ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟ : ರಾಜ್ಯಕ್ಕೆ ದ್ವಿತಿಯ ಸ್ಥಾನ ಪಡೆದ ಮಂಗಳೂರಿನ ಮಾನ್ವಿತಾ

Monday, May 6th, 2013
Manvitha

ಮಂಗಳೂರು : ಮೇ 6 ಸೋಮವಾರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕೊಣಾಜೆ ವಿಶ್ವಮಂಗಳ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಮಾನ್ವಿತಾ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನಿಯಾಗಿದ್ದು, ಇಡಿ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ. ಒಟ್ಟು 625 ಅಂಕಗಳಲ್ಲಿ 621 ಅಂಕ ಪಡೆದ ಮಾನ್ವಿತ ಇಂಗ್ಲೀಷ್, ಗಣಿತ ಮತ್ತು ಸಮಾಜ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ 99 ಅಂಕಗಳನ್ನು ಪಡೆದರೆ, ವಿಜ್ನಾನ ನದಲ್ಲಿ 98 ಅಂಕ ಪಡೆದಿದ್ದಾಳೆ. ಓದಿನಲ್ಲಿ ಮುಂದಿರುವ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 74.23 ಮತದಾನ

Monday, May 6th, 2013
Assembly election Mangalore

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು ಶೇ.74.23ರಷ್ಟು ಮತದಾನ ನಡೆದಿದೆ. ಬೆಳಗ್ಗೆ 7  ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ನಡೆಯಿತು.  ಉರಿ ಬಿಸಿಲಿನ ನಡುವೆಯು ಮತದಾರರು ಮತದಾನ ಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯಲ್ಲಿ ಮತದಾರರಿಗೆ ಭಾವಚಿತ್ರವಿರುವ ಗುರುತುಚೀಟಿಯೇ ಬೇಕು,ಭಾವಚಿತ್ರವಿರುವ ಮತದಾರರ ಪಟಿಯೇ ಬೇಕು ಎಂಬ ಮತಗಟ್ಟೆ ಅಧಿಕಾರಿಗಳ ವಾದಗಳು ಸ್ವಲ್ಪಮಟ್ಟಿನ ಗೊಂದಲವನ್ನು ಸೃಷ್ಟಿಸಿತು. ಜಿಲ್ಲೆಯಲ್ಲಿ ಇದೇ […]

ನಾಡಿನ ಸಮಗ್ರ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ಕಾಂಗ್ರೆಸ್ಸನ್ನು ಬೆಂಬಲಿಸಿ : ಭಾವನಾ

Friday, May 3rd, 2013
Bhavana

ಬಂಟ್ವಾಳ : ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ್ ರೈ ಪರ ಗುರುವಾರ ಚಿತ್ರನಟಿ ಭಾವನ ಬಂಟ್ವಾಳ ದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಬಿ.ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕ್ಷೇತ್ರ ಅಭಿವೃದ್ದಿಯಾಗಬೇಕಾದರೆ ಕ್ಷೇತ್ರದ ಜನತೆಯ ಮನಸ್ಸನ್ನು ಅರ್ಥೈಸಿಕೊಂಡವರು ನಾಯಕರಾಗಬೇಕು.  ರಮಾನಾಥ ರೈ ಒಬ್ಬ ಕ್ರಿಯಾಶೀಲ ಹಾಗು ಅನುಭವಿ ರಾಜಕಾರಣಿಯಾಗಿದ್ದು ೫ ಬಾರಿ ಶಾಸಕರಾಗಿ, ಮಂತ್ರಿಗಳೂ ಆಗಿದ್ದು,  ಕ್ಷೇತ್ರದ ಜನರನ್ನು ಅರಿತವರು, ಜನರಿಗೂ ಇವರ ಬಗ್ಗೆ ತಿಳಿದಿದ್ದು ಮತದಾರರ ಆಶಿರ್ವಾದದಿಂದ ಈ ಬಾರಿಯೂ ಅವರು ಗೆಲುವನ್ನು ಸಾಧಿಸುತ್ತಾರೆ […]

ದೇಶ ಯಾರ ಕೈಯಲ್ಲಿ ಸುರಕ್ಷಿತ ನಿರ್ಧರಿಸಿ : ನರೇಂದ್ರ ಮೋದಿ

Friday, May 3rd, 2013
Narendra Modi

ಮಂಗಳೂರು : ಮಂಗಳೂರು ಸಹಿತ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಸುಖಶಾಂತಿ, ನೆಮ್ಮದಿ ನೆಲೆಸಿದೆ. ಹಿಂದೆ ಮಂಗಳೂರಿನಿಂದ ಕೋಮು ಗಲಭೆ, ಕರ್ಫ್ಯೂ ಸುದ್ದಿಗಳೆ ಕೇಳಿಬರುತ್ತಿದ್ದು ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಾಂತಿ ನೆಲೆಸಿಲ್ಲವೆ?, ಗಲಭೆ ನಿಂತು ಸಹೋದರ ಭಾವನೆಯನ್ನು ಸೃಷ್ಟಿ ಮಾಡಿಲ್ಲವೆ, ಬಿಜೆಪಿ ಆಡಳಿತಕ್ಕೆ ಬಂದರೆ ಸುಖ ಶಾಂತಿ ಸಾಧ್ಯ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದರು. ಅವರು ನಗರದ ನೆಹರು ಮೈದಾನದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಚುನಾವಣೆ ಪ್ರಚಾರ […]

ರಾಜ್ಯದಲ್ಲಿ ಸುಭದ್ರ ಸರ್ಕಾರವನ್ನು ನೀಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ : ಉಮ್ಮನ್ ಚಾಂಡಿ

Friday, May 3rd, 2013
Oommen Chandy

ಮಂಗಳೂರು : ಬಿಜೆಪಿ ಪಕ್ಷದ ಭ್ರಷ್ಟಾಚಾರ, ಒಳಜಗಳದಿಂದ ಬೇಸತ್ತ ಕರ್ನಾಟಕದ ಜನತೆ ಉತ್ತಮ ಆಡಳಿತದ ನಿರೀಕ್ಷೆಯಲ್ಲಿದ್ದು, ಇಂತಹ ಆಡಳಿತವನ್ನು ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಿದೆ ಆದ್ದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್  ನಿಶ್ಚಿತ ಗೆಲುವು ಸಾಧಿಸುವುದು ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು. ಅವರು ಗುರುವಾರ ದಕ್ಷಿಣ ವಿಧಾನಸಭಾ ಚುನಾವಣಾ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಘೋಷ್ಟಿಯಲ್ಲಿ ಮಾತನಾಡುತ್ತಾ ಜಾತ್ಯಾತೀತ ರಾಷ್ಟ್ರ ನಿರ್ಮಾಣ ಕಾಂಗ್ರೆಸ್ ನ ಧ್ಯೇಯವಾಗಿದ್ದು ಇದಕ್ಕೆ ವ್ಯತಿರಿಕ್ತವಾದ ಅನುಭವವನ್ನು ಕರ್ನಾಟಕದ ಜನತೆ ಪ್ರಸ್ತುತ […]

ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮಹಿಳೆಯ ಬಂಧನ

Thursday, May 2nd, 2013
chain snatcher

ಬಂಟ್ವಾಳ : ಮದುವೆ ಸಮಾರಂಭಗಳಿಗೆ ತೆರಳಿ ಮಕ್ಕಳ ಚಿನ್ನಾಭರಣ ಕಳ್ಳತನಮಾಡುತ್ತಿದ್ದ  ಮಹಿಳೆಯೋರ್ವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ನೀರುಮಾರ್ಗ ನಿವಾಸಿ ಶಶಿಕಲ (47)ಬಂಧಿತ ಆರೋಪಿಯಾಗಿದ್ದಾರೆ. ಸಭೆ ಸಮಾರಂಗಳಿಗೆ ತೆರಳುತ್ತಿದ್ದ ಈಕೆ ಕಳೆದ ಎರಡು ವರ್ಷಗಳಿಂದ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಳು. ಈಕೆಯ ಮೇಲೆ ಈಗಾಗಲೇ ಬಂಟ್ವಾಳ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದರು ಈವರೆಗೆ ಪೊಲೀಸರ ಕಣ್ತಪ್ಪಿಸಿದ್ದಳು. ಬುಧವಾರ ಬಿಸಿ ರೋಡಿನ ಮದುವೆ ಹಾಲ್ ವೊಂದರಲ್ಲಿ ಶಶಿಕಲಾರ ಸರಗಳ್ಳತನವನ್ನು ವೀಡಿಯೋವೊಂದರಲ್ಲಿ ಗುರುತಿಸಿದ ಬಂಟ್ವಾಳ  ಪೊಲೀಸರು ಬಿಸಿ ರೋಡಿನ ಖಾಸಗಿ ಹೊಟೇಲ್ ವೊಂದರಲ್ಲಿ ಈಕೆ […]

ಮತದಾರ ಪಟ್ಟಿಯಲ್ಲಿ ಮತದಾರ ಹೆಸರು ಕಡ್ಡಾಯ : ಹರ್ಷ ಗುಪ್ತಾ

Tuesday, April 30th, 2013
Harsha Gupta

ಮಂಗಳೂರು : ಮೇ 5 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಮಾತ್ರ ಮತದಾನ ಮಾಡಬಹುದು ಒಂದು ವೇಳೆ ಇಲ್ಲದಿದ್ದರೆ ಮತದಾನಕ್ಕೆ ಅವಕಾಶವಿಲ್ಲ ಎಂದು  ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ಹರ್ಷ ಗುಪ್ತಾ ತಿಳಿಸಿದ್ದಾರೆ. ಸೋಮವಾರ ಅವರು ತಮ್ಮ ಕಛೇರಿಯಿಂದಲೆ ವೈರ್‌ಲೆಸ್ ಮೂಲಕ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಿರುವ ದ.ಕ. ಜಿಲ್ಲೆಯ ವಿವಿಧ ತರಭೇತಿ ಕೇಂದ್ರಗಳ ಚುನಾವಣಾ ಸಿಬ್ಬಂದಿಗಳ ಸಂಪರ್ಕವನ್ನು ಏಕಕಾಲಕ್ಕೆ  ಪಡೆದು ಮಾತನಾಡಿದರು. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಮೇ […]

ರಾಜ್ಯ ವಿಧಾನಸಭಾ ಚುನಾವಣೆ ಮೇ 2 ರಂದು ಜಿಲ್ಲೆಗೆ ಭೇಟಿ ನೀಡಲಿರುವ ನರೇಂದ್ರ ಮೋದಿ

Monday, April 29th, 2013
Nalin Kumar Kateel

ಮಂಗಳೂರು : ಮೇ 2 ರಂದು ಬಿಜೆಪಿಯ ಹಿರಿಯ ನಾಯಕ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮಂಗಳೂರಿಗೆ ಭೇಟಿ ನೀಡಲಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅವರು ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯವನ್ನು ತಿಳಿಸುತ್ತಾ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ, ಚುನಾವಣಾ ಪ್ರಚಾರದ  ಹಿನ್ನಲೆಯಲ್ಲಿ  ಆಗಮಿಸಲಿರುವುದಾಗಿ ತಿಳಿಸಿದರು. ತಾಕತ್ತಿದ್ದರೆ ಮೋದಿಯನ್ನು ರಾಜ್ಯಕ್ಕೆ ಕರೆತನ್ನಿ ಎಂದು ಕೆಲವರು ಈ ಹಿಂದೆ ಸವಾಲನ್ನು ಹಾಕಿದ್ದು ಇದಕ್ಕೆ ಉತ್ತರವಾಗಿ ಅವರು ಮೇ 2 ರಂದು ಮಂಗಳೂರಿಗೆ […]

ಬೋಳೂರು ನದಿ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಕೊಲೆ ಶಂಕೆ

Monday, April 29th, 2013
Unidentified body found

ಮಂಗಳೂರು : ಭಾನುವಾರ ಸಂಜೆ ಬೋಳೂರು ನದಿ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು , ಕೊಲೆಯ ಶಂಕೆ ವ್ಯಕ್ತವಾಗಿದೆ. ಸಂಜೆಯ ವೇಳೆ ಸ್ಥಳೀಯರು ನದಿ ಕಿನಾರೆಯಲ್ಲಿ ಅಡ್ಡಾಡುತ್ತಿದ್ದ ವೇಳೆ ನದಿ ನೀರಿನಲ್ಲಿ ಶವ ತೇಲುತ್ತಿರುವುದನ್ನು ಕಂಡು ಸ್ತಳೀಯರು ಕೂಡಲೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಪರಿಶೀಲಿಸಿ ೨೪ ಗಂಟೆಗಳ ಮೊದಲೆ ಕೊಲೆಗೈದಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಶವಾಗಾರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ ತಲೆ, ಹಣೆ, ತುಟಿ ಮತ್ತು […]

ವೋಟ್ ಬ್ಯಾಂಕ್ ರಾಜಕೀಯ 2020ರ ಅಭಿವೃದ್ಧಿಶೀಲ ಭಾರತದ ಕನಸಿಗೆ ಮಾರಕ : ಅರುಣ್ ಜೇಟ್ಲಿ

Monday, April 29th, 2013
Arun Jaitley

ಮಂಗಳೂರು : ಭಯೋತ್ಪಾದನೆ, ವೋಟ್ ಬ್ಯಾಂಕ್ ರಾಜಕೀಯ ಕಲಾಂ ರ ಕನಸಾದ  2020ರ ಅಭಿವೃದ್ಧಿಶೀಲ ಭಾರತದ ಕನಸಿಗೆ ಮಾರಕವಾಗಲಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಹೇಳಿದರು. ಅವರು ಸಿಟಿಜನ್ ಕೌನ್ಸಿಲ್ ವತಿಯಿಂದ ನಗರದ ಸಂಘ ನಿಕೇತನದಲ್ಲಿ  ಶನಿವಾರ ಆಯೋಜಿಸಲಾದ ‘ಭಾರತ-2020 ರ ಸಾಧ್ಯತೆ ಮತ್ತು ಸವಾಲುಗಳು ಎಂಬ  ವಿಚಾರದ ಕುರಿತು ಉಪನ್ಯಾಸ ನೀಡಿದರು. ಅವರು ಪ್ರಸ್ತುತ ಭಯೋತ್ಪಾದನೆ, ಪಾಕಿಸ್ತಾನದ ಗಡಿ ತಕರಾರು ಇನ್ನೊಂದೆಡೆ ನೆರೆ ರಾಷ್ಟ್ರ ಚೀನಾದ ಆಕ್ರಮಣಗಳು ಹಾಗು ಆರ್ಥಿಕ ಕುಸಿತ ದೇಶದ […]