ವೋಟ್ ಬ್ಯಾಂಕ್ ರಾಜಕೀಯ 2020ರ ಅಭಿವೃದ್ಧಿಶೀಲ ಭಾರತದ ಕನಸಿಗೆ ಮಾರಕ : ಅರುಣ್ ಜೇಟ್ಲಿ

Monday, April 29th, 2013
Arun Jaitley

ಮಂಗಳೂರು : ಭಯೋತ್ಪಾದನೆ, ವೋಟ್ ಬ್ಯಾಂಕ್ ರಾಜಕೀಯ ಕಲಾಂ ರ ಕನಸಾದ  2020ರ ಅಭಿವೃದ್ಧಿಶೀಲ ಭಾರತದ ಕನಸಿಗೆ ಮಾರಕವಾಗಲಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಹೇಳಿದರು. ಅವರು ಸಿಟಿಜನ್ ಕೌನ್ಸಿಲ್ ವತಿಯಿಂದ ನಗರದ ಸಂಘ ನಿಕೇತನದಲ್ಲಿ  ಶನಿವಾರ ಆಯೋಜಿಸಲಾದ ‘ಭಾರತ-2020 ರ ಸಾಧ್ಯತೆ ಮತ್ತು ಸವಾಲುಗಳು ಎಂಬ  ವಿಚಾರದ ಕುರಿತು ಉಪನ್ಯಾಸ ನೀಡಿದರು. ಅವರು ಪ್ರಸ್ತುತ ಭಯೋತ್ಪಾದನೆ, ಪಾಕಿಸ್ತಾನದ ಗಡಿ ತಕರಾರು ಇನ್ನೊಂದೆಡೆ ನೆರೆ ರಾಷ್ಟ್ರ ಚೀನಾದ ಆಕ್ರಮಣಗಳು ಹಾಗು ಆರ್ಥಿಕ ಕುಸಿತ ದೇಶದ […]

ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅಗತ್ಯತೆ ಇದೆ : ವರುಣ್‌ ಗಾಂಧಿ

Saturday, April 27th, 2013
Varun Gandhi

ಬಂಟ್ವಾಳ : ಕರ್ನಾಟಕ ಸ್ವಾಭಿಮಾನಿ, ಸಂಸ್ಕಾರಯುತವಾದ ಪ್ರದೆಶವಾಗಿದ್ದು, ಇಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅಗತ್ಯತೆ ಇದೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದ ವರುಣ್‌ ಗಾಂಧಿ ನುಡಿದರು. ಅವರು ಸುಕ್ರವಾರ ಬಿ.ಸಿ.ರೋಡಿನಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರ ಅಭ್ಯರ್ಥಿ ಉಳಿಪಾಡಿ ರಾಜೇಶ್‌ ನಾಯ್ಕ ಪರವಾಗಿ ಏರ್ಪಡಿಸಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಚುನಾವಣೆಯಲ್ಲಿ ಮತದಾರ ಹಾಕುವ ಪ್ರತಿಯೊಂದು ಮತ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಲಿದ್ದು, ರಾಜ್ಯದ ಮತದಾರರು ರಾಷ್ಟ್ರದ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತಚಲಾಯಿಸಬೇಕು ಎಂದರು. ಬಂಟ್ವಾಳ […]

ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಲಂಕಾ, ತಮಿಳುನಾಡು ನಿರಾಶ್ರಿತರ ರಕ್ಷಣೆ, ಆರೋಪಿಗಳ ಬಂಧನ

Saturday, April 27th, 2013
Human trafficking

ಮಂಗಳೂರು : ತಮಿಳುನಾಡು ಮತ್ತು ಶ್ರೀಲಂಕಾದ ನಿರಾಶ್ರಿತರನ್ನು ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ  ಕಳ್ಳಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಮಂಗಳೂರು ಕರಾವಳಿ ಕಾವಲು ಪೊಲೀಸ್, ಸಿಸಿಬಿ ಪೊಲೀಸ್ ಮತ್ತು  ಬೆಳ್ತಂಗಡಿ ಪೊಲೀಸ್ ರು ನಡೆಸಿದ  ಜಂಟಿ ಕಾರ್ಯಚರಣೆಯಲ್ಲಿ ಪತ್ತೆಹಚ್ಚಿ ನಿರಾಶ್ರಿತರನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡಿನ ತಿರುವೆಳ್ಳೂರು ನಿವಾಸಿಗಳಾದ ದೋರಿಂಗ್ಟನ್ (40), ನಿಕ್ಸನ್ ದಾರ್ವಿನ್, ಶ್ರೀಲಂಕಾ ಪ್ರಜೆ, ಚೆನ್ನೈಯಲ್ಲಿ ವಾಸವಿರುವ ತಾವರಸ (46), ರಾಮನಾಥಪುರಂ ನಿವಾಸಿಗಳಾದ ಕಣ್ಣನ್ (31) ಹಾಗೂ ಕಾರ್ತಿಕೇಯನ್(40) ಬಂಧಿತ ಆರೋಪಿಗಳಾಗಿದ್ದಾರೆ. ಇವರು ತಮಿಳುನಾಡಿನ ಭವಾನಿ ಸಾಗರ್ […]

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಮುಂದುವರಿಯಲಿದ್ದಾರೆ : ಸುಷ್ಮಾ ಸ್ವರಾಜ್

Friday, April 26th, 2013
Sushma Swaraj

ಮಂಗಳೂರು : ಕಾಂಗ್ರೆಸ್ ಪಕ್ಷ ಒಳಜಗಳದಿಂದಾಗಿ ಒಡೆದು ಚೂರು ಚೂರಾಗಿದೆ. ಆದರೆ ರಾಜ್ಯ ಬಿಜೆಪಿಯಲ್ಲಿ ಇದೀಗ ಬಿನ್ನಾಭಿಪ್ರಾಯಗಳು ಶಮನಗೊಂಡಿದೆ, ರಾಜ್ಯದಲ್ಲಿ ಕೆಜೆಪಿ, ಜೆಡಿಎಸ್ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳಿವೆಯೇ ಹೊರತು ಅವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿದರು. ಚುನಾವಣಾ ಕಾರ್ಯದ ನಿಮಿತ್ತ ಶುಕ್ರವಾರ ನಗರಕ್ಕಾಗಮಿಸಿದ ಅವರು, ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಪ್ರಾರಂಭದಲ್ಲಿ ರಾಜ್ಯ ಬಿಜೆಪಿ ಯಲ್ಲಿ ಅನೇಕ ಗೊಂದಲಗಳಿದ್ದು ಇಂದು ಅವೆಲ್ಲವೂ ಶಮನಗೊಂಡಿದ್ದು. ಮುಖ್ಯಮಂತ್ರಿ ಜಗದೀಶ್ […]

ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಪರವಾಗಿ ಮತಯಾಚಿಸಿದ ಚಿತ್ರನಟಿ ರಮ್ಯ

Friday, April 26th, 2013
Ramya

ಮಂಗಳೂರು : ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಕಾಂಗ್ರೆಸ್, ಬಿಜೆಪಿ ಪಕ್ಷದ ಹಿರಿಯ ನಾಯಕರು ಸೇರಿದಂತೆ ಚಿತ್ರ ನಟ ನಟಿಯರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಶುಕ್ರವಾರ ಕಾಂಗ್ರೆಸ್ ಪರ ನಗರದಲ್ಲಿ ಮತಯಾಚನೆ ಸಲುವಾಗಿ ಆಗಮಿಸಿದ ಕನ್ನಡ ಚಿತ್ರ ನಟಿ ರಮ್ಯ ಮಂಗಳೂರಿನ ತೊಕ್ಕೋಟು ಆಸುಪಾಸಿನಲ್ಲಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ಕೈಗೊಂಡರು. ಪ್ರಚಾರಕ್ಕು ಮುನ್ನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮ ಆಡಳಿತ ಹಾಗು […]

ಕಾರ್ಯಕರ್ತರು ಪಕ್ಷದ ತತ್ವ ಸಿದ್ದಾಂತಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು :ಜನಾರ್ಧನ ಪೂಜಾರಿ

Thursday, April 25th, 2013
Activities join Congress

ಮಂಗಳೂರು : ಬಿಜೆಪಿ, ಜೆಡಿಎಸ್, ಕೆಜೆಪಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ವಿವಿಧ ಪಕ್ಷದ ಕಾರ್ಯಕರ್ತರು ಗುರುವಾರ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ, ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ಜನಾರ್ಧನ ಪೂಜಾರಿಯವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದವಾಗಿ ಕಾರ್ಯನಿರ್ವಹಿಸುವುದರಿಂದ ಪಕ್ಷ ಬಲಗೊಳ್ಳುವುದಲ್ಲದೆ, ಬಿಜೆಪಿ ಸರ್ಕಾರದ  […]

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಅಬ್ದುಲ್ ಅಜೀಜ್ ನೇಮಕ

Thursday, April 25th, 2013
Abdul Aziz Kudroli

ಮಂಗಳೂರು : ಜೆಡಿಎಸ್ ನಿಂದ ಜಿಲ್ಲೆಯಲ್ಲಿ ಸಮರ್ಪಕ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದ್ದು ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ತಮ್ಮ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಬಿ. ಸದಾಶಿವ ತಿಳಿಸಿದರು. ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಘೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಾ, ಜಿಲ್ಲಾ ಜೆಡಿಎಸ್ ನಲ್ಲಿದ್ದ ವಿವಿಧ ಗೊಂದಲಗಳು ಶಮನಗೊಂಡಿದ್ದು, ಜಿಲ್ಲೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದರು. ಪಕ್ಷ ಅಧಿಕಾರಕ್ಕೆ ಬಂದರೆ ಮಂಗಳೂರು ನಗರದ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ, ಮಹಿಳೆಯರ ರಕ್ಷಣೆ ಮೊದಲಾದ ಸಮಸ್ಯೆಗಳನ್ನು […]

ವಿಧಾನ ಸಭಾ ಚುನಾವಣೆ ಜೆ.ಆರ್ ಲೋಬೊರನ್ನು ಬೆಂಬಲಿಸುವಂತೆ ಮನವಿ

Thursday, April 25th, 2013
Seetaram Shetty

ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ  ಜೆ.ಆರ್ ಲೋಬೊ ರವರನ್ನು  ಬೆಂಬಲಿಸುವಂತೆ ಬುಧವಾರ ಜಿಲ್ಲಾ ಕಾಂಗ್ರೆಸ್ ನ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಆಶ್ರಯದಲ್ಲಿ ಬುಧವಾರ ನಡೆದ ವಕೀಲರ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ಹಿರಿಯ ವಕೀಲರಾದ ಸೀತಾರಾಮ ಶೆಟ್ಟಿ, ಪುರುಷೋತ್ತಮ ಪೂಜಾರಿ, ವೆಲೆಂಟೈನ್‌ ಡಿ’ಸಿಲ್ವಾ, ನಾರಾಯಣ ಪೂಜಾರಿ, ಬಿ. ಇಬ್ರಾಹಿಂ, ಕಳ್ಳಿಗೆ ತಾರಾನಾಥ ಶೆಟ್ಟಿ, ಎಂ.ಪಿ. ಶೆಣೈ, ರಾಜೇಂದ್ರ ಕುಮಾರ್‌, ಎಂ.ಪಿ. ನೊರೋನ್ಹಾ ಉಪಸ್ಥಿತರಿದ್ದು, ಜೆ.ಆರ್‌. ಲೋಬೊ ಅವರಿಗೆ ಬೆಂಬಲ […]

ಬೆಳ್ತಂಗಡಿ : ಅಂತಾರಾಜ್ಯ ಕಳ್ಳರ ಬಂಧನ

Tuesday, April 23rd, 2013
Inter state thieves

ಬೆಳ್ತಂಗಡಿ : ಸೋಮವಾರ ಉಜಿರೆಯ ಚೆಕ್ ಪೋಸ್ಟ್ ಬಳಿ ಬೆಳ್ತಂಗಡಿ ಪೊಲೀಸರು ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕಮಲಾನಗರದ ಗೋಪಿ ಯಾನೆ ಗೋಪಿನಾಥ್(29), ಬೆಂಗಳೂರು ಕುರುಬರ ಹಳ್ಳಿಯ ಸೂರಿ ಯಾನೆ ಸುರೇಂದ್ರ(29), ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರು ನಿವಾಸಿ ಮಣಿ ಯಾನೆ ಮಣಿಕಂಠ (23)ಬಂಧಿತ ಆರೋಪಿಗಳು. ಬೆಳ್ತಂಗಡಿ ಎಸ್‌ಐ ಯೋಗೀಶ್ ಕುಮಾರ್ ಮತ್ತು ತಂಡ ಉಜಿರೆಯಲ್ಲಿ ಚುನಾವಣಾ ಸಂಬಂಧಿ ಕರ್ತವ್ಯದಲ್ಲಿದ್ದ ವೇಳೆ ಬೆಂಗಳೂರು ನೋಂದಣಿಯ ಕ್ವಾಲಿಸ್ ಕಾರ್‌ನಲ್ಲಿದ್ದವರನ್ನು ತಡೆದು ನಿಲ್ಲಿಸಿ ವಿಚಾರಿಸಿದ ಸಂದರ್ಭ ಆರೋಪಿಗಳು ಕಳ್ಳತನದ ಬಗ್ಗೆ […]

ಕುಂದಾಪುರ: ಟಿಪ್ಪರ್-ಒಮ್ನಿ ಡಿಕ್ಕಿ ಓರ್ವ ಸಾವು, ಮೂರು ಮಂದಿ ಗಂಭೀರ

Tuesday, April 23rd, 2013
Accident

ಕುಂದಾಪುರ: ಒಮ್ನಿ ಹಾಗು ಟಿಪ್ಪರ್ ನಡುವೆ ಸೊಮವಾರ ಕುಂದಾಪುರದ ಹಕ್ಲಾಡಿ ಸಮೀಪ ನಡೆದ ಅಪಘಾತದಲ್ಲಿ  ಒಬ್ಬಾತ ಮೃತಪಟ್ಟಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕಂದಾವರ ಉಳ್ಳೂರಿನ ರವೀಂದ್ರ ಪೂಜಾರಿ(28) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಆಲೂರಿನ ಸಸಿಹಿತ್ಲು ನಿವಾಸಿ ಶಂಕರ ಪೂಜಾರಿ(೪೧) ಎರಡು ದಿನಗಳ ಹಿಂದೆ ರಜೆ ನಿಮಿತ್ತ ಮುಂಬೈನಲ್ಲಿದ್ದ ತನ್ನ ಪತ್ನಿ ಸರೋಜ(೩೭)  ಹಾಗು ಪುತ್ರಿಯರಾದ ಸ್ವಪ್ನ(೧೧), ಸ್ವಯಂ(೫) ರೊಂದಿಗೆ ಊರಿಗೆ ಮರಳಿದ್ದರು. ಸೋಮವಾರ ಹೆಂಡತಿ ಸರೋಜಾ, ಮಕ್ಕಳಾದ ಸಪ್ನಾ(೧೧) ಮತ್ತು ಸ್ವಯಂ(೫) ಹಾಗು […]