ಜನಾರ್ದನ ಪೂಜಾರಿ ಗಡಿಪಾರು ಮಾಡಿ ಎಂದವನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್​ ನಾಯಕರ ಮನವಿ

Friday, December 7th, 2018
j-r-lobo

ಮಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಗಡಿಪಾರು ಮಾಡಬೇಕೆಂದು ಆಡಿಯೋ ಸಂದೇಶ ಕಳುಹಿಸಿದ್ದ ವ್ಯಕ್ತಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮಾಜಿ ಶಾಸಕರುಗಳ ನೇತೃತ್ವದಲ್ಲಿ ಪೊಲೀಸ್ ಕಮಿಷನರ್ಗೆ ಮನವಿ ಸಲ್ಲಿಸಲಾಯಿತು. ಪೂಜಾರಿ ಅವರು ರಾಮಮಂದಿರ ನಿರ್ಮಾಣ ಕುರಿತಂತೆ ನೀಡಿರುವ ಹೇಳಿಕೆಯನ್ನು ವಿರೋಧಿಸಿ ವ್ಯಕ್ತಿವೋರ್ವ ಅವರನ್ನು ಎನ್ಕೌಂಟರ್ ಮಾಡಬೇಕು, ಗಡಿಪಾರು ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಸಂದೇಶ ಕಳುಹಿಸಿದ್ದ. ಮಾಜಿ ಶಾಸಕರಾದ ಜೆ ಆರ್ ಲೋಬೋ, ವಿಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ನ ನಾಯಕರು […]

ಜೆ.ಆರ್.ಲೋಬೋಯಿಂದ ಡೆಬಿಟ್ ಕಾರ್ಡ್ ಮಾಹಿತಿ… ಖಾತೆಯಿಂದಲೇ 49,000 ರೂ. ಲಪಟಾ!

Saturday, July 7th, 2018
j-r-lobo

ಮಂಗಳೂರು: ಮಾಜಿ ಶಾಸಕ ಜೆ.ಆರ್.ಲೋಬೋ ಅವರ ಡೆಬಿಟ್ ಕಾರ್ಡ್ ಮಾಹಿತಿ ಪಡೆದ ಖದೀಮನೋರ್ವ, ಅವರ ಬ್ಯಾಂಕ್ ಖಾತೆಯಿಂದಲೇ 49,000 ರೂ. ಲಪಟಾಯಿಸಿದ್ದಾನೆ. ಲೋಬೋ ಅವರ ಮೊಬೈಲ್ಗೆ ವ್ಯಕ್ತಿಯೋರ್ವ ಕರೆ ಮಾಡಿ ಸ್ಟೇಟ್ ಬ್ಯಾಂಕಿನಿಂದ ಮಾತನಾಡುವುದಾಗಿ ಸುಳ್ಳು ಹೇಳಿದ್ದಾನೆ. ನಿಮ್ಮ ಖಾತೆಯನ್ನು ಅಪ್ಡೇಟ್ ಮಾಡುತ್ತೇನೆಂದು ನಂಬಿಸಿದ್ದ ಆತ ಬಳಿಕ ಮಾಜಿ ಶಾಸಕರ ಎಟಿಎಂ ಕಾರ್ಡ್ನ ಒಟಿಪಿ ನಂಬರ್ ಪಡೆದು ಒಟ್ಟು 49,000 ರೂ. ಹಣವನ್ನು ಮೂರು ಕಂತುಗಳಾಗಿ ಡ್ರಾ ಮಾಡಿಕೊಂಡಿದ್ದಾನೆ. ವಂಚಕನ ಮಾತನ್ನು ನಂಬಿದ ಲೋಬೋ ಅವರು ಪಿನ್ […]

ಇವಿಎಂ ಮೇಲೆ ಅನುಮಾನ ನಿಲ್ಲಿಸದ ಜೆ ಆರ್ ಲೋಬೋ

Saturday, June 2nd, 2018
j-r-lobo-speech

ಮಂಗಳೂರು: ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲು‌ ಕಂಡಿದ್ದೇನೆ ಈ ಬಗ್ಗೆ ಇವಿಎಂ ಮೇಲೆ ಅನುಮಾನ ಇದೆ ಎಂದು ಮಾಜಿ ಶಾಸಕ ಜೆ ಆರ್ ಲೋಬೋ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಜೆ ಆರ್ ಲೋಬೋ ಅವರು ನನಗೆ ಇವಿಎಂ ಮೇಲೆ ಅನುಮಾನ ಇದೆ, ಇದಕ್ಕಾಗಿ ನ್ಯಾಯಲಯದ ‌ ಮೊರೆ ಹೋಗಲು ನಿರ್ಧರಿಸಿದ್ದೇನೆ ಎಂದಿದ್ದಾರೆ, ಈ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಸಮರ ಮಾಡಲಾಗುವುದು. ಇವಿಎಂ ನ ಎಲ್ಲಾ ಬೂತ್ ಗಳ ವಿವಿ ಪ್ಯಾಟ್ ನ ಮತ ಎಣಿಕೆ ಗೆ ನ್ಯಾಯಲಯದ ಅನುಮತಿ […]

ಮಹಾಮಳೆಗೆ ನನ್ನ ಮೇಲೆ ಟೀಕೆ ಮಾಡುವವರಿಗೆ ಸಾಮಾನ್ಯ ಜ್ಞಾನ ಇಲ್ಲ: ಜೆ ಆರ್ ಲೋಬೋ

Saturday, June 2nd, 2018
j-r-lobo

ಮಂಗಳೂರು: ಮಹಾಮಳೆಗೆ ನನ್ನ ಮೇಲೆ ಟೀಕೆ ಮಾಡುವವರಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದು ಮಾಜಿ ಶಾಸಕ ಜೆ ಆರ್ ಲೋಬೋ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ಜೆ ಆರ್ ಲೋಬೋ ಅವರು ಮಂಗಳೂರಿನಲ್ಲಿ‌ ಒಂದೇ ದಿನ 24 ಸೆಂಟಿ ಮೀಟರ್ ಮಳೆಯಾಗಿತ್ತು. ಇದು ಹಿಂದೆ ಬಂದಿರಲಿಲ್ಲ.ಆದರೆ ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ನನ್ನ ಮೇಲೆ ಟೀಕೆ ಮಾಡಲಾಗುತ್ತಿದೆ.‌ ಎಂದಿದ್ದಾರೆ. ಅದೇ ರೀತಿ ಸಂಸದರು ಮಾಡಿದ ಕಾಮಗಾರಿ ಪ್ರದೇಶದಲ್ಲಿಯು ಪ್ರವಾಹ ಪರಿಸ್ಥಿತಿ ಇತ್ತು. ಅದಕ್ಕೆ ನಾನು […]

ಪಾಕಿಸ್ತಾನ ಪರ ಘೋಷಣೆ ಆರೋಪ, ಕಾಂಗ್ರೆಸ್‌ ದೂರಿಗೆ ಬಿಜೆಪಿ ಪ್ರತಿದೂರು

Tuesday, May 22nd, 2018
bjp-party

ಮಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ವಿಶ್ವಾಸಮತ ಯಾಚಿಸದೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸಂಭ್ರಮಾಚರಣೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಗಳೂರಿನ ಜಯಪ್ರಶಾಂತ್ ಎಂಬುವವರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ವಿಡಿಯೋವನ್ನು ತಿರುಚಿ ಅದರಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಲಾಗಿದ್ದು, ಈ ರೀತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಜೆ.ಆರ್.ಲೋಬೋ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಆಯುಕ್ತರಿಗೆ ದೂರು […]

ಸ್ಮಶಾನದಲ್ಲಿ ಶಾಸಕ ಜೆ. ಆರ್. ಲೋಬೋ ವಿರುದ್ಧ ವಾಮಾಚಾರ!

Friday, May 4th, 2018
j-r-lobo

ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಜೆ.ಆರ್. ಲೋಬೋ ವಿರುದ್ಧ ವಾಮಾಚಾರ ನಡೆದಿದೆ ಎಂದು ಶಂಕಿಸಲಾಗಿರುವ ಘಟನೆ ಮಂಗಳೂರಿನ ನಂದಿಗುಡ್ಡೆ ಸ್ಮಶಾನದಲ್ಲಿ ನಡೆದಿದೆ. ನಂದಿಗುಡ್ಡೆ ಸ್ಮಶಾನದಲ್ಲಿ ಎರಡು ದಿನಗಳ ಹಿಂದೆ ಕೇರಳದಿಂದ ಬಂದವರು ಪೂಜೆ ನಡೆಸಿದ್ದಾರಂತೆ. ಅದನ್ನು ಪರಿಶೀಲಿಸಲು ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಸ್ಮಶಾನಕ್ಕೆ ಹೋಗಿದ್ದಾರೆ. ಅಲ್ಲಿ ವಾಮಾಚಾರ ಮಾಡಲಾಗಿದೆ ಎಂದು ಸಂಶಕಿಸಲಾದ ಪ್ರತಿಕೃತಿಯನ್ನು ಅವರು ಬಿಡಿಸಿ ನೋಡಿದಾಗ ಅದರಲ್ಲಿ ಮಲಯಾಳಂ ಭಾಷೆಯಲ್ಲಿ ಜೆ ಆರ್ ಲೋಬೋ ಹೆಸರು ಬರೆದಿರುವುದು ಬಯಲಾಗಿದೆ. ನರೇಂದ್ರ […]

ಶ್ರೀ ನಾರಾಯಣ ಗುರು, ಕೋಟಿ ಚೆನ್ನಯರು ನಮಗೆ ಆದರ್ಶ – ಸುನೀಲ್ ಕುಮಾರ್ ಬಜಾಲ್

Wednesday, May 2nd, 2018
sunil-kumar

ಮಂಗಳೂರು: ಮಂಗಳೂರು ನಗರವು ಒಂದು ಕಾಲದಲ್ಲಿ ಸೌಹಾರ್ದತೆಯ ತಾಣ ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಸೌಹಾರ್ದತೆಯನ್ನು ನಾಶ ಮಾಡುವ ಹುನ್ನಾರ ಕೋಮವಾದಿಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ಸೌಹಾರ್ದತೆಯನ್ನು ಕಾಪಾಡಲು ಪಣ ತೊಡಬೇಕಾಗಿದ ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ ಮೊದಲೇ ಮೃದು ಹಿಂದುತ್ವವಾದಿ ಮನೋಭಾವಕ್ಕೆ ಒಳಗಾಗಿದ್ದಾರೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿರುವ ಸಿಪಿಐ(ಎಂ) ಪಕ್ಷವೆ ಮಾತ್ರವೇ ಜಿಲ್ಲೆಯಲ್ಲಿ ಕೋಮವಾದಕ್ಕೆದುರಾಗಿ ಐಕ್ಯತೆಯನ್ನು ಬೆಳೆಸಲು ನಿರಂತರ ಶ್ರಮವಹಿಸಿದೆ. ಸೌಹಾರ್ದತೆ ಬಯಸಲು ಸಿಪಿಐ(ಎಂ) ಪಕ್ಷ ಮಾತ್ರವೇ ಒಂದೇ ಜಾತಿ ಒಂದೇ ಮತ ಧರ್ಮಗಳ ವೇದವನ್ನು ಸಾರಿದ […]

ಜೆ.ಆರ್.ಲೋಬೋ ರವರ ಆಸ್ತಿ ಹೆಚ್ಚಾಗಿರುವುದೇ ಅವರ ಐದು ವರ್ಷದ ಅಭಿವೃದ್ಧಿಯ ಸಾಧನೆ – ಸುನಿಲ್ ಕುಮಾರ್ ಬಜಾಲ್

Friday, April 27th, 2018
sunilbajal

ಮಂಗಳೂರು  : ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಜೆ.ಆರ್.ಲೋಬೋರವರಲ್ಲಿದ್ದ ಆಸ್ತಿ ಈ ಚುನಾವಣೆಯ ಸಂದರ್ಭದಲ್ಲಿ ಎರಡುಪಟ್ಟು  ಜಾಸ್ತಿಯಾಗಿರುವುದು ನೋಡಿದರೆ ಈ ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರು ಮಂಗಳೂರನ್ನು ಅಭಿವೃದ್ಧಿ ಮಾಡುವ ಬದಲು ತಾವೇ ಅಭಿವೃದ್ಧಿಯಾಗಿರುವುದು ಇವರ ಮಹಾನ್ ಸಾಧನೆ ಎಂದು ನಿನ್ನೆ ಬಿಕರ್ಣಕಟ್ಟೆ ಯಲ್ಲಿ ನಡೆದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಂಗಳೂರಿನ ಅಭಿವೃದ್ದಿಗೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಎಡಿಬಿ ಯೋಜನೆಯ ಮೂಲಕ […]

ದ.ಕನ್ನಡದಲ್ಲಿ 2013ರಲ್ಲಿ ನೆಲ ಕಚ್ಚಿದ್ದ ಬಿಜೆಪಿ… ಈ ಬಾರಿ ಮತ್ತೆ ಅರಳಲು ಹರಸಾಹಸ!

Monday, April 16th, 2018
BJP

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೋಮು ದ್ವೇಷದ ರಾಜಕಾರಣದೊಂದಿಗೆ ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದ್ದು, ಮತ ಸೆಳೆಯುವ ಪ್ರಯತ್ನವನ್ನು ನಾಯಕರು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ರಾಜಕಾರಣ ಇಲ್ಲದೇ ರಾಜಕಾರಣ ನಡೆಯುವುದಿಲ್ಲವೇನೋ ಎಂಬ ಪರಿಸ್ಥಿತಿ ಇದೆ. ಇದು ಪ್ರತಿ ಚುನಾವಣೆಯಲ್ಲೂ ಸಾಮಾನ್ಯವಾಗಿದ್ದು, ಆದ್ದರಿಂದ ಈ ಚುನಾವಣೆಯಲ್ಲೂ ಅದು ಮುಂದುವರಿದಿದೆ. ಬಿಜೆಪಿಯ ಪ್ರಬಲ ಕೋಟೆ ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ […]

ಬೆಂಗ್ರೆ ಘರ್ಷಣೆ ಹಿಂದೆ ಶಾಸಕ ಜೆ.ಆರ್.ಲೋಬೋ: ನಳಿನ್ ಕುಮಾರ್ ಕಟೀಲ್

Friday, February 23rd, 2018
nalin-kumar

ಮಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ. ಮಂಗಳೂರು ಹೊರವಲಯದ ಬೆಂಗ್ರೆಯಲ್ಲಿ ನಡೆದಿರುವ ಘಟನೆ ಇದಕ್ಕೆ ಸಾಕ್ಷಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಗುರುವಾರ ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಬಾ ಬೆಂಗ್ರೆಯಲ್ಲಿ ನಡೆದ ಘರ್ಷಣೆ, ಕಲ್ಲು ತೂರಾಟ ಪ್ರಕರಣದ ಹಿಂದೆ ಕಾಂಗ್ರೆಸಿನನ ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ಕಿಡಿಕಾರಿದರು. ಜೆ.ಆರ್.ಲೋಬೋ ಸೋಲಿನ ಭಯದಿಂದ ಕಾಂಗ್ರೆಸ್ ಓಟ್ ಬ್ಯಾಂಕ್ ಗಾಗಿ ಕೋಮು ಗಲಭೆ ಸೃಷ್ಠಿಸಲು […]