ಮಹಿಳೆಯರ ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಸಿಪಿಐಎಂ ಪ್ರತಿಭಟನೆ

Wednesday, October 31st, 2012
CPIM

ಮಂಗಳೂರು: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಹಿಳೆಯರ ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನಾ ಸಭೆ ನಡೆಯುತ್ತಿದ್ದು ಅದರ ಅಂಗವಾಗಿ ಜಿಲ್ಲಾಧಿಕಾರಿ ಕಛೇರಿ ಬಳಿ ನಿನ್ನೆ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಬಿ.ಮಾಧವ ಮಾತನಾಡಿ ವಿಕೃತ ಮನೋಭಾವದ ಜನರಿಂದ ಈ ಸಮಾಜದಲ್ಲಿ ಪೊಲೀಸರು ಮತ್ತು ಸರಕಾರ ಮಹಿಳೆಯರ ಮಾನ ರಕ್ಷಣೆ ಮಾಡುವಲ್ಲಿ ವಿಫಲವಾಗುತ್ತಿದೆ. ಹರ್ಯಾಣದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ […]

ವಿಜಯಕುಮಾರ್ ಶೆಟ್ಟಿ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ : ಭಂಡಾರಿ

Tuesday, October 30th, 2012
Monappa Bhandary

ಮಂಗಳೂರು : ಕಾಂಗ್ರೆಸ್ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿಯವರ ಇತ್ತೀಚಿನ ಹೇಳಿಕೆಗೆ ಉತ್ತರವಾಗಿ ನಗರದ ಬಿ.ಜೆ.ಪಿ. ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬಿ.ಜೆ.ಪಿ. ಜಿಲ್ಲಾ ವಕ್ತಾರ ಹಾಗೂ ವಿದಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಅವರು, ವಿಜಯಕುಮಾರ್ ಶೆಟ್ಟಿ ಪಕ್ಷದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು ಮೂಲೆಗುಂಪಾಗಿದ್ದಾರೆ. ಹಾಗಾಗಿ ಅವರಿಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ ಆದರೆ ಮುಂದಿನ ಚುನಾವಣೆಯಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ನಾಯಕರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಾಜಿ ಶಾಸಕ […]

ಉದ್ಯಮಿ ಎ.ಸದಾನಂದ ಶೆಟ್ಟಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ

Tuesday, October 30th, 2012
JDS Townhall

ಮಂಗಳೂರು: ಸೋಮವಾರ ಮಂಗಳೂರು ಪುರಭವನದಲ್ಲಿ ನಡೆದ ಜೆಡಿಎಸ್ ನ ಸಮಾನ ಮನಸ್ಕರ ಸಮಾವೇಶದಲ್ಲಿ ಭಾಗವಹಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರೀ ದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದರು. ಜೆಡಿಎಸ್ ಕರಾವಳಿ ಜಿಲ್ಲೆಗಳಲ್ಲಿ ತನ್ನ ಖಾತೆ ತೆರೆಯಲು ಶ್ರಮಿಸುತಿದ್ದು ಇತ್ತೀಚೆಗಷ್ಟೇ ಬಿಜೆಪಿ ಪಕ್ಷದಲ್ಲಿದ್ದ ನಾಗರಾಜ ಶೆಟ್ಟಿಯವರು ಪಕ್ಷವನ್ನು ತೊರೆದು ಜೆ.ಡಿ.ಎಸ್ ಸೇರಿದ್ದರು. ಇವರ ನೇತೃತ್ವದಲ್ಲಿ ಕರಾವಳಿಯ ಇನ್ನಷ್ಟು ನಾಯಕರು ಈ ಸಮಾರಂಭದಲ್ಲಿ ಜೆ.ಡಿ.ಎಸ್ […]

ಮದುವೆ ದಿನವೇ ಕೈಕೊಟ್ಟ ವರಮಹಾಶಯ ಬಾಳು ಕೊಟ್ಟ ರಿಕ್ಷಾ ಚಾಲಕ

Monday, October 29th, 2012
Marraige

ಮಂಗಳೂರು: ಬಡ ಯುವತಿಗೆ ಬಾಳು ನೀಡುವುದಾಗಿ ನಂಬಿಸಿ ಮದುವೆ ದಿನವೇ ವರ ಕೈಕೊಟ್ಟು ನಾಪತ್ತೆಯಾದ ವಿಲಕ್ಷಣ ಘಟನೆ ನಿನ್ನೆ ನಗರದಲ್ಲಿ ನಡೆದಿದೆ. ಸುರತ್ಕಲ್ ಸಮೀಪದ ಸರಿಪಳ್ಳ ಕಣ್ಣಗುಡ್ಡೆಯ ಬಡ ಯುವತಿಯೋರ್ವಳಿಗೆ ಬೋಂದೆಲ್ ಕೃಷ್ಣನಗರದ ಪ್ರಸಾದ್ ಎಂಬಾತನ ಜೊತೆ ವಿವಾಹ ನಿಶ್ಚಯಿಸಲಾಗಿತ್ತು. ಅದರಂತೆ ನಿನ್ನೆ ಅಕ್ಟೋಬರ್ 28ರಂದು ಮಲ್ಲಿಕಟ್ಟೆಯಲ್ಲಿರುವ ಸುವರ್ಣ ಸಭಾಂಗಣದಲ್ಲಿ ವಿವಾಹ ನಡೆಸುವುದಾಗಿ ತೀರ್ಮಾನಿಸಲಾಗಿದ್ದು ವಿವಾಹಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ವಧು ಮದುವೆಯ ಸೀರೆಯುಟ್ಟು ಮಂಟಪಕ್ಕೆ ಬಂದರೂ ವರನ ಪತ್ತೆಯಿರಲಿಲ್ಲ.ಎಷ್ಟುಹೊತ್ತು ಕಾದರೂ ವರನ ಸುಳಿವಿಲ್ಲದ ಕಾರಣ, […]

ಕೋಡಿಂಬಾಳ ಜೋಡಿಕೊಲೆ ಪ್ರಕರಣ ಆರೋಪಿಗಳು ಪೊಲೀಸ್ ವಶಕ್ಕೆ

Monday, October 29th, 2012
double murder case

ಮಂಗಳೂರು: ಸೆಪ್ಟೆಂಬರ್ 25ರ ತಡರಾತ್ರಿ ಕಡಬ ಬಳಿಯ ಕೋಡಿಂಬಾಳ ಗ್ರಾಮದ ಉಂಡಿಲದಲ್ಲಿ ನಡೆದ ಜೋಡಿಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ. ಸೋಮವಾರಪೇಟೆಯ ಕರ್ಕಳ್ಳಿ ನಿವಾಸಿ ಮಹಮ್ಮದ್ ರಫೀಕ್, ಪುಂಜಾಲಕಟ್ಟೆ ತಣ್ಣೀರುಪಂಥ ಗ್ರಾಮದ ಕಲ್ಲೇರಿ ನಿವಾಸಿ ಸಯೀದ್ ಎಂಬುವವರು ಆರೋಪಿಗಳಾಗಿದ್ದಾರೆ. ಮಹಮ್ಮದ್ ರಫೀಕ್ ಕೋಡಿಂಬಾಳದಲ್ಲಿಯೇ ಕೆಂಪುಕಲ್ಲಿನ ಲಾರಿಯ ಚಾಲಕನಾಗಿದ್ದು ಈತನ ಪತ್ನಿಯ ಸಂಬಂಧಿಯಾಗಿದ್ದ ಸಯೀದ್ ಈತನಿಗೆ ಪರಿಚಿತನಾಗಿದ್ದ. ಮೃತ ಥಾಮಸ್ ರವರು ತಮ್ಮ ಮನೆಯ ಆವರಣದ ಗೋಡೆ ನಿರ್ಮಿಸಲು ಸಯೀದ್ ನ ಲಾರಿಯಲ್ಲಿಯೇ […]

ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ವಾಹನ ಜಾಥಕ್ಕೆ ಚಾಲನೆ

Saturday, October 27th, 2012
Plastic awareness program

ಮಂಗಳೂರು: ಮಂಗಳೂರು ತಾಲೂಕಿನಾದ್ಯಂತ ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟ ವಸ್ತುಗಳನ್ನು ನವೆಂಬರ್ 1ರಿಂದ ನಿಷೇಧಿಸಲು ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗುಲ್ಜಾರ್ ಬಾನುರವರು ಶುಕ್ರವಾರ ಜಿಲ್ಲಾಧಿಕಾರಿ ಬಳಿಯಲ್ಲಿ ಪ್ಲಾಸ್ಟಿಕ್ ಬಗ್ಗೆ ನಾಗರೀಕರಲ್ಲಿ ಜಾಗೃತಿ ಮೂಡಿಸುವ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಪ್ಲಾಸ್ಟಿಕ್ ನಿಂದಾಗುವ ತೊಂದರೆಯ ಬಗ್ಗೆ ಜನರಲ್ಲಿ ಈ ವಾಹನವು ಜಾಗೃತಿ ಮೂಡಿಸಲಿದ್ದು ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದರು. […]

ಕುಂದಾಪುರ: ಸಮುದ್ರಕ್ಕಿಳಿದ ಮೂವರು ನೀರುಪಾಲು

Saturday, October 27th, 2012
Kodi beach

ಕುಂದಾಪುರ: ಕುಂದಾಪುರದ ಕೋಡಿ ಸಮುದ್ರ ಕಿನಾರೆಯಲ್ಲಿ ಶುಕ್ರವಾರ ಸಂಜೆ ನೀರಿಗಿಳಿದ ಮೂವರು ಸಮುದ್ರಪಾಲಾಗಿದ್ದಾರೆ. ಬಕ್ರೀದ್ ಹಬ್ಬಕ್ಕೆಂದು ಕೋಡಿಯ ಮೂಲಮನೆಗೆ ಬಂದಿದ್ದ ಮಂಗಳೂರಿನಲ್ಲಿ ವಿಶ್ವಾಸ್ ಬಾವಾ ಬಿಲ್ಡರ್ಸ್ ಪಾಲುದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಸಯ್ಯದ್ ಮಹಮ್ಮದ್, ಮತ್ತು ಅವರ ಸಹೋದರ ಬೆಂಗಳೂರಿನಲ್ಲಿ ರಿಯಲ್ಎಸ್ಟೀಟ್ ಉದ್ಯಮಿಯಾಗಿರುವ ಅಬ್ದುಲ್ ಖಾದರ್ ಹಾಗೂ ಇವರ ಹತ್ತಿರದ ಸಂಬಂಧಿ ಬಾಲಕ ರಿಯಾನ್ ಮೃತಪಟ್ಟವರಾಗಿದ್ದಾರೆ. ಬಕ್ರೀದ್ ಹಬ್ಬದ ಸಂಭ್ರಮದಲ್ಲಿದ್ದ ಇವರು ಸಂಜೆಯ ವೇಳೆ ಸಮುದ್ರ ಕಿನಾರೆಗೆ ತೆರಳಿದ್ದರು, ನೀರಿನಲ್ಲಿ ಆಟವಾಡುತ್ತಿದ್ದ ಬಾಲಕ ರಿಯಾನ್ ಸಮುದ್ರಪಾಲಾಗುತ್ತಿರುವುದನ್ನು ಗಮನಿಸಿದ ಇವರು […]

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಗುಂಪು ಘರ್ಷಣೆ

Saturday, October 27th, 2012
Mangalore sub jail

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಕೈದಿಗಳ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿದ್ದು, ಜೈಲ್ ವಾರ್ಡನ್ ಪುಟ್ಟಣ್ಣ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ ಕೈದಿಗಳಿಗೆ ಊಟಕ್ಕೆ ಹೊರಗಡೆ ಬಿಟ್ಟ ಸಂದರ್ಭ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಕೈದಿಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಬೇಕೆಂಬ ಕೋರಿಕೆಯ ಮೇರೆಗೆ ಪೊಲೀಸರ ಸಮ್ಮತಿಯೊಂದಿಗೆ ಜೈಲು ಅಧಿಕಾರಿಗಳು ಅನುಮತಿ ನೀಡಿದ್ದರು, ನಮಾಜು ಮುಗಿಸಿ ಕೈದಿಗಳು ತಮ್ಮಸೆಲ್ ಗಳಿಗೆ ವಾಪಾಸಾಗುತ್ತಿದ್ದಾಗ ಇನ್ನೊಂದು ಗುಂಪಿನ […]

ಕರಾವಳಿಯಲ್ಲಿ ತಣ್ಣಗೆ ಅಲುಗಾಡಿಸಿದ ಭೂಕಂಪ ಪ್ರಳಯದ ಸೂಚನೆಯಾ?

Friday, October 26th, 2012
Apocalypse in Karavali

ಮಂಗಳೂರು : 2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ರಾಜ್ಯದಲ್ಲಿ ಅದರಲ್ಲೂ ಪರಶುರಾಮನ ಸೃಷ್ಟಿ ಎಂದೇ ಕರೆಯಲಾಗುವ ಕರಾವಳಿಯ ನಾನಾ ಭಾಗಗಳಲ್ಲಿ ಈ ಭೂಕಂಪನದ ಅನುಭವ ಶ್ರೀಸಾಮಾನ್ಯನಿಗೂ ಆಗಿದೆ. ಈ ಮೂಲಕ 2012ರಲ್ಲಿ ಜಗತ್ತಿನ ವಿನಾಶ ಅರ್ಥಾತ್ ಪ್ರಳಯದ ಮೂನ್ಸೂಚನೆಯೇ ಈ ಭೂಕಂಪನದ ಮೂಲಕ ಬಂದಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಅಂದಹಾಗೆ ಎಲ್ಲಿ ಧಾರ್ಮಿಕ ನಂಬಿಕೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿರುತ್ತವೆಯೋ ಅಲ್ಲೆಲ್ಲ ಅವುಗಳ ಪರಿಣಾಮವೂ ಸಹಾತೀವ್ರವಾಗಿಯೇ ಆಗುತ್ತಿದೆ. ಅಸಲಿಗೆ ಇಂತಹದ್ದೊಂದು ಪ್ರಶ್ನೆ […]

‘ಸ್ನೇಹಿತರು’

Friday, October 26th, 2012
Snehitharu

ಕೆ ರಾಮ್ ನಾರಾಯಣ್ ನಿರ್ದೇಶನದ ‘ಸ್ನೇಹಿತರು’ ಚಿತ್ರದ ಮೊದಲ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಾಥ ಮಕ್ಕಳನ್ನು ಪ್ರೀತಿಸಬೇಕು, ಅಪ್ಪ-ಅಮ್ಮ ಇಲ್ಲದ ಅವರಿಗೆ ಆ ಪ್ರೀತಿಯನ್ನು ತೋರಿಸಿ ಮಾನವೀಯತೆ ಮೆರೆಯಬೇಕು ಅನಾಥ ಮಕ್ಕಳಿಗೆ ಪ್ರೀತಿ, ದಯೆ, ಅನುಕಂಪ ತೋರಿಸದೇ ಬೇರೇನೋ ಮಾಡಲು ಹೊರಟರೆ ಏನೇನಾಗುತ್ತದೆ , ಎಂಬುದು ಕಥೆಯ ಒನ್ ಲೈನ್ ಸ್ಟೋರಿ. ಈ ಚಿತ್ರದಲ್ಲಿ ಹಾಸ್ಯ ಹೇರಳವಾಗಿದೆ. ಸಿನಿಮಾ ನಿರೂಪಣೆ ಎಲ್ಲವೂ ಹಿತಮಿತವಾಗಿ ಸಂಗಮಿಸಿದ್ದು ಪ್ರೇಕ್ಷಕರು ಕೊಟ್ಟ ಕಾಸಿಗೆ ಮೋಸದ ಮಾತೇ ಇಲ್ಲ. ಗೌರವ ಪಾತ್ರದಲ್ಲಿ […]