ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಕ್ಕಳ ಶಸ್ತ್ರಕ್ರಿಯೆಯಲ್ಲಿ ಹೊಸ ಅಧ್ಯಾಯ

Tuesday, December 12th, 2023
AJ Hospital

ಮಂಗಳೂರು : ವೈದ್ಯಕ ನಾವೀನ್ಯತೆಯಲ್ಲಿ ಗಮನಾರ್ಹ ಸಾಧನೆಯಲ್ಲಿ, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು 4 ವರ್ಷದ ಹುಡುಗನಿಗೆ ಬಹು ಎಟ್ರಿಯಲ್ ಸೆಪ್ಟಲ್ ನ್ಯೂನತೆಗಳನ್ನು (ಎಎಸ್ಡಿಗಳು) ಸೂಕ್ಷ್ಮ ಸಾಧನ ಮುಚ್ಚುವಿಕೆಯ ವಿಧಾನ ಬಳಸಿಕೊಂಡು ಯಶಸ್ವಿಯಾಗಿ ಚಿಕಿತ್ಸೆ ನೀಡಿ, ತೆರೆದ ಹೃದಯ ಶಸ್ತ್ರಕ್ರಿಯೆಯ ಅಗತ್ಯವನ್ನು ತಪ್ಪಿಸಿದೆ. ಕವಿನ್ (ಹೆಸರು ಬದಲಾಯಿಸಲಾಗಿದೆ) ಚಿಕ್ಕಂದಿನಿಂದಲೂ ಪುನರಾವರ್ತಿತ ಶ್ವಾಸಕೋಶದ ಸೋಂಕುಗಳು, ಕಡಿಮೆ ತೂಕ ಹೆಚ್ಚಳ ಮತ್ತು ಕಡಿಮೆ ಹಸಿವಿನಿಂದ ಬಳಲುತ್ತಿದ್ದನು. ಅವನ ಸ್ಥಿತಿಯು ಹದಗೆಟ್ಟು, ಹಲವಾರು ಬಾರಿ ಮಕ್ಕಳ ಐಸಿಯುಗೆ ದಾಖಲಾಗುವಂತೆ ಮಾಡಿತು […]

ಖಾಸಗಿ ಆಸ್ಪತ್ರೆಗಳು ಕೋವಿಡ್‌ ನಿರ್ವಹಣೆಗೆ ಶೇ. 50ರಷ್ಟನ್ನು ಸರಕಾರಕ್ಕೆ ಬಿಟ್ಟು ಕೊಡಲೇಬೇಕು : ಶ್ರೀನಿವಾಸ ಪೂಜಾರಿ

Friday, August 7th, 2020
srinivas-poojary

ಮಂಗಳೂರು: ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಕಾಲೇಜುಗಳು ಕೋವಿಡ್‌ ನಿರ್ವಹಣೆಗೆ ತಮ್ಮ ಹಾಸಿಗೆ ಸಾಮರ್ಥ್ಯದ ಶೇ. 50ರಷ್ಟನ್ನು ಸರಕಾರಕ್ಕೆ ಬಿಟ್ಟು ಕೊಡಲೇಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಎ.ಜೆ. ಆಸ್ಪತ್ರೆ ಹಾಗೂ ಶ್ರೀನಿವಾಸ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕ ಆರೋಗ್ಯ ರಕ್ಷಣೆ ಸರಕಾರದ ಆದ್ಯತೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸರಕಾರದೊಂದಿಗೆ ಸಹಕರಿಸಬೇಕು. ರಾಜ್ಯ ಸರಕಾರವು ಆಯುಷ್ಮಾನ್‌ ಯೋಜನೆಯಡಿ ಕೋವಿಡ್‌ ರೋಗಿಗಳಿಗೆ ಉಚಿತ […]

ವಿದ್ಯುತ್ ಅವಘಡದಿಂದ ಯುವಕ ಸಾವು : ತಪ್ಪಿತಸ್ಥರ ವಿರುದ್ದ ಪ್ರಕರಣ ದಾಖಲಿಸಲು ದ.ಕ.ದಲಿತ ಸೇವಾ ಸಮಿತಿ ಆಗ್ರಹ

Friday, February 14th, 2020
puttur

ಪುತ್ತೂರು : ಪೈಂಟ್ ಕೆಲಸ ಮಾಡುತ್ತಿದ್ದ ಯುವಕ ವಿದ್ಯುತ್ ಅವಘಡದಿಂದ ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕೇವಲ ಗುತ್ತಿಗೆದಾರರ ವಿರುದ್ಧ ಮಾತ್ರವಲ್ಲ. ನಿರ್ಲಕ್ಷ್ಯ ವಹಿಸಿದ ಮೆಸ್ಕಾಂ ಮತ್ತು ಆಸ್ಪತ್ರೆಯ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ದ.ಕ.ದಲಿತ ಸೇವಾ ಸಮಿತಿ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ.ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು , ಫೆ.6ಕ್ಕೆ ಪ್ರಗತಿ ಆಸ್ಪತ್ರೆಯಲ್ಲಿ ಪೈಂಟಿಂಗ್ ಕೆಲಸ ಮಾಡುವ ಸಮಯ ಬಪ್ಪಳಿಗೆ ದಿ.ಬಾಬು ಆದಿದ್ರಾವಿಡ ಎಂಬವರ ಪುತ್ರ ದೀಕ್ಷಿತ್ ಅವರಿಗೆ ವಿದ್ಯುತ್ ಶಾಕ್ ಹೊಡೆದಿತ್ತು. ಗಂಭೀರ ಸ್ಥಿತಿಯಲ್ಲಿದ್ದ […]

ಮಂಗಳೂರು : ಸ್ಯಾಕ್ಸೊಫೋನ್ ವಾದಕ ಡಾ. ಕದ್ರಿ ಗೋಪಾಲನಾಥ್ ರವರು ನಿಧನ

Friday, October 11th, 2019
Kadri-Gopalnath

ಮಂಗಳೂರು : ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ (70) ವಯೋಸಹಜ ಅನಾರೋಗ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕದ್ರಿಯವರು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರಾಗಿದ್ದರು. ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು , ಅದಕ್ಕೆ ಭಾರತೀಯ ಸಂಗೀತವನ್ನು ಕರಗತ ಮಾಡಿಸಿದವರಲ್ಲಿ ಕದ್ರಿ […]

ಕರಾವಳಿಯಲ್ಲಿ ಪ್ರಪ್ರಥಮ ಲಿವರ್ ಕಸಿ.. ಎ ಜೆ ಆಸ್ಪತ್ರೆ ಸಾಧನೆ

Tuesday, January 23rd, 2018
AJ-hospital

ಮಂಗಳೂರು: ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‌ ಸಹಭಾಗಿತ್ವದಲ್ಲಿ ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೃತ ದಾನಿಯಿಂದ (ಮೆದುಳು ನಿಷ್ಕ್ರಿಯಗೊಂಡ) ಪಡೆದ ಲಿವರ್‌ನ್ನು (ಯಕೃತ್ತು) ಬೆಂಗಳೂರಿನ ಸಾಫ್ಟ್‌‌ವೇರ್ ಉದ್ಯೋಗಿಯೊಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಇದೇ ಮೊದಲ ಬಾರಿ ಮಂಗಳೂರಿನಲ್ಲಿ ಕೈಗೊಂಡ ಈ ಪ್ರಯತ್ನದಲ್ಲಿ ಎ. ಜೆ. ಆಸ್ಪತ್ರೆ ಯಶಸ್ವಿಯಾಗಿದೆ. ಎ. ಜೆ. ವೈದ್ಯರ ತಂಡ ಮತ್ತು ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಹೆಪಟೋಬಿಲಿಯರಿ ಮತ್ತು ಮಲ್ಟಿ ಆರ್ಗನ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಕರಾದ ಡಾ. ರಾಘವೇಂದ್ರ […]

ಎ.ಜೆ ಆಸ್ಪತ್ರೆಯಲ್ಲಿ ಮೆಡಿಕಲ್ ಸೀಟು ಕೊಡಿಸುಸುವುದಾಗಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ 10 ಮಂದಿಯ ಬಂಧನ

Monday, September 11th, 2017
ajmedical

ಮಂಗಳೂರು :  ಎ.ಜೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚಿಸುತ್ತದ್ದ ಬೃಹತ್ ಜಾಲವೊಂದನ್ನು ಮಂಗಳೂರು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಮಂಗಳೂರು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ . ಮಂಗಳೂರಿನ ಪ್ರತಿಷ್ಠಿತ ಎ.ಜೆ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ ಆರೋಪಿಗಳು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗಿದೆ . ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಅಜಯ್ ನಾಯಕ್ […]

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವೈದ್ಯರ ತಂಡದಿಂದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Tuesday, August 2nd, 2016
A-J-Hospital

ಮಂಗಳೂರು: ಮೂರು ಗುಂಡಿಗೆಯ ಮೇಲ್ಕೋಣೆ ಹೊಂದಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗುವಿಗೆ ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. ಪಾವನ (ಹೆಸರು ಬದಲಿಸಲಾಗಿದೆ) ಎಂಬ ಹೆಸರಿನ 2 ವರ್ಷದ ಪ್ರಾಯದ ಅಂಕೋಲದ ಮಗು ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಹೀಗಾಗಿ ಪೋಷಕರು ಆಗಾಗ ಮಗುವನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದರು. ಬಳಿಕ ಎ.ಜೆ. ಆಸ್ಪತ್ರೆಯ ಮಕ್ಕಳ ಹೃದ್ರೋಗ ತಜ್ಞ ಡಾ| ಪ್ರೇಮ್‌ ಆಳ್ವ ಅವರು ಮಗುವನ್ನು ಪರೀಕ್ಷಿಸಿ ಹೃದಯದ ಸ್ಕ್ಯಾನ್‌(ಎಕೋ) ಮೂಲಕ ಮಗುವಿಗೆ […]

ಎ.ಜೆ. ಆಸ್ಪತ್ರೆ ಯಲ್ಲಿ ಚರ್ಮದ ಕ್ಯಾನ್ಸರ್ ಗೆ ಯಶಸ್ವೀ ಎಲೆಕ್ಟ್ರಾನ್ ಥೆರಪಿ

Tuesday, July 9th, 2013
Aj Hospital electron therapy

ಮಂಗಳೂರು: ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಪ್ರಪ್ರಥಮ ಬಾರಿಗೆ ಚರ್ಮದ ಕ್ಯಾನ್ಸರ್ ಗೆ ಎಲೆಕ್ಟ್ರಾನ್ ಥೆರಪಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. 78 ವರ್ಷದ ಮಹಿಳೆಯೋರ್ವರು ಒಂದು ವರ್ಷದಿಂದ ಕತ್ತಿನ ಭಾಗದಲ್ಲಿ ಹುಣ್ಣಿನಿಂದ ಕೂಡಿದ ಕಲೆಯಿಂದ ಬಳಲುತ್ತಿದ್ದರು. ಈ ಹುಣ್ಣು ಗುಣವಾಗುತ್ತಿರಲಿಲ್ಲ ಹಾಗೂ ಕಲೆಯು ದಿನದಿಂದ ದಿನಕ್ಕೆ ಬೆಳೆಯುತ್ತಿತ್ತು. ರೋಗಿಯು ಎ.ಜೆ. ಆಸ್ಪತ್ರೆಗೆ ಬಂದಾಗ ಈ ಕಲೆಯು ಅನಿರ್ದಿಷ್ಟ ಆಕಾರವನ್ನು ಹೊಂದಿದ್ದು, 3×3ಸೆ.ಮೀ.ನಷ್ಟು ದೊಡ್ಡದಾಗಿತ್ತು. ಈ ರೋಗಿಗೆ ಎಲೆಕ್ಟ್ರಾನ್ ಚಿಕಿತ್ಸೆಯನ್ನು ಸೂಚಿಸಿ 8 MeVಎಲೆಕ್ಟ್ರಾನ್ ಚಿಕಿತ್ಸೆಯನ್ನು ಇದೇ ಮೇ […]

ಎ.ಜೆ. ಆಸ್ಪತ್ರೆ ಆಸ್ಪತ್ರೆ:ರಾಜ್ಯದಲ್ಲೇ ಪ್ರಥಮ ಬೇರ್ಪಟ್ಟ ಕೈಗಳ ಯಶಸ್ವಿ ಮರುಜೋಡನೆ

Friday, February 1st, 2013
AJ Hospital

ಮಂಗಳೂರು : ನಗರದ ಎ.ಜೆ. ಆಸ್ಪತ್ರೆ ಆಸ್ಪತ್ರೆಯ ವೈದ್ಯರ ತಂಡ ವ್ಯಕ್ತಿಯೂಬ್ಬನ ಭುಜದಿಂದ ಸಂಪೂರ್ಣವಾಗಿ ಬೇರ್ಪಟ್ಟ ಎಡಗೈ ಮತ್ತು ಮೊಣಕೈ ಕೆಳಭಾಗದಿಂದ ತುಂಡಾದ ಬಲಗೈಯನ್ನು ಮೈಕ್ರೋವ್ಯಾಸ್ಕಾಲರ್ ಶಸ್ತ್ರ ಚಿಕಿತ್ಸೆಯ ಮೂಲಕ ಕೈಗಳನ್ನು ಮರು ಜೋಡಿಸುವಲ್ಲಿ ಯಶಸ್ವಿಯಾಗಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ,ಈ ವಿಷಯ ತಿಳಿಸಿ, ರಾಜ್ಯದಲ್ಲೇ ಇದು ಪ್ರಥಮ ವೈದ್ಯಕೀಯ ಸಾಧನೆ ಎಂದು ಅವರು ಹೇಳಿದರು. ಮೂಲ್ಕಿ ಹಳೆಯಂಗಡಿ ನಿವಾಸಿ ಶರಶ್ಚಂದ್ರ ಶೆಣೈ ಎಂಬವರು ಮುಲ್ಕಿ ರೈಲು ನಿಲ್ದಾಣದ ಬಳಿ ನಡೆದುಕೊಂಡು […]

ಎ.ಜೆ. ಆಸ್ಪತ್ರೆ :ಅನ್ನನಾಳದಲ್ಲಿನ ಫೈಬ್ರೋವ್ಯಾಸ್ಕಾಲರ್‌ ಪೊಲಿಪ್‌ ಸಮಸ್ಯೆಗೆ ಅಪರೂಪದ, ಯಶಸ್ವಿ ಶಸ್ತ್ರಚಿಕಿತ್ಸೆ

Friday, November 30th, 2012
AJ Hospital

ಮಂಗಳೂರು :ಅನ್ನನಾಳದಲ್ಲಿ ಕಂಡುಬರುವ ಫೈಬ್ರೋವ್ಯಾಸ್ಕಾಲರ್‌ ಪೊಲಿಪ್‌ (ಗಡ್ಡೆ) ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ನಗರದ ಎ.ಜೆ. ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಗುಣಮುಖರನ್ನಾಗಿಸಲಾಗಿದೆ. 32ರ ವಯಸ್ಸಿನ ಮಹಿಳೆಯೊಬ್ಬರು ಕಳೆದ ಮೂರು ವರ್ಷಗಳಿಂದ ಆಹಾರ ನುಂಗಲಾರದೆ ತೊಂದರೆಯಿಂದ ಬಳಲುತ್ತಿದ್ದರು. ಪರಿಣಾಮ ರಕ್ತ ಹೀನತೆಯಿಂದ ಬಳಲಿ ಕಳೆದ 6 ತಿಂಗಳಲ್ಲಿ 10 ಕೆ.ಜಿ. ತೂಕ ಕಳೆದುಕೊಂಡಿದ್ದರು. ಈ ಸಂದರ್ಭ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಜನರಲ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ| ಅಶೋಕ್‌ ಹೆಗ್ಡೆ ಅವರನ್ನು ಸಂಪರ್ಕಿಸಲಾಗಿತ್ತು. ಪರೀಕ್ಷೆಯ ಅನಂತರ ಮಹಿಳೆಗೆ […]