ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೆಲೆಯೇರಿಕೆ ವಿರೋಧಿಸಿ ಜೈಲ್ ಭರೋ ಚಳುವಳಿ

Thursday, December 20th, 2012
jail bharo

ಮಂಗಳೂರು :ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜೈಲ್‌ ಭರೋ ಚಳವಳಿ ನಡೆಸಿದರು. ಸಿಐಟಿಯು, ಎಐಟಿಯುಸಿ, ಬಿಎಂಎಸ್‌, ಎಐಸಿಸಿಟಿಯು, ಇಂಟಕ್‌, ಎಚ್‌ಎಂಎಸ್‌ ಮೊದಲಾದ ವಿವಿಧ ಸಂಘಟನೆಗಳಿಗೆ ಸೇರಿದ ಕಾರ್ಮಿಕರು ಹಾಗು ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಿಪಿಐಎಂ ಜಿಲ್ಲಾಧ್ಯಕ್ಷ ಹಾಗೂ ಸಿಐಟಿಯು ರಾಜ್ಯಾಧ್ಯಕ್ಷ ಬಿ.ಮಾದವ ರವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಜತೆ ಸೇರಿಕೊಂಡು […]

ಕೊಂಕಣಿ ಚಲನಚಿತ್ರ ಉಜ್ವಾಡು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ

Wednesday, December 19th, 2012
ಕೊಂಕಣಿ ಚಲನಚಿತ್ರ ಉಜ್ವಾಡು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ

ಮಂಗಳೂರು :ಕಾಸರಗೋಡು ಚಿನ್ನಾ ನಿರ್ದೇಶನದ, ಗೌಡ ಸರಸ್ವತ ಬ್ರಾಹ್ಮಣ ಸಮಾಜದವರು ಮಾತನಾಡುವ ಕೊಂಕಣಿ ಭಾಷೆಯಲ್ಲಿ ತಯಾರಾದ ಕೊಂಕಣಿ ಚಲನಚಿತ್ರ ಉಜ್ಜಾಡು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಇದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡಿಸೆಂಬರ್ 20 ರಿಂದ 27 ರ ತನಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಡಿಸೆಂಬರ್‌ 21 ರಂದು ಬೆಳಗ್ಗೆ 10.15 ಕ್ಕೆ ಬೆಂಗಳೂರಿನ ಲೀಡೋ ಚಿತ್ರ ಮಂದಿರದಲ್ಲಿ ಅಸಂಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಖ್ಯಾತ ಚಿತ್ರ ಕಲಾವಿದರ, ತಂತ್ರಜ್ಞರ ಸಮ್ಮುಖದಲ್ಲಿ ಈ ಚಿತ್ರ ಪ್ರದರ್ಶಿಸಲ್ಪಡುತ್ತದೆ. ಕಾರ್ಕಳ, ಗೋವಾದಲ್ಲಿ ಕೇವಲ 18 […]

ಶ್ರೀ ಕ್ಷೇತ್ರ ಕುಡುಪುವಿನಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ

Wednesday, December 19th, 2012
Kudupu Temple

ಮಂಗಳೂರು :ಮಂಗಳವಾರ ಚಂಪಾಷಷ್ಠಿಯಂದು ಕರಾವಳಿಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಇಲ್ಲಿನ ಪ್ರಮುಖ ಕ್ಷೇತ್ರವಾದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಬ್ರಹ್ಮರಥೋತ್ಸವದ ಮೂಲಕ ನೆರವೇರಿತು. ಮಾರ್ಗಶಿರ ಮಾಸದ ಪಾಡ್ಯದಿಂದ ಪ್ರಾರಂಭವಾಗಿ ಪಂಚಮಿವರೆಗೆ ಕ್ಷೇತ್ರದ ಜಾತ್ರಾ ಮಹೋತ್ಸವ ಜರುಗಿತ್ತು. ಆರನೇ ದಿನವಾದ ಷಷ್ಠಿಯಂದು ಹಗಲು ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅನಂತಪದ್ಮನಾಭ, ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ಮೂವರು ಕೂಡಾ ಒಟ್ಟಾಗಿ ನೆಲೆಸಿರುವ ಅಪರೂಪದ ಕ್ಷೇತ್ರ ಇದಾಗಿದೆ. ದೇವಳ ದಕ್ಷಿಣಕ್ಕೆ ಪವಿತ್ರ ಭದ್ರಾ ಸರಸ್ವತಿ […]

ನಗರದ ಕದ್ರಿಹಿಲ್ಸ್‌ನಲ್ಲಿ ವಿಜಯ ದಿವಸ ಆಚರಣೆ

Wednesday, December 19th, 2012
Vijay Diwas

ಮಂಗಳೂರು :ದ.ಕ. ಜಿಲ್ಲಾ ಎಕ್ಸ್‌ ಸರ್ವೀಸ್‌ಮೆನ್ಸ್‌ ಅಸೋಸಿಯೇಶನ್‌ ವತಿಯಿಂದ ಡಿಸೆಂಬರ್ 16ರಂದು ಕದ್ರಿಹಿಲ್ಸ್‌ನ ಯುದ್ಧಸ್ಮಾರಕದಲ್ಲಿ ವಿಜಯ ದಿವಸ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. 1971ರ ಡಿಸೆಂಬರ್ 16 ಭಾರತವು ಪಾಕಿಸ್ಥಾನದ ಮೇಲೆ ವಿಜಯ ಸಾಧಿಸಿದ ದಿನವಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ವೀರಯೋಧರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುವ ಸಲುವಾಗಿ ಇದನ್ನು ಪ್ರತಿವರ್ಷ ವಿಜಯ ದಿವಸವಾಗಿ ಆಚರಿಸಲಾಗುತ್ತಿದೆ. ಭಾರತೀಯ ಸೇನೆಯ ಮೂರು ವಿಭಾಗಗಳ ಮಾಜಿ ಸೈನಿಕರು, ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಸಿಬಂದಿ, ವಿವಿಧ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು […]

ಮಡೆಸ್ನಾನ ರಾಜ್ಯ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

Wednesday, December 19th, 2012
Made Snana

ಮಂಗಳೂರು :ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಡೆಸ್ನಾನ ಸೇವೆಗೆ ಸಂಬಧಿಸಿ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಮೂಲಕ ಮಡೆಸ್ನಾನವನ್ನು ಬೆಂಬಲಿಸುತ್ತಿದ್ದ ವರ್ಗದ ಕಾನೂನು ಹೋರಾಟ ಒಂದು ಹಂತಕ್ಕೆ ಯಶಸ್ವಿಯಾಗಿದೆ. ಈ ಹಿಂದೆ ಕೆಲ ಪ್ರಗತಿಪರ ಹೋರಾಟಗಾರರು ಹಾಗೂ ಬುದ್ಧಿಜಿವಿಗಳು ಈ ಪದ್ಧತಿಯನ್ನು ವಿರೋಧಿಸಿದ್ದರು ಮತ್ತು ನಿಷೇಧಿಸುವಂತೆ ಕೇಳಿಕೊಂಡಿದ್ದರು ಅಲ್ಲದೆ ಇತ್ತೀಚೆಗಷ್ಟೇ ಮಡೆಸ್ನಾನವನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆ ಹೈಕೋರ್ಟ್ ನಿಂದ ಆದೇಶ ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ ರಾಜ್ಯ ಹೈಕೋರ್ಟ್ ನೀಡಿದ ಆದೇಶದ […]

ಮೆಗಾಮೀಡಿಯಾ ಪತ್ರಿಕೋದ್ಯಮ ಅವಾರ್ಡ್ ಗೆ ಅರ್ಜಿ ಆಹ್ವಾನ

Saturday, December 15th, 2012
ಮೆಗಾಮೀಡಿಯಾ ಪತ್ರಿಕೋದ್ಯಮ ಅವಾರ್ಡ್ ಗೆ  ಅರ್ಜಿ ಆಹ್ವಾನ

ಮಂಗಳೂರು: ಮೆಗಾ ಮೀಡಿಯಾ ನ್ಯೂಸ್ ತನ್ನ ಹತ್ತನೇ ವರ್ಷದ ಆಚರಣೆ ಸಂಭ್ರಮದ ಅಂಗವಾಗಿ  ಪತ್ರಕರ್ತರಿಂದ ಮೆಗಾ ಮಿಡಿಯಾ ಪ್ರಶಸ್ತಿಗೆ  ಅರ್ಜಿ ಆಹ್ವಾನಿಸಲಾಗಿದೆ. 2011 ಹಾಗೂ 2012 ರಲ್ಲಿ ಡಿಸೆಂಬರ್ 20ರೊಳಗೆ ನಾನಾ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾದ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಮಾನವೀಯ ಹಾಗೂ ಪರಿಸರ ಕಾಳಜಿಗೆ ಸಹಕಾರಿಯಾಗುವ ವಿಶಿಷ್ಟ ನುಡಿಚಿತ್ರ, ಲೇಖನಗಳನ್ನು ಪತ್ರಕರ್ತರು ಪ್ರಶಸ್ತಿಗೆ ಕಳುಹಿಸಿಕೊಡಬಹುದು. ಲೇಖನದ ಮೂಲಪ್ರತಿಯ ಜತೆಯಲ್ಲಿ ಮೂರು ಜೆರಾಕ್ಸ್ ಪ್ರತಿಗಳನ್ನು ಒಂದು ಪಾಸ್ ಪೋರ್ಟ್  ಆಳತೆಯ ಭಾವಚಿತ್ರದ ಜತೆಯಲ್ಲಿಟ್ಟು  ಡಿ.2012, 25ರೊಳಗೆ ಕಳಹಿಸಬಹುದು. ಪ್ರಶಸ್ತಿ […]

ಅಂತರ್ ರಾಜ್ಯ ಕಳ್ಳರ ಜಾಲ ಪತ್ತೆ, 13 ಲಕ್ಷ ಮೌಲ್ಯದ ಬೆಳ್ಳಿ ಆಭರಣ ವಶ

Saturday, December 15th, 2012
Inter state thieves

ಮಂಗಳೂರು :ಜುವೆಲ್ಲರಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಚೋರರ ಜಾಲವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಭೇದಿಸಿ ಒಟ್ಟು 8 ಮಂದಿಯನ್ನು ಬಂಧಿಸಿ ಕಾರು ಸಹಿತ 13 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಧ್ಯಪ್ರದೇಶ ಧಾರ್ ಜಿಲ್ಲೆಯ ಕುಕ್ಷಿ ತಾಲೂಕಿನ ಭಾಗ್ ತಾಂಡಾ ವಾಸಿಗಳಾದ ಅಮರ್ ಸಿಂಗ್ ಯಾನೆ ಅಮ್ಜತ್(28), ಸರ್ದಾರ್(20), ಮದನ್(32), ಬಹುಲಿಯ(50), ಮಡಿಯಾ ಭುರಿಯಾ(40), ಉಷನ್ ಬಿಲಾಲ(38), ಮೋಹನ್ ಸಿಂಗ್ ಯಾನೆ ಮುನ್ಸ(30), ವಿಜಯಾ ಕುಮಾರ್ ಸೋನಿ ಯಾನೆ ಮುನ್ನಾ ಜೋಭಟ್(50) ಬಂಧಿತ […]

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬೀದಿ ಮಡೆಸ್ನಾನ ಹರಕೆ ಸೇವೆ ಪ್ರಾರಂಭ

Friday, December 14th, 2012
Beedhi Madesnana

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷ ವಾರ್ಷಿಕ ಜಾತ್ರಾ ಸಮಯದಂದು ಕ್ಷೇತ್ರದ ಕುಮಾರಧಾರಾ ನದಿಕಿನಾರೆಯಲ್ಲಿ ಮಿಂದು ಸುಮಾರು 2 ಕಿ.ಮೀ. ದೂರ ದೇವಸ್ಥಾನದ ವರೆಗೆ ಉರುಳುತ್ತಾ ಮಾಡುವ ವಿಶಿಷ್ಟವಾದ ಬೀದಿ ಮಡೆಸ್ನಾನದ ಹರಕೆ ಸೇವೆ ಗುರುವಾರ ಮುಂಜಾನೆ ಆರಂಭಗೊಂಡಿತು. ಶುಲ್ಕ ರಹಿತವಾದ ಈ ಸೇವೆ ನೂರಾರು ಭಕ್ತರಿಂದ ಷಷ್ಟಿ ಜಾತ್ರೆಯ ಮಹಾರಥೋತ್ಸವದ ವರೆಗೂ ನಡೆಯುತ್ತದೆ. ಕುಮಾರಧಾರಾ ನದಿಯಲ್ಲಿ ಮಿಂದು ಅಲ್ಲಿಂದ ಉರುಳುತ್ತಾ ರಾಜರಸ್ತೆಯ ಮೂಲಕ, ರಥಬೀದಿಯ ಮೂಲಕ ಸಾಗಿ ದೇವಳದ ಹೊರಾಂಗಣಕ್ಕೆ ಬಂದು […]

ಬಿಜೈ ರಾಜಾ ಕೊಲೆ ನಾಲ್ವರು ಆರೋಪಿಗಳ ಸೆರೆ

Friday, December 14th, 2012
Bejai Raja

ಮಂಗಳೂರು :ಬಿಜೈ ರಾಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಂಜಿಮೊಗರಿನ ಅವಿನಾಶ್ (22), ಕೆಪಿಟಿಯ ದೀಕ್ಷಿತ್ ದೇವಾಡಿಗ (22), ಜೈಸನ್ ಡಿಸೋಜಾ (22), ಕೋಡಿಕಲ್ ನ ರಿತೇಶ್ (23) ಬಂಧಿತ ಆರೋಪಿಗಳಾಗಿದ್ದಾರೆ. ಪೂರ್ವದ್ವೇಷದ ಹಿನ್ನಲೆಯಲ್ಲಿಯೇ ಬಿಜೈ ರಾಜಾ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಧೃಢಪಡಿಸಿದ್ದು, ಈ ಕೊಲೆಯ ಹಿಂದೆ ಬಹುದೊಡ್ಡ ಗ್ಯಾಂಗ್ ಕೆಲಸ ಮಾಡಿದ್ದು ಅದರ ಮಾಸ್ಟರ್ ಮೈಂಡ್ ಗಳಾದ ಈ ನಾಲ್ವರನ್ನು ಸೆರೆ ಹಿಡಿದಿದ್ದು, ಇವರ ವಿಚಾರಣೆಯ ನಂತರವೇ ಇನ್ನಷ್ಟು […]

ಕೊಡಿಯಾಲ್‌ಬೈಲ್ ನ ಯೆನೆಪೋಯ ಆಸ್ಪತ್ರೆಯಲ್ಲಿ ಪತ್ರಕರ್ತರಿಗಾಗಿ ಉಚಿತ ಹೃದಯ ತಪಾಸಣಾ ಶಿಬಿರ

Thursday, December 13th, 2012
Heart Check up Camp

ಮಂಗಳೂರು :ಮಂಗಳೂರು ಪತ್ರಿಕಾ ಭವನದಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಂಗಳೂರು ಪ್ರೆಸ್‌ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಕೊಡಿಯಾಲ್‌ಬೈಲ್ ನ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಪತ್ರಕರ್ತರಿಗಾಗಿ ಹೃದಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿದ ಯೆನೆಪೋಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಹರೀಶ್ ನಾಯರ್ ಇಂದಿನ ಒತ್ತಡದ ಪರಿಸ್ಥಿತಿಯಲ್ಲಿ ಆರೋಗ್ಯದೆಡೆಗೆ ಕಾಳಜಿ ವಹಿಸುವುದು ಅವಶ್ಯಕ. ಈ ದಿಸೆಯಲ್ಲಿ ಯೆನೆಪೋಯ ಆಸ್ಪತ್ರೆಯು ಉಚಿತವಾಗಿ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಆರೋಗ್ಯ ಸೇವೆಯನ್ನು […]