ಈಜಲು ಹೋದ ಬೆಂಗಳೂರಿನ 3 ವಿದ್ಯಾರ್ಥಿಗಳು ಮುರುಡೇಶ್ವರದಲ್ಲಿ ಸಮುದ್ರಪಾಲು

Monday, July 25th, 2011
Nitte Students/ನಿಟ್ಟೆ ವಿದ್ಯಾರ್ಥಿಗಳು

ಉಡುಪಿ : ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ನಿಟ್ಟೆ ಬಿ.ಬಿ.ಎಂ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮೂವರು ಈಜಲು ಸಮುದ್ರಕ್ಕಿಳಿದು  ಸಮುದ್ರ ಪಾಲಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದ್ದು, ಕಾಣೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ.  ನಿಟ್ಟೆ ಬಿ.ಬಿ.ಎಂ ಕಾಲೇಜಿನ  ತೇಜಸ್ ವೆಂಕಟರಾಮಯ್ಯ, ಧಿನೀನ್ ರಾಜ್, ಹಾಗೂ ತೇಜಸ್ ಮಂಜುನಾಥ್ ಇವರು ಬೆಳಿಗ್ಗೆ ದೇವರ ದರುಶನಗೈದು ಈಜಲು ಸಮುದ್ರಕ್ಕಿಳಿದರು,  ಕೆಲವೇ ಕ್ಷಣದಲ್ಲಿ ವಿದ್ಯಾರ್ಥಿಗಳು ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ನೀರು ಪಾಲಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ . ಪೋಲಿಸರು ಹಾಗೂ ಸ್ಥಳೀಯ ಮೀನುಗಾರರು ಮೂವರ ಮೃತದೇಹವನ್ನು […]

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಾಸಿಕ ಎಸ್‌ಸಿ/ಎಸ್‌ಟಿ ಸಭೆ

Monday, July 25th, 2011
Sc St meeting/ಮಾಸಿಕ ಎಸ್‌ಸಿ/ಎಸ್‌ಟಿ ಸಭೆ

 ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಾಸಿಕ ಎಸ್‌ಸಿ/ಎಸ್‌ಟಿ ಸಭೆಯು, ಪೊಲೀಸ್ ಕಮಿಷನರೇಟ್ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧೀಕ್ಷಕ ಸರ್ವೋತ್ತಮ ಪೈ ಅವರು ದಲಿತ ದೌರ್ಜನ್ಯ ಕಾಯ್ದೆಯಡಿ ದಾಖಲಾದ ದೂರುದಾರರು ಮತ್ತು ಸಾಕ್ಷಿದಾರರಿಗೆ ಮೀಸಲಿಟ್ಟ ಹಣ ಬಳಕೆಯಾಗದೆ ವ್ಯರ್ಥವಾಗಿದೆ, ದಲಿತ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿ ಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವ ಎಲ್ಲ ದೂರುದಾರರು ಮತ್ತು ಸಾಕ್ಷಿದಾರರಿಗೆ ಹಣವನ್ನು ಮೀಸಲಿಡಲಾಗಿದೆ. ತಹಶೀಲ್ದಾರರ್‌ಗೆ ಸೂಕ್ತ ದಾಖಲೆ ಪತ್ರ […]

ಚರ್ಚ್ ದಾಳಿ ಕೇಸುಗಳನ್ನು ಹಿಂದಕ್ಕೆ ಪಡೆಯಲು ಮಂಗಳೂರು ಬಿಷಪ್ ಮನವಿ

Saturday, July 23rd, 2011
Mangalore Bishop/ಮಂಗಳೂರು ಬಿಷಪ್

ಮಂಗಳೂರು : ಮಂಗಳೂರು ಬಿಷಪ್ ರೆ. ಪಾ. ಅಲೋಸಿಯಸ್ ಪೌಲ್ ಡಿ. ಸೊಜ ನೇತೃತ್ವದ ತಂಡ ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ 2008 ಚರ್ಚ್ ದಾಳಿಗೆ ಸಂಬಂಧಪಟ್ಟ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಮನವಿ ನೀಡಿತು. ರಾಜ್ಯ ಸರ್ಕಾರ ಈಗಾಗಲೇ ಚರ್ಚ್ ಮೇಲಿನ ದಾಳಿ ಘಟನೆಗಳ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ ಮೇಲೂ ಈ ಕೇಸುಗಳಿಗೆ ಸಂಬಂಧಪಟ್ಟು ಸಮನ್ಸ್ ಗಳು ಜಾರಿಯಾಗುತ್ತಿರುವ […]

ಬೆಳ್ತಂಗಡಿ ಪ್ರಾದೇಶಿಕ ಅರಣ್ಯ ಅಧಿಕಾರಿ ಮನೆ ಹಾಗೂ ಕಚೇರಿಗೆ ಲೋಕಾಯುಕ್ತ ದಾಳಿ

Friday, July 22nd, 2011
Lokayukta ride/ಲೋಕಾಯುಕ್ತ ದಾಳಿ

ಮಂಗಳೂರು : ಶುಕ್ರವಾರ ಮುಂಜಾನೆ ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರಿಂದ ಬ್ರಷ್ಟ ಅಧಿಕಾರಿಗಳ ಮನೆಗೆ ಏಕ ಕಾಲದಲ್ಲಿ ದಾಳಿ ನಡೆಯಿತು. ದ.ಕ. ದಲ್ಲಿ ಬೆಳ್ತಂಗಡಿ ಆರ್‌ಎಫ್‌ಒ (ಪ್ರಾದೇಶಿಕ ಅರಣ್ಯ ಅಧಿಕಾರಿ)ಮನೆ ಹಾಗೂ ಕಚೇರಿಗೆ, ಆರ್‌ಎಫ್‌ಒ ರಾಘವ ಪಾಟಾಳಿ ಅವರ ಕೊಂಚಾಡಿಯಲ್ಲಿರುವ ಮನೆ ಹಾಗೂ ಬೆಳ್ತಂಗಡಿಯ ಕ್ವಾಟರ್ಸ್ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳ್ತಂಗಡಿ ಕ್ವಾಟರ್ಸ್‌ನಲ್ಲಿ 20ಸಾವಿರ ರೂ.ನಗದು, 40ಪವನ್ ಚಿನ್ನಾಭರಣ ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಕೆಲ ದಾಖಲೆ ಹಾಗೂ ಅಲ್ಟೋ ಕಾರೊಂದು ಪತ್ತೆಯಾಗಿದೆ ಎನ್ನಲಾಗಿದೆ ಮಂಗಳೂರಿನ ಕೊಂಚಾಡಿಯಲ್ಲಿರುವ […]

ಎಂಎಸ್‌ಇಝಡ್ ಕಾಮಗಾರಿ ವಿರೋದಿಸಿ ಪೆರ್ಮುದೆ ಗ್ರಾಮಸ್ಥರಿಂದ ಪಂಚಾಯತ್ ಮುತ್ತಿಗೆ

Friday, July 22nd, 2011
Permude Grama Panchayath

ಮಂಗಳೂರು : ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಬಿ ಪದವಿನಲ್ಲಿ  ಮಂಗಳೂರು ವಿಶೇಷ ಆರ್ಥಿಕ ವಲಯ ದಿಂದ ಅಕ್ರಮವಾಗಿ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಗುರುವಾರ ಬೆಳಗ್ಗೆ  ಗ್ರಾಮಸ್ಥರು ಪೆರ್ಮುದೆ ಗ್ರಾಪಂಗೆ ಮುತ್ತಿಗೆ ಹಾಕಿದರು. ಸೆಝ್‌ನ ದ್ವಿತೀಯ ಹಂತಕ್ಕಾಗಿ ಅಧಿಸೂಚನೆಗೊಂಡಿದ್ದ 2,035 ಎಕರೆ ಯಲ್ಲಿ ಸರಕಾರ ಇತ್ತೀಚೆಗೆ 1988 ಎಕರೆಯ ಅಧಿಸೂಚನೆಯನ್ನು ರದ್ದು ಗೊಳಿಸಿತ್ತು. ಅಧಿಸೂಚನೆ ರದ್ದುಗೊಳ್ಳದ 38 ಎಕರೆ ಭೂಮಿಯಲ್ಲಿ ಕಳೆದ ವರ್ಷ ಎಂಎಸ್‌ಇಝಡ್ ರಸ್ತೆಗೆಂದು ಹೇಳಿ ಸ್ವಾಧೀನಪಡಿಸಿದ್ದ ನಾಲ್ಕು ಎಕರೆ ಭೂಮಿಯೂ ಸೇರಿದೆ. ಸರಕಾರದಿಂದ […]

ಮನಪಾ ದಿನಕೂಲಿ ನೌಕರರ ಅರೆಬೆತ್ತಲೆ ಮೆರವಣಿಗೆ

Thursday, July 21st, 2011
Daily wages/ಪೌರಕಾರ್ಮಿಕ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಇಲಾಖೆಯಲ್ಲಿ ದಿನಕೂಲಿ ನೌಕರರಾಗಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಬುಧವಾರ ಅರೆಬೆತ್ತಲೆ ಮೆರವಣಿಗೆಯ ಜಿಲ್ಲಾಧಿಕಾರಿ ಕಚೇರಿ ಬಳಿ ವಿನೂತನ ಪ್ರತಿಭಟನೆ ನಡೆಸಿದರು. ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವಾರು ದಲಿತ ಸಂಘಟನೆಗಳ ಬೆಂಬಲದೊಂದಿಗೆ ದ.ಕ. ಜಿಲ್ಲಾ ಪೌರ ಕಾರ್ಮಿಕರು ಹಾಗೂ ನಾಲ್ಕನೆ ದರ್ಜೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಜ್ಯೋತಿ ವೃತ್ತದಿಂದ ಅರೆಬೆತ್ತಲೆ ಮೆರವಣಿಗೆಯಲ್ಲಿ  ಪೌರ ಕಾರ್ಮಿಕರು ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿದರು. ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ […]

ಕೇರಳ ಹೈಕೋಟ್ ತೀರ್ಪು : ವಿಮಾನ ದುರಂತ ಮೃತರ ಕುಟುಂಬಕ್ಕೆ ತಲಾ 75 ಲಕ್ಷ ರೂ. ಪರಿಹಾರ

Wednesday, July 20th, 2011
Air Crash/ವಿಮಾನ ದುರಂತ

ಮಂಗಳೂರು: ಬಜಪೆ ಏರ್ಇಂಡಿಯಾ ವಿಮಾನ ದುರಂತ ಕಳೆದು ಒಂದು ವರುಷದ ಬಳಿಕ ಮೃತರಾದ ಪ್ರಯಾಣಿಕರ ಮನೆಯವರಿಗೆ  ತಲಾ 75 ಲಕ್ಷ ರೂ. ಪರಿಹಾರ ನೀಡುವಂತೆ ಕೇರಳ ಹೈಕೋಟ್ ತೀರ್ಪು ನೀಡಿದೆ. ದುಬೈಯಿಂದ ಮಂಗಳೂರಿಗೆ ತೆರಳುತ್ತಿದ್ದ ಏರ್‌ಇಂಡಿಯಾ ಸಂಸ್ಥೆಗೆ ಸೇರಿದ ಬೋಯಿಂಗ್ IX 892 ವಿಮಾನ ಮೇ 22 2010ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿ 165 ಮಂದಿ ಪ್ರಯಾಣಿಕರಿದ್ದು, ಅವರಲ್ಲಿ 158 ಮಂದಿ ಸಾವಿಗೀಡಾಗಿದ್ದರು. ಇದರಲ್ಲಿ ಮೃತರಾದವರಿಗೆ ಏರ್‌ಇಂಡಿಯಾ ಸಂಸ್ಥೆ ಅತ್ಯಲ್ಪ ಪರಿಹಾರವನ್ನು ನೀಡಿ ಕೈತೊಳೆದುಕೊಂಡಿತ್ತು. ಕುಂಬಳೆಯ ಅಬ್ದುಲ್ […]

ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಅಧಾರ್ ಕಾರ್ಡ್ ಬಿಡುಗಡೆ

Tuesday, July 19th, 2011
Udupi-Adhar-card/ಉಡುಪಿಯಲ್ಲಿ ಆಧಾರ್ ಕಾರ್ಡ್ ಬಿಡುಗಡೆ

ಉಡುಪಿ : ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಜಾರಿಗೆಗೊಳಿಸಿದ ಅಧಾರ್ ಕಾರ್ಡ್ ವಿತರಣೆಯನ್ನು ಜಿಲ್ಲಾಧಿಕಾರಿ ಟಿ‌.ಎಮ್ ರೇಜು  ನೆರವೇರಿಸಿದರು. ಪ್ರಥಮ ಆಧಾರ್ ಕಾರ್ಡ್ ನ್ನು ಜಿಲ್ಲಾಧಿಕಾರಿ ಟಿ‌.ಎಮ್ ರೇಜು ಅವರು ಲಯನ್ಸ್ ಗವರ್ನರ್ ಪಿಹೆಚ್ ಆಫ್ ಜಯಕರ ಶೆಟ್ಟಿ ಇಂದ್ರಾಳಿ ಯವರಿಗೆ ಹಸ್ತಾಂತರಿಸುವುದರ ಮೂಲಕ ಬಿಡುಗಡೆಗೊಳಿಸಿದರು. ಆಧಾರ್ ಕಾರ್ಡ್ ನಿಂದ ಸಾಕಷ್ಟು ಪ್ರಯೋಜನಕಾರಿಯಾಗಿದ್ದು ಕಂದಾಯ ಇಲಾಖೆಯ ಸಂಬಂಧ ಪಟ್ಟ ತೊಂದರೆಗಳನ್ನು ಈ ಕಾರ್ಡ್ ನಿಂದ ಬಗೆಹರಿಸಬಹುದಾಗಿದೆ. ಈ ಆಧಾರ್ ಕಾರ್ಡ್ ನ ವಿತರಣೆ […]

ಮಳೆಗಾಲದ ರಜಾ-ಮಜಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರಿಷಸ್‌ಗೆ

Tuesday, July 19th, 2011
yeddyurappa family/ಬಿ.ಎಸ್.ಯಡಿಯೂರಪ್ಪ ಕುಟುಂಬ

ಬೆಂಗಳೂರು : ಮಂಗಳವಾರ ಮುಂಜಾನೆ 5.55ಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬಿ.ಎಸ್.ಯಡಿಯೂರಪ್ಪ ಕುಟುಂಬ ಸದಸ್ಯರ ಸಹಿತ ಮಾರಿಷಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಭೂಹಗರಣದ ವಿಚಾರಣೆ, ಅಕ್ರಮ ಗಣಿಯ ಅಂತಿಮ ವರದಿಯನ್ನು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸಲ್ಲಿಸಲು ದಿನಗಣನೆ ಆರಂಭವಾಗುತ್ತಿದ್ದ ಬೆನ್ನಲ್ಲೇ ಮುಖ್ಯಮಂತ್ರಿಗಳು ಪ್ರಯಾಣ ಬೆಳೆಸಿರುವುದು ಕುತೂಹಲಕ್ಕೆ ಎಡೆ ಮಾಡಿದೆ. ರಾಜ್ಯದಲ್ಲಿ ಸಾಕಷ್ಟು ಪ್ರವಾಹ ಪರಿಸ್ಥಿತಿ, ಭೂ ಹಗರಣದ ವಿಚಾರಣೆ ನಡೆಯುತ್ತಿದ್ದರೂ ಕೂಡ ದಿಢೀರ್ ಅಂತ ಪುತ್ರ ರಾಘವೇಂದ್ರ, ಪುತ್ರಿ, ಮೊಮ್ಮಕ್ಕಳ ಜತೆ ಮಾರಿಷಸ್ ಪ್ರವಾಸ ಕೈಗೊಂಡಿದಕ್ಕೆ ಪ್ರತಿಪಕ್ಷಗಳು ಕಿಡಿಕಾರಿವೆ. […]

ಸರಕಾರದ ಆದೇಶದಂತೆ ಶೀಘ್ರದಲ್ಲೇ ಖಾಸಗಿ ಬಸ್ಸ್ ದರ ಏರಿಕೆ : ಜಿಲ್ಲಾಧಿಕಾರಿ

Saturday, July 16th, 2011
Bus Meeting/ಬಸ್ಸ್ ದರ ಏರಿಕೆ

ಮಂಗಳೂರು : ಖಾಸಗಿ ಬಸ್ ಮಾಲೀಕರು ಇತ್ತೀಚಿನ ದಿನಗಳಲ್ಲಿ ಇಂಧನ, ವಾಹನದ ಬಿಡಿಭಾಗಗಳ ಬೆಲೆ ಏರುತ್ತಿರುವುದರಿಂದ ಖಾಸಗಿ ಬಸ್ ಪ್ರಯಾಣದರ ಏರಿಸಬೇಕು ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಏರಿಕೆಯ ಕುರಿತು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳ ತಿಳಿಸಿದರು. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಅವರ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು ಬಸ್ ಪ್ರಯಾಣದರ ನಿಗಧಿಗೆ ಸರಕಾರದ ಮಾರ್ಗದರ್ಶನದಂತೆ […]