Blog Archive

ಖಾಸಗಿ ಬಸ್ ಉದ್ಯಮಿ ನಾಪತ್ತೆ: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

Thursday, August 11th, 2016
Narayana-Alwa

ಮಂಗಳೂರು: ನಗರದ ಖಾಸಗಿ ಬಸ್ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದು, ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜೆಪ್ಪಿನಮೊಗರು ನಿವಾಸಿ ನಾರಾಯಣ ಆಳ್ವ (60) ಎಂಬುವರು ಇಂದು ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದಾರೆ. ಮನೆ ಮಂದಿ ಆಳ್ವರಿಗಾಗಿ ಹುಡುಕಿ ಬಳಿಕ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ನಂತರ ನೇತ್ರಾವತಿ ಸೇತುವೆ ಬಳಿ ಆಗಮಿಸಿದ ಪೊಲೀಸರು ಹುಡುಕಾಟ ಆರಂಭಿಸಿದ್ದು, ಆಳ್ವರ ಕಾರು ಉಳ್ಳಾಲ ಸೇತುವೆಯಲ್ಲಿ ಪತ್ತೆಯಾಗಿದೆ. ಕಾರನ್ನು ಠಾಣೆಯಲ್ಲಿರಿಸಿದ್ದಾರೆ. […]

ಭಾಸ್ಕರ್ ಶೆಟ್ಟಿ ಅವರ ಕೊಲೆ ಪ್ರಕರಣದ ಆರೋಪಿ ನಿರಂಜನ್‌ ಭಟ್ ಆತ್ಮಹತ್ಯೆಗೆ ಯತ್ನ

Wednesday, August 10th, 2016
Niranjan-Bhat

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಕೊಲೆ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಕಾರ್ಕಳ ನಂದಳಿಕೆಯ ಜ್ಯೋತಿಷಿ ನಿರಂಜನ್‌ ಭಟ್ ವಜ್ರದ ಉಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ‘ಭಾಸ್ಕರ್‌ ಶೆಟ್ಟಿ ಕೊಲೆ ನಡೆದಿರುವುದು ಖಚಿತವಾದ ನಂತರ ನಿರಂಜನ್‌ಗಾಗಿ ಹುಡುಕಾಟ ತೀವ್ರಗೊಳಿಸಲಾಗಿತ್ತು. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಚಿತವಾದ ನಂತರ ಆಗಸ್ಟ್ 7ರಂದೇ ಉಂಗುರ ನುಂಗಿದ್ದ. 8ರಂದು ನಿಟ್ಟೆಯಲ್ಲಿ ಆತನನ್ನು ಬಂಧಿಸಲಾಯಿತು. ಎಲ್ಲ ಪ್ರಕ್ರಿಯೆ ನಡೆಸಿ ವಿಚಾರಣೆ ಆರಂಭಿಸಿದ ನಂತರ ಹೊಟ್ಟೆ ನೋವು ಎಂದು ಹೇಳಿದ. ಉಂಗುರ ನುಂಗಿರುವ ವಿಷಯವನ್ನು […]

ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುರುಪುರದ ಕೊಳಂಬೆ ನಿವಾಸಿ ಯೋಗಿಣಿ ಮೃತದೇಹ ಪತ್ತೆ

Friday, August 5th, 2016
Yogini

ಮಂಗಳೂರು: ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಮೃತದೇಹ ನಿನ್ನೆ ಪತ್ತೆಯಾಗಿದೆ. ಗುರುಪುರದ ಕೊಳಂಬೆ ನಿವಾಸಿ ಯೋಗಿಣಿ ಎಂಬಾಕೆ ಆತ್ಮಹತ್ಯೆಗೆ ಶರಣಾದ ಯುವತಿ. ಯೋಗಿಣಿ ಬೈಕಂಪಾಡಿಯಲ್ಲಿರುವ ಪ್ಲಾಸ್ಟಿಕ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಳು. ಜುಲೈ ಮೂರರಂದು ಕೆಲಸಕ್ಕೆಂದು ಮನೆಬಿಟ್ಟವಳು ಅಂದು ಮಧ್ಯಾಹ್ನವೇ ರಜೆ ಕೇಳಿ ಬಂದಿದ್ದಳು. ಅಲ್ಲಿಂದ ಆಕೆ ಗುರುಪುರದ ಫಲ್ಗುಣಿ ನದಿ ಬಳಿ ತಲುಪಿದ್ದು, ತನ್ನ ಬ್ಯಾಗ್ ಹಾಗೂ ಮೊಬೈಲ್‌ನ್ನು ತಟದಲ್ಲಿಯೇ ಬಿಟ್ಟು ಅಲ್ಲಿಂದಲೇ ನದಿಗೆ ಹಾರಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳೀದ್ದರು. ವಿಷಯ ಮನೆಯವರಿಗೆ ತಿಳಿದು ಹುಡುಕಾಟ […]

ಮಂಗಳೂರು ಐಜಿ ಕಚೇರಿಯ ಡಿವೈಎಸ್ಪಿ ಆತ್ಮಹತ್ಯೆ

Friday, July 8th, 2016
Ganapathi

ಮಂಗಳೂರು : ಮಂಗಳೂರಿನ ಐಜಿ ಕಚೇರಿಯಲ್ಲಿ ಡಿವೈ ಎಸ್ ಪಿಯಾಗಿ ಕೆಲಸ ಮಾಡುತ್ತಿದ್ದ ಕೊಡಗು ಕುಶಾಲನಗರದ ಎಂ ಕೆ ಗಣಪತಿ ಗುರುವಾರ ಸಂಜೆ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಹೇಳಲಾಗಿದೆ. ಗಣಪತಿ ಅವರನ್ನು ಇತ್ತೀಚೆಗೆ ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಮಾಧ್ಯಮಗಳಿಗೆ ಸಿಕ್ಕಿರುವ ವಿಡಿಯೋ ಒಂದರಲ್ಲಿ ಗಣಪತಿ ಹಿರಿಯ ಅಧಿಕಾರಿಗಳ ಮೇಲೆ ನೇರವಾಗಿ ಆರೋಪ ಮಾಡಿದ್ದು ದಾಖಲಾಗಿದೆ. ಸಬ್ ಇನ್ಸ್ ಪೆಕ್ಟರ್ […]

ಪತ್ನಿಗೆ ಡಾಕ್ಟರ್ ಕಲಿಯಲು ನೆರವು ಲಭಿಸಿಲ್ಲ- ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Wednesday, February 3rd, 2016
jagadisha

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತೆ ಶ್ರುತಿಯ ಪತಿ ಆದೂರು ಕುಂಟಾರಿನ ನಾರಾಯಣ ಅವರ ಪುತ್ರ ಜಗದೀಶ್(24) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಂಗಳೂರಿನಲ್ಲಿ ಹೋಮಿಯೋ ಡಾಕ್ಟರ್ ವಿಭಾಗದಲ್ಲಿ ಕಲಿಯುತ್ತಿರುವ ಶ್ರುತಿಯ ಕಾಲೇಜು ಫೀಸ್ ಪಾವತಿಸಲು ಸಾಧ್ಯವಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ. ಶ್ರುತಿಯ ಕಲಿಕೆಗೆ ಎಲ್ಲಾ ನೆರವು ನೀಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ಈ ವರೆಗೂ ಚಿಕ್ಕಾಸು ಲಭಿಸಿಲ್ಲ. […]

ಭಾಗ್ಯಶ್ರೀ ಸಾವು : ಮನನೊಂದ ತಂದೆ ಆತ್ಮಹತ್ಯೆಗೆ ಶರಣು

Tuesday, June 2nd, 2015
Ramanna Naik Bhagyashree

ವೇಣೂರು : ಮಗಳ ಸಾವಿನಿಂದ ಮನನೊಂದ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಹೊಸಮನೆ ರಾಮಣ್ಣ ಸಾಲ್ಯಾನ್‌ (48) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಮರಣೋತ್ತರ ವರದಿ ಬರುವ ಮೊದಲೇ ಭಾಗ್ಯಶ್ರೀ ಸಾವು ಆತ್ಮಹತ್ಯೆಯಿಂದ ಎಂದು ಬರೆದು ಪ್ರಕರಣ ಮುಗಿಸಲು ರುಜು ಹಾಕಿದ ಹಿನ್ನೆಲೆಯಲ್ಲಿ ಮನನೊಂದು ರಾಮಣ್ಣ ಸಾಲ್ಯಾನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಾಗರಿಕರು ದೂರುತ್ತಿದ್ದಾರೆ. ರಾಮಣ್ಣ ಸಾಲ್ಯಾನ್‌ ಪತ್ನಿ ಶಶಿಕಲಾ ಅವರು ರವಿವಾರ ಸಂಜೆ ಕುಟುಂಬದ ದೆ„ವದ ಕಾರ್ಯ ಹಾಗೂ ಮಗಳ ಸಾವಿನ ಸದ್ಗತಿಗೋಸ್ಕರ 16 ಅಗೆಲು ಬಡಿಸುವ […]

ಧರ್ಮಸ್ಥಳ : ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ ದೇವಳದ ಸಿಬ್ಬಂದಿ

Friday, August 8th, 2014
Dharmasthala River

ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಗುರುವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ ಮಹಿಳೆಯನ್ನು ದೇವಳದ ಸಿಬ್ಬಂದಿ ಸಕಾಲಿಕ ಪ್ರಜ್ಷೆಯಿಂದ ರಕ್ಷಿಸಿದ ಘಟನೆ ವರದಿಯಾಗಿದೆ. ಬೆಂಗಳೂರಿನ ನಿವಾಸಿ ಗೀತಾ (ಹೆಸರು ಬದಲಾಯಿಸಲಾಗಿದೆ) ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ತಂದೆ – ತಾಯಿ ಜೊತೆ ವಾಸ್ತವ್ಯ ಇದ್ದಾರೆ. ಒಬ್ಬ ತಮ್ಮನೂ ಇದ್ದಾನೆ. ಗುರುವಾರ ಅದೇನೋ ಮಾನಸಿಕ ಖಿನ್ನತೆ ಆಕೆಯನ್ನು ಕಾಡಿತು. ಮನೆಯಿಂದ ಬೆಳಿಗ್ಗೆ ಕಚೇರಿಗೆಂದು ಹೊರಟವಳು ಧರ್ಮಸ್ಥಳಕ್ಕೆ ಬರುವ ಬಸ್ ಹತ್ತಿದರು. ಸಂಜೆ 7 ಗಂಟೆಗೆ […]

ನಿವೃತ್ತ ಸೈನಿಕನ ಪತ್ನಿ ತನ್ನ ಮಗಳನ್ನು ಬಾವಿಗೆ ಎಸೆದು ತಾನು ಆತ್ಮಹತ್ಯೆ !

Thursday, July 11th, 2013
Bantwal Death

ಬಂಟ್ವಾಳ:  ನಿವೃತ್ತ ಸೈನಿಕ ನವೀನ್ ಚಂದ್ರ ಎಂಬವರ ಪತ್ನಿ ಪ್ರತಿಮಾ(32) ತನ್ನ ಮಗಳು ದಿಯಾ(9) ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಂಟ್ವಾಳ ಸಮೀಪದ ಮೆಲ್ಕಾರ್ ಎಂಬಲ್ಲಿ ನಡೆದಿದೆ. ಗುರುವಾರ ಮುಂಜಾನೆ ಈರ್ವರ ಶವ  ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ, ಕೌಟುಂಬಿಕ ವಿರಸದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆಯಾದರೂ, ಸ್ಪಷ್ಟ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಮೆಲ್ಕಾರ್ ನಲ್ಲಿ ವಾಸ್ತವ್ಯ ವಿರುವ ಪ್ರತಿಮಾ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗಳು ದಿಯಾ ಪಾಣೆಮಂಗಳೂರು […]

ಅಪಘಾತದಿಂದ ನೊಂದ ವ್ಯಕ್ತಿ ಆತ್ಮಹತ್ಯೆ

Wednesday, April 3rd, 2013
Man sucide at well

ಮಂಗಳೂರು : ಕೆಲ ತಿಂಗಳ ಹಿಂದೆ ನಡೆದ ಅಪಘಾತದಿಂದಾಗಿ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಗರದ ಬಿಕರ್ನಕಟ್ಟೆ ಬಳಿ ನಡೆದಿದೆ. ಕಳೆದ ಫೆಬ್ರವರಿ ೨೩ ರಂದು ವೆಲೇರಿ ಯನ್ ರೋಡ್ರಿಗಸ್ ಎಂಬವರು ಕಂಕನಾಡಿ ಬಳಿ ತನ್ನ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ೧೨ ವರ್ಷದ  ಬಾಲಕಿಯೊಬ್ಬಳು ಇವರ ಕಾರಿನಡಿಗೆ ಬಿದ್ದು ಮೃತಪಟ್ಟಿದ್ದಳು. ರಸ್ತೆ ದಾಟುವಾಗ ಈ ಅಪಘಾತ ನಡೆದಿತ್ತು. ಈ ಅಪಘಾತದಿಂದ ವೆಲೇರಿಯನ್ ರವರು ಸಾಕಷ್ಟು ನೊಂದಿದ್ದು ಇದೆ ಕಾರಣದಿಂದ ನಿನ್ನೆ ಬೆಳಿಗ್ಗೆ […]

ಕದ್ರಿ ಪಾರ್ಕ್ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿಯೊಬ್ಬಳ ಶವ ಪತ್ತೆ

Wednesday, March 20th, 2013
Young girl hanging Kadri hills

ಮಂಗಳೂರು : ಕದ್ರಿ ಪಾರ್ಕ್ ಎದುರುಗಡೆ ಇರುವ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಮರವೊಂದಕ್ಕೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಪುತ್ತೂರಿನ ಪ್ರಮೀಳಾ(18) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ  ಈ ದಾರಿಯಲ್ಲಿ ವ್ಯಕ್ತಿಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದ ಪೊದೆಯ ಮರದಲ್ಲಿ ಯುವತಿಯ ಶವ ನೇತಾಡುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ದಿನಗಳ ಹಿಂದೆಯೇ ಈ ಸಾವು ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ. […]