ಕಾಂಗ್ರೆಸ್‌ ನಾರಾಯಣಗುರುಗಳನ್ನು ಮುಂದಿಟ್ಟು ರಾಜಕೀಯ ಮಾಡಿ ಮತ ಗಿಟ್ಟಿಸುವ ಯತ್ನವನ್ನು ಮಾಡುತ್ತಿದೆ : ಹರಿಕೃಷ್ಣ ಬಂಟ್ವಾಳ್

Saturday, January 22nd, 2022
Harikrishna Bantwal

ಮಂಗಳೂರು :  ಕಾಂಗ್ರೆಸ್‌ನ ಅಸ್ತಿತ್ವ ಮುಗಿಯುತ್ತಾ ಬಂದಿರುವ ಕಾರಣ ಇದೀಗ ನಾರಾಯಣಗುರುಗಳನ್ನು ಮುಂದಿಟ್ಟು ರಾಜಕೀಯ ಮಾಡಿ ಮತ ಗಿಟ್ಟಿಸುವ ಯತ್ನವನ್ನು ಮಾಡುತ್ತಿದೆ. ಆದರೆ ಆ ಕಾರ್ಯಕ್ಕೆ ನಾರಾಯಣ ಗುರುಗಳೇ ಬೆಂಕಿ ಹಾಕುತ್ತಾರೆ ಎಂದು ಬಿಜೆಪಿ ನಾಯಕ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಕೇಂದ್ರ ಸರಕಾರ ಅವಕಾಶ ನೀಡಿಲ್ಲ ಎಂಬ ವಿವಾದ ಸೃಷ್ಟಿ ಕಮುನಿಷ್ಟ್ ಹಾಗೂ ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದೆ ಎಂದು […]

ರಮಾನಾಥ ರೈ ಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ನೆಲಕಚ್ಚಲಿದೆ : ಹರಿಕೃಷ್ಣ ಬಂಟ್ವಾಳ್

Monday, November 16th, 2020
Harikrishna Bantwal

ಮಂಗಳೂರು : ಬಂಟ್ವಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಮಾನಾಥ ರೈ ಎಸ್‌ಡಿಪಿಐ ಜೊತೆ ಮೈತ್ರಿ ಮಾಡಿಕೊಂಡಿರುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಕೊಲೆ ಆರೋಪಿಗಳಿಗೆ ರೈ ಬೆಂಬಲ ನೀಡಿದ್ದೇನೆ ಎಂದಿದ್ದೇನೆಯೇ ವಿನಃ ಎಲ್ಲೂ ಕೂಡ ರೈ ಕೊಲೆಗಾರ ಎಂದು ಹೇಳಲಿಲ್ಲ. ಆದರೆ ಅವರ ಹಿಂಬಾಲಕರು ರೈಯನ್ನು ಕೊಲೆಗಾರ ಎಂದು ಹೇಳಿಕೊಂಡು ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಸಾಧ್ಯವಾದರೆ ಅವರು ನನ್ನನ್ನು ಬಂಧಿಸುವ ತಾಕತ್ತು ತೋರಿಸಲಿ ಎಂದು ಕಿಯೋನಿಸ್ಕ್ ಅಧ್ಯಕ್ಷ ಹರಿಕೃಷ್ಣ […]

ಹರಿಕೃಷ್ಣ ಬಂಟ್ವಾಳ್ ಆರೋಪದಿಂದ ಎಸ್​​ಡಿಪಿಐ ಮೇಲೆ ಗಂಭೀರ ಪರಿಣಾಮ – ಬಂಟ್ವಾಳ ನಗರ ಠಾಣೆಗೆ ದೂರು

Wednesday, November 11th, 2020
Harikrishna Bantwal

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾಡಿರುವ ಆರೋಪದಿಂದ ಎಸ್ಡಿಪಿಐ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಪಕ್ಷಕ್ಕೆ ಭಾರೀ ಅವಮಾನ ಉಂಟಾಗಿದೆ ಎಂದು  ಬಂಟ್ವಾಳ ನಗರ ಠಾಣೆಗೆ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಮುಹಮ್ಮದ್ ಇದ್ರೀಸ್ ದೂರು ನೀಡಿದ್ದಾರೆ. ಪಕ್ಷದ ವಿರುದ್ಧ ಸುಳ್ಳು ಮತ್ತು ನಿರಾಧಾರವಾದ ಗಂಭೀರ ಆರೋಪ ಮಾಡಿರುವುದರಿಂದ  ಪಕ್ಷದ ಬೆಂಬಲಿಗರಿಗೆ ಪಕ್ಷದ ಮೇಲೆ ನಂಬಿಕೆ ಕಡಿಮೆಯಾಗುವಂತಾಗಿದೆ. ಪಕ್ಷದ ಬಗ್ಗೆ ಸಮಾಜದಲ್ಲಿ ನಕರಾತ್ಮಕ ಭಾವನೆ ಉಂಟಾಗುವಂತಾಗಿದೆ […]

ನಳಿನ್‌ಗೆ ಮಿಥುನ್ ಸರಿಸಾಟಿಯಾದ ಅಭ್ಯರ್ಥಿಯಲ್ಲ: ಹರಿಕೃಷ್ಣ ಬಂಟ್ವಾಳ್

Tuesday, April 9th, 2019
Harikrishna

ಮಂಗಳೂರು :  ನರೇಂದ್ರ ಮೋದಿ ದೇಶದ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಹೇಳಿದುದರ ಬಗ್ಗೆ ದಾಖಲೆ ನೀಡಿದರೆ ತಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ದ.ಕ.ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವತ್ತೂ ಕೂಡ 15 ಲಕ್ಷ ರೂ. ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ಹಾಕುತ್ತೇನೆ ಎಂದು ಹೇಳಲಿಲ್ಲ, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ […]

ಹರಿಕೃಷ್ಣ ಬಂಟ್ವಾಳ್ ಬಿ.ಜೆ.ಪಿ ಪಕ್ಷದ ಬಗ್ಗೆ ಮೊದಲು ನೋಡಿಕೊಳ್ಳಲಿ

Thursday, August 30th, 2018
Abbas-Ali

ಬಂಟ್ವಾಳ : ಇಲ್ಲಿನ ಪುರಸಭೆ ಬಗ್ಗೆ ಪತ್ತಿಕಾಗೋಷ್ಠಿ ನಡೆಸಿದ ಹರಿಕೃಷ್ಣ ಬಂಟ್ವಾಳ ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆಯಲ್ಲಿ ಬಿಲ್ಲವರಿಗೆ ಯಾವುದೇ ಸೀಟು ನೀಡಿಲ್ಲ ಎಂಬ ಹೇಳಿಕೆ ನೀಡಿರುವುದು ಹಾಸ್ಯಸ್ಪದ ಬಂಟ್ವಾಳ್‌ಗೆ ಬೇರೆ ಕ್ಷೇತ್ರದ ಉಸಾಬರಿ ಯಾಕೆ ? ಬಂಟ್ವಾಳ ಪುರಸಭಾ ಚುನಾವಣೆಯಲ್ಲಿ ರಮಾನಾಥ ರೈ ನೇತೃತ್ವದ ಕಾಂಗ್ರೆಸ್ ಬಿಲ್ಲವರಿಗೆ 27 ಸೀಟುಗಳ ಪೈಕಿ 7 ಸೀಟುಗಳನ್ನು ನೀಡಿದೆ. ಬಿ.ಜೆ.ಪಿ ಪಕ್ಷ ಬಂಟ್ವಾಳ ಪುರಸಭೆಯಲ್ಲಿ ಬಿಲ್ಲವರಿಗೆ 2 ಸೀಟುಗಳನ್ನು ಮಾತ್ರ ನೀಡಿದೆ. ಈ ರೀತಿ ಇರುವಾಗ ಕಾಂಗ್ರೆಸ್ ಬಗ್ಗೆ ಮಾತಾನಾಡುವ ಯಾವುದೇ ನೈತಿಕತೆ ಹರಿಕೃಷ್ಣ […]

ಪೂಜಾರಿ ಅವರನ್ನು ಕಾಂಗ್ರೆಸ್ ಮತ್ತೆ ಅವಮಾನಿಸಿದೆ: ಹರಿಕೃಷ್ಣ ಬಂಟ್ವಾಳ್

Wednesday, May 9th, 2018
harikrishna-bantwal

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರ ಕುರಿತು ಸುಳ್ಳು ಸುದ್ದಿ ಹರಡಿಸಿ ಕಾಂಗ್ರೆಸ್ ಮತ್ತೊಮ್ಮೆ ಅವರನ್ನು ಅವಮಾನಿಸಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಕುರಿತು ಸುಳ್ಳು ಸುದ್ದಿ ಹರಡಿಸುವುದು ಕಾಂಗ್ರೆಸಿಗರ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಕನ್ನಡ ದಿನ ಪತ್ರಿಕೆ ಉದಯವಾಣಿ ಹೆಸರಿನಲ್ಲಿ ಸುಳ್ಳು ಸುದ್ದಿಯೊಂದನ್ನು ಪೂಜಾರಿ ಅವರ ಕುರಿತು ಸೃಷ್ಠಿಸಲಾಗಿದ್ದು, ‘ಬಿಜೆಪಿಯನ್ನು ಸೋಲಿಸಲು ಕರೆ ಕೊಟ್ಟ ಪೂಜಾರಿ’ […]

‘ಪೂಜಾರಿಯವರದ್ದು ನೋವಿನ ಕಣ್ಣೀರು, ರೈ ಅವರದ್ದು ಮೊಸಳೆ ಕಣ್ಣೀರು’

Tuesday, January 2nd, 2018
harikrishna

ಮಂಗಳೂರು: ಪೂಜಾರಿಯವರದ್ದು ನೋವಿನ ಕಣ್ಣೀರು, ರಮಾನಾಥ ರೈಯವರದ್ದು ಚುನಾವಣಾ ಸೋಲಿನ ಭೀತಿಯ ಮೊಸಳೆ ಕಣ್ಣೀರು ಎಂದು ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಸಮಾರಂಭವೊಂದರಲ್ಲಿ ಅವರು ಪೂಜಾರಿಯವರನ್ನು ಕೀಳು ಪದ ಬಳಸಿ ನಿಂದಿಸಿರುವುದನ್ನು ಕಣ್ಣಾರೆ ಕಂಡವರು, ಕಿವಿಯಾರೆ ಕೇಳಿದವರೂ ಇದ್ದಾರೆ. ಆದರೆ, ತಾನು ಪೂಜಾರಿಯವರನ್ನು ಅವಾಚ್ಯವಾಗಿ ನಿಂದಿಸಿಲ್ಲ ಎಂದು ಸಚಿವ ರೈ ಈಗ ಹೇಳುತ್ತಿದ್ದಾರೆ. ಸುಳ್ಳು ಹೇಳುವುದು ಸಚಿವರ ಹುಟ್ಟುಗುಣ ಎಂದು ದೂರಿದರು. ಕಳೆದ ವರ್ಷ ಫೆ. 7ರಂದು ಸುರತ್ಕಲ್ ಬಂಟರ […]

ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’ : ಹರಿಕೃಷ್ಣ ಬಂಟ್ವಾಳ್

Tuesday, December 12th, 2017
ramanath-rai

ಮಂಗಳೂರು: ಸುಮಾರು 25 ಸಂಘಟನೆಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುತ್ತದೆ ಎನ್ನಲಾಗಿದ್ದ ಸಚಿವ ಬಿ.ರಮಾನಾಥ ರೈ ನೇತೃತ್ವದ ‘ಸಾಮರಸ್ಯದ ನಡಿಗೆ’ಯಲ್ಲಿ ಬರೀ 500ರಷ್ಟು ಜನರು ಮಾತ್ರ ಭಾಗವಹಿಸಿದ್ದಾರೆ. ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’. ಇದೊಂದು ‘ಫ್ಲಾಪ್ ಶೋ’ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಸೇರಿದಂತೆ ಇತರ ಇಲಾಖೆಗಳು ತಮ್ಮ ನಿಯಂತ್ರಣದಲ್ಲಿದ್ದರೂ ಕಳೆದ 4 ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ಸಾಮರಸ್ಯ ಸಾಧಿಸಲು ಸಾಧ್ಯವಾಗದವರಿಗೆ ಈಗ ಸಾಮರಸ್ಯದ ನೆನಪಾಗಿರುವುದೇಕೆ? […]

ಕೆಪಿಸಿಸಿಯ ಮಾಜಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಬಿಜೆಪಿ ಸೇರುವುದು ಖಚಿತ

Wednesday, October 18th, 2017
harikrishna bhantwal

ಮಂಗಳೂರು: ಕೆಪಿಸಿಸಿಯ ಮಾಜಿ ವಕ್ತಾರ, ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಶಿಷ್ಯ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ಬಿಜೆಪಿ ಸೇರಲಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ. ನ. 11ರಂದು ಮಂಗಳೂರಿನಲ್ಲಿ ನಡೆಯುವ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಧಾನ ಪರಿಷತ್ ಚುನಾವಣೆ ವೇಳೆ ತನಗೆ ಟಿಕೆಟ್ ನೀಡುವುದಾಗಿ ಕೊನೆ ಕ್ಷಣದಲ್ಲಿ ಕೈಕೊಟ್ಟ ಕಾಂಗ್ರೆಸ್ ಹಿರಿಯ ನಾಯಕರ ವರ್ತನೆಯಿಂದ […]

ಎತ್ತಿನಹೊಳೆ ವಿರೋಧಿ ಹೋರಾಟ ಯಾವೂದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ: ಹರಿಕೃಷ್ಣ ಬಂಟ್ವಾಳ್

Monday, December 12th, 2016
Ratha-yathre

ಬೆಳ್ತಂಗಡಿ: ನೇತ್ರಾವತಿ ನದಿ ಎಂಬುದು ಯಾವೂದೇ ಪಕ್ಷಕ್ಕೆ ಸಂಬಂಧಿಸಿದಲ್ಲ. ಇದು ಜಿಲ್ಲೆಯ ಜನರ ಜನರ ಸ್ವತ್ತು. ಎತ್ತಿನಹೊಳೆ ವಿರೋಧಿ ಹೋರಾಟ ಯಾವೂದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಇದು ನಮ್ಮ ಜಿಲ್ಲೆಯ ಜನತೆಯ ಬದುಕಿನ ಪ್ರಶ್ನೆ ಎತ್ತಿನಹೊಳೆ ಯೋಜನೆ ಹಣ ಮಾಡುವ ಯೋಜನಯೇ ಹೊರತು ಯಾರಿಗೂ ನೀರು ಕೊಡುವ ಉದ್ದೇಶ ಇದರಲ್ಲಿ ಇಲ್ಲ ಎಂದು ಯಾತ್ರೆ ಸಮಿತಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ಅವರು ಧರ್ಮಸ್ಥಳದಲ್ಲಿ ಎತ್ತಿನಹೊಳೆ ವಿರೋಧಿಸಿ-ನೇತ್ರಾವತಿ ಉಳಿಸಿ ಸಮಿತಿಯ ವತಿಯಿಂದ ಪಂಚತೀರ್ಥ- ಸಪ್ತಕ್ಷೇತ್ರ ರಥಯಾತ್ರೆಯ ಸಾರ್ವಜನಿಕ […]