ನಗರದ ವೆಲೆನ್ಸಿಯಾ ಬಳಿ ದುಷ್ಕರ್ಮಿಗಳಿಂದ ಭೀಕರ ಹತ್ಯೆ

Monday, April 8th, 2013
Murdered at Valencia

ಮಂಗಳೂರು : ಬಾನುವಾರ ರಾತ್ರಿ ನಗರದ ಕಂಪನಿಯೊಂದರ ಮ್ಯಾನೇಜರ್ ಒಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವೆಲೆನ್ಸಿಯ ಬಳಿಯ ಮಂಗಳಾ ಬಾರ್ ಸಮೀಪ ನಡೆದಿದೆ. ಶ್ರೀ ಆದಿನಾಥೇಶ್ವರ ರೋಡ್ ಲೈನ್ಸ್ (ಟ್ರಾನ್ಸ್‌ಪೋರ್ಟ್ ) ಸಂಸ್ಥೆಯ ಮ್ಯಾನೇಜರ್ ಪ್ರಶಾಂತ್ ಯಾನೆ ಪಚ್ಚು(30) ಹತ್ಯೆಯಾದವರು. ಪ್ರಶಾಂತ್ ಅವಿವಾಹಿತರಾಗಿದ್ದು, ಮರಕಡ ಕುಂಜತ್ತಬೈಲ್ ನ ನಿವಾಸಿಯಾಗಿರುವ ಸುಂದರ ಎಂಬವರ ಪುತ್ರರಾಗಿದ್ದಾರೆ. ಬಾನುವಾರ ರಾತ್ರಿ ಸುಮಾರು 11.45 ರ ವೇಳೆ ವೆಲೆನ್ಸಿಯಾದ ಮಂಗಳಾ ಬಾರ್ ಬಳಿ ಸುಮಾರು 7-8 ಮಂದಿಯ ತಂಡ […]

ಕರ್ತವ್ಯ ನಿರತ ಪೊಲೀಸ್ ಪೇದೆಗೆ ಲಾರಿ ಡಿಕ್ಕಿ, ಮೃತಪಟ್ಟ ಪೊಲೀಸ್ ಪೇದೆ

Friday, April 5th, 2013
Mulky mishap constabel kill

ಮಂಗಳೂರು : ಕರ್ತವ್ಯ ನಿರತ ಪೊಲೀಸ್ ಪೇದೆಗೆ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಪೊಲೀಸ್ ಪೇದೆ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ಮುಲ್ಕಿ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ. ದಾವಣಗೆರೆ ಹೊನ್ನಾಳಿ ಮೂಲದ ರಾಜಪ್ಪ(27) ಮೃತ ಪೊಲೀಸ್ ಪೇದೆ. ಕರಾವಳಿ ಭದ್ರತಾ ಪಡೆಯ ಸಾಗರ ಕವಚ ಕಾರ್ಯಾಚರಣೆಯ ನಿಮಿತ್ತ ಗುರುವಾರ ಮಧ್ಯರಾತ್ರಿ ಮುಲ್ಕಿಯ ಬಪ್ಪನಾಡು ಚೆಕ್‌ಪೋಸ್ಟ್‌ನಲ್ಲಿ ರಾಜಪ್ಪ ಹಾಗೂ ಇತರ ಇಬ್ಬರು ಸಿಬ್ಬಂದಿಗಳಾದ ಪ್ರಮೋದ್ ಮತ್ತು ಸೀತಾರಾಮ ಎಂಬ ಪೊಲೀಸ್ ಪೇದೆಗಳು ತಪಾಸಣಾ ಕಾರ್ಯದಲ್ಲಿ ತೊಡಗಿದ್ದರು. ಮುಂಜಾನೆ 3.30ರ ಸುಮಾರಿಗೆ ಉಡುಪಿಯಿಂದ […]

ಪ್ರವೀಣನ ಕ್ಷಮಾದಾನ ಅರ್ಜಿ ತಿರಸ್ಕೃತ, ಗಲ್ಲು ಶಿಕ್ಷೆ ಖಾಯಂ

Friday, April 5th, 2013
Praveen vaamanjur

ಮಂಗಳೂರು : ಒಂದೇ ಕುಟುಂಬದ ನಾಲ್ವರನ್ನು ಸಾಮೂಹಿಕ ಹತ್ಯೆ ಮಾಡಿದ್ದ ವಾಮಂಜೂರು ಪ್ರವೀಣನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕೃತಗೊಳಿಸಿದ್ದು ಈ ಮೂಲಕ ಸುಪ್ರೀಂಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆ  ಖಾಯಂಗೊಂಡಿದೆ. ಆರೋಪಿ ಪ್ರವೀಣ 1993 ರ ಫೆಬ್ರವರಿ 23 ರಂದು ಹಣಕ್ಕಾಗಿ ತನ್ನ ಅತ್ತೆ ಅಪ್ಪಿ ಶೇರಿಗಾರ್ತಿ, ಆಕೆಯ ಮಗ ಗೋವಿಂದ, ಮಗಳು ಶಕುಂತಳಾ ಹಾಗೂ ಶಕುಂತಳಾರ ಪುತ್ರಿ ದೀಪಿಕಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಈತನಿಗೆ ಮಂಗಳೂರಿನ ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ನಂತರ […]

ಆಸ್ತಿ ವಿವಾದ : ಚಿಕ್ಕಪ್ಪನಿಂದ ಕೊಲೆಯಾದ ಯುವಕ

Wednesday, April 3rd, 2013
Sullia Youth killed

ಸುಳ್ಯ : ಆಲೆಟ್ಟಿ ಗ್ರಾಮದ ಬೊಳ್ಳೂರು ಎಂಬಲ್ಲಿ ಆಸ್ತಿ ವಿವಾದದಿಂದಾಗಿ ಯುವಕನೋರ್ವ ಆತನ ಚಿಕ್ಕಪ್ಪನಿಂದಲೇ ಕೊಲೆಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೊಳ್ಳೂರು ಬೆಳ್ಳಂಪಾರೆಯ ಅಪ್ಪಯ್ಯ ನಾಯ್ಕ ಎಂಬವರ ಪುತ್ರ ಸದಾಶಿವ ನಾಯ್ಕ(೨೬) ಮೃತ ವ್ಯಕ್ತಿ ಯಾಗಿದ್ದು, ಈತ  ಹಾಗು ಈತನ ಚಿಕ್ಕಪ್ಪ ನಾರಾಯಣ ನಾಯ್ಕ ಈ ಇಬ್ಬರ ಕುಟುಂಬದ ನಡುವೆ ಆಸ್ತಿ ವಿಷಯವಾಗಿ ಆಗಾಗ್ಗೆ  ಕಲಹ ನಡೆಯುತ್ತಿದ್ದು ನಿನ್ನೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆ ಆರೋಪಿನಾರಾಯಣ ನಾಯ್ಕ ಸುಳ್ಯ ರೋಟರಿ ಶಾಲೆಯಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ […]

ಬಿಎಂಎಸ್ ಕಾರ್ಯಕರ್ತ ಜ್ಯೋತಿಷ್ ಕೊಲೆಯತ್ನ, ಪ್ರಮುಖ ಆರೋಪಿ ಸೈನುಲ್‌ ಅಬೀದ್‌ ನ ಬಂಧನ

Monday, March 18th, 2013
KS Sainul Abid

ಕಾಸರಗೋಡು : ಬಿಎಂಎಸ್ ಕಾರ್ಯಕರ್ತ ಅಣಂಗೂರು ಜೆಪಿ ಕಾಲನಿಯ ಜ್ಯೋತಿಷ್(26) ರ ಕೊಲೆಗೆ ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ತಾಯಲಂಗಾಡಿಯ ಸಿ.ಎ.ಪಿ.ಹೌಸ್‌ನ ಅಬಿ ಯಾನೆ ಕೆ.ಎಸ್‌.ಸೈನುಲ್‌ ಅಬೀದ್‌(22) ನನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಶನಿವಾರ ಬಂಧಿಸಿದ್ದಾರೆ. ೨೦೧೩  ಫೆಬ್ರವರಿ 5,  ರ ರಾತ್ರಿ ತನ್ನ ವಿವಾಹ ಆಮಂತ್ರಣ ಪತ್ರಿಕೆಯನ್ನು ಹಂಚಿ ವಾಪಸ್ಸಾಗುತ್ತಿದ್ದ ಜ್ಯೋತಿಷ್ ಅವರನ್ನು ಆರು ಮಂದಿಯ ತಂಡ  ಅಡ್ಡಗಟ್ಟಿ ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ […]

ಬೆಳ್ತಂಗಡಿ : ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ ನಾಲ್ವರ ಬಂಧನ

Wednesday, March 13th, 2013
Belthangady

ಬೆಳ್ತಂಗಡಿ :14 ವರ್ಷದ ಬಾಲಕಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಆರೋಪ ಮೇಲೆ ನಾಲ್ವರನ್ನು ಬೆಳ್ತಂಗಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಿತ್ತಬಾಗಿಲು ಗ್ರಾಮದ ಫಯಾಜ್‌ (19), ನಾಸಿರ್‌ (18), ನೌಶಾದ್‌ (19), ಭಂಡಾರಿಕೋಡಿ ಮನೆ ಶಾಕೀರ್‌ (19)  ಬಂಧಿತ ಆರೋಪಿಗಳು. ಮಾರ್ಚ್ 9ರಂದು ಮನೆಗೆ ಒಂಟಿಯಾಗಿ ಬರುತ್ತಿದ್ದ ಬಂಡಾರಿಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಪಾದೆಗುತ್ತು ಎಂಬಲ್ಲಿ ಈ ನಾಲ್ವರು ಯುವಕರು ನೇತ್ರಾವತಿ ನದಿ ತಟದಲ್ಲಿ ಅಡ್ಡಗಟ್ಟಿ ತಮ್ಮ ಜತೆ ಬರುವಂತೆ ಒತ್ತಾಯಿಸಿದ್ದು […]

ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೈಸೂರಿನ ಮೂವರು ಆರೋಪಿಗಳ ಬಂಧನ

Wednesday, March 13th, 2013
Ganja seize at Attavar

ಮಂಗಳೂರು : ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೈಸೂರಿನ ಮೂವರು ಆರೋಪಿಗಳನ್ನು ಕರಾವಳಿ ಕಾವಲು ಪಡೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳು  ಮೈಸೂರಿನಿಂದ ಉಡುಪಿಗೆ ಮಾರಾಟಕ್ಕಾಗಿ ಅಮಲು ಪದಾರ್ಥ ಗಾಂಜವನ್ನು ಸಾಗಿಸುತ್ತಿದ್ದುದಾಗಿ ತಿಳಿದುಬಂದಿದ್ದು,  ಮಂಗಳೂರಿನ ಅತ್ತಾವರ ದ ಉಪ್ಪಿನ ದಕ್ಕೆಯಲ್ಲಿ ಆರೋಪಿಗಳು ಇರುವ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ. ಮೈಸೂರಿನಸೈಯ್ಯದ್‌ ಅನೀಸ್‌ ಅಹ್ಮದ್‌(53), ಮನ್ಸೂರ್‌ ಅಹ್ಮದ್‌(28) ಹಾಗೂ ಚಿಕ್ಕಮಗಳೂರಿನ ಅನ್ವರ್‌ ಪಾಷಾ (45) ಆರೋಪಿಗಳಾಗಿದ್ದು, ಮೂರು ಟ್ರಾವೆಲ್‌ ಬ್ಯಾಗುಗಳಲ್ಲಿ ಸುಮಾರು 8,65,000 ಬೆಲೆಯ […]

ರೇಪ್ ಎಂಡ್ ಮರ್ಡರ್: ಕಾಮುಕನ ನ್ಯೂ ವರ್ಶನ್ !

Wednesday, March 6th, 2013
Sowmy murder case

ಮಂಗಳೂರು : ಒಂದು ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ ನಂತರ ಅವಳನ್ನು ಕೊಲೆ ಮಾಡುವ ಮೂಲಕ ನಾಗರೀಕತೆಯ ಮುಖಕ್ಕೆ ಮಸಿ ಬಳಿದ ಘಟನೆ ತೀರಾ ಇತ್ತೀಚೆಗೆ ಕರಾವಳಿಯಲ್ಲಿ ನಡೆದಿದೆ. ಅತ್ಯಾಚಾರದಿಂದ ನಲುಗಿದ ಹುಡುಗಿಯನ್ನು ಕೊಲೆ ಮಾಡಿದ ನಂತರ ಕಾಮುಕ ಬಾಯ್ಬಿಟ್ಟ ಮಾತು ತೀರಾ ಅಸಹ್ಯಕ್ಕೆ ಗುರಿ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿದಿಲ್ಲ. ಅಷ್ಟಕ್ಕೂ ಕಾಮುಕನ ವರ್ಶನ್ ಏನಿತ್ತು ಅಂತೀರಾ.. ಬನ್ನಿ ನೀವೇ ಖುದ್ದಾಗಿ ಕೇಳಿ ಬಿಡಿ. ಬಂಟ್ವಾಳ: `ಸೌಮ್ಯಳನ್ನು ಸಾಯಿಸಿದ್ದು ನಿಜ. ಆದರೆ ನನ್ನದು ಕೊಲೆ […]

ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

Tuesday, March 5th, 2013
ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

ಮಂಗಳೂರು : ಸೋಮವಾರ ರಾತ್ರಿ ನಗರದ ಪಂಪ್ ವೆಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಾಡೂರು ನಜೀರ್  ಬಂಧಿತ ಆರೋಪಿ. ನಗರದಲ್ಲಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಈತ ಸೋಮವಾರ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವೀಶ್ ನಾಯ್ಕ್ ಮತ್ತು ಎಸ್.ಐ ಸುಧಾಕರ್ ಕೈಗೆ ಸಿಕ್ಕಿ ಬಿದ್ದಿದಾನೆ. ಈತನಿಂದ 1.1 ಕೆ.ಜಿ. ಗಾಂಜಾ, 12000ರೂ ಹಾಗೂ ಆಲ್ಟೋ ಕಾರನ್ನು […]

ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಮೇಲೆ ಲೋಕಾಯುಕ್ತ ದಾಳಿ ಮೂರು ಅಧಿಕಾರಿಗಳ ಬಂಧನ

Monday, March 4th, 2013
Food & Civil Supplies department

ಮಂಗಳೂರು : ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿಯ ಜಿಲ್ಲಾ ವ್ಯವಸ್ಥಾಪಕ ಮುರಳೀಧರ ರಾವ್ ಸೇರಿದಂತೆ ಮೂರು ಮಂದಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ಜಿಲ್ಲಾ ವ್ಯವಸ್ಥಾಪಕ ಕಚೇರಿಯಲ್ಲಿ ನಡೆಯಿತು. ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿಯ ಮೇಲೆ  ಶನಿವಾರ ಸಂಜೆ ಸುಮಾರು 6.30 ಕ್ಕೆ ದಾಳಿ ನಡೆಸಿ ರಾತ್ರಿ 10 ಗಂಟೆಯವರೆಗೆ ವಿವಿಧ ದಾಖಲೆಗಳ ಪತಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸರು ಜಿಲ್ಲಾ […]