ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ನ ಪ್ರಗತಿ ಪರಿಶೀಲನೆ ಸಭೆ

Friday, August 12th, 2011
KDP meeting/ಪ್ರಗತಿ ಪರಿಶೀಲನೆ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ನ ಪ್ರಗತಿ ಪರಿಶೀಲನೆ ಸಭೆಯು ಶೈಲಜಾ ಭಟ್‌ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ನಡೆಯಿತು. ಹತ್ತು ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಗ್ರಾಮೀಣ ಆರೋಗ್ಯ, ರಸ್ತೆ, ಶಿಕ್ಷಣ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲಾ ಪಂಚಾಯತ್‌ನ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅಧ್ಯಕ್ಷರು ಸಭೆಯಲ್ಲಿ ಹೇಳಿದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್‌. ವಿಜಯ್‌ಪ್ರಕಾಶ್‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ […]

ಕಾಪು ಕಡಲ ಕಿನಾರೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲು

Thursday, August 11th, 2011
Abhijit Singh, Janakish / ಅಭಿಜಿತ್‌ ಸಿಂಗ್‌, ಜಾನಾ ಕಿಶ್‌

ಮಂಗಳೂರು : ಮಣಿಪಾಲ ಎಂ.ಐ.ಟಿಯ ಇಬ್ಬರು ವಿದ್ಯಾರ್ಥಿಗಳು ಅಲೆಗಳ ಸೆಳೆತಕ್ಕೆ ಸಮುದ್ರಪಾಲದ ಘಟನೆ ಬುಧವಾರ ಸಂಜೆ ಕಾಪು ಕಡಲ ಕಿನಾರೆಯಲ್ಲಿ ಸಂಭವಿಸಿದೆ. ನಾಲ್ವರು ವಿದೇಶಿಯರು ಮತ್ತು ಓರ್ವ ಭಾರತೀಯ ಸೇರಿದಂತೆ ಐದು ಮಂದಿ ವಿದ್ಯಾರ್ಥಿಗಳೂ ಕಾಪು ಕಡಲ ಕಿನಾರೆಗೆ ಆಗಮಿಸಿದ್ದರು. ಲೈಟ್‌ ಹೌಸ್‌ನ ಮುಂಭಾಗದಲ್ಲಿ ಕಡಲು ಸಂಪೂರ್ಣವಾಗಿ ವಿಸ್ತರಿಸಿಕೊಂಡಿರುವುದರಿಂದ ಐವರು ಕೂಡಾ ಕಡಲಿಗೆ ಇಳಿದಿದ್ದರು. ಆದರೆ ಸಮುದ್ರದ ಅಲೆಗಳ ರಭಸಕ್ಕೆ ಅಂಜಿದ ಮೂವರು ದಡದಲ್ಲೇ ಕುಳಿತರೆ, ಅಭಿಜಿತ್‌ ಸಿಂಗ್‌ (18)ಮತ್ತು ಜಾನಾ ಕಿಶ್‌ (೨೧ ಈಜುವ ಉದ್ದೇಶದಿಂದ […]

‘ಜಲಕೃಷಿ ಮತ್ತು ಜೈವಿಕ ಭದ್ರತೆ’ ಕಾರ್ಯಾಗಾರ ತರಬೇತಿ ಉದ್ಘಾಟನೆ.

Thursday, August 11th, 2011
College of Fisheries Mangalore/ ಮಂಗಳೂರು ಮೀನುಗಾರಿಕಾ ಕಾಲೇಜು

ಮಂಗಳೂರು : ಕರ್ನಾಟಕ ವೆಟರ್ನರಿ, ಎನಿಮಲ್‌ ಯಂಡ್ ಫಿಶರೀಸ್‌ ಸೈನ್ಸ್‌ ಯುನಿವರ್ಸಿಟಿ ಬೀದರ್‌ ಮತ್ತು ಮಂಗಳೂರು ಮೀನುಗಾರಿಕಾ ಕಾಲೇಜಿನ ಜಂಟಿ ಆಶ್ರಯದಲ್ಲಿ ಮೀನುಗಾರಿಕಾ ಕಾಲೇಜು ಆವರಣದಲ್ಲಿ ಬುಧವಾರ ಆರಂಭಗೊಂಡ ‘ಜಲಕೃಷಿ ಮತ್ತು ಜೈವಿಕ ಭದ್ರತೆ’ ವಿಷಯದ ಕುರಿತ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು ವೆಟರ್ನರಿ ಕಾಲೇಜಿನ ಡೀನ್‌ ಡಾ| ಎಸ್‌. ಯತಿರಾಜ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮೀನುಗಳಿಗೆ ತಗಲುವ ಕಾಯಿಲೆಗಳನ್ನು ಗುರುತಿಸಿ ಪ್ರಕಟಿಸಲು ಸಾಧ್ಯವಾಗುವಂತೆ ವ್ಯವಸ್ಥೆ ರೂಪಿಸಲು ಸರಕಾರದ ಮಟ್ಟದಲ್ಲಿ ಸ್ಪಷ್ಟವಾದ ನೀತಿ ರೂಪಿಸುವುದು ಅಗತ್ಯ ಎಂದು […]

ಬೆಲೆ ಏರಿಕೆಯನ್ನು ವಿರೋಧಿಸಿ ಜನವಾದಿ ಮಹಿಳಾ ಸಂಘಟನೆಯ ಪ್ರತಿಭಟನೆ

Thursday, August 11th, 2011
Janavadi Mahila Samithi /ಜನವಾದಿ ಮಹಿಳಾ ಸಂಘಟನೆ

ಮಂಗಳೂರು : ಜನವಾದಿ ಮಹಿಳಾ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಿಳೆಯರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಬೆಲೆ ಏರಿಕೆಯನ್ನು ವಿರೋಧಿಸಿ ನಡೆಯುತ್ತಿರುವ ಚಳವಳಿಯ ಅಂಗವಾಗಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು. ಜೆ.ಎಂ.ಎಸ್‌. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಲಕ್ಷ್ಮೀ, ಮಾತನಾಡಿ ಕೆ.ಜಿ.ಗೆ 2 ರೂ.ಗಳಂತೆ 35 ಕೆ.ಜಿ. ಅಕ್ಕಿ ವಿತರಿಸುವಂತೆ ಆಗ್ರಹಿಸಿದರು, ದೇಶದ ಶೇ. 77ರಷ್ಟು ಜನತೆಯ ತಲಾ ಆದಾಯ ಕೇವಲ 20 ರೂ. ಆಗಿದ್ದು, ದಿನದಿಂದ ದಿನಕ್ಕೆ ಜನತೆಯ ಕೊಳ್ಳುವ ಶಕ್ತಿ […]

ಡ್ರಗ್ಸ್‌ ಮಾಫಿಯಾ ಹತ್ತಿಕ್ಕಲು ಪೊಲೀಸ್‌ ಆಯುಕ್ತರಿಗೆ ಹಿಂದೂ ಸಂಘಟನೆಗಳ ಮನವಿ.

Wednesday, August 10th, 2011
VHP-Bajrangadal/ವಿಶ್ವ ಹಿಂದು ಪರಿಷದ್‌ ಹಾಗೂ ಬಜರಂಗದಳ

ಮಂಗಳೂರು : ವಿಶ್ವಹಿಂದು ಪರಿಷದ್‌ ಹಾಗೂ ಬಜರಂಗದಳ ಮಂಗಳವಾರ ದ.ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್ಸ್‌ ಮಾಫಿಯಾವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿ ಮಂಗಳೂರು ಪೊಲೀಸ್‌ ಆಯುಕ್ತರಿಗೆ ಮನವಿ ನೀಡಿತು. . ಇತ್ತೀಚೆಗೆ ಕಾಲೇಜು ವಿದ್ಯಾರ್ಥಿನಿಯೋರ್ವಳು ಇದಕ್ಕೆ ಬಲಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಡ್ರಗ್ಸ್‌ ಮಾಫಿಯಾದಲ್ಲಿ ಕಾಂಗ್ರೆಸ್‌ ಮುಖಂಡ ಅಶ್ರಫ್‌ ಅವರ ಪುತ್ರ ಆರಫನ ಕೈವಾಡವಿದ್ದು, ಆತನನ್ನು ಹಾಗೂ ಆತನ ಸ್ನೇಹಿತರನ್ನು ಬಂಧಿಸಿ ಡ್ರಗ್ಸ್‌ ಮಾಫಿಯಾವನ್ನು ಹತ್ತಿಕ್ಕಬೇಕು, ಡ್ರಗ್ಸ್‌ ಚಟಕ್ಕೆ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು […]

ಹತ್ತು ಮಂದಿ ಸಾಧಕರಿಗೆ 2010-11ನೇ ಸಾಲಿನ ಸಾಧನಾ ಪ್ರಶಸ್ತಿ

Wednesday, August 10th, 2011
Sadhana Award/ಸಾಧನಾ ಪ್ರಶಸ್ತಿ

ಮಂಗಳೂರು : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿವರ್ಷ ನೀಡುವ ಸಾಧನಾ ಪ್ರಶಸ್ತಿ ಸಮಾರಂಭವು ಆ. 28 ರಂದು ಸಂಜೆ 4 ಗಂಟೆಗೆ ಮಂಗಳೂರು ಪುರಭವನದಲ್ಲಿ ಜರಗಲಿದೆ. ಈ ಬಾರಿ ಒಂಭತ್ತು ಮಂದಿ ಹಿರಿಯ ಸಾಧಕರನ್ನು ಮತ್ತು ಒಬ್ಬ ಯುವ ಸಾಧಕರನ್ನು ಸಾಧನಾ ಯುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ಚಲನಚಿತ್ರ, ಕಿರುತೆರೆ ಕ್ಷೇತ್ರದಲ್ಲಿ ಹಿರಿಯ ನಟ ಅನಂತವೇಲು, ಹಿರಿಯ ಚಲನಚಿತ್ರ ನಟಿ ರಾಧಾ ರಾಮಚಂದ್ರ ನೃತ್ಯ ಕೇಂದ್ರದಲ್ಲಿ ಹಿರಿಯ ನೃತ್ಯಗುರು ಮುರಳೀಧರ್‌ ರಾವ್‌, ತುಳು ರಂಗಭೂಮಿ […]

ರಸ್ತೆ ಅಫಘಾತ ಮಂಜೇಶ್ವರ ಆನೆಕಲ್ಲು ನಿವಾಸಿ ಸಾವು

Tuesday, August 9th, 2011
Car Accident/ ರಸ್ತೆ ಅಫಘಾತ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 48 ರ ನೆಲ್ಯಾಡಿ ಸಮೀಪದ ಗೋಳಿತ್ತೂಟ್ಟು ಎಂಬಲ್ಲಿ ರಿಟ್ಜ್ ಕಾರು ಮತ್ತು ಟಿಪ್ಪರ್‌ ಡಿಕ್ಕಿ ಹೊಡೆದು ಓರ್ವ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲೇ ಮೃತ ಪಟ್ಟ ಘಟನೆ ನಿನ್ನೆ ನಡೆದಿದೆ. ಮೃತರು ಮಂಜೇಶ್ವರ ಆನೆಕಲ್ಲು ನಿವಾಸಿ ಮಮ್ಮದರ ಪುತ್ರ ಅಬ್ದುಲ್‌ ರಝಾಕ್‌(36ವ).ಇವರು ಈಗ 2 ವರ್ಷಗಳಿಂದ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯಲ್ಲಿ ಬಾಡಿಗೆಗೆ ವಾಸವಿದ್ದು ಬ್ರೋಕರ್‌ ಕೆಲಸ ಮಾಡುತ್ತಿದ್ದರು.ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ಟಿಪ್ಪರ್‌ ಜಲ್ಲಿ ಇಳಿಸಲು ಹಿಂದಕ್ಕೆ ಚಲಾಸುತ್ತಿದ್ದಾಗ […]

ಕಾಯಿಸಿದ ಮೀನು ತಿಂದು ಪಿಯುಸಿ ವಿದ್ಯಾರ್ಥಿನಿ ಸಾವು

Monday, August 8th, 2011
Fish Fry/ ಕಾಯಿಸಿದ ಮೀನು

ಮಂಗಳೂರು : ಮಂಗಳೂರು ಹೊರವಲಯ ಪಚ್ಚನಾಡಿ ದೇವಿ ನಗರದಲ್ಲಿ ಕಾಯಿಸಿದ ಮೀನು ತಿಂದು ಯುವತಿಯೋರ್ವಳು ಅಸ್ವಸ್ಥಳಾಗಿ ಬಳಿಕ ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಪಚ್ಚನಾಡಿ ದೇವಿ ನಗರದ ಮಂಜುನಾಥ ಅವರ ಪುತ್ರಿ ಸುಶ್ಮಿತಾ (17) ಸಾವನ್ನಪ್ಪಿದ ಯುವತಿ. ಈಕೆ‌ ವಾಮಂಜೂರಿನ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಶನಿವಾರ ರಾತ್ರಿ ಸುಶ್ಮಿತಾ ಅವರು ಮನೆಯಲ್ಲಿ ರಿಫೈನ್‌ ಆಯಿಲ್‌ನಲ್ಲಿ ಮೀನು ಕಾಯಿಸಿದ್ದರು. ಅದರಲ್ಲಿ ಎರಡು ಮೀನುಗಳನ್ನು ಆಕೆ ತಿಂದಿದ್ದು, ಕೆಲವೇ ಹೊತ್ತಿನಲ್ಲಿ ಆಕೆಗೆ ಸ್ಮೃತಿ ತಪ್ಪಿತ್ತು. ಕೂಡಲೇ ಆಕೆಯನ್ನು ಸಮೀಪದ […]

ಕೊಣಾಜೆ ಬಳಿ ಬಾಲಕನನ್ನು ಕಟ್ಟಿ ಹಾಕಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ

Monday, August 8th, 2011
House theft/ ಮನೆ ದರೋಡೆ

ಮಂಗಳೂರು : ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ಪಜೀರು ಪೆರ್ನದ ಮನೆಯೊಂದರಿಂದ ಭಾನುವಾರ ಮುಂಜಾನೆ ಸುಮಾರು 3 ಲಕ್ಷ ರೂ. ಮೌಲ್ಯದ 15 ಪವನ್‌ ಚಿನ್ನಾಭರಣ ಕಳವು ಮಾಡಲಾಗಿದೆ. ಕಳ್ಳರು ಮನೆಯಲ್ಲಿ ಇಬ್ಬರೇ ಇರುವುದನ್ನು ಗಮನಿಸಿ ಕಳ್ಳತನದ ಕೃತ್ಯ ನಡೆಸಿದ್ದಾರೆ . ಮನೆಯ ಮಾಲೀಕ ಡೆನಿಸ್‌ ಅಪೋಸ್‌ ವಿದೇಶದಲ್ಲಿದ್ದು ಫಜೀರು ಪೆರ್ನದ ಅವರ ಮನೆಯಲ್ಲಿ ಡೆನಿಸ್‌ ಅಪೋಸ್‌ರವರ ಹತ್ತು ವರ್ಷದ ಮಗ ಮತ್ತು ಅತ್ತೆ ಮಾತ್ರ ಮನೆಯಲಿದ್ದರು. ಅವರ ಮನೆಯಲ್ಲಿ ಪತ್ನಿ ಡೊಡ್ಡಿ, ಪುತ್ರ ಡೆನ್ಮರ್‌,ಅತ್ತೆ ರೊಸಾಲಿನ್‌ […]

ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆ : ನಾಗತಿಹಳ್ಳಿ

Sunday, August 7th, 2011
Mumbai Kannada Sammelana/ಅಖೀಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ

ಮುಂಬಯಿ: ಮುಂಬಯಿ ಕನ್ನಡ ಸಂಘ ಹಾಗೂ ಹೃದಯವಾಹಿನಿ ಕನ್ನಡ ಪತ್ರಿಕೆ ಮಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ಆ. 6 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ವಿ. ಕೃ. ಗೋಕಾಕ್‌ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 2011 ನೇ ಸಾಲಿನ 8 ನೇ ಅಖೀಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಶನಿವಾರ ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಸಮ್ಮೇಳನಾಧ್ಯಕ್ಷರೂ ಆಗಿದ್ದ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ ಎರಡು ಸಾವಿರಕ್ಕೂ ಅಧಿಕ ಕಾಲದ ಇತಿಹಾಸವನ್ನು […]