ಸಮತಾದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಮತ್ತು ಶಿಕ್ಷಕ ದಿನಾಚರಣೆ.

Tuesday, September 21st, 2010
 ಸಮತಾದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಮತ್ತು ಶಿಕ್ಷಕ ದಿನಾಚರಣೆ.

ಮಂಗಳೂರು: ವಿಂಶತಿ ವರ್ಷಾಚರಣೆಯಲ್ಲಿರುವ ಸಮತಾ ಮಹಿಳಾ ಬಳಗದ ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮವು ಶನಿವಾರ ಶ್ರೀ ಸುಬ್ರಹ್ಮಣ್ಯ ಸಭಾ ಸದನದಲ್ಲಿ ನೆರವೇರಿತು. ಕಲಾನಿಕೇತನದ ಸಂಗೀತ ಮತ್ತು ವೀಣಾ ಶಿಕ್ಷಕಿ ಶ್ರೀಮತಿ ಸಾವಿತ್ರಿ ರಾಮ್ ರಾವ್ ಮುಖ್ಯ ಅತಿಥಿಯಾಗಿದ್ದರು. ಸಮತಾದ ಸದಸ್ಯೆಯರ 12 ವರ್ಷದೊಳಗಿನ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಧಾರ್ಮಿಕ  ಚೌಕ್ಕಟ್ಟಿನೊಳಗೆ ಛದ್ಮವೇಷ ಸ್ಪರ್ಧೆ ನಡೆಯಿತು. ಭಾಗವಹಿಸಿದ ಪುಟಾಣಿಗಳಿಗೆ ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು. ಆರ್ಥಿಕವಾಗಿ ತೊಂದರೆಗೀಡಾಗಿರುವ ರವೀಂದ್ರ ಎಂಬ ವಿದ್ಯಾರ್ಥಿಗೆ ಧನಸಹಾಯ ನೀಡಲಾಯಿತು. ಬಳಿಕ ಶಿಕ್ಷಕಿ ಸಾವಿತ್ರಿ […]

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ರಾಜೀನಾಮೆ

Tuesday, September 21st, 2010
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ರಾಜೀನಾಮೆ

ಬೆಂಗಳೂರು : ಚಿಕ್ಕಮಗಳೂರು ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿದ್ದ ಶಾಸಕ ಸಿ.ಟಿ.ರವಿ ಅಸಮಾಧಾನದಿಂದ ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಗೊಂಡಿದೆ. ಚಿಕ್ಕಮಗಳೂರಿನಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಕೂಡ ಯಾವುದೇ ಬೆಲೆ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ಸಿ.ಟಿ.ರವಿ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ಇಂದು ಬೆಳಿಗ್ಗೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಪುನಾರಚನೆ ಕುರಿತಾಗಿ ಹೈಕಮಾಂಡ್ ಜೊತೆ ಮಾತುಕತೆ […]

ಸಚಿವ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಸಿದ್ದ, ಸಿಎಂ ದೆಹಲಿಗೆ

Sunday, September 19th, 2010
ಸಚಿವ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಸಿದ್ದ, ಸಿಎಂ ದೆಹಲಿಗೆ

ಬೆಂಗಳೂರು : ರಾಜ್ಯ ಸಚಿವ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಸಿದ್ದಗೊಂಡಿದ್ದು, ಇಂದು ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ  ಅಂತಿಮ ಪಟ್ಟಿ ತಯಾರಿಸಲಾಗಿದೆ. ಇದೀಗ ದೆಹಲಿನಲ್ಲಿರುವ ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಬಿ. ಎಸ್ ಯಡ್ಡಿಯೂರಪ್ಪ ದೆಹಲಿಗೆ ಪಯಾಣಿಸಿದ್ದಾರೆ. ಗೃಹ ಸಚಿವ ವಿ ಎಸ್ ಆಚಾರ್ಯ ಸಿಎಂ ಜತೆ  ದೆಹಲಿಗೆ ಪಯಾಣಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಜತೆ ನಡೆಯಲಿರುವ ಚರ್ಚೆ ಬಳಿಕ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಬಿಡುಗಡೆ ಗೊಳ್ಳಲಿದೆ. ಸಿಎಂ ನಿವಾಸದಲ್ಲಿ  ಈಶ್ವರಪ್ಪ ಮತ್ತು ರಾಜ್ಯಸಭಾ ಸದಸ್ಯ […]

ಹಿಂದೂ ಯುವಸೇನೆಯ 18 ನೇ ವರ್ಷದ ಗಣೇಶೋತ್ಸವದ ವೈಭದ ಮೆರವಣಿಗೆ

Saturday, September 18th, 2010
ಹಿಂದೂ ಯುವಸೇನೆಯ 18  ನೇ ವರ್ಷದ ಗಣೇಶೋತ್ಸವದ ವೈಭದ ಮೆರವಣಿಗೆ

ಮಂಗಳೂರು : ಹಿಂದೂ ಯುವಸೇನೆಯ ವತಿಯಿಂದ ನಗರದ ನೆಹರೂ ಮೈದಾನಿನಲ್ಲಿ ನಡೆಯುವ 18   ನೇ ವರ್ಷದ ಗಣೇಶೋತ್ಸವದ ವೈಭಯುತ ವಿಸರ್ಜನಾ ಮೆರವಣಿಗೆ ಶುಕ್ರವಾರ  ಸಂಜೆ 7 ಗಂಟೆಗೆ ನಡೆಯಿತು.  7 ದಿನಗಳಿಂದ ಗಣಪತಿಯ  ಉತ್ಸವ ಮೂರ್ತಿಯನ್ನು ಬಗೆ ಬಗೆಯ ಶೃಂಗಾರದಿಂದ, ನಾನಾ ಬಗೆಯ ಖಾದ್ಯ – ಪದಾರ್ಥಗಳನ್ನಿಟ್ಟು  ಆರಾಧಿಸಲಾಗುತಿತ್ತು. ವಿಸರ್ಜನಾ ಮೆರವಣಿಗೆಯು ನೆಹರೂ ಮೈದಾನದಿಂದ  ಹೊರಟು ಕ್ಲಾಕ್ ಟವರ್ ಮಾರ್ಗವಾಗಿ, ಹಂಪನ್ ಕಟ್ಟೆ ಮುಖ್ಯ ಸಿಗ್ನಲ್ ವೃತ್ತದ ಮೂಲಕ ಕೆ.ಎಸ್.ರಾವ್.ರಸ್ತೆ, ನವಭಾರತ್ ಸರ್ಕಲ್, ಡೊಂಗರಕೇರಿ,   ನ್ಯೂಚಿತ್ರ ಟಾಕೀಸ್, […]

ಡಾ| ಪಂಡಿತ್ ಪುಟ್ಟರಾಜ ಗವಾಯಿ ಲಿಂಗೈಕ್ಯ

Friday, September 17th, 2010
ಡಾ| ಪಂಡಿತ್ ಪುಟ್ಟರಾಜ ಗವಾಯಿ ಲಿಂಗೈಕ್ಯ

ಗದಗ : ಪದ್ಮ ಭೂಷಣ ಪುರಷ್ಕ್ರುತ ಡಾ| ಪಂಡಿತ್ ಪುಟ್ಟರಾಜ ಗವಾಯಿ (97) ಶುಕ್ರವಾರ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಮಧ್ಯಾಹ್ನ 12-30ಕ್ಕೆ ಲಿಂಗೈಕ್ಯರಾದರು. ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಇವರು ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದರು. 1914 ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ಹಾನ ಗಲ್‌ನ ದೇವರ ಹೊಸಕೋಟೆ ಯಲ್ಲಿ ಜನಿಸಿದ ಪುಟ್ಟರಾಜ ಗವಾಯಿ  ಮೂಲ ಹೆಸರು ಪುಟ್ಟಯ್ಯಜ್ಜ ಎಂಬುದಾಗಿತ್ತು.  ಬಾಲ್ಯ ದಲ್ಲಿಯೇ ಗವಾಯಿ ದೃಷ್ಟಿ ಕಳಕೊಂಡಿದ್ದರು. ಮಾವ ಚಂದ್ರಶೇಖರ್  ಪುಟ್ಟಯ್ಯಜ್ಜನಿಗೆ ಬೆಳಕಾಗಿ ಅವರ […]

ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

Thursday, September 16th, 2010
ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

ಮೂಡುಬಿದಿರೆ:  ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಬುಧವಾರ ಸಂಜೆ ನಿಧನರಾದರು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಐವರು ಗಂಡು ಮತ್ತು ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕ್ರಷಿಕರಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಅಪ್ರತಿಮ ಸಾಧಕ ಕೆಜೆ.ಶೆಟ್ಟಿ ಕಡಂದಲೆ ಶಿಕ್ಷಕರಾಗಿ, ಸಾಹಿತಿಯಾಗಿ,  ಅಪ್ರತಿಮ ಹೋರಾಟಗಾರರಾಗಿ, ಹರಿತವಾದ ಬರಹಗಳಿಂದ ಜನರ ಮನ ಮುಟ್ಟಿದ್ದರು. ಕಡಂದಲೆಯಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು.  ಸ್ವತಃ ತಾವೇ ಸಂಪಾದಕರಾಗಿ ಚಂದನ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸ್ಥಳೀಯ ಪತ್ರಿಕೆಗಳಿಗೆ ಅಂಕಣ […]

ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಗೆ ಜಯಭೇರಿ

Thursday, September 16th, 2010
ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಗೆ ಜಯಭೇರಿ

ಗುಲ್ಬರ್ಗಾ : ಸೋಮವಾರ ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮರು ಮತದಾನದ  ಮತಎಣಿಕೆ ಮುಕ್ತಾಯವಾಗಿದ್ದು ಆಡಳಿತ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. , ಪ್ರತಿಷ್ಠೆಯಮಾರ್ಪಟ್ಟಿದ್ದ , ಮೂರೂ ಪಕ್ಷಗಳಿಗೆ ಅಗ್ನಿಪರೀಕ್ಷೆಯ  ಕಣವಾಗಿದ್ದ   ಕಡೂರಿನಲ್ಲಿ ಬಿಜೆಪಿಯ ಡಾ. ವೈ.ಸಿ. ವಿಶ್ವನಾಥ್  ಗೆಲುವು ದಾಖಲಿಸಿದ್ದರೆ, ಜೆಡಿಎಸ್‌ನ ವೈ.ಎಸ್.ವಿ. ದತ್ತಾ ಅವರು ಸೋಲು ಅನುಭವಿಸಿದ್ದಾರೆ.  ಕಾಂಗ್ರೆಸ್‌ನ ಕೆಂಪರಾಜು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಜೆಡಿಎಸ್‌ನ ಅರುಣಾ ಪಾಟೀಲ್ ರೇವೂರ […]

ನುಡಿಸಿರಿ ಅಧ್ಯಕ್ಷೆಯಾಗಿ ಕನ್ನಡದ ಪ್ರಸಿದ್ಧ ಲೇಖಕಿ ವೈದೇಹಿ.

Wednesday, September 15th, 2010
ನುಡಿಸಿರಿ ಅಧ್ಯಕ್ಷೆಯಾಗಿ ಕನ್ನಡದ ಪ್ರಸಿದ್ಧ ಲೇಖಕಿ ವೈದೇಹಿ.

ಮಂಗಳೂರು:  ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2010ರ ಸರ್ವಾಧ್ಯಕ್ಷೆಯಾಗಿ ಲೇಖಕಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಕ್ಟೋಬರ್ 29, 30, 31 ರಂದು ಮೂಡಬಿದಿರೆಯ ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದಲ್ಲಿ ಕನ್ನಡ ಮನಸ್ಸು: ಜೀವನ ಮೌಲ್ಯಗಳು’ ಎಂಬ ಪರಿಕಲ್ಪನೆಯಡಿ ಸಮ್ಮೇಳನ ನಡೆಯಲಿದೆ ಎಂದು ಆಳ್ವ  ಹೇಳಿದರು. ಜಾನಕಿ ಶ್ರೀನಿವಾಸ ಮೂರ್ತಿ ವೈದೇಹಿ ಕಾವ್ಯನಾಮದಿಂದ ಚಿರಪರಿಚಿತರು. ಕವಿತೆ, ಕಥೆ, ನಾಟಕ, […]

ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ ಅಸ್ತಿತ್ವಕ್ಕೆ

Wednesday, September 15th, 2010
ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ ಅಸ್ತಿತ್ವಕ್ಕೆ

ಮಂಗಳೂರು : ಇಲ್ಲಿಯವರೆಗೆ ನಾಗರೀಕ ಬಂದೂಕು ತರಬೇತಿ ಶಿಬಿರಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗುತಿತ್ತು. ಈ ಹಿಂದಿನ ನಾಗರೀಕ ಬಂದೂಕು ತರಬೇತಿ ಶಿಬಿರ ( ಆಗಸ್ಟ್-2010) ದಲ್ಲಿ ಹೇಳಿದ್ದಂತೆ ದಿನಾಂಕ : 13.09.2010 ರಂದು ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ (Dakshina Kannada District Rifle Association) ಈ ಕೆಳಗಿನ ಲಾಂಛನದೊಂದಿಗೆ ಅಸ್ತಿತ್ವಕ್ಕೆ ಬಂದಿರುತ್ತದೆ. ಸದರಿ  ಸಂಘವನ್ನು Karnataka Societies Registration Act -1960 -1960 ರ ಅನ್ವಯ ಸಹಕಾರಿ ಸಂಘಗಳ ಉಪ […]

ರಂಗ ಕಲಾವಿದ ನವೀನ್ ಎಡಮಂಗಲ ವಿಧಿ ವಶ

Monday, September 13th, 2010
ರಂಗ ಕಲಾವಿದ ನವೀನ್ ಎಡಮಂಗಲ ವಿಧಿ ವಶ

ಬೆಳ್ತಂಗಡಿ : ವಿಶ್ವತುಳು ಸಮ್ಮೇಳನದ ತುಳುಗ್ರಾಮದಲ್ಲಿ ಗಾಂಧಿ ಪಾತ್ರಧಾರಿ, ಖ್ಯಾತ ರಂಗಕರ್ಮಿ, ನಾಟಕ ನಿರ್ದೇಶಕ ನವೀನ್ ಎಡಮಂಗಲ (27) ಪಂಜ-ಕಡಬ ರಸ್ತೆಯ ನೆಕ್ಕಿಲದಲ್ಲಿ ಸೆ.11ರಂದು ಬೆಳಿಗ್ಗೆ ಹಿಟಾಚಿ ಯಂತ್ರ ಹೇರಿಕೊಂಡು ಹೋಗುತ್ತಿದ್ದ ಟಿಪ್ಪರ್‌ ಲಾರಿ ಹಾಗೂ ಬೈಕ್  ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಣೇಶೋತ್ಸವ ನಿಮಿತ್ತ ಪಂಜದಲ್ಲಿ ನವೀನ್ ಎಡಮಂಗಲ ನಿರ್ದೇಶನದಲ್ಲಿ ಉಜಿರೆಯ ಎಸ್‌ಡಿ ಎಂ. ಕಾಲೇಜಿನ ರಂಗತರಬೇತಿ ಕೇಂದ್ರದವರಿಂದ ಸೆ.11ರಂದು ರಾತ್ರಿ ನಾಟಕ ನಡೆಯಲಿದ್ದು, ಅವರು ಸೆ.10ರಂದೇ ಪಂಜಕ್ಕೆ ಬಂದು ವೇದಿಕೆ, ರಂಗಸಜ್ಜಿಕೆ ನಿರ್ಮಿಸಿದ್ದರು. ಸೆ.11ರಂದು ಮುಂಜಾನೆ […]