ಉಡುಪಿ ಜಿಲ್ಲೆಯ ಡಾ.ಹರೀಶ್ ಹಂದೆ ಸೇರಿದಂತೆ ಇಬ್ಬರು ಭಾರತೀಯರಿಗೆ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ

Thursday, July 28th, 2011
Harish-Hande-Neelima-Misra

ಬೆಂಗಳೂರು : ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಈ ಬಾರಿ ಇಬ್ಬರು ಭಾರತೀಯರಿಗೆ ಸಿಕ್ಕಿದೆ. ಉಡುಪಿ ಜಿಲ್ಲೆಯ ಡಾ.ಹರೀಶ್ ಹಂದೆ ಹಾಗೂ ಮಹಾರಾಷ್ಟ್ರದ ನೀಲಿಮಾ ಮಿಶ್ರಾ ಈ ಭಾರಿ ಪಡೆದ ಭಾರತೀಯರು. ಒಟ್ಟು ಆರು ಮಂದಿಗೆ ಈ ಪ್ರಶಸ್ತಿ ನೀಡಲಾಗಿದೆ. ಡಾ.ಹರೀಶ್ ಹಂದೆ ಮೂಲತ: ಉಡುಪಿ ಜಿಲ್ಲೆಯ ಕೋಟದ ಹಂದೆ ಕುಟುಂಬಕ್ಕೆ ಸೇರಿದವರು. ಸೌರ ವಿದ್ಯುತನ್ನು ಕರ್ನಾಟಕ ರಾಜ್ಯದ ಹಳ್ಳಿಹಳ್ಳಿಗೂ ಕೊಂಡೊಯ್ದು, ಸುಮಾರು ಒಂದು ಲಕ್ಷ ಬಡ ಕುಟುಂಬಗಳ ಗುಡಿಸಲುಗಳಲ್ಲಿ ಸೌರ ಶಕ್ತಿಯ ಮೂಲಕ ಬೆಳಕನ್ನು ನೀಡಿದ್ದಾರೆ. […]

ಪಣಂಬೂರು ಮತ್ತು ತಣ್ಣೀರುಬಾವಿ ಕಡಲತೀರದಲ್ಲಿ ಪ್ಲಾಸ್ಟಿಕ್ ನಿಷೇಧ

Thursday, July 28th, 2011
Plastic Ban by MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಣಂಬೂರು ಮತ್ತು ತಣ್ಣೀರುಬಾವಿ ಕಡಲ ತೀರದ ಪ್ರದೇಶಗಳಲ್ಲಿ ಬಳಸಿ ಎಸೆಯಲ್ಪಟ್ಟ ಪ್ಲಾಸ್ಟಿಕ್ ವಸ್ತುಗಳು ಮತ್ತು ತ್ಯಾಜ್ಯಗಳು ಕಡಲ ಕಿನಾರೆಯ ಪರಿಸರಕ್ಕೆ ಹಾನಿ ಮಾಡುತ್ತಿದ್ದು,ಇದನ್ನು ಮನಗಂಡ ಮಹಾನಗರ ಪಾಲಿಕೆ ಆಯುಕ್ತರು ಈ ವಲಯವನ್ನು ಪ್ಲಾಸ್ಟಿಕ್ ನಿಷೇಧ ಪ್ರದೇಶವೆಂದು ಘೋಷಿಸಿ ದಿನಾಂಕ 15-7-11 ರಂದು ಆದೇಶ ಹೊರಡಿಸಿದ್ದಾರೆ.ನಿಷೇಧಿತ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಯಾವುದೇ ರೀತಿಯ ಪ್ಲಾಸ್ಟಿಕ್ ಕವರುಗಳು,ಲೋಟಗಳು,ತಟ್ಟೆಗಳನ್ನು ಕ್ಯಾರಿ ಬ್ಯಾಗ್ಗಳ ಉಪಯೋಗ,ದಾಸ್ತಾನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಪ್ರವೇಶ ದ್ವಾರದಲ್ಲಿ ತನಿಖಾ […]

ಕರ್ನಾಟಕದ ನೂತನ ಲೋಕಾಯುಕ್ತರಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ನೇಮಕ

Tuesday, July 26th, 2011
Justice Shivraj V. Patil, ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್

ಬೆಂಗಳೂರು: ಕರ್ನಾಟಕದ ನೂತನ ಲೋಕಾಯುಕ್ತರಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಮಂಗಳವಾರ ನೇಮಕಗೊಂಡಿದ್ದಾರೆ. 11.1.2005ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ನಿವೃತ್ತರಾದ ನ್ಯಾ. ಪಾಟೀಲ್ ಅವರು 1962ರಲ್ಲಿ ಗುಲ್ಬರ್ಗಾದಲ್ಲಿ ವಕೀಲಿ ವೃತ್ತಿ ಆರಂಭಿಸಿ, 1979 ರವರೆಗೂ ಅಲ್ಲಿ ನ್ಯಾಯವಾದಿಯಾಗಿದ್ದರು. ಗುಲ್ಬರ್ಗಾದ ಸೇಠ್ ಶಂಕರಲಾಲ್ ಲಹೋಟಿ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಕಾನೂನು ಉಪನ್ಯಾಸಕರಾಗಿದ್ದರು. 1975ರಿಂದ 78ರವರೆಗೂ ಇದೇ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಹೈದರಾಬಾದಿನ ಶ್ರೀ ಶರಣ ಬಸವೇಶ್ವರ ಸಂಸ್ಥಾನದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾನೂನು ಸಲಹೆಗಾರಾಗಿದ್ದರು. 1940ರ […]

ಈಜಲು ಹೋದ ಬೆಂಗಳೂರಿನ 3 ವಿದ್ಯಾರ್ಥಿಗಳು ಮುರುಡೇಶ್ವರದಲ್ಲಿ ಸಮುದ್ರಪಾಲು

Monday, July 25th, 2011
Nitte Students/ನಿಟ್ಟೆ ವಿದ್ಯಾರ್ಥಿಗಳು

ಉಡುಪಿ : ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ನಿಟ್ಟೆ ಬಿ.ಬಿ.ಎಂ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮೂವರು ಈಜಲು ಸಮುದ್ರಕ್ಕಿಳಿದು  ಸಮುದ್ರ ಪಾಲಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದ್ದು, ಕಾಣೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ.  ನಿಟ್ಟೆ ಬಿ.ಬಿ.ಎಂ ಕಾಲೇಜಿನ  ತೇಜಸ್ ವೆಂಕಟರಾಮಯ್ಯ, ಧಿನೀನ್ ರಾಜ್, ಹಾಗೂ ತೇಜಸ್ ಮಂಜುನಾಥ್ ಇವರು ಬೆಳಿಗ್ಗೆ ದೇವರ ದರುಶನಗೈದು ಈಜಲು ಸಮುದ್ರಕ್ಕಿಳಿದರು,  ಕೆಲವೇ ಕ್ಷಣದಲ್ಲಿ ವಿದ್ಯಾರ್ಥಿಗಳು ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ನೀರು ಪಾಲಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ . ಪೋಲಿಸರು ಹಾಗೂ ಸ್ಥಳೀಯ ಮೀನುಗಾರರು ಮೂವರ ಮೃತದೇಹವನ್ನು […]

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಾಸಿಕ ಎಸ್‌ಸಿ/ಎಸ್‌ಟಿ ಸಭೆ

Monday, July 25th, 2011
Sc St meeting/ಮಾಸಿಕ ಎಸ್‌ಸಿ/ಎಸ್‌ಟಿ ಸಭೆ

 ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಾಸಿಕ ಎಸ್‌ಸಿ/ಎಸ್‌ಟಿ ಸಭೆಯು, ಪೊಲೀಸ್ ಕಮಿಷನರೇಟ್ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧೀಕ್ಷಕ ಸರ್ವೋತ್ತಮ ಪೈ ಅವರು ದಲಿತ ದೌರ್ಜನ್ಯ ಕಾಯ್ದೆಯಡಿ ದಾಖಲಾದ ದೂರುದಾರರು ಮತ್ತು ಸಾಕ್ಷಿದಾರರಿಗೆ ಮೀಸಲಿಟ್ಟ ಹಣ ಬಳಕೆಯಾಗದೆ ವ್ಯರ್ಥವಾಗಿದೆ, ದಲಿತ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿ ಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವ ಎಲ್ಲ ದೂರುದಾರರು ಮತ್ತು ಸಾಕ್ಷಿದಾರರಿಗೆ ಹಣವನ್ನು ಮೀಸಲಿಡಲಾಗಿದೆ. ತಹಶೀಲ್ದಾರರ್‌ಗೆ ಸೂಕ್ತ ದಾಖಲೆ ಪತ್ರ […]

ಚರ್ಚ್ ದಾಳಿ ಕೇಸುಗಳನ್ನು ಹಿಂದಕ್ಕೆ ಪಡೆಯಲು ಮಂಗಳೂರು ಬಿಷಪ್ ಮನವಿ

Saturday, July 23rd, 2011
Mangalore Bishop/ಮಂಗಳೂರು ಬಿಷಪ್

ಮಂಗಳೂರು : ಮಂಗಳೂರು ಬಿಷಪ್ ರೆ. ಪಾ. ಅಲೋಸಿಯಸ್ ಪೌಲ್ ಡಿ. ಸೊಜ ನೇತೃತ್ವದ ತಂಡ ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ 2008 ಚರ್ಚ್ ದಾಳಿಗೆ ಸಂಬಂಧಪಟ್ಟ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಮನವಿ ನೀಡಿತು. ರಾಜ್ಯ ಸರ್ಕಾರ ಈಗಾಗಲೇ ಚರ್ಚ್ ಮೇಲಿನ ದಾಳಿ ಘಟನೆಗಳ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ ಮೇಲೂ ಈ ಕೇಸುಗಳಿಗೆ ಸಂಬಂಧಪಟ್ಟು ಸಮನ್ಸ್ ಗಳು ಜಾರಿಯಾಗುತ್ತಿರುವ […]

ಬೆಳ್ತಂಗಡಿ ಪ್ರಾದೇಶಿಕ ಅರಣ್ಯ ಅಧಿಕಾರಿ ಮನೆ ಹಾಗೂ ಕಚೇರಿಗೆ ಲೋಕಾಯುಕ್ತ ದಾಳಿ

Friday, July 22nd, 2011
Lokayukta ride/ಲೋಕಾಯುಕ್ತ ದಾಳಿ

ಮಂಗಳೂರು : ಶುಕ್ರವಾರ ಮುಂಜಾನೆ ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರಿಂದ ಬ್ರಷ್ಟ ಅಧಿಕಾರಿಗಳ ಮನೆಗೆ ಏಕ ಕಾಲದಲ್ಲಿ ದಾಳಿ ನಡೆಯಿತು. ದ.ಕ. ದಲ್ಲಿ ಬೆಳ್ತಂಗಡಿ ಆರ್‌ಎಫ್‌ಒ (ಪ್ರಾದೇಶಿಕ ಅರಣ್ಯ ಅಧಿಕಾರಿ)ಮನೆ ಹಾಗೂ ಕಚೇರಿಗೆ, ಆರ್‌ಎಫ್‌ಒ ರಾಘವ ಪಾಟಾಳಿ ಅವರ ಕೊಂಚಾಡಿಯಲ್ಲಿರುವ ಮನೆ ಹಾಗೂ ಬೆಳ್ತಂಗಡಿಯ ಕ್ವಾಟರ್ಸ್ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳ್ತಂಗಡಿ ಕ್ವಾಟರ್ಸ್‌ನಲ್ಲಿ 20ಸಾವಿರ ರೂ.ನಗದು, 40ಪವನ್ ಚಿನ್ನಾಭರಣ ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಕೆಲ ದಾಖಲೆ ಹಾಗೂ ಅಲ್ಟೋ ಕಾರೊಂದು ಪತ್ತೆಯಾಗಿದೆ ಎನ್ನಲಾಗಿದೆ ಮಂಗಳೂರಿನ ಕೊಂಚಾಡಿಯಲ್ಲಿರುವ […]

ಎಂಎಸ್‌ಇಝಡ್ ಕಾಮಗಾರಿ ವಿರೋದಿಸಿ ಪೆರ್ಮುದೆ ಗ್ರಾಮಸ್ಥರಿಂದ ಪಂಚಾಯತ್ ಮುತ್ತಿಗೆ

Friday, July 22nd, 2011
Permude Grama Panchayath

ಮಂಗಳೂರು : ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಬಿ ಪದವಿನಲ್ಲಿ  ಮಂಗಳೂರು ವಿಶೇಷ ಆರ್ಥಿಕ ವಲಯ ದಿಂದ ಅಕ್ರಮವಾಗಿ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಗುರುವಾರ ಬೆಳಗ್ಗೆ  ಗ್ರಾಮಸ್ಥರು ಪೆರ್ಮುದೆ ಗ್ರಾಪಂಗೆ ಮುತ್ತಿಗೆ ಹಾಕಿದರು. ಸೆಝ್‌ನ ದ್ವಿತೀಯ ಹಂತಕ್ಕಾಗಿ ಅಧಿಸೂಚನೆಗೊಂಡಿದ್ದ 2,035 ಎಕರೆ ಯಲ್ಲಿ ಸರಕಾರ ಇತ್ತೀಚೆಗೆ 1988 ಎಕರೆಯ ಅಧಿಸೂಚನೆಯನ್ನು ರದ್ದು ಗೊಳಿಸಿತ್ತು. ಅಧಿಸೂಚನೆ ರದ್ದುಗೊಳ್ಳದ 38 ಎಕರೆ ಭೂಮಿಯಲ್ಲಿ ಕಳೆದ ವರ್ಷ ಎಂಎಸ್‌ಇಝಡ್ ರಸ್ತೆಗೆಂದು ಹೇಳಿ ಸ್ವಾಧೀನಪಡಿಸಿದ್ದ ನಾಲ್ಕು ಎಕರೆ ಭೂಮಿಯೂ ಸೇರಿದೆ. ಸರಕಾರದಿಂದ […]

ಮನಪಾ ದಿನಕೂಲಿ ನೌಕರರ ಅರೆಬೆತ್ತಲೆ ಮೆರವಣಿಗೆ

Thursday, July 21st, 2011
Daily wages/ಪೌರಕಾರ್ಮಿಕ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಇಲಾಖೆಯಲ್ಲಿ ದಿನಕೂಲಿ ನೌಕರರಾಗಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಬುಧವಾರ ಅರೆಬೆತ್ತಲೆ ಮೆರವಣಿಗೆಯ ಜಿಲ್ಲಾಧಿಕಾರಿ ಕಚೇರಿ ಬಳಿ ವಿನೂತನ ಪ್ರತಿಭಟನೆ ನಡೆಸಿದರು. ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವಾರು ದಲಿತ ಸಂಘಟನೆಗಳ ಬೆಂಬಲದೊಂದಿಗೆ ದ.ಕ. ಜಿಲ್ಲಾ ಪೌರ ಕಾರ್ಮಿಕರು ಹಾಗೂ ನಾಲ್ಕನೆ ದರ್ಜೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಜ್ಯೋತಿ ವೃತ್ತದಿಂದ ಅರೆಬೆತ್ತಲೆ ಮೆರವಣಿಗೆಯಲ್ಲಿ  ಪೌರ ಕಾರ್ಮಿಕರು ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿದರು. ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ […]

ಕೇರಳ ಹೈಕೋಟ್ ತೀರ್ಪು : ವಿಮಾನ ದುರಂತ ಮೃತರ ಕುಟುಂಬಕ್ಕೆ ತಲಾ 75 ಲಕ್ಷ ರೂ. ಪರಿಹಾರ

Wednesday, July 20th, 2011
Air Crash/ವಿಮಾನ ದುರಂತ

ಮಂಗಳೂರು: ಬಜಪೆ ಏರ್ಇಂಡಿಯಾ ವಿಮಾನ ದುರಂತ ಕಳೆದು ಒಂದು ವರುಷದ ಬಳಿಕ ಮೃತರಾದ ಪ್ರಯಾಣಿಕರ ಮನೆಯವರಿಗೆ  ತಲಾ 75 ಲಕ್ಷ ರೂ. ಪರಿಹಾರ ನೀಡುವಂತೆ ಕೇರಳ ಹೈಕೋಟ್ ತೀರ್ಪು ನೀಡಿದೆ. ದುಬೈಯಿಂದ ಮಂಗಳೂರಿಗೆ ತೆರಳುತ್ತಿದ್ದ ಏರ್‌ಇಂಡಿಯಾ ಸಂಸ್ಥೆಗೆ ಸೇರಿದ ಬೋಯಿಂಗ್ IX 892 ವಿಮಾನ ಮೇ 22 2010ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿ 165 ಮಂದಿ ಪ್ರಯಾಣಿಕರಿದ್ದು, ಅವರಲ್ಲಿ 158 ಮಂದಿ ಸಾವಿಗೀಡಾಗಿದ್ದರು. ಇದರಲ್ಲಿ ಮೃತರಾದವರಿಗೆ ಏರ್‌ಇಂಡಿಯಾ ಸಂಸ್ಥೆ ಅತ್ಯಲ್ಪ ಪರಿಹಾರವನ್ನು ನೀಡಿ ಕೈತೊಳೆದುಕೊಂಡಿತ್ತು. ಕುಂಬಳೆಯ ಅಬ್ದುಲ್ […]