ಬಳ್ಳಾರಿ : ವಿಧಾನ ಪರಿಷತ್‌ ಸದಸ್ಯ ಸಿಎಂ ಇಬ್ರಾಹಿಂ ವಿರುದ್ಧ ಸಚಿವ ವಿ.ಸೋಮಣ್ಣ ವಾಗ್ದಾಳಿ

Tuesday, February 25th, 2020
sommanna

ಬಳ್ಳಾರಿ : ವಿಧಾನ ಪರಿಷತ್‌ ಸದಸ್ಯ ಸಿಎಂ ಇಬ್ರಾಹಿಂ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯ ಮುಂಡರಗಿ ಪ್ರದೇಶ ವ್ಯಾಪ್ತಿಯಲ್ಲಿಂದು ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಇಬ್ರಾಹಿಂ ಯಾವತ್ತಾದರೂ ನಿಜ ಹೇಳಿದ್ದಾರೆಯೇ? ಅವರು ಯಾವತ್ತಾದರೂ ಒಳ್ಳೆಯದನ್ನು ಮಾಡಿದ್ದಾರೆಯೇ? ನಮ್ಮೊಂದಿಗೆ ಅವರೂ ಕೂಡ ಇದ್ದರು. ಮೊದಲು ನಶೆ ಪುಡಿ ತಿಕ್ಕುತ್ತಿದ್ದರು. ಈಗ ವಯಸ್ಸಾಗಿದೆ ಅಲ್ವಾ, ನಶೆ ಬಿಟ್ಟಿರಬಹುದು. ಅದಕ್ಕೆ ಪಿತ್ತ ನೆತ್ತಿಗೇರಿರಬಹುದು ಎಂದು ಛೇಡಿಸಿದ್ದರು. ಇಬ್ರಾಹಿಂ ಅವರು ಹಾಕುವ […]

ಕಡಬದಲ್ಲಿ ಸರಣಿ ಅಪಘಾತ, ಆರು ಮಂದಿಗೆ ಗಾಯ

Wednesday, June 19th, 2019
kadaba-accident

ಉಪ್ಪಿನಂಗಡಿ : ಕಡಬದ ಹಳೇಸ್ಟೇಷನ್ ಸಮೀಪದ ತಿರುವಿನಲ್ಲಿ ಲಾರಿ, ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ಆರು ಮಂದಿ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ . ಕಡಬದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ವಿರುದ್ಧ ದಿಕ್ಕಿನಿಂದ ಸಾಗುತ್ತಿದ್ದ ಕಾರು, ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದು, ದ್ವಿಚಕ್ರ ವಾಹನ ಸವಾರರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಳ್ಳಾರಿ ಮೂಲದವರೆಂದು ಗುರುತಿಸಲಾಗಿದ್ದು, ಕಡಬದ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. […]

ಮತ ಚಲಾಯಿಸಿದ ಶಾಸಕ ಸೋಮಶೇಖರ್​​ ರೆಡ್ಡಿ ದಂಪತಿ

Saturday, November 3rd, 2018
somshekar

ಬಳ್ಳಾರಿ: ನಗರ ಶಾಸಕ ಸೋಮಶೇಖರ್ ರೆಡ್ಡಿ ದಂಪತಿ‌ ಬೂತ್ ನಂ.170 ರಲ್ಲಿ ಮತದಾನ ಮಾಡಿದರು. ರಾಜ್ಯದ 3 ಲೋಕಸಭೆ ಹಾಗೂ 2 ವಿಧಾನಸಭೆ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ರಸ್ತೆಯ ಅಹಂಬಾವಿ ಪ್ರದೇಶದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮಶೇಖರ್ ರೆಡ್ಡಿ ದಂಪತಿ ತಮ್ಮ ತಮ್ಮ ಮತ ಹಕ್ಕು ಚಲಾಯಿಸಿದರು.

ಹಂಪಿ ವಿರೂಪಾಕ್ಷ ದೇವಸ್ಥಾನದ ಎಡಬದಿಯಲ್ಲಿ ಚಿಕ್ಕ ಕೊಳ ಪತ್ತೆ..!

Monday, July 9th, 2018
historical-pond

ಬಳ್ಳಾರಿ: ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಪ್ರವೇಶ ದ್ವಾರದ ಎಡಬದಿಯಲ್ಲಿ ಚಿಕ್ಕ ಕೊಳ ಪತ್ತೆಯಾಗಿದೆ. ಮಧ್ಯಮ ಗಾತ್ರದ ಈ ಕೊಳದ ಸುತ್ತಲೂ ಸುಂದರ ಕೆತ್ತನೆಯ ಬಂಡೆಗಲ್ಲುಗಳಿವೆ. ಒಂದು ಕಡೆ ನಂದಿ ಸ್ಮಾರಕವಿದ್ದು, ಕೆಳಗೆ ಇಳಿಯಲು ಮೆಟ್ಟಿಲುಗಳಿವೆ. ದೇವಸ್ಥಾನದ ಪ್ರವೇಶ ದ್ವಾರದ ಎಡಬದಿಯಲ್ಲಿ ನಿರ್ಮಿಸಿದ್ದ ಯಾತ್ರಾರ್ಥಿಗಳ ಕೊಠಡಿಗಳನ್ನು ಇತ್ತೀಚೆಗೆ ತೆರವುಗೊಳಿಸಿ ಅಲ್ಲಿ ಹಾಸುಗಲ್ಲುಗಳನ್ನು ಜೋಡಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆತ್ತನೆಯ ಕಲ್ಲುಗಳು ಕಂಡು ಬಂದಿದ್ದರಿಂದ ನೆಲವನ್ನು ಅಗೆಯುತ್ತ ಹೋದಂತೆ ಈ ಕೊಳ ಪತ್ತೆಯಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ […]

ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆ..ರೆಡ್ಡಿ ಸೇರಿ 30ಕ್ಕೂ ಹೆಚ್ಚು ಮಂದಿ ಕೋರ್ಟ್​ಗೆ ಹಾಜರು!

Thursday, June 28th, 2018
janardhan-reddy

ಬೆಂಗಳೂರು: ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಆನಂದ್ ಸಿಂಗ್, ಸುರೇಶ್ ಬಾಬು ಮತ್ತು ಸತೀಶ್ ಸೈಲ್ ಸೇರಿದಂತೆ 30 ಕ್ಕೂ ಹೆಚ್ಚು ಆರೋಪಿತರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸಿಟಿ ಸಿವಿಲ್ ಕೋರ್ಟ್ನಲ್ಲಿರುವ ಹಾಲ್ ನಂಬರ್ 80 ರಲ್ಲಿ ಈ ವಿಚಾರಣೆ ನಡೆಯಿತು. ಕೇಸಿಗೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಕರಣದ ವಿಚಾರಣೆ ಇತ್ತೀಚೆಗಷ್ಟೇ ಸಿಬಿಐ ಕೋರ್ಟ್ನಿಂದ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ವರ್ಗವಾಗಿದೆ. ಕೇಸಿಗೆ ಸಂಬಂಧಿಸಿದಂತೆ […]

ಪುನೀತ್ ರಾಜ್‍ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ..ಪ್ರಾಣಾಪಾಯದಿಂದ ಪಾರು..!

Friday, June 8th, 2018
punith-rajkumar

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಪವರ್ ಸ್ಟಾರ್ ಪುನೀತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳ್ಳಾರಿಯಲ್ಲಿ `ನಟಸಾರ್ವಭೌಮ` ಚಿತ್ರದ ಶೂಟಿಂಗ್ ಮುಗಿಸಿ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗುರುವಾರ ರಾತ್ರಿ 9.30ರ ಸುಮಾರಿಗೆ ಆಂಧ್ರ ಪ್ರದೇಶದ ಅನಂತಪುರ ಸಮೀಪದಲ್ಲಿ ಕಾರಿನ ಟಯರ್ ಬ್ಲಾಸ್ಟ್ ಆಗಿ ಮೂರು ರಸ್ತೆಗಳ ತಿರುವು ಗೊತ್ತಾಗದೇ ಇರುವ ಕಾರಣ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನ ಹೆಡ್ ಲೈಟ್ ಬಳಿ ಬಂಪರ್ ಗೆ ಹಾನಿಯಾಗಿದೆ. ಈ ಬಗ್ಗೆ […]

ಕಾಂಗ್ರೆಸ್‌‌ ಮನವೊಲಿಸಲಿ ಬಿಡಲಿ ಗೊತ್ತಿಲ್ಲ, ಸಾಲ ಮನ್ನಾ ಮಾತ್ರ ಮಾಡಲಿ: ಶ್ರೀರಾಮುಲು

Thursday, May 24th, 2018
shri-ramulu

ಬಳ್ಳಾರಿ: ತೃತೀಯ ರಂಗ ಕಟ್ಟಲು‌‌ ಹೊರಟಿದ್ದಾರೆ‌ ಹೊರತು ಅದು ಯುಪಿಎ ಒಗ್ಗಟ್ಟಲ್ಲ. ಮೋದಿ ಹೋರಾಟ ನಿಲ್ಲಿಸಬೇಕೆಂದು ಎಲ್ಲರು ಒಂದಾಗಿದ್ದಾರೆ ಹಾಗೂ ತೃತೀಯ ರಂಗ ಕಾಂಗ್ರೆಸ್ ವಿರುದ್ಧ ಇದೆ ಎಂದು ಶ್ರೀರಾಮುಲು ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ತೃತೀಯ ರಂಗ ರಚನೆಗೆ ಅಷ್ಟೊಂದು ‌ನಾಯಕರು ಬಂದಿದ್ರು. ಅದು ಕಾಂಗ್ರೆಸ್ ಅವನತಿಯ ಮೊದಲ ಮೆಟ್ಟಿಲು. ತೃತೀಯ ರಂಗದಲ್ಲಿ ಕಾಂಗ್ರೆಸ್ ಬೇರೆ ಎಂದು‌ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ಹೇಳಿದರು. ಪ್ರಾದೇಶಿಕ ‌ಹಿತಾಸಕ್ತಿಗಾಗಿ ಹೋರಾಟವಿದು. ಮಳೆಗಾಲದಲ್ಲಿ […]

‘ಬಹುಮತ ಸಾಬೀತು ದಿನವೇ ಬಿದ್ದು ಹೋಗಲಿದೆ ಸಮ್ಮಿಶ್ರ ಸರ್ಕಾರ’

Wednesday, May 23rd, 2018
bjp-strike

ಬಳ್ಳಾರಿ: ಈಗಾಗಲೇ ಕಾಂಗ್ರೆಸ್‌‌ನ 20ಕ್ಕೂ ಹೆಚ್ಚು ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಬಹುಮತ ಸಾಬೀತು ದಿನವೇ ಜೆಡಿಎಸ್‌‌‌-ಕಾಂಗ್ರೆಸ್‌‌ನ ಸರ್ಕಾರ ಬಿದ್ದು ಹೋಗಲಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು. ಪಕ್ಷದ ಕಾರ್ಯಕರ್ತರೊಂದಿಗೆ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ರಾಜ್ಯದಲ್ಲಿ ಅಪವಿತ್ರ ಮೈತ್ರಿಯ ಸರ್ಕಾರ ರಚನೆ ಆಗುವುದನ್ನು ವಿರೋಧಿಸಿ ಕರಾಳ ದಿನಾಚರಣೆ ಹಿನ್ನೆಲೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದ ಜಾಯಮಾನವೆಂದರೆ ಇನ್ನೊಬ್ಬರ ಕಾಲೆಳೆಯುವುದಾಗಿದೆ. ಈ ಹಿಂದೆ ದೇವೇಗೌಡರಿಗೆ ಬೆಂಬಲ ನೀಡಿ ಪ್ರಧಾನಿ ಮಾಡಿ ನಂತರ […]

ಬೊಗಳುವ ನಾಯಿಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ… ಅನಂತ್‌ಕುಮಾರ್‌ ವಾಗ್ದಾಳಿ

Saturday, January 20th, 2018
ananth-kumar

ಬಳ್ಳಾರಿ: ಸಂವಿಧಾನ ಬದಲಾವಣೆ ಮಾಡ್ತೀವಿ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಬಳ್ಳಾರಿಯಲ್ಲಿ ಮತ್ತೆ ಬಾಯಿ ಹರಿಬಿಟ್ಟಿದ್ದಾರೆ. ನಾವೂ ಹೇಳಿ ಕೇಳಿ ನಿಜವಾಗಿಯೂ ಹಠವಾದಿಗಳು, ಯಾವುದೋ ನಾಯಿ ಬೀದಿಯಲ್ಲಿ ನಿಂತೂ ಬೊಗಳಿದ್ರೆ ನಾವೂ ತಲೆಕೆಡಿಸಿಕೊಳ್ಳಲ್ಲ, ನಾವೂ ಬದಲಾವಣೆ ಮಾಡಲು ಬಂದಿದ್ದೇವೆ, ಬೊಗಳುವ ನಾಯಿಗಳಿಗೆ ನಾವೂ ತಲೆಕೆಡಿಸಿಕೊಳ್ಳಲ್ಲವೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಬಳ್ಳಾರಿಯಲ್ಲಿಂದು ಉದ್ಯೋಗ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು ಭಾಷಣದುದ್ದಕ್ಕೂ ನಾವೂ ಬದಲಾವಣೆ […]

ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಬೇಡಿ: ರಾಹುಲ್ ಗಾಂಧಿಗೆ ಬಿಎಸ್‌ವೈ ಎಚ್ಚರಿಕೆ

Saturday, January 6th, 2018
rahul-gandhi

ಬಳ್ಳಾರಿ: ಲೋಕಸಭಾ ಚುನಾವಣೆಗೆ ಬಳ್ಳಾರಿಯಿಂದ ಚುನಾವಣೆಗೆ ನಿಲ್ಲುವ ಪ್ರಯತ್ನದಲ್ಲಿರುವ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದು, ಚುನಾವಣೆಗೆ ನಿಂತರೆ ಸೋಲು ಖಚಿತ ಎಂದಿದ್ದಾರೆ. ಬಳ್ಳಾರಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರಂತೆ ಬಳ್ಳಾರಿಯಲ್ಲಿ ಲೋಕಸಭೆ ಚುನಾವಣೆಗೆ ನಿಂತು ಗೆಲ್ಲುವ ಪ್ರಯತ್ನದಲ್ಲಿದ್ದಾರೆ ಆದರೆ ಅವರು ಇಲ್ಲಿ ಚುನಾವಣೆಗೆ ನಿಂತರೆ ಒಂದು ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ […]