆತ್ಮ ಗೌರವಕ್ಕೆ ಚ್ಯುತಿ, ತಾಯಿ ಕಡೆಯಿಂದ ಅನುಕೂಲ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ ರಾಶಿ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, […]

ಕನ್ನಡದ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕೊರೋನಾಗೆ ಬಲಿ

Tuesday, April 27th, 2021
Ramu

ಬೆಂಗಳೂರು:  ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಕೊರೋನಾಗೆ ಬಲಿಯಾಗಿದ್ದಾರೆ ಅವರು ಗೋಲಿಬಾರ್, ಎಕೆ 47, ಸಿಂಹದ ಮರಿಯಂತ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ಮಿಸಿದ್ದರು. ನಟಿ ಮಾಲಾಶ್ರೀ ಅವರ ಪತಿ ರಾಮು ಅವರ ಆರೋಗ್ಯದಲ್ಲಿ ಏರು ಪೇರು ಉಂಟಾದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 52 ವರ್ಷದ ರಾಮು ಅವರಿಗೆ ಒಂದು ವಾರದ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ರಾಮು […]

ಖ್ಯಾತ ಜ್ಯೋತಿಷಿ ಗಿರಿಧರಭಟ್ ಅವರ ದಿನಭವಿಷ್ಯ ಮತ್ತು ಮಾರ್ಗದರ್ಶನ

Tuesday, April 27th, 2021
Subrahmanya Swamy

ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸ್ಮರಣೆ ಮಾಡುತ್ತ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಕುಟುಂಬದವರಿಗಾಗಿ ಹಣವೆಚ್ಚ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನ ಮೇಲೆ ಒತ್ತಡ ಬೀಳಲಿದೆ, ಶನಿಗ್ರಹ ಪೀಡಾಪರಿಹಾರ ಪಠಿಸಿ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ ರಾಶಿ ಉದ್ಯೋಗ ಸ್ಥಳದಲ್ಲಿ ಉತ್ತಮ ವಾತಾವರಣ, ಉತ್ತಮ ದಿನ, ಉತ್ತಮ ಫಲಗಳೂ ಇದ್ದಾವೆ, […]