ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ವರ್ಗಾವಣೆ ಸಾಧ್ಯತೆ

Wednesday, March 27th, 2013
N. Prakash

ಮಂಗಳೂರು : ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಆದೇಶದಂತೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಾರಂಭವಾಗಿದ್ದು, ರಾಜ್ಯಾದ್ಯಂತ 12 ಜಿಲ್ಲಾಧಿಕಾರಿಗಳು ಸೇರಿದಂತೆ 20 ಮಂದಿ ಐ ಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಕೂಡ ಸೇರಿದ್ದಾರೆ. ಎನ್. ಪ್ರಕಾಶ್ ಜಾಗಕ್ಕೆ ನೂತನ ಜಿಲ್ಲಾಧಿಕಾರಿ ಹರ್ಷ ಗುಪ್ತ ನೇಮಕಗೊಳ್ಳುವ ಸಾಧ್ಯತೆ ಇದೆ. ಮೂಲತಃ  ದೆಹಲಿಯವರಾಗಿರುವ ಹರ್ಷ 1997ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ದೆಹಲಿಯಲ್ಲಿ ಸೇವೆ ಸಲ್ಲಿಸಿದ್ದ ಇವರು […]

ಪಕ್ಷ ವಿರೋಧಿ ಹೇಳಿಕೆ; ಬಿಜೆಪಿ ಯಿಂದ ರೇಣುಕಾಚಾರ್ಯ ಉಚ್ಚಾಟನೆ

Wednesday, March 27th, 2013
Renukachaarya

ಬೆಂಗಳೂರು : ಬಿಜೆಪಿ ಮುಖಂಡರ ವಿರುದ್ದ ನೀಡಿದ ಹೇಳಿಕೆ, ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಯವರು ಬಿಜೆಪಿ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಿದ್ದಾರೆ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮಿಂದ ಅವರು ಹಣ ಪಡೆದಿದ್ದಾಗಿ ಮತ್ತು ಈ ಬಗ್ಗೆ ಸೂಕ್ತ ದಾಖಲೆ ಇರುವುದಾಗಿ ಸುದ್ದಿಗಾರರಿಗೆ ಹೇಳಿಕೆ ನೀಡುವ ಮೂಲಕ ರೇಣುಕಾಚಾರ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗಾಗಲೇ ಬಿಜೆಪಿ ಮುಖಂಡರ ವಿರುದ್ಧ ಕಿಡಿ ಕಾರುತ್ತಾ, ಮಾಜಿ […]

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟೋಲ್‌ಗೇಟ್‌ ನಿರ್ಮಾಣಕ್ಕೆ ವಿರೋಧ, ಬಂದ್‌ಗೆ ಕರೆ

Wednesday, March 27th, 2013
Tollgate construction

ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66 ಎನ್‌ಐಟಿಕೆ ಬಳಿ ಇರ್ಕಾನ್ ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಟೋಲ್ ಗೇಟ್ ಸಂಗ್ರಹ ಕೇಂದ್ರಕ್ಕೆ ಎನ್‌ಐಟಿಕೆ ಹಾಗು ಸುರತ್ಕಲ್ ನಾಗರೀಕ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು  ಬುಧವಾರ ಸುರತ್ಕಲ್‌  ಬಂದ್‌ಗೆ ಕರೆ ನೀಡಲಾಗಿದೆ. ಎನ್‌ಐಟಿಕೆ ಬಳಿ ಶಾಲೆಗಳು ಹಾಗು ಇಂಜಿನಿಯರಿಂಗ್ ಕಾಲೇಜು, ಕ್ಯಾಂಪಸ್ ಇರುವುದರಿಂದ ವಾಹನಗಳ ಸಾಲುಗಳು, ಅವುಗಳ ಕರ್ಕಶ ಶಬ್ದಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆ ಉಂಟಾಗುವುದಲ್ಲದೆ, ಸುರಕ್ಷತೆಗೂ ಅಡ್ಡಿ ಉಂಟಾಗಬಹುದು, ಅಲ್ಲದೆ ಟೋಲ್‌ಗೇಟ್‌ ನಿರ್ಮಾಣಕ್ಕೆ ಕನಿಷ್ಟ ಆರು ಲೇನ್‌ಗಷ್ಟು ಜಾಗದ […]

ಪಕ್ಷದಲ್ಲಿನ ಮೂಲ ಕಾರ್ಯಕರ್ತರಾಗಲೀ ನಾಯಕರಾಗಲೀ ಪಕ್ಷ ತೊರೆದಿಲ್ಲ : ಸುಶೀಲ್ ನೊರೊನ್ಹ

Tuesday, March 26th, 2013
Sushil Noronha

ಮಂಗಳೂರು : ಕರಾವಳಿಯಲ್ಲಿ ಜೆಡಿಎಸ್ ತನ್ನ ನೆಲೆಯನ್ನು ಕಂಡುಕೊಳ್ಳುವ ಸಮಯದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ. ಹೆಗಡೆ ಮತ್ತು ನಾಗರಾಜ ಶೆಟ್ಟಿ ಹಾಗು ಇತರೆ ನಾಯಕರು ಪಕ್ಷಕ್ಕೆ ರಾಜಿನಾಮೆ ನೀಡಿರುವುದರಿಂದ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಿಲ್ಲ, ಇದು ಕರಾವಳಿಯಲ್ಲಿ ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸಿ ಪಕ್ಷಕ್ಕೆ ಹಿನ್ನಡೆ ಉಂಟುಮಾಡಲು ನಡೆಸುತ್ತಿರುವ ಸಂಚು ಇದರಿಂದ ಪಕ್ಷಕ್ಕೆ ಯಾವುದೇ ರೀತಿಯ ಹಿನ್ನಡೆ ಉಂಟಾಗಲಾರದು ಎಂದು ಸುಶೀಲ್ ನೊರೊನ್ಹ ತಿಳಿಸಿದರು. ಸೋಮವಾರ ಎಂ.ಜಿ.ಹೆಗಡೆ ಪತ್ರಿಕಾ ಘೋಷ್ಠಿ ನಡೆಸಿ ರಾಜಿನಾಮೆ ಸಲ್ಲಿಸಿರುವ ಬಗ್ಗೆ […]

ದ.ಕ ಜಿಲ್ಲಾಧ್ಯಕ್ಷರ ಸರ್ವಾಧಿಕಾರ ಧೋರಣೆ; ಕಾರ್ಯಕರ್ತರೂ ಸೇರಿದಂತೆ ಪ್ರಮುಖ ನಾಯಕರ ರಾಜೀನಾಮೆ

Tuesday, March 26th, 2013
JDS in district

ಮಂಗಳೂರು : ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗ್ಡೆ ಸೇರಿದಂತೆ  ಪಕ್ಷದ ಪ್ರಮುಖ 10ಮಂದಿ ನಾಯಕರು,50 ಮಂದಿ ಕಾರ್ಯಕರ್ತರು  ಒಟ್ಟು 60ಮಂದಿ ಸದಸ್ಯರು  ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜಿನಾಮೆ ನೀಡಿರುವುದಾಗಿ ತಿಳಿಸಿದರು.ಸೋಮವಾರ ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಜನತಾದಳ ಪಕ್ಷವನ್ನು ಕರಾವಳಿ ಭಾಗದಲ್ಲಿ ಮುನ್ನಡೆಸಲು ಸ್ವತ; ಪಕ್ಷದ ರಾಜ್ಯಾಧ್ಯಕ್ಷ  ಹೆಚ್. ಡಿ .ಕುಮಾರಸ್ವಾಮಿ ಕೋರಿ ಅಹ್ವಾನ ನೀಡಿದ್ದರಿಂದ ಅವರ ಮನವಿಯನ್ನು ಪುರಸ್ಕರಿಸಿ ಪಕ್ಷವನ್ನು ಸೇರಿ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕ ಪ್ರಯತ್ನ  ಮಾಡಿದ್ದೆವು. ಆದರೆ  […]

ದುಬೈಯಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿ ನಾಪತ್ತೆ

Tuesday, March 26th, 2013
Mohammad Ashraf

ಮಂಗಳೂರು : ದುಬೈಯಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡು ತ್ರಿಕಾರಿಪುರ ನಿವಾಸಿ ಮಹಮ್ಮದ್ ಅಶ್ರಫ್ ಎಂಬಾತ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಸರಗೋಡು ತ್ರಿಕ್ಕಾರಿಪುರದ ಮುಹಮ್ಮದ್ ಕುಂಞಿ ಎಂಬವರ ಪುತ್ರ ಮುಹಮ್ಮದ್‌ಅಶ್ರಫ್ (24) ಎಂಬವರು ಮಾರ್ಚ್ 21ರಂದು ದುಬೈಯಿಂದ ಮಂಗಳೂರಿಗೆ 12:30 ಗಂಟೆಗೆ ತಲುಪಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಕಾಯಿನ್ ಬಾಕ್ಸ್‌ನಿಂದ ತನ್ನ ಮನೆಗೆ ದೂರವಾಣಿ ಕರೆ ಮಾಡಿ ತಾನು ದುಬೈಯಿಂದ ಬಂದಿದ್ದಾಗಿ ಮತ್ತು ಬೆಂಗಳೂರಿನಲ್ಲಿರುವ ಮುನೀಫ್ ಎಂಬವರ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ. […]

ಹೆಚ್.ಡಿ.ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ : ಅಕ್ಬರ್ ಉಳ್ಳಾಲ್

Tuesday, March 26th, 2013
Akbar Ullal

ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು 117 ಸ್ಥಾನವನ್ನು ಪಡೆಯುವುದಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದಾಗಿ ವಾರ್ತಾಮಿತ್ರ ಕನ್ನಡ ಮಾಸ ಪತ್ರಿಕೆ ಸಂಪಾದಕ ಅಕ್ಬರ್ ಉಳ್ಳಾಲ್ ಭವಿಷ್ಯ ನುಡಿದಿದ್ದಾರೆ. ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ   ಕುರಿತು ಮಾತನಾಡಿದ ಅವರು  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪಕ್ಷದ  ಹಿರಿಯ ನಾಯಕರು ಹಾಗು ಕಾರ್ಯಕರ್ತರ ನಡುವಿನ ಭಿನಾಭಿಪ್ರಾಯಗಳು ಮತ್ತು ಅನ್ಯ ಪಕ್ಷಗಳ ಕೆಲವು ಪಕ್ಷಾಂತರ ನಾಯಕರು ವಲಸೆ ಬಂದಿರುವುದು  ಕಾರಣವಾಗಿದೆ. ಆದರೆ […]

ಪಕ್ಷದ ವತಿಯಿಂದ ಚುನಾವಣೆಯಲ್ಲಿ ವಿಜೇತರಾದ ಕಾರ್ಪೊರೇಟರ್‌ ಗಳಿಗೆ ಸನ್ಮಾನ

Monday, March 25th, 2013
Corporators

ಮಂಗಳೂರು : ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಕಾರ್ಪೊರೇಟರ್‌ಗಳಾದ ಲ್ಯಾನ್ಸಿಲಾಟ್ ಪಿಂಟೋ, ಡಿ.ಕೆ. ಅಶೋಕ್ ಕುಮಾರ್, ಕೇಶವ, ಪ್ರಕಾಶ್ ಸಾಲ್ಯಾನ್, ರಜನೀಶ್, ರಾಧಾಕೃಷ್ಣ, ಝುಬೈದಾ, ಸಬಿತ್ ಮಿಸ್ಕಿತ್, ಅಖಿಲ್ ಆಳ್ವ, ನಾಗವೇಣಿರನ್ನು ರವಿವಾರ ಪಕ್ಷದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಕೆಪಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮಾತನಾಡಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ್ದು, ವಿಧಾನ ಸಭಾ ಚುನಾವಣೆಯಲ್ಲೂ ಪಕ್ಷ ಬಹುಮತ ಪಡೆಯಲಿದೆ ಎಂದರು. ಬ್ಲಾಕ್ ಅಧ್ಯಕ್ಷ […]

ಬೆಳ್ತಂಗಡಿ : ಹೋಲಿ ರಿಡೀಮರ್‌ ಚರ್ಚ್‌ ನಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ಕ್ರೈಸ್ತ ಬಾಂಧವ ರ ಮೇಲೆ ಹೆಜ್ಜೇನು ದಾಳಿ

Monday, March 25th, 2013
Wild bee attack at Gadaikal

ಬೆಳ್ತಂಗಡಿ : ಕಪ್ಪು ತಿಂಗಳ ಪ್ರಯುಕ್ತ ಪ್ರತೀ ವರ್ಷ ಬೆಳ್ತಂಗಡಿಯ 1100 ಅಡಿ ಎತ್ತರದ ಗಡಾಯಿಕಲ್ಲಿನಲ್ಲಿರುವ ಹೋಲಿ ರಿಡೀಮರ್‌ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ವಾಡಿಕೆ  ಹೋಲಿ ರಿಡೀಮರ್‌ ಚರ್ಚ್‌ಗೆ ಸಂಬಂಧಪಟ್ಟ ಕ್ರೈಸ್ತ ಬಾಂಧವರಲ್ಲಿ  ಇದ್ದು ಅದರಂತೆ ಭಾನುವಾರ  ಹೋಲಿ ರಿಡೀಮರ್‌ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಅನೇಕರು ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ. ಪ್ರತೀ ವರ್ಷದಂತೆ ಬೆಳ್ತಂಗಡಿಯ ಹೋಲಿ ರಿಡೀಮರ್‌ ಚರ್ಚ್‌ಗೆ ಸಂಬಂಧಪಟ್ಟ  ಕ್ರೈಸ್ತ ಬಾಂಧವರು ಧರ್ಮಗುರು […]

ಷರತ್ತುಬದ್ದ ಜಾಮೀನಿನೊಂದಿಗೆ ಬಿಡುಗಡೆಯಾದ ಪತ್ರಕರ್ತ ನವೀನ್ ಸೂರಿಂಜೆ

Monday, March 25th, 2013
Naveen Soorinje released

ಮಂಗಳೂರು : ಪಡೀಲ್‌ನ ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಿ ಬಂಧನಕ್ಕೊಳಗಾದ ಪತ್ರಕರ್ತ ನವೀನ್ ಸೂರಿಂಜೆ ಷರತ್ತುಬದ್ದ ಜಾಮೀನಿನೊಂದಿಗೆ ಮಾರ್ಚ್ 23 ಶನಿವಾರ ಮಂಗಳೂರು ಸಬ್ ಜೈಲ್‌ನಿಂದ ಬಿಡುಗಡೆಗೊಂಡಿದ್ದಾರೆ. ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 7ರಂದು ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸರಿಂದ ಬಂಧಿತರಾಗಿದ್ದ ನವೀನ್ ಸೂರಿಂಜೆಯ ಬಿಡುಗಡೆಗೆ ಈವರೆಗೆ ಹಲವು ರೀತಿಯ ಹೋರಾಟಗಳು ನಡೆದಿದ್ದವು. ನಾಲ್ಕೂವರೆ ತಿಂಗಳ ಜೈಲುವಾಸವನ್ನು ಅನುಭವಿಸಿ ಇದೀಗ ಬಿಡುಗಡೆಗೊಂಡಿದ್ದಾರೆ. ಹೋಂ ಸ್ಟೇ ಪ್ರಕರಣದ ಸಂತ್ರಸ್ತರಲ್ಲಿ ಒಬ್ಬರಾದ […]