Blog Archive

ಹಲ್ಲೆ ಪ್ರಕರಣ: ಏಳು ಮಂದಿಗೆ ಶಿಕ್ಷೆ, ದಂಡ

Wednesday, December 13th, 2017
7-people

ಮಂಗಳೂರು: ವೈಯುಕ್ತಕ ಮತ್ತು ಹಾಗೂ ಕೌಟುಂಬಿಕ ವೈಷಮ್ಯದ ಹಿನ್ನೆಯಲ್ಲಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಅಪರಾಧಿಗಳಿಗೆ ಮಂಗಳೂರಿನ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಉಪ್ಪಿನಂಗಡಿ ನಿವಾಸಿಗಳಾದ ಜೆಸಿಬಿ ಸಿದ್ದೀಕ್ (36), ಸುಲೈಮಾನ್ (33), ಸಿರಾಜ್ (31), ಅಬ್ದುಲ್ ಗಫೂರ್ (36), ಹಾರಿಸ್ (34), ಅಬ್ದುಲ್ ಸತ್ತಾರ್ (28), ಬಿ.ಟಿ. ಫಾರೂಕ್ (30) […]

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದ ಆರೋಪಿ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Tuesday, August 30th, 2016
PFI-activists

ಮಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದ ಆರೋಪಿ ಬಿಡುಗಡೆಗೆ ಆಗ್ರಹಿಸಿ ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪಿಎಫ್ಐ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಜಿಲ್ಲೆಯ ವಾಮಂಜೂರಿನಲ್ಲಿ ಕೊಲೆಗೀಡಾದ ಚರಣ್ ಪೂಜಾರಿ ಕೊಲೆ ವಿಚಾರಣೆಯ ಸಲುವಾಗಿ ಸೈಫುಲ್ಲಾ ಎಂಬಾತನನ್ನು ಬಂಧಿಸಲಾಗಿತ್ತು. ಆರೋಪಿಯು ಪಿಎಫ್ಐ ಸಂಘಟನೆ ನಾಯಕನಾಗಿದ್ದು, ಆತನ ಬಿಡುಗಡೆಗಾಗಿ ಭಾನುವಾರ ಪಿಎಫ್ಐ ಸಂಘಟನೆಯವರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದರು. ಪ್ರತಿಭಟನೆ ವೇಳೆ ಹೆಲ್ಮೆಟ್ ರಹಿತವಾಗಿ ಮತ್ತು ಒನ್‌ವೇನಲ್ಲಿ ಸಂಚರಿಸುತ್ತಿದ್ದ […]

ಮಹದಾಯಿ ಹೋರಾಟ: ಲಾಠಿ ಪ್ರಹಾರಕ್ಕೆ ಸಂಬಂಧಪಟ್ಟಂತೆ ಒಬ್ಬ ಇನ್‌ಸ್ಪೆಕ್ಟರ್‌, 9 ಜನ ಪೊಲೀಸರು ಅಮಾನತು

Wednesday, August 3rd, 2016
Yamanooru

ಹುಬ್ಬಳ್ಳಿ: ಮಹದಾಯಿ ಹೋರಾಟದ ವೇಳೆ ಯಮನೂರಲ್ಲಿ ನಡೆದ ಲಾಠಿ ಪ್ರಹಾರಕ್ಕೆ ಸಂಬಂಧಪಟ್ಟಂತೆ ಒಬ್ಬ ಇನ್‌ಸ್ಪೆಕ್ಟರ್‌ ಸೇರಿದಂತೆ 9 ಜನ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಲಾಠಿ ಚಾರ್ಜ್‌ನ ವಿಡಿಯೋ ಹಾಗೂ ಧಾರವಾಡ ಎಸ್ಪಿ ನೀಡಿರುವ ವರದಿ ಆಧರಿಸಿ ಬೆಳಗಾವಿ ಉತ್ತರ ವಲಯದ ಐಜಿಪಿ ಡಾ.ಕೆ. ರಾಮಚಂದ್ರ ರಾವ್‌ ಅವರು 9 ಜನರನ್ನು ಅಮಾನತುಗೊಳಿಸಿ ಮಂಗಳವಾರ ಆದೇಶಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಠಾಣಾಧಿಕಾರಿ ಅರುಣಕುಮಾರ ಹಪ್ಪಳಿ, ಇಬ್ಬರು ಪೇದೆಗಳು, ವಿಜಯಪುರ ಜಿಲ್ಲೆ ಇಬ್ಬರು, ಬೆಳಗಾವಿ ಜಿಲ್ಲೆಯ ನಾಲ್ವರು ಪೇದೆಗಳು ಸೇರಿ ಒಟ್ಟು […]

ನಾರಂಪಾಡಿಯಲ್ಲಿ ಸ್ಪೋಟ: ನಾಯಿ ಸಾವು

Friday, July 8th, 2016
dog death

ಬದಿಯಡ್ಕ: ನಾರಂಪಾಡಿ ಬಳಿಯ ನೆಲ್ಲಿಯಡ್ಕದಲ್ಲಿ ವ್ಯಕ್ತಿಯೊಬ್ಬರ ಹಿತ್ತಿಲಿನಲ್ಲಿ ಆಕಸ್ಮಿಕ ಸ್ಪೋಟ ಸಂಭವಿಸಿ ನಾಯಿಯೊಂದು ಸತ್ತು ಬಿದ್ದಿದೆ. ಸ್ಪೋಟದ ಸದ್ದು ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೋಡಿದಾಗ ನಾಯಿಯ ತಲೆ ಛಿದ್ರವಾಗಿತ್ತು. ಮಾಹಿತಿ ಲಭಿಸಿ ಸ್ಥಳಕ್ಕೆ ಬಂದ ಬದಿಯಡ್ಕ ಪೊಲೀಸರು ತನಿಖೆ ನಡೆಸಿದರು. ಸಿಡಿದಿರುವುದು ಸ್ಪೋಟಕ ವಸ್ತು ಎಂಬುದು ಖಚಿತಗೊಂಡಿದೆ. ಕಾಡು ಹಂದಿಗೆ ಇರಿಸಿದ ಸ್ಪೋಟಕ ಸಿಡಿದಿದ್ದು ಇದರಿಂದ ನಾಯಿ ಸತ್ತಿದೆ ಎಂದು ಅಂದಾಜಿಸಲಾಗಿದೆ. ಆದರೆ ಸ್ಪೋಟಕ ಇರಿಸಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭಾಗ್ಯಶ್ರೀ ಸಾವು : ಮನನೊಂದ ತಂದೆ ಆತ್ಮಹತ್ಯೆಗೆ ಶರಣು

Tuesday, June 2nd, 2015
Ramanna Naik Bhagyashree

ವೇಣೂರು : ಮಗಳ ಸಾವಿನಿಂದ ಮನನೊಂದ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಹೊಸಮನೆ ರಾಮಣ್ಣ ಸಾಲ್ಯಾನ್‌ (48) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಮರಣೋತ್ತರ ವರದಿ ಬರುವ ಮೊದಲೇ ಭಾಗ್ಯಶ್ರೀ ಸಾವು ಆತ್ಮಹತ್ಯೆಯಿಂದ ಎಂದು ಬರೆದು ಪ್ರಕರಣ ಮುಗಿಸಲು ರುಜು ಹಾಕಿದ ಹಿನ್ನೆಲೆಯಲ್ಲಿ ಮನನೊಂದು ರಾಮಣ್ಣ ಸಾಲ್ಯಾನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಾಗರಿಕರು ದೂರುತ್ತಿದ್ದಾರೆ. ರಾಮಣ್ಣ ಸಾಲ್ಯಾನ್‌ ಪತ್ನಿ ಶಶಿಕಲಾ ಅವರು ರವಿವಾರ ಸಂಜೆ ಕುಟುಂಬದ ದೆ„ವದ ಕಾರ್ಯ ಹಾಗೂ ಮಗಳ ಸಾವಿನ ಸದ್ಗತಿಗೋಸ್ಕರ 16 ಅಗೆಲು ಬಡಿಸುವ […]

ಕಾವೂರು ಠಾಣೆ ಪೊಲೀಸರ ವಿರುದ್ದ ಹಿಂದೂ ಕಾರ್ಯಕರ್ತರ ಪ್ರತಿಭಟನೆ

Monday, October 13th, 2014
vhp protest

ಮಂಗಳೂರು : ವಿಶ್ವ ಹಿಂದು ಪರಿಷತ್, ಬಜರಂಗ ದಳ ಕಾರ್ಯಕರ್ತರು ಮೂಡುಶೆಡ್ಡೆ ಹಿಂದೂ ಕಾರ್ಯಕರ್ತನೊರ್ವನಿಗೆ ಕಾವೂರು ಠಾಣೆ ಇನ್ಸ್ ಫೆಕ್ಟರ್ ಹಾಗೂ ಪೇದೆಗಳಿಬ್ಬರು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸಿ ಅ13 ಸೋಮವಾರ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರು. ವಿಹಿಂಪ ಮುಖ್ಯಸ್ಥ ಜಗದೀಶ್ ಶೇಣವ ಮಾತನಾಡಿ ಹಿಂದೂ ಕಾರ್ಯಕರ್ತ ಚರಣ್ ಈ ಹಿಂದೆ ಕೇಸೊಂದರಲ್ಲಿ ಠಾಣೆಗೆ ಹಾಜರಾಗದೆ, ನೇರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾನೆ. ಇದನ್ನೇ ನೆಪವಾಗಿರಿಸಿ ಚರಣ್ ನನ್ನು ಬಂಧಿಸಿದ ಪೊಲೀಸರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆತ ಎದ್ದು […]

ಬಂಟ್ವಾಳ : ಗೃಹಿಣಿಯೋರ್ವಳು ನಿಗೂಢವಾಗಿ ನಾಪತ್ತೆ

Wednesday, July 10th, 2013
Aladangady Woman

ಬಿ.ಸಿ.ರೋಡು : ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ ಕಲ್ಕುರಿ ಎಂಬಲ್ಲಿಂದ ಗೃಹಿಣಿಯೋರ್ವಳು ನಿಗೂಢವಾಗಿ ನಾಪತ್ತೆಯಾದ ಘಟನೆ ವರದಿಯಾಗಿದೆ. ಕಾಣೆಯಾದವರನ್ನು ಸ್ಥಳೀಯ ನಿವಾಸಿ ಈಶ್ವರ ನಾಯ್ಕ ಎಂಬವರ ಮಗಳು ಶಶಿಕಲಾ (29) ಎಂದು ಗುರುತಿಸಲಾಗಿದೆ. ಗಂಡನ ಮನೆಗೆ ಹೋಗಿ ಬರುತ್ತೇನೆಂದು ತವರು ಮನೆಯಿಂದ ಹೊರಟವರು ಹಿಂದಿರುಗಿ ಮನೆಗೂ ಬಾರದೆ ಗಂಡನ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ಈಕೆಯನ್ನು ಬೆಳ್ತಂಗಡಿಯ ಆಳದಂಗಡಿ ನಿವಾಸಿ ಪ್ರಭಾಕರ್ ಎಂಬಾತನೊಂದಿಗೆ ಎರಡು ತಿಂಗಳ ಹಿಂದಷ್ಟೆ ವಿವಾಹ ಮಾಡಿಕೊಡಲಾಗಿತ್ತು. ಗಂಡನ ಮನೆಯಿಂದ ತವರು ಮನೆಗೆ […]

ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರ ಕತ್ತು ಕೊಯ್ದ ಕೊಲೆ

Wednesday, July 3rd, 2013
Shamsid Uda

ಬೆಂಗಳೂರು : ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರನ್ನು ಅವರ ಕಚೇರಿಯಲ್ಲೇ ಕತ್ತು ಕೊಯ್ದ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಟ್ಯಾನರಿ ರಸ್ತೆಯ ಈದ್ಗಾ ಕಾಂಪ್ಲೆಕ್ಸ್ ನಲ್ಲಿಯ ಕ್ರೆಡಿಟ್ ಕೋ ಆಪರೇಟಿವ್ ಕಚೇರಿಯಲ್ಲಿಯೇ ಶಂಷಿಲ್ ಉದಾ (63) ಕೊಲೆಯಾದ ದುರ್ದೈವಿ. ಬುಧವಾರ ಬೆಳಗ್ಗೆ ಶಂಷಿಲ್ ಅವರನ್ನು  ಕೊಲೆ ಮಾಡಲಾಗಿದೆ. ಪ್ರತಿದಿನ ಶಂಷಿಲ್ 8.30ಕ್ಕೆ ಸೊಸೈಟಿಗೆ ಆಗಮಿಸುತ್ತಿದ್ದರು. ಬುಧವಾರ ಸಹ ಅವರು ಕಚೇರಿಗೆ […]

ಎಟಿಎಂ ಹಣ ಎಗರಿಸಿದ ಚಾಲಕಿ ಕಳ್ಳರ ತಂಡ, ಗಂಟೆಯೊಳಗೆ ಹಿಡಿದ ಪೊಲೀಸರು

Friday, December 16th, 2011
ATM Thieves

ಮಂಗಳೂರು : ನಗರದ ಹಂಪನಕಟ್ಟೆಯ ವಿಲಾಗ್ರೀಸ್ ಬಳಿ ಕೆಎಂಸಿ ಡೆಂಟಲ್‌ ಕಾಲೇಜು ಕಟ್ಟಡದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಟಿಎಂ ಯಂತ್ರಕ್ಕೆ ನಗದು ತುಂಬಿಸಲು ಬಂದಿದ್ದ ಪ್ರೋ ಇಂಟರ್ಯಾಕ್ಟಿವ್‌ ಸರ್ವೀಸಸ್‌ನ ಆಮ್ನಿ ವಾಹನದಿಂದ ಹಣವಿದ್ದ ಪೆಟ್ಟಿಗೆಯನ್ನು ಗುರುವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಕಳ್ಳರು ಅಪಹರಿಸಿ ಪರಾರಿಯಾಗಿದ್ದಾರೆ. ಚಾಲಕಿ ಕಳ್ಳರ ತಂಡ ಎಟಿಎಂ ಬಳಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಚಾಲಕ ಮಾತ್ರ ಇರುವುದನ್ನು ಗಮನಿಸಿ ಅಲ್ಲಿಗೆ ಬಂದ ತಂಡದ ವ್ಯಕ್ತಿಯೊಬ್ಬ ಹತ್ತು ರೂ.ಗಳ ಸುಮಾರು 25 ನೋಟುಗಳನ್ನು ಕಾರಿನ […]

ಎರಡು ಫ್ಲಾಟ್‌ ಖರೀದಿಸಿದರೆ ಒಂದು ಫ್ಲಾಟ್‌ ಉಚಿತ

Thursday, November 3rd, 2011
Flats

ಮಂಗಳೂರು: ಮಳೆಗಾಲದಲ್ಲಿ ಏನೆಲ್ಲಾ ಆಫರ್ ಗಳು ಬರುತ್ತವೆ ನೋಡಿ. ಎರಡು ಫ್ಲಾಟ್‌ ಖರೀದಿಸಿದರೆ ಒಂದು ಫ್ಲಾಟ್‌ ಉಚಿತ ಇದು ಮಂಗಳೂರಿಗರಿಗೆ ಹೊಸ ಕೊಡುಗೆ. ಹಾಗೆಂದು ಮೊಬೈಲ್‌ ಫೋನ್‌ನಲ್ಲಿ ಎಸ್‌ಎಂಎಸ್‌ ಕಳುಹಿಸಿ ಜನರನ್ನು ವಂಚಿಸಲು ಯತ್ನಿಸಿದ ಆರೋಪಿ ಬಜಪೆಯ ಮಹಮದ್‌ ಅನ್ಸಾರ್‌ (30) ನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಫ್ಲಾಟ್‌ ವೀಕ್ಷಿಸಲು ಬರುವ ಗ್ರಾಹಕರಿಗೆ ಆರೋಪಿ ಮಹಮದ್‌ ಅನ್ಸಾರ್‌ ನಿರ್ಮಾಣ ಹಂತದಲ್ಲಿರುವ ಎರಡು ಫ್ಲಾಟ್‌ಗಳನ್ನು ತೋರಿಸಿ ನಂಬಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಬಿಲ್ಡರ್‌ ಸಂಸ್ಥೆಯೊಂದರ ಮ್ಯಾನೇಜರ್‌ ನೀಡಿದ ದೂರಿನನ್ವಯ ಪೊಲೀಸರು […]