ಮಂಗಳೂರು ವಿಶೇಷ ಆರ್ಥಿಕ ವಲಯದ ಸಿಬ್ಬಂದಿ ಭಾರಿ ಯಂತ್ರಕ್ಕೆ ಸಿಕ್ಕಿ ಸಾವು
Friday, July 8th, 2011ಮಂಗಳೂರು: ಇಂದು ಮುಂಜಾನೆ ಮಂಗಳೂರು ವಿಶೇಷ ಆರ್ಥಿಕ ವಲಯದ ಕಳವಾರು ಪ್ರದೇಶದಲ್ಲಿ ಕ್ರೇನ್ನಿಂದ ಸಾಗಿಸುತ್ತಿದ್ದ ಯಂತ್ರವೊಂದು ತುಂಡಾಗಿ ಬಿದ್ದ ಪರಿಣಾಮ ಗುರುಪುರದ ಜಾನ್ಸನ್ ಸಂತೋಷ ರೊಝಾರಿಯೊ (21)ಮೃತ ಪಟ್ಟಿದ್ದಾರೆ.ಈ ದುರ್ಘಟನೆ ಮುಂಜಾನೆ 9:45ರ ಸುಮಾರಿಗೆ ಸಂಭವಿಸಿದೆ.ಜಾನ್ಸನ್ ಎಂಆರ್ಪಿಎಲ್ನ ತೃತೀಯ ಹಂತದ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಕ್ರೇನ್ನಿಂದ ಭಾರೀ ಯಂತ್ರೋಪಕರಣ ಆಕಸ್ಮಿಕವಾಗಿ ತುಂಡಾಗಿ ಬಿದ್ದ ಪರಿಣಾಮ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ಜಾನ್ಸನ್ರ ಎದೆ ಹಾಗೂ ತಲೆ ಮೇಲೆ ಬಿದ್ದು ಅವರು ಮಾರಣಾಂತಿಕವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ […]