ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಿರ್ಸಿ ಮೂಲದ ಯುವಕ ನಾಪತ್ತೆ

Sunday, July 21st, 2013
Vinay Vaz

ಮಂಗಳೂರು:  ಶುಕ್ರವಾರ ರಾತ್ರಿ ಕೇರಳದ ಎರ್ನಾಕುಳಂನಿಂದ ಮಂಗಳೂರು ಕಡೆಗೆ ಬರುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಸಿರ್ಸಿ ಮೂಲದ ವಿನಯ್‌ ವಾಜ್‌ (24) ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದಾರೆ. ನೇತ್ರಾವತಿ ಸೇತುವೆ ಬಳಿ ತಲುಪಿದಾಗ ರೈಲು ನಿಧಾನವಾಗಿ ಚಲಿಸಲಾರಂಭಿಸಿದ್ದು, ಇದು ನಿಲ್ದಾಣವಾಗಿರಬೇಕು ಎಂದು ಭಾವಿಸಿ ಕತ್ತಲೆಯಲ್ಲಿ ವಿನಯ್‌ರಾಜ್‌ ಇಳಿದು ನೇತ್ರಾವತಿ ನದಿಗೆ ಬಿದ್ದಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ವಿನಯರಾಜ್‌ ಸಹಿತ 47 ಮಂದಿಯ ತಂಡ  ಕೇರಳದಿಂದ ಕುಮಟಾಕ್ಕೆ ಪ್ರಯಾಣಿಸುತ್ತಿತ್ತು.  173 ಸೆ.ಮೀ. […]

ಏರ್‌ ಇಂಡಿಯಾ ವಿಮಾನದಲ್ಲಿ ಆಕ್ರಮ ಚಿನ್ನ ಸಾಗಾಟ ; 52 ಲಕ್ಷ ರೂ. ಮೌಲ್ಯದ 2.16 ಕೆ.ಜಿ ಚಿನ್ನ ವಶ

Sunday, July 21st, 2013
Illigal Gold

ಮಂಗಳೂರು: ಶನಿವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ  ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟದ ಎರಡು ಪ್ರಕರಣಗಳನ್ನು ಪತ್ತೆಹಚಿದ್ದಾರೆ. ಆಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ದಂಪತಿ ಸಹಿತ ಒಟ್ಟು ಮೂವರನ್ನು ಬಂಧಿಸಿ 52 ಲಕ್ಷ ರೂ. ಮೌಲ್ಯದ 2.16 ಕೆ.ಜಿ ಬಂಗಾರವನ್ನು ವಶಪಡಿಸಿ ಕೊಂಡಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಬೆಳಗ್ಗೆ 9.30 ಕ್ಕೆ  ತಲುಪಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಈ […]

ಕೌಟುಂಬಿಕ ಆಸ್ತಿ ವಿವಾದ ; ಪಾಲಿಕೆಯ ವಾಹನ ಚಾಲಕನಿಗೆ ಮಾರಣಾಂತಿಕ ಹಲ್ಲೆ

Sunday, July 21st, 2013
MCC driver

ಮಂಗಳೂರು : ಕೌಟುಂಬಿಕ ಆಸ್ತಿ ವಿವಾದದ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವಾಹನ ಚಾಲಕ ಅಶೋಕನಗರದ ರೋಹಿತ್‌ (26) ಅವರನ್ನು ಶನಿವಾರ ಬೆಳಗ್ಗೆ ಬೈಕ್‌ನಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ರೋಹಿತ್‌ ಅವರು ಬೆಳಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಕರೆ ತರಲು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿದ ನಾಲ್ವರು ಅಪರಿಚಿತರು ಲೇಡಿಹಿಲ್‌ನಲ್ಲಿ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದರು  ಎಂದು ಆರೋಪಿಸಲಾಗಿದೆ. ಗಾಯಾಳು ರೋಹಿತ್‌ ಅವರನ್ನು ಆಸ್ಪತ್ರೆಗೆ […]

ಜುಲೈ 22 ರಂದು ಚಿತ್ರಾಪುರ ಮಠದ ವತಿಯಿಂದ ಚಾತುರ್ಮಾಸ ಆಚರಣೆ

Saturday, July 20th, 2013
kodial chaturmasa

ಮಂಗಳೂರು : ಪರಮಪೂಜ್ಯ ಸದ್ಯೊಜತ್ ಶಂಕರಾಶ್ರಮ ಸ್ವಾಮೀಜಿಯವರು ಈ ಬಾರಿಯ ಎರಡು ತಿಂಗಳ ಅವಧಿಯ ಚಾತುರ್ಮಾಸ ಆಚರಣೆಯನ್ನು ನಮ್ಮ ಗುರು ಪರಂಪರೆಯ ಆರನೆಯ ಮಠಧೀಶರಾಗಿದ್ದ ಪರಮ ಪೂಜ್ಯ ವಾಮನಾಶ್ರಮ ಸ್ವಾಮಿಜಿಯವರ ಮಂಗಳೂರಿನಲ್ಲಿರುವ ಸಮಾಧಿ ಸ್ಥಳದಲ್ಲಿ ಆಚರಿಸುವರು ಎಂದು ಕೊಡಿಯಾಲ್ ಚಾತುರ್ಮಾಸ ಆಚರಣಾ ಸಮಿತಿಯ ಅಧ್ಯಕ್ಷ ವಿನೋದ್ ಜಿ ಎಣ್ಣೆಮಾಡಿ ಇಂದು ಮಠದಲ್ಲಿ ನಡೆದ ಸುದ್ದಿಘೊಷ್ಟಿಯಲ್ಲಿ ತಿಳಿಸಿದರು ಜುಲೈ 22 ರಂದು  ಸಂಭ್ರಮದ ವ್ಯಾಸಪೂಜೆಯಿಂದ ಆರಂಭಗೊಳ್ಳಳಿದೆ ಈ ಚಾತುರ್ಮಾಸವು ಭಾದ್ರಪದ ಶುಕ್ಲಪೂರ್ಣಿಮ ಸೆಪ್ಟೆಂಬರ್ 19 ಪರಮ ಪೂಜ್ಯ ಸ್ವಾಮಿಜಿಯವರ […]

ಪಿಲಿಕುಲದಲ್ಲಿ 6 ದಿನದ ಜಿಲ್ಲಾ ಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನೆ

Saturday, July 20th, 2013
Pilikula Inspire Award Science exhibition

ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಸಂಸ್ಥೆ ಮತ್ತು ತರಭೇತಿ ಸಂಸ್ಥೆ ಮಂಗಳೂರು ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಇದರ ವತಿಯಿಂದ  ವಿಜ್ಞಾನ ಮಾದರಿಗಳ ಜಿಲ್ಲಾ ಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಪಿಲಿಕುಲದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ದ.ಕ.ಉಸ್ತುವಾರಿ ಸಚಿವ ರಮನಾಥ ರೈ ಯವರು ನೆರವೇರಿಸಿದರು. ಉದ್ಘಾಟನೆಯನ್ನು ಬಳಿಕ ಮಾತನಾಡಿದ ಉಸ್ತುವಾರಿ ಸಚಿವ ರಮನಾಥ ರೈ ಯವರು, ಪ್ರತಿಯೊಬ್ಬ ವಿದ್ಯಾರ್ಥಿಗಳ  ಪ್ರತಿಭೆಗಳು ಹೊರಹೊಮ್ಮಲು ಇಂತಹ ಕಾರ್ಯಕ್ರಮಗಳು ಅಗತ್ಯ. ವಿದ್ಯಾರ್ಥಿಗಳಲ್ಲಿ […]

ಕೊಲೆ ಮಾಡಿ, ದೇಹವನ್ನು ಇಂಗುಗುಂಡಿಯಲ್ಲಿ ಮುಚ್ಚಿಟ್ಟಿದ್ದ ಆರೋಪಿಗಳಿಗೆ ಜಾಮೀನು

Saturday, July 20th, 2013
Karkala Murder

ಮಂಗಳೂರು : ಕಾರ್ಕಳ ತಾಲೂಕು ರೆಂಜಾಳ ಗ್ರಾಮದಲ್ಲಿ ಜೂ.3ರಂದು ಕೊಲೆಯಾದ ಪೂರ್ಣಿಮಾ ಶೆಟ್ಟಿ ಪ್ರಕರಣದ ಆರೋಪಿಗಳಾದ ಅಮರೀಶ್, ಸುಧಾಕರ್ ಶೆಟ್ಟಿ, ಗುರುಪ್ರಸಾದ್, ಭಾಸ್ಕರ್ ಪೂಜಾರಿ ಹಾಗೂ ಪ್ರವೀಣ್ ತೌರು ಇವರಿಗೆ ಮೂಡುಬಿದರೆ ನ್ಯಾಯಾಲಯ ಜಾಮೀನು ನೀಡಿದೆ. ತನ್ನ ಸ್ನೇಹಿತರ ಸಹಕಾರದೊಂದಿಗೆ ಪ್ರಭಾಕರ್ ಶೆಟ್ಟಿ ಪೂರ್ಣಿಮಾಳನ್ನು ಕೊಲೆ ಮಾಡಿ, ದೇಹವನ್ನು ಬಟ್ಟೆಯಲ್ಲಿ ಸುತ್ತಿ ಮಾಸ್ತಿಕಟ್ಟೆಯ ಇಂಗುಗುಂಡಿಯಲ್ಲಿ ಹೂತು ಹಾಕಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಪೊಳಲಿ ದ್ವಾರದ ಬಳಿ ಅಪರಿಚಿತ ವಾಹನ ಡಕ್ಕಿ ಹೊಡೆದು ವೈದ್ಯ ಮೃತ್ಯು

Saturday, July 20th, 2013
Doctor

ಮಂಗಳೂರು : ಮಂಗಳೂರು-ಮೂಡಬಿದಿರೆಯ ಹೆದ್ದಾರಿಯಲ್ಲಿರುವ  ಪೊಳಲಿ ದ್ವಾರದ ಬಳಿ ಅಪರಿಚಿತ ವಾಹನವೊಂದು ಬೈಕ್ ನಲ್ಲಿ ಹೋಗುತ್ತಿದ್ದ  ಪಾಂಡೇಶ್ವರದ ವೈದ್ಯರೊಬ್ಬರಿಗೆ  ಡಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ  ಮೃತ  ಘಟನೆ ಶುಕ್ರವಾರ ನಡೆದಿದೆ. ಮಂಗಳೂರಿನ ಪಾಂಡೇಶ್ವರದ ನಿವಾಸಿ  ಡಾ.ಹರ್ಷವರ್ಧನ ಗಣೇಶ್ ಉಳ್ಳಾಲ್ ಮೃತಪಟ್ಟ ದುರ್ದೈವಿ.  ಗುರುವಾರ ಹರ್ಷವರ್ಧನ್ ತನ್ನ ಮೂವರು ಗೆಳೆರೊಂದಿಗೆ ಗಂಜಿಮಠದಲ್ಲಿರುವ ಗೆಳೆಯನ ಮನೆಗೆ ಹೊಗಿದ್ದರು. ಶುಕ್ರವಾರ ಮುಂಜಾನೆ ಮೂರು ಮಂದಿ ಗೆಳೆಯರು ಕಾರಿನಲ್ಲಿ ಹೊರಟರು, ಹರ್ಷವರ್ಧನ್ ಮಾತ್ರ ಗಂಜಿಮಠದಿಂದ ಮಂಗಳೂರಿಗೆ ಬೈಕ್ ನಲ್ಲೇ ತೆರಳಿದರು. ಮಂಗಳೂರು-ಮೂಡಬಿದಿರೆ […]

ಎ.ಜೆ. ವೈದ್ಯಕೀಯ ವಿದ್ಯಾಲಯದಿಂದ ಬಂಜೆತನ ಶಿಬಿರ

Saturday, July 20th, 2013
AJ Hospital

ಮಂಗಳೂರು: ಎ.ಜೆ. ವೈದ್ಯಕೀಯ ವಿದ್ಯಾಲಯದ ಸ್ತ್ರೀರೋಗ ವಿಭಾಗದಿಂದ ಬಂಜೆತನ ಶಿಬಿರವನ್ನು ಜುಲೈ 22 ರಿಂದ ಅಗಸ್ಟ್ 3,2013ರ ವರೆಗೆ ಎ.ಜೆ. ವೈದ್ಯಕೀಯ ವಿದ್ಯಾಲಯದ ಹೊರರೋಗಿ ವಿಭಾಗದಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದದಲ್ಲಿ ಉಚಿತ ವೈದ್ಯಕೀಯ ಸಲಹೆ, ರಕ್ತ ತಪಾಸನೆ ಮತ್ತು ಸ್ಕ್ಯಾನಿಂಗ್ ಅನ್ನು ಮಾಡಲಾಗುತ್ತದೆ. ಎ.ಜೆ. ವೈದ್ಯಕೀಯ ವಿದ್ಯಾಲಯವು ಎ.ಜೆ.ಶೆಟ್ಟಿ ಅವರ ದೂರದರ್ಶಿತ್ವದಿಂದ 2002ರಲ್ಲಿ ಸ್ಥಾಪನೆಯಾಯಿತು. ಇದರ ಮುಖ್ಯಧ್ಯೇಯ  ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕರಿಗೆ ವೈದ್ಯಕೀಯ ಸೇವೆ, ಈ ವಿದ್ಯಾಲಯದ ಉಪಾಧ್ಯಕ್ಷ ಶ್ರೀ ಪ್ರಶಾಂತ್ ಶೆಟ್ಟಿ, ಡೀನ್ ಡಾ. […]

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆ

Saturday, July 20th, 2013
Vasantha shetty

ನವ ದೆಹಲಿ: ಪ್ರತಿಷ್ಠಿತ ದೆಹಲಿ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಮೂಲತಃ ಸುಳ್ಯದ ಕಳಂಜದವರಾದ ವಸಂತ ಶೆಟ್ಟಿ ರಿಯಾಣದಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ದೆಹಲಿ ಕರ್ನಾಟಕ  ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಸುಳ್ಯ ತಾಲೂಕಿನ ಎರಡನೆಯವರಾಗಿದ್ದಾರೆ. ಈ ಮೊದಲು ಡಾ.ಪುರುಷೋತ್ತಮ ಬಿಳಿಮಲೆ ಕೂಡಾ  ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ಈ ಬಾರಿಯದದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಒಟ್ಟಾರೆ 15 ಜನರುಗಳ ಎರಡು ತಂಡಗಳು ಹಾಗೂ ಓರ್ವರು ಸ್ವತಂತ್ರ ಅಭ್ಯರ್ಥಿಯಾಗಿ ಒಟ್ಟು 31 ಜನ ಸ್ಪರ್ಧಿಸಿದ್ದರು. […]

ಜಿಲ್ಲೆಯ ವಿವಿಧ ದೇವಸ್ಥಾನಗಳಿಂದ ಕದ್ದ 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ವಶ

Saturday, July 20th, 2013
six temple thieves

ಮಂಗಳೂರು : ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ದೇವಸ್ಥಾನ ಹಾಗೂ ಬಸದಿಗಳಲ್ಲಿ ದರೋಡೆ ನಡೆಸಿದ್ದ ಕಳ್ಳರ ತಂಡವನ್ನು ಬಂಟ್ವಾಳ ಪೊಲೀಸರು ಬಂಧಿಸಿ, ಅವರಲ್ಲಿದ್ದ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ಪ್ರಾಚೀನ ಜೈನ ತೀರ್ಥಂಕರ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಂದು ಅವರ ಕಚೇರಿಯಲ್ಲಿ ಜುಲೈ 19ರಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಬಂಟ್ವಾಳ ಪೊಲೀಸರು  ಜೂನ್ 12ರಂದು ವಾಹನ ತಪಾಸಣೆ ಮಾಡುತ್ತಿದ್ದಾಗ […]