ಮುಸುಕುಹಾಕಿ ಕಾರಿನಲ್ಲಿ ಬಂದು ಗೋವುಗಳ ಕಳ್ಳತನಕ್ಕೆ ಯತ್ನಿಸಿದ ತಂಡ

Sunday, March 27th, 2022
Cow Thief

ಕಡಬ : ಮಲಗಿದ್ದ ಗೋವುಗಳನ್ನು ಮುಸುಕುಧಾರಿ ತಂಡವೊಂದು ಕಳ್ಳತನಕ್ಕೆ ಯತ್ನಿಸಿದ ಘಟನೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯದ ಆಂಜನೇಯ ಗುಡಿ ಬಳಿ ಈ ಘಟನೆ ನಡೆದಿದ್ದು, ಮಾ.25ರಂದು ಸಿಸಿ ಕೆಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಲಗಿದ್ದ ಗೋವನ್ನು ಕಾರಿನಲ್ಲಿ ಬಂದ ತಂಡ ಹಿಡಿಯಲು ಯತ್ನಿಸಿದ್ದು, ಗೋವು ತಪ್ಪಿಸಿಕೊಂಡಿರುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿರುವ ಕೆಲವು ದೃಶ್ಯ ವೈರಲ್‌ ಆಗಿದೆ.

ತುಂಬೆ ಮಜಿಯಲ್ಲಿ ನಾಲ್ಕು ಮನೆಗಳಿಗೆ ನುಗ್ಗಿ ನಗದು ದರೋಡೆ

Friday, April 16th, 2021
tumbe

ಬಂಟ್ವಾಳ :   ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬೆಯಲ್ಲಿ ಗುರುವಾರ ನಡೆದಿದೆ. ಮನೆಮಂದಿ ನಾಟಕ ವೀಕ್ಷಣೆಗೆಂದು ತೆರಳಿದ್ದ ಸಂದರ್ಭ ತುಂಬೆ ಗ್ರಾಮದ ಮಜಿ ಎಂಬಲ್ಲಿ ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ 8 ಸಾವಿರ ರೂ. ನಗದನ್ನು ದೋಚಿದ್ದಾರೆ. ಇನ್ನುಳಿದ ಮೂರು ಮನೆಯ ಕಪಾಟು ಸಹಿತ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಜಾಲಾಡಿದ್ದು, ನಗದು ಸಹಿತ ಬೆಲೆಬಾಳುವ ಯಾವುದೇ […]

ಸುಲಿಗೆ, ಕಳ್ಳತನ ನಡೆಸುತ್ತಿದ್ದ 6 ಮಂದಿ ದರೋಡೆಕೋರರ ಬಂಧನ

Thursday, April 15th, 2021
Robbers

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಲಿಗೆ, ಕಳ್ಳತನ ನಡೆಸುತ್ತಿದ್ದ 6 ಮಂದಿಯನ್ನು ಬಂಧಿಸಿದ್ದು, ಈ ಮೊದಲು  9 ಮಂದಿ ದರೋಡೆಕೋರರನ್ನು ಬಂಧಿಸಿದ್ದರು. ಇದೀಗ ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಮಂಗಳೂರಿನ ಕೆ.ಸಿ ರೋಡ್ನ ಮುಹಮ್ಮದ್ ಝುಬೈರ್, ಬೆಳ್ತಂಗಡಿಯ ಇಬ್ರಾಹಿಂ ಲತೀಫ್,‌ ಮೂಡಬಿದಿರೆಯ ರಾಕೇಶ್, ಅರ್ಜುನ್, ಉಪ್ಪಿನಂಗಡಿಯ ಮೋಹನ್ ಮತ್ತು ಕೋಣಾಜೆ ಬೋಳಿಯಾರ್ನ ಮನ್ಸೂರ್ ಬಂಧಿತರು. ಮಂಗಳೂರು ನಗರದಲ್ಲಿ 7 ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 8, ಹಾಸನದಲ್ಲಿ 2, ಚಿಕ್ಕಮಗಳೂರಿನಲ್ಲಿ 3, ಕೊಡಗುವಿನಲ್ಲಿ 5, ಉಡುಪಿಯಲ್ಲಿ […]

ಬೆಳ್ತಂಗಡಿ: 12 ಕಡೆಗಳಲ್ಲಿ ಅಂಗಡಿಗೆ ನುಗ್ಗಿ ಕಳ್ಳತನ

Monday, October 16th, 2017
belthangadi

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಒಂದೇ ರಾತ್ರಿ ಕಳ್ಳರು 12 ಕಡೆಗಳಲ್ಲಿ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲ್ಲೂಕಿನ ಹಲವೆಡೆ ಸರಣಿ ಕಳ್ಳತನ ನಡೆದಿದ್ದು ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಮರವಂತೆ ಬೀಚ್ ಬಳಿ 3 ಕಾರಿನ ಗ್ಲಾಸ್‌ ಒಡೆದು ಕಳ್ಳತನ ಬೆಳ್ತಂಗಡಿಯ ಅಳದಂಗಡಿ ಎಂಬಲ್ಲಿ 7 ಅಂಗಡಿ ಸೇರಿದಂತೆ ಕಾಲೇಜಿಗೆ ನುಗ್ಗಿದ ಕಳ್ಳರು ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿದ್ದಾರೆ. ಬೆಳ್ತಂಗಡಿ ಪೇಟೆಯಲ್ಲೂ ಕಳ್ಳರು ತಮ್ಮ ಕೈಚಳಕ ತೋರಿದ್ದು ಅಂಗಡಿಯ […]

ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ

Saturday, November 5th, 2016
jewellery-worth

ಮಂಗಳೂರು: ರಾತ್ರಿ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಬಂಟ್ವಾಳದ ಬೋಗೋಡಿಯ ಎಸ್‌.ಎಂ ನಗರ ಎಂಬಲ್ಲಿ ನಡೆದಿದೆ. ಅಬೂಬಕ್ಕರ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ರಾತ್ರಿ ವೇಳೆ ಮನೆ ಮಂದಿಯೆಲ್ಲಾ ಮಲಗಿದ ಮೇಲೆ ಮನೆಗೆ ನುಗ್ಗಿದ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಮುಂಜಾನೆ ಎದ್ದಾಗಲೇ ಮನೆಯವರಿಗೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಮನೆಯ ಮೇಲಿನ ಮಹಡಿಯಲ್ಲಿ ಹೊಸ ಕಿಚನ್ ರೂಂ ನಿರ್ಮಾಣದ ಕಾಮಗಾರಿ ಕೆಲ ದಿನಗಳಿಂದ […]

ಬೀಗ ಹಾಕಿದ ಮನೆಗೆ ನುಗ್ಗಿ 52,000 ರೂ. ಕಳ್ಳತನ

Wednesday, September 7th, 2016
Theft-manjeshwara

ಮಂಜೇಶ್ವರ: ಬೀಗ ಹಾಕಿದ ಮನೆಯೊಂದರ ಹಿಂಬಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನೊಳಗಿರಿಸಿದ್ದ ನಗದನ್ನು ಕಳವು ಗೈದು ಬಳಿಕ ಮನೆಯೊಳಗೆ ಕೆಂಪು ಮೆಣಸನ್ನು ಹಾಕಿ ಪರಾರಿಯಾದ ಘಟನೆ ಉದ್ಯಾವರ ಜುಮಾ ಮಸೀದಿ ಪರಿಸರದಲ್ಲಿ ನಡೆದಿದೆ. ಉದ್ಯಾವರ ಜುಮಾ ಮಸೀದಿ ಸಮೀಪವಾಸಿ ಗಲ್ಫ್ ಉದ್ಯೋಗಿ ಇಬ್ರಾಹಿಂ ಎಂಬವರ ಮನೆಗೆ ನುಗ್ಗಿದ ಕಳ್ಳರು ಮಕ್ಕಳ ಶಾಲಾ ಕಾಲೇಜಿನ ಶುಲ್ಕ ಪಾವತಿಸಲು ಕಪಾಟಿನಲ್ಲಿ ಇಟ್ಟಿದ್ದ 52 ಸಾವಿರ ರೂ. ವನ್ನು ಕಳವುಗೈದಿದ್ದಾರೆ. ಇಬ್ರಾಹಿಂ ರ ಪತ್ನಿ ಹಾಗೂ ಮಕ್ಕಳು ಶಾಲೆಗೆ ಹಾಗೂ […]

ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರ ಬಂಧನ

Monday, August 8th, 2016
Tamil-Womans arrest

ಮಂಗಳೂರು: ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ, 2.64 ಲಕ್ಷ ಮೌಲ್ಯದ 80 ಗ್ರಾಂ ತೂಕದ ಚಿನ್ನಾಭರಣ ಮತ್ತು 1,45,000 ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತ ಮಹಿಳೆಯರನ್ನು ತಮಿಳನಾಡಿನ ಮೆಟ್ಟು ಪಾಳಯಮ್‌ನ ಸಿಲ್ವಿ (24), ಅರೈ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಸುಲಿಗೆ ಮಾಡಿದ ಚಿನ್ನಾಭರಗಳನ್ನು ಮಾರಲು ಬಂದಿರುವ ಬಗ್ಗೆ ಖಚಿತಿ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ.ಯು. ಮತ್ತು ಸಿಬ್ಬಂದಿ ನಗರದ ರೂಪವಾಣಿ ಚಿತ್ರಮಂದಿರದ ಬಳಿ ಬಂಧಿಸಿದ್ದಾರೆ. ಬಸ್‌ನಲ್ಲಿ […]

ಜಿಲ್ಲೆಯ ವಿವಿಧ ದೇವಸ್ಥಾನಗಳಿಂದ ಕದ್ದ 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ವಶ

Saturday, July 20th, 2013
six temple thieves

ಮಂಗಳೂರು : ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ದೇವಸ್ಥಾನ ಹಾಗೂ ಬಸದಿಗಳಲ್ಲಿ ದರೋಡೆ ನಡೆಸಿದ್ದ ಕಳ್ಳರ ತಂಡವನ್ನು ಬಂಟ್ವಾಳ ಪೊಲೀಸರು ಬಂಧಿಸಿ, ಅವರಲ್ಲಿದ್ದ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ಪ್ರಾಚೀನ ಜೈನ ತೀರ್ಥಂಕರ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಂದು ಅವರ ಕಚೇರಿಯಲ್ಲಿ ಜುಲೈ 19ರಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಬಂಟ್ವಾಳ ಪೊಲೀಸರು  ಜೂನ್ 12ರಂದು ವಾಹನ ತಪಾಸಣೆ ಮಾಡುತ್ತಿದ್ದಾಗ […]

ಪಂಪ್‌ವೆಲ್ : ಮೆಡಿಕಲ್ ಶಾಪ್‌ವೊಂದರಿಂದ ರೂ. 10 ಸಾವಿರ ಕಳ್ಳತನ

Thursday, July 18th, 2013
Medical shop theft

ಮಂಗಳೂರು : ಪಂಪ್‌ವೆಲ್ ನಲ್ಲಿ ಸರಣಿ  ಕಳ್ಳತನಕ್ಕೆ ಪ್ರಯತ್ನಿಸಿದ ಕಳ್ಳರು ಮೆಡಿಕಲ್ ಶಾಪ್‌ವೊಂದರಿಂದ ರೂ. 10 ಸಾವಿರ ನಗದನ್ನು ಕದ್ದು ಪರಾರಿಯಾಗಿದ್ದಾರೆ. ಸಿಟಿ ಪಾಯಿಂಟ್ ಮೆಡಿಕಲ್ಸ್, ಜ್ಯೂಸ್ ಪಾಲೇಸ್, ವೈನ್ ಶಾಪ್ ಈ ಮೂರು ಅಂಗಡಿಗಳನ್ನು ಕಳ್ಳರು ಗುರಿಯಾಗಿಟ್ಟು ಕೊಂಡಿದ್ದರು. ಸಿಟಿ ಪಾಯಿಂಟ್ ಮೆಡಿಕಲ್ ನ ಬೀಗ ಒಡೆದು ಒಳಗೆ ನುಗ್ಗಿದ ಕಳ್ಳರಿಗೆ ರೂ.10,000 ಮಾತ್ರ ಸಿಕ್ಕಿದೆ. ಉಳಿದೆರಡು ಶಾಪ್ ಗಳಲ್ಲಿ ಕಳ್ಳರಿಗೆ ಯಾವುದೇ ಬೆಲೆ ಬಾಳುವ ವಸ್ತುಗಳು ದೊರೆತ್ತಿಲ್ಲ ಎಂದು ತಿಳಿದು ಬಂದಿದೆ. ಪ್ರಕರಣ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, […]