ಕಲಾ ರಸಿಕರನ್ನು ತನ್ಮಯಗೊಳಿಸಿದ ಆಳ್ವಾಸ್‌ ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

Saturday, November 17th, 2012
Alvas Nudisiri

ಮೂಡಬಿದಿರೆ :ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿಯ ಮೊದಲದಿನವಾದ ಶುಕ್ರವಾರ ಸಂಜೆ ವಿದ್ಯಾಗಿರಿ ಸುಂದರಿ ಆನಂದ್ ಆಳ್ವ ಅವರಣದಲ್ಲಿ 5 ವೇದಿಕೆಯಲ್ಲಿ ಏಕಕಾಲದಲ್ಲಿ ನಡೆದ ನೃತ್ಯ-ಗಾನ ವೈಭವ ಕಲಾ ರಸಿಕರನ್ನು ರೋಮಾಂಚನಗೊಳಿಸಿತು. 5 ವೇದಿಕೆಗಳಲ್ಲಿ ಒಂದಾದ ರತ್ನಾಕರವರ್ಣಿ ವೇದಿಕೆಯಲ್ಲಿ ಮೈಸೂರಿನ ವಿದುಷಿ ಕೃಪಾ ಪಡ್ಕೆ ಮತ್ತು ತಂಡದವರಿಂದ ನಡೆದ ವಂದೇ ಮಾತರಂ ನೃತ್ಯ ರೂಪಕವು ಭಾರತೀಯರ ಏಕತೆಯ ಮಂತ್ರ ಮತ್ತು ಈ ಏಕತೆಯನ್ನು ಮುರಿಯಲು ಬ್ರಿಟಿಷರು ಮಾಡಿದ ಕುತಂತ್ರಗಳನ್ನು ಮನೋಜ್ಞವಾಗಿ ಬಿಂಬಿಸಿತು. ಚಂದ್ರಶೇಖರ್ ಕೆ.ಎಸ್ […]

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿದ್ಯ ನೃತ್ಯ ಕಾರ್ಯಕ್ರಮ

Saturday, November 17th, 2012
Alvas Students

ಮೂಡಬಿದಿರೆ :ದೇಶದ ನಾನಾ ಭಾಗಗಳಿಂದ ಬಂದು ಆಳ್ವಾಸ್‌ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿನ ಕಲೆಗಳನ್ನು ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿತ್ತರಿಸಿದರು. ಆಳ್ವಾಸ್‌ ನುಡಿಸಿರಿ ಘಟಕದ ಉದ್ಘಾಟನಾ ಸಮಾರಂಭದ ಆನಂತರ ನಡೆದ ಆಳ್ವಾಸ್‌ ಸಾಂಸ್ಕೃತಿಕ ಕಾರ್ಯಕ್ರಮ ಕಲಾ ರಸಿಕರನ್ನು ರೋಮಾಂಚನಗೊಳಿಸಿತು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ನೃತ್ಯ ವೈಭವದ ಮೂಲಕ ನೋಡುಗರ ಗಮನವನ್ನು ಸೆಳೆದರು. ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪುರಭವನ ತುಂಬಿ ತುಳುಕಿತು. ಕೆಲವರು ಹಿಂಭಾಗದಲ್ಲಿ ನಿಂತುಕೊಂದು ನೋಡುವುದು […]

ಆಳ್ವಾಸ್ ನುಡಿಸಿರಿಗೆ ಮೆರುಗು ತಂದ ನಾಡಿನ ವಿವಿಧ ಕಲಾ ತಂಡಗಳ ಆಕರ್ಷಕ ಮೆರವಣಿಗೆ

Friday, November 16th, 2012
nudisiri meravani

ಮೂಡುಬಿದಿರೆ :ಆಳ್ವಾಸ್ ನುಡಿಸಿರಿ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಸಮಾರಂಭಕ್ಕೂ ಮೊದಲು ನಡೆದ ನಾಡಿನ ಹಲವಾರು ಕಲಾ ತಂಡಗಳನ್ನೊಳಗೊಂಡ ಮೆರವಣಿಗೆಯು ವಿಶೇಷ ಮೆರುಗಿನಿಂದ ಕೂಡಿತ್ತು. ಆಳ್ವಾಸ್ ನುಡಿಸಿರಿ ಮೆರವಣಿಗೆಯಲ್ಲಿ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಒಟ್ಟು19 ಕಲಾ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು .ವಿದ್ಯಾಗಿರಿಯ ಆವರಣದ ಪ್ರವೇಶದ್ವಾರದ ಬಳಿಯಿಂದ ಪ್ರಾರಂಭವಾದ ಮೆರವಣಿಗೆ ರತ್ನಾಕರವರ್ಣಿ ವೇದಿಕೆಯತ್ತ ಸಾಗಿ ವಿವಿಧ ಅತ್ಯಾಕರ್ಷಕ ಕಲಾಪ್ರಕಾರಗಳಿಗೆ ಸಾಕ್ಷಿಯಾಯಿತು. ಪ್ರತಿವರ್ಷದಂತೆ ಈ ಬಾರಿಯೂ ವಿವಿಧೆಡೆಗಳಿಂದ ಕಲಾಭಿಮಾನಿಗಳು ಸೇರಿದ್ದರು. ರಾಜ್ಯದ ವಿವಿಧ ಭಾಗಗಳಿಂದ […]

ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಗೆ ಚಾಲನೆ

Friday, November 16th, 2012
Alvaas Nudisiri

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯ ಸುಂದರ ಆನಂದ್ ಆಳ್ವ ಕ್ಯಾಂಪಸ್ ನಲ್ಲಿ ಇಂದು ಪ್ರಾರಂಭವಾದ 9 ನೇ ವರ್ಷದ ರಾಷ್ಟ್ರೀಯ ನಾಡು ನುಡಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2012ಕ್ಕೆ 12 ಅಡಿ ಎತ್ತರದ ನಾಟ್ಯ ಗಣಪತಿಯ ಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು. ಈ ಸಮ್ಮೇಳನವು ಇದೇ ತಿಂಗಳ 16 ರಿಂದ 19 ರ ವರೆಗೆ ನಡೆಯಲಿದೆ. ಹಿರಿಯ ಸಾಹಿತಿ, ಚಿಂತಕ ಡಾ.ಯು.ಆರ್ ಅನಂತಮೂರ್ತಿಯವರು ಸಮ್ಮೇಳನವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಾತೃಭಾಷೆ […]

ಸಹೋದರರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

Friday, November 16th, 2012
Brothers murder

ಮಂಗಳೂರು :ಬೆಳ್ತಂಗಡಿ ತಾಲೂಕಿನ ಬಾರೆ ಗ್ರಾಮದ ಕೈಲಾರ ಪಿಲಿಗೂರಿನ ನಿವಾಸಿ ಜಾನ್ ಸಿಕ್ವೇರ ಎಂಬುವವರು ತನ್ನ ಸಹೋದರ ಜೋಕಿಂ ಸಿಕ್ವೇರಾ ರನ್ನು ಕಬ್ಬಿಣದ ರಾಡಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಅಣ್ಣ ತಮ್ಮ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಿತ್ಯ ಜಗಳವಾಗುತಿತ್ತು, ಆದರೆ ಬುಧವಾರ ಮಧ್ಯರಾತ್ರಿ ಅಣ್ಣ ತಮ್ಮ ನಡುವೆ ಭೂವಿವಾದದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆಯಿತು. ಕೋಪಗೊಂಡ ಅಣ್ಣ ಜಾನ್ ಸಿಕ್ವೆರಾ ಜೋಕಿಂ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ. ತಲೆಗೆ ಗಂಭೀರ ಗಾಯಗೊಂಡ ಜೋಕಿಂ […]

ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ಗೋಹತ್ಯೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ

Friday, November 16th, 2012
cow slaughter

ಮಂಗಳೂರು :ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯಾ ನಿಷೇಧ ಕಾನೂನು ಜಾರಿಗಾಗಿ ಒತ್ತಾಯಿಸಿ ನಿನ್ನೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೇರಳ ರಾಜ್ಯ ಹಿಂದೂ ಐಕ್ಯವೇದಿಯ ಉಪಾಧ್ಯಕ್ಷ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿ ಮಾತನಾಡಿ ಅಕ್ರಮ ಗೋಸಾಗಾಟ ಮತ್ತು ಹತ್ಯೆಯನ್ನು ನಿಷೇಧಿಸಿ ಎಂಬ ಕಾನೂನು ಇದ್ದರೂ ಅದು ಪಾಲನೆಗೆ ಬಂದಿಲ್ಲ. ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಗೆ […]

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಯವರಿಂದ ಮಂಗಳೂರಿನ ನೂತನ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ

Thursday, November 15th, 2012
ಇಂಧನ ಸಚಿವೆ ಶೋಭಾ ಕರಂದ್ಲಾಜೆ ಯವರಿಂದ ಮಂಗಳೂರಿನ ನೂತನ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು :ಇಂಧನ ಸಚಿವೆ ಶೋಭಾ ಕರಂದ್ಲಾಜೆ ಇಂದು ನಗರದ ಕಾಪಿಕಾಡ್ ಬಳಿ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡದ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು. ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಹಾಗೂ ಉತ್ಪಾದನೆಯಾದ ವಿದ್ಯುತ್ ನ್ನು ಗ್ರಾಹಕರಿಗೆ ಸಮರ್ಪಕವಾಗಿ ತಲುಪಿಸುವ ಕುರಿತು ಅನೇಕ ಸಮಸ್ಯೆಗಳಿದ್ದು ವಿದ್ಯುತ್ ಸಚಿವೆಯಾಗಿ ನೇಮಕಗೊಂಡ ಸಂದರ್ಭದಲ್ಲಿ ಇವೆರಡು ಸವಾಲಿನ ವಿಷಯವಾಗಿ ಪರಿಣಮಿಸಿತ್ತು ಆದರೆ ಅಧಿಕಾರಿಗಳ ಸಹಕಾರದಿಂದ ನಂತರ ಈ ಸಮಸ್ಯೆಗಳನ್ನು ತಕ್ಕ ಮಟ್ಟಿಗೆ ಪರಿಹರಿಸಲಾಯಿತು ಎಂದರು. ಪ್ರಾರಂಭದಲ್ಲಿ ಸರಕಾರ ರಾಜ್ಯಕ್ಕೆ 5000 […]

ಮಂಗಳೂರಿನಲ್ಲಿ ನೂತನ ಮಲ್ಟಿ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ

Thursday, November 15th, 2012
Instute of Anchology

ಮಂಗಳೂರು :ಮಂಗಳೂರಿನ ಪಂಪ್ ವೆಲ್ ವೃತ್ತದ ಬಳಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕೋಲಜಿ ಆಸ್ಪತ್ರೆ ಯನ್ನು ನಿರ್ಮಿಸಲಾಗಿದ್ದು ಇದರ ಉದ್ಗಾಟನೆಯು ನವೆಂಬರ್ 18 ರಂದು ನಡೆಯಲಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುರೇಶ್ ರಾವ್ ತಿಳಿಸಿದರು. ಕ್ಯಾನ್ಸರ್ ರೋಗವು ಮಾರಣಾಂತಿಕವಾಗಿದ್ದು ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ರೋಗ ಚಿಕಿತ್ಸೆಗಾಗಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸರಿಯಾದ ಆಸ್ಪತ್ರೆಗಳಿಲ್ಲದೆ ಇಲ್ಲಿನ ಜನರು ದೂರದ ಮುಂಬಯಿ ಹಾಗೂ ಇನ್ನಿತರ ನಗರಗಳಿಗೆ ತೆರಳುತ್ತಿದ್ದಾರೆ ಇದನ್ನು ಮನಗಂಡು ಮಂಗಳೂರಿನ […]

ಮಕ್ಕಳ ಹಕ್ಕುಗಳ ಮಾಸೋತ್ಸವ-2012ಕ್ಕೆ ಚಾಲನೆ

Thursday, November 15th, 2012
Childs Rights

ಮಂಗಳೂರು : ಬಿಜೈ ಕಾಪಿಕಾಡ್ ನ ಚಿಣ್ಣರ ತಂಗುದಾಣದಲ್ಲಿ ಮಕ್ಕಳ ಮಾಸೋತ್ಸವ ಸಮಿತಿ ದ.ಕ.ಜಿಲ್ಲೆ ಹಾಗೂ ಚೈಲ್ಡ್ ಲೈನ್ ಮಂಗಳೂರು ಇವರ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಮತ್ತು ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ 2012 ಕ್ಕೆ ಬುಧವಾರ ದ.ಕ.ಜಿ.ಪಂ.ಉಪಾಧ್ಯಕ್ಷ ರಿತೇಶ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಾವು ವರ್ಷದಲ್ಲಿ ಒಂದು ದಿನ ಈ ರೀತಿಯ ಆಚರಣೆಯನ್ನು ಆಚರಿಸಿದರೆ ಸಾಲದು, ನಮ್ಮ ಸಮಾಜದಲ್ಲಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ಸರಿಯಾದ ಶಿಕ್ಷಣ […]

‘ವರದನಾಯಕ’ನಿಗೆ ದೊಡ್ಡ ಶಕ್ತಿ ಕಿಚ್ಚ ಸುದೀಪ್

Tuesday, November 13th, 2012
Varadanayaka

ಬೆಂಗಳೂರು :’ವರದನಾಯಕ’ ಚಿತ್ರವು ಸುದೀಪ್ ನಾಯಕತ್ವದ ಚಿತ್ರವೇ ಇರಬೇಕು ಎಂದುಕೊಳ್ಳುವಷ್ಟರ ಮಟ್ಟಿಗೆ ‘ವರದನಾಯಕ’ ಚಿತ್ರದ ಪೋಸ್ಟರುಗಳಲ್ಲಿ ಕಿಚ್ಹ ಸುದೀಪ್ ರವರೆ ರಾರಾಜಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ‘ವರದನಾಯಕ’ ಚಿತ್ರದ ನಾಯಕ ಸುದೀಪ್ ಅವರಲ್ಲ, ಚಿರಂಜೀವಿ ಸರ್ಜಾ. ಚಿತ್ರದಲ್ಲಿ ಸುದೀಪ್ ನಾಯಕ ಚಿರಂಜೀವಿ ಸರ್ಜಾ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಬಿಡುಗಡೆಗೆ ಮೊದಲೇ ಚಿತ್ರ ಬಾಚಿಕೊಂಡಿದೆ. ಇಲ್ಲಿ ಚಿತ್ರದ ನಾಯಕ ಚಿರಂಜೀವಿ ಸರ್ಜಾ ಆದರೂ ಕಿಚ್ಹ ಸುದೀಪ್ ರವರೆ ಪೋಸ್ಟರ್ ಗಳಲ್ಲಿ ಮಿಂಚುತ್ತಿದ್ದಾರೆ. […]