ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

Thursday, September 16th, 2010
ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

ಮೂಡುಬಿದಿರೆ:  ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಬುಧವಾರ ಸಂಜೆ ನಿಧನರಾದರು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಐವರು ಗಂಡು ಮತ್ತು ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕ್ರಷಿಕರಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಅಪ್ರತಿಮ ಸಾಧಕ ಕೆಜೆ.ಶೆಟ್ಟಿ ಕಡಂದಲೆ ಶಿಕ್ಷಕರಾಗಿ, ಸಾಹಿತಿಯಾಗಿ,  ಅಪ್ರತಿಮ ಹೋರಾಟಗಾರರಾಗಿ, ಹರಿತವಾದ ಬರಹಗಳಿಂದ ಜನರ ಮನ ಮುಟ್ಟಿದ್ದರು. ಕಡಂದಲೆಯಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು.  ಸ್ವತಃ ತಾವೇ ಸಂಪಾದಕರಾಗಿ ಚಂದನ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸ್ಥಳೀಯ ಪತ್ರಿಕೆಗಳಿಗೆ ಅಂಕಣ […]

ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಗೆ ಜಯಭೇರಿ

Thursday, September 16th, 2010
ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಗೆ ಜಯಭೇರಿ

ಗುಲ್ಬರ್ಗಾ : ಸೋಮವಾರ ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮರು ಮತದಾನದ  ಮತಎಣಿಕೆ ಮುಕ್ತಾಯವಾಗಿದ್ದು ಆಡಳಿತ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. , ಪ್ರತಿಷ್ಠೆಯಮಾರ್ಪಟ್ಟಿದ್ದ , ಮೂರೂ ಪಕ್ಷಗಳಿಗೆ ಅಗ್ನಿಪರೀಕ್ಷೆಯ  ಕಣವಾಗಿದ್ದ   ಕಡೂರಿನಲ್ಲಿ ಬಿಜೆಪಿಯ ಡಾ. ವೈ.ಸಿ. ವಿಶ್ವನಾಥ್  ಗೆಲುವು ದಾಖಲಿಸಿದ್ದರೆ, ಜೆಡಿಎಸ್‌ನ ವೈ.ಎಸ್.ವಿ. ದತ್ತಾ ಅವರು ಸೋಲು ಅನುಭವಿಸಿದ್ದಾರೆ.  ಕಾಂಗ್ರೆಸ್‌ನ ಕೆಂಪರಾಜು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಜೆಡಿಎಸ್‌ನ ಅರುಣಾ ಪಾಟೀಲ್ ರೇವೂರ […]

ನುಡಿಸಿರಿ ಅಧ್ಯಕ್ಷೆಯಾಗಿ ಕನ್ನಡದ ಪ್ರಸಿದ್ಧ ಲೇಖಕಿ ವೈದೇಹಿ.

Wednesday, September 15th, 2010
ನುಡಿಸಿರಿ ಅಧ್ಯಕ್ಷೆಯಾಗಿ ಕನ್ನಡದ ಪ್ರಸಿದ್ಧ ಲೇಖಕಿ ವೈದೇಹಿ.

ಮಂಗಳೂರು:  ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2010ರ ಸರ್ವಾಧ್ಯಕ್ಷೆಯಾಗಿ ಲೇಖಕಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಕ್ಟೋಬರ್ 29, 30, 31 ರಂದು ಮೂಡಬಿದಿರೆಯ ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದಲ್ಲಿ ಕನ್ನಡ ಮನಸ್ಸು: ಜೀವನ ಮೌಲ್ಯಗಳು’ ಎಂಬ ಪರಿಕಲ್ಪನೆಯಡಿ ಸಮ್ಮೇಳನ ನಡೆಯಲಿದೆ ಎಂದು ಆಳ್ವ  ಹೇಳಿದರು. ಜಾನಕಿ ಶ್ರೀನಿವಾಸ ಮೂರ್ತಿ ವೈದೇಹಿ ಕಾವ್ಯನಾಮದಿಂದ ಚಿರಪರಿಚಿತರು. ಕವಿತೆ, ಕಥೆ, ನಾಟಕ, […]

ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ ಅಸ್ತಿತ್ವಕ್ಕೆ

Wednesday, September 15th, 2010
ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ ಅಸ್ತಿತ್ವಕ್ಕೆ

ಮಂಗಳೂರು : ಇಲ್ಲಿಯವರೆಗೆ ನಾಗರೀಕ ಬಂದೂಕು ತರಬೇತಿ ಶಿಬಿರಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗುತಿತ್ತು. ಈ ಹಿಂದಿನ ನಾಗರೀಕ ಬಂದೂಕು ತರಬೇತಿ ಶಿಬಿರ ( ಆಗಸ್ಟ್-2010) ದಲ್ಲಿ ಹೇಳಿದ್ದಂತೆ ದಿನಾಂಕ : 13.09.2010 ರಂದು ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ (Dakshina Kannada District Rifle Association) ಈ ಕೆಳಗಿನ ಲಾಂಛನದೊಂದಿಗೆ ಅಸ್ತಿತ್ವಕ್ಕೆ ಬಂದಿರುತ್ತದೆ. ಸದರಿ  ಸಂಘವನ್ನು Karnataka Societies Registration Act -1960 -1960 ರ ಅನ್ವಯ ಸಹಕಾರಿ ಸಂಘಗಳ ಉಪ […]

ರಂಗ ಕಲಾವಿದ ನವೀನ್ ಎಡಮಂಗಲ ವಿಧಿ ವಶ

Monday, September 13th, 2010
ರಂಗ ಕಲಾವಿದ ನವೀನ್ ಎಡಮಂಗಲ ವಿಧಿ ವಶ

ಬೆಳ್ತಂಗಡಿ : ವಿಶ್ವತುಳು ಸಮ್ಮೇಳನದ ತುಳುಗ್ರಾಮದಲ್ಲಿ ಗಾಂಧಿ ಪಾತ್ರಧಾರಿ, ಖ್ಯಾತ ರಂಗಕರ್ಮಿ, ನಾಟಕ ನಿರ್ದೇಶಕ ನವೀನ್ ಎಡಮಂಗಲ (27) ಪಂಜ-ಕಡಬ ರಸ್ತೆಯ ನೆಕ್ಕಿಲದಲ್ಲಿ ಸೆ.11ರಂದು ಬೆಳಿಗ್ಗೆ ಹಿಟಾಚಿ ಯಂತ್ರ ಹೇರಿಕೊಂಡು ಹೋಗುತ್ತಿದ್ದ ಟಿಪ್ಪರ್‌ ಲಾರಿ ಹಾಗೂ ಬೈಕ್  ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಣೇಶೋತ್ಸವ ನಿಮಿತ್ತ ಪಂಜದಲ್ಲಿ ನವೀನ್ ಎಡಮಂಗಲ ನಿರ್ದೇಶನದಲ್ಲಿ ಉಜಿರೆಯ ಎಸ್‌ಡಿ ಎಂ. ಕಾಲೇಜಿನ ರಂಗತರಬೇತಿ ಕೇಂದ್ರದವರಿಂದ ಸೆ.11ರಂದು ರಾತ್ರಿ ನಾಟಕ ನಡೆಯಲಿದ್ದು, ಅವರು ಸೆ.10ರಂದೇ ಪಂಜಕ್ಕೆ ಬಂದು ವೇದಿಕೆ, ರಂಗಸಜ್ಜಿಕೆ ನಿರ್ಮಿಸಿದ್ದರು. ಸೆ.11ರಂದು ಮುಂಜಾನೆ […]

ನಗರದ ಕೇಂದ್ರ ಮೈದಾನದಲ್ಲಿ ಹಿಂದೂ ಯುವಸೇನೆಯ 18 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ

Monday, September 13th, 2010
ನಗರದ ಕೇಂದ್ರ ಮೈದಾನದಲ್ಲಿ ಹಿಂದೂ ಯುವಸೇನೆಯ 18 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ

ಮಂಗಳೂರು:  ಹಿಂದೂ ಯುವಸೇನೆ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ  18ನೇ ವರ್ಷದ ಗಣೇಶೋತ್ಸವವನ್ನು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು, ಗಣೇಶೋತ್ಸವವು ಸದ್ವಿಚಾರಗಳಿಗೆ ಹಚ್ಚಿನ ಪ್ರೇರಣೆ ನೀಡಲಿ ಹಾಗೂ ಈ ಕಾರ್ಯಕ್ರಮವು ಸೌಹಾರ್ದತೆಗೆ ಮಾದರಿಯಾಗಲಿ ಎಂದು ಹೇಳಿದರು. ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ಸ್ಥಾಪಕ ಅಧ್ಯಕ್ಷ ಗಣೇಶ್ ಎಸ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಎಕ್ಸ್ ಫರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್ ನಾಯಕ್, ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಭಾಸ್ಕರಚಂದ್ರ […]

ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ರಾಜೀನಾಮೆ

Sunday, September 12th, 2010
ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ರಾಜೀನಾಮೆ

ಬೆಂಗಳೂರು,  : ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ಹಾಸನ ಹಾಗೂ ಮೈಸೂರು ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ  ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ರಾಮಚಂದ್ರಗೌಡರು ಅವರ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ್ ನಡೆದಿಲ್ಲ ಎಂದು ರಾಜ್ಯ ಹೈಕೋರ್ಟ್  ಗೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಆದರೆ ಆಸ್ಪತ್ರೆಗಳ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಸಚಿವ ರಾಚಂಗೌಡ ಅವರ ಅಫಿಡವಿಟ್ ಅನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಸಿಎಂ ಯಡಿಯೂರಪ್ಪ […]

ಡಿ.ವೈ.ಎಫ್.ಐ ನೇತೃತ್ವದಲ್ಲಿ ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತವಾದಪರಿಹಾರ ಒದಗಿಸಬೇಕೆಂದು ಪ್ರತಿಭಟನೆ

Thursday, September 9th, 2010
 ಡಿ.ವೈ.ಎಫ್.ಐ ನೇತೃತ್ವದಲ್ಲಿ ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತವಾದಪರಿಹಾರ ಒದಗಿಸಬೇಕೆಂದು ಪ್ರತಿಭಟನೆ

ಮಂಗಳೂರು: ಡಿ.ವೈ.ಎಫ್.ಐ ನೇತೃತ್ವದಲ್ಲಿ ಜೈಲ್ ರೋಡ್ ನಿಂದ ಏರ್ ಇಂಡಿಯಾ ಕಛೇರಿ ತನಕ ಪ್ರತಿಭಟನಾ ಮೆರವಣಿಗೆ ನಿನ್ನೆ ಬೆಳಿಗ್ಗೆ ನಡೆಯಿತು. ಬಜಪೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ನ್ಯಾಯಯುತವಾದ ಪರಿಹಾರ ಸಿಗಬೇಕೆಂದು ಆಗ್ರಹಿಸಿ ಬ್ರಹತ್ ಏರ್ ಇಂಡಿಯಾ ಕಛೇರಿ ಚಲೋ ಜರಗಿತು. ಕಾಸರಗೋಡು ಲೋಕಸಭಾ ಸದಸ್ಯ ಪಿ. ಕರುಣಾಕರನ್ ಸಭೆಯನ್ನು ಉದ್ಘಾಟಿಸಿದರು , ಬಳಿಕ ಮಾತನಾಡಿದ ಅವರು ಸಂತ್ರಸ್ತರಿಗೆ ಆಗಿರುವ ಅನ್ಯಾಯದ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು. ಏರ್ ಇಂಡಿಯಾ ದುರಂತದ […]

ಯು.ಎಸ್ ಓಪನ್ ಕೂಟದಲ್ಲಿ ಬೋಪಣ್ಣ-ಕುರೇಶಿ ಸೆಮಿಫೈನಲಿಗೆ.

Thursday, September 9th, 2010
ಯು.ಎಸ್ ಓಪನ್ ಕೂಟದಲ್ಲಿ ಬೋಪಣ್ಣ-ಕುರೇಶಿ ಸೆಮಿಫೈನಲಿಗೆ.

ನ್ಯೂಯಾರ್ಕ್: ಯು.ಎಸ್ ಓಪನ್ ಕೂಟದ ಪುರುಷರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ರೋಹನ್ ಬೋಪಣ್ಣ ಅವರು ಪಾಕಿಸ್ಥಾನದ ಐಸಾಮ್ ಉಲ್ ಹಕ್ ಕುರೇಶಿ ಜತೆಗೂಡಿ ಸೆಮಿಫೈನಲ್ ಹಂತಕ್ಕೇರಿದ್ದಾರೆ.  ಬೋಪಣ್ಣ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಉಪಾಂತ್ಯ ತಲುಪಿದ ಸಾಧನೆಯಾಗಿದೆ. ಯು.ಎಸ್ ಓಪನ್ ಕೂಟದ 16ನೇ ಶ್ರೇಯಾಂಕಿತರಾದ ಬೋಪಣ್ಣ – ಕುರೇಶಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 10ನೇ ಶ್ರೇಯಾಂಕದ ದಕ್ಷಿಣ ಆಫ್ರಿಕಾದ ವೆಸ್ಲೆ ಮೂಡಿ ಮತ್ತು ಬೆಲ್ಜಿಯಂನ ಡಿಕ್ ನಾರ್ಮನ್ ವಿರುದ್ಧ 7-5, 7-6 ಅಂತರದಿಂದ ಜಯ ದಾಖಲಿಸಿದರು. ಈ […]

ಕೆಥೋಲಿಕ್ ಸಮಾಜ ಬಾಂಧವರ ಸಾಂಸ್ಕೃತಿಕ ಹಬ್ಬ, ಮೊಂತಿ ಫೆಸ್ತ್.

Wednesday, September 8th, 2010
ಕೆಥೋಲಿಕ್ ಸಮಾಜ ಬಾಂಧವರ ಸಾಂಸ್ಕೃತಿಕ ಹಬ್ಬ, ಮೊಂತಿ ಫೆಸ್ತ್.

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕೊಂಕಣಿ ಕೆಥೋಲಿಕ್ ಸಮಾಜ ಬಾಂಧವರು ಮಾತೆ ಮೇರಿಯ ಜನ್ಮ ದಿನವನ್ನು ತೆನೆ ಹಬ್ಬವಾಗಿ ಆಚರಿಸಿದರು. ಇಂದು (ಸೆ. 8) ಮಾತೆ ಮೇರಿಯ ಜನ್ಮ ದಿನ ಮೊಂತಿ ಹಬ್ಬವನ್ನು ಕುಟುಂಬದ ಎಲ್ಲಾ ಸದಸ್ಯರು ಜತೆಯಾಗಿ ಒಗ್ಗಟ್ಟಿನಿಂದ ಆಚರಿಸುತ್ತಾರೆ. ಈ ದಿನದಂದು ಮೇರಿಯನ್ನು ಅದ್ಬುತ ಪವಾಡ ಮತ್ತು ಭಕ್ತಾಧಿಗಳ ಬೇಡಿಕೆಗಳನ್ನು ಈಡೇರಿಸಿದ ಪ್ರತೀಕವಾಗಿ ಹಲವು ನಾಮಗಳಿಂದ ಕರೆಯಲಾಗುತ್ತದೆ. ಮೊಂತಿ ಫೆಸ್ತ್ ಎಂದರೆ ಪರ್ವತದ ಮೇಲಿನ ಮಾತೆಯ ಹಬ್ಬ ಎಂದು ಅರ್ಥೈಸಿಕೊಳ್ಳಲಾಗಿದೆ. ಸರಿಸುಮಾರು […]