Blog Archive

ಎರಡು ಪ್ರತ್ಯೇಕ ಪ್ರಕರಣ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳನ ಕೈಚಳಕ; ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Monday, February 3rd, 2020
kalavu

ಮೈಸೂರು : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಮನೆಯ ಬಾಗಿಲು ಮೀಟಿ ಚಿನ್ನಾಭರಣ ಕದ್ದೊಯ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ಮತ್ತೊಂದು ಕಡೆ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಸರಸ್ವತಿಪುರಂ ಠಾಣೆಗೆ ಉಷಾ ಎಂಬವರು ದೂರು ನೀಡಿದ್ದು, 11/01/2020 ರ ಬೆಳಿಗ್ಗೆ 8.30 ರಿಂದ 29/01/2020 ರ ರಾತ್ರಿ 10.30 ರ ನಡುವೆ ಯಾರೋ ಕಳ್ಳರು ಶಾರದಾದೇವಿನಗರದ ಬಳಿ ಇರುವ ಕಾವೇರಿ ಅಪಾರ್ಟ್ ಮೆಂಟ್ ನಮ್ಮ ಮನೆಯ ಬಾಗಿಲನ್ನು […]

ಸರಗಳ್ಳ ದಂಪತಿಗಳ ಬಂಧನ : 7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಪೊಲೀಸರ ವಶಕ್ಕೆ

Tuesday, December 17th, 2019
sara-kalla-dampati

ಬೆಂಗಳೂರು : ಮಹಿಳೆಯರು ಮತ್ತು ವೃದ್ಧೆಯರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕಳ್ಳ ದಂಪತಿಗಳನ್ನು ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ, ದಂಪತಿಗಳಿಂದ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣವನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತ ದಂಪತಿಗಳನ್ನು ಮಂಜುಳ ಅಲಿಯಾಸ್ ಕಳ್ಳಿ ಮಂಜಿ ಮತ್ತು ಚೆಲುವರಾಯ ಅಲಿಯಾಸ್ ಚೆಲುವ ಎಂದು ಗುರುತಿಸಲಾಗಿದೆ. ಈ ಕಳ್ಳ ದಂಪತಿಗಳು ಕಳೆದ ಹಲವು ವರ್ಷಗಳಿಂದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸುಮಾರು 100ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ಇವರ ಮೇಲಿದೆ […]

ಇತಿಹಾಸ ಪ್ರಸಿದ್ಧ ಕರವಲೆ ಶ್ರೀಭಗವತಿ ದೇವಾಲಯಕ್ಕೆ ನುಗ್ಗಿದ ಚೋರರು : ಚಿನ್ನಾಭರಣ, ನಗದು ಕಳ್ಳತನ

Tuesday, December 10th, 2019
Madikeri

ಮಡಿಕೇರಿ : ನಗರದ ಹೊರ ವಲಯದ ಇತಿಹಾಸ ಪ್ರಸಿದ್ಧ ಕರವಲೆ ಶ್ರೀಭಗವತಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಅಂದಾಜು 5 ಲಕ್ಷ ರೂ. ಮೌಲ್ಯದ ದೇವರ ಆಭರಣಗಳನ್ನು ಚೋರರು ಹೊತ್ತೊಯ್ದಿದ್ದಾರೆ. ಎರಡು ಭಂಡಾರದ ಬೀಗ ಮುರಿದು ಹುಂಡಿಯಲ್ಲಿದ್ದ ಹಣವನ್ನು ಕೂಡ ದೋಚಿದ್ದಾರೆ. ಸೋಮವಾರ ಬೆಳಗಿನ ಜಾವ ದೇವಾಲಯದ ಅರ್ಚಕರು ಪೂಜೆಗೆಂದು ದೇವಾಲಯಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಕಳ್ಳರ ತಂಡ ದೇವಾಲಯಕ್ಕೆ ನುಗ್ಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದೇವಾಲಯದ ಮುಖ್ಯ ದ್ವಾರದಲ್ಲಿದ್ದ ಸಿ.ಸಿ.ಕ್ಯಾಮರಾವನ್ನು ಬೇರೆಡೆಗೆ […]

ಇಂದಿನ ರಾಶಿ ಫಲ : ಮಕರ ರಾಶಿಯವರಿಗೆ ಚಿನ್ನಾಭರಣ ಖರೀದಿ ಯೋಗ

Sunday, November 24th, 2019
badrakali

ಶ್ರೀ ಭಗವತಿ ಭದ್ರಾಕಾಳಿ ಅಮ್ಮನವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ ನಕ್ಷತ್ರ : ಚಿತ್ತ ಋತು : ಶರದ್ ರಾಹುಕಾಲ 16:30 – 17:55 ಗುಳಿಕ ಕಾಲ 15:06 – 16:30 ಸೂರ್ಯೋದಯ 06:36:57 ಸೂರ್ಯಾಸ್ತ 17:55:01 ತಿಥಿ : ತ್ರಯೋದಶಿ ಪಕ್ಷ : ಕೃಷ್ಣ ಮೇಷ ರಾಶಿ ಪ್ರೀತಿ, ಭರವಸೆ, ನಂಬಿಕೆ, […]

ಮಂಗಳೂರಿನಲ್ಲಿ ಜ್ಯುವೆಲ್ಲರಿ ಕಳವು ಪ್ರಕರಣ : ಅಘ್ಘಾನಿಸ್ತಾನದ ಪ್ರಜೆ ಸೇರಿ ಮೂವರ ಬಂಧನ

Thursday, September 26th, 2019
muvvara-bandhana

ಮಂಗಳೂರು : ಮಂಗಳೂರಿನ ಭವಂತಿ ಸ್ಟ್ರೀಟ್‍ನಲ್ಲಿನ ಅರುಣ್ ಜ್ಯುವೆಲ್ಲರ್ಸ್‍ನಲ್ಲಿ ಇತ್ತೀಚೆಗೆ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಅಘ್ಘಾನಿಸ್ತಾನದ ಪ್ರಜೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಕಾಸರಗೋಡಿನ ಇಲ್ಲಾಪು ವಲಪ್ಪು, ಕಲ್ನಾಡ್ ಗ್ರಾಮ, ಚೆಂಬರಿಕಾ, ಚೆಮ್ನಾಡ್‍ನ ಮುತಾಸಿಮ್ ಸಿ ಎಮ್ ಅಲಿಯಾಸ್ ತಸ್ಲೀಮ್ (39) , ಅಪ್ಘಾನಿಸ್ತಾನದ ಕಾಬೂಲ್ ಜಿಲ್ಲೆಯ ಕಾಬೂಲ್ ನ, ಪ್ರಸ್ತುತ ನ್ಯೂ ಡೆಲ್ಲಿಯ ಕಿರ್ಕಿ ಎಕ್ಸ್ ಟೆನ್ಷನ್ ನ ಮಾಳವೀಯಾ ನಗರದಲ್ಲಿ ನೆಲೆಸಿರುವ ವಲಿ ಮೊಹಮ್ಮದ್ ಶಫಿ ಅಲಿಯಾಸ್ ವಲಿ […]

ದಾದಿಯರ ವಸತಿಗೃಹದಿಂದ ಬೀಗ ಮುರಿದು 14ಪವನ್‌ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯ ಬಂಧನ

Wednesday, November 23rd, 2016
Ibrahim mujamal

ಮಂಗಳೂರು: ದಾದಿಯರ ವಸತಿಗೃಹದಿಂದ ಬೀಗ ಮುರಿದು 14ಪವನ್‌ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ತಾಲೂಕಿನ ಬಾಯಾರುಪದವು ಕ್ಯಾಂಪ್ಕೋ ನಿವಾಸಿ ಇಬ್ರಾಹಿಂ ಮುಜಾಮಲ್ (20) ಎಂಬಾತನೇ ಬಂಧಿತ ಆರೋಪಿ. ಸುಬ್ರಹ್ಮಣ್ಯ, ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ಅಳಿಕೆ ಸರ್ಕಾರಿ ಆಸ್ಪತ್ರೆಯ ದಾದಿಯರ ವಸತಿಗೃಹದಲ್ಲಿ ಕಳ್ಳತನ ಬಳಿಕ ತಲೆಮರೆಸಿಕೊಂಡಿದ್ದ. ಪೊಲೀಸರು ತನಿಖೆ ಕೈಬಿಟ್ಟಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಊರಿಗೆ ಹಿಂದಿರುಗಿ ಕರ್ನಾಟಕದೆಡೆಗೆ ಸೋಮವಾರ ಆಗಮಿಸಿದ್ದಾಗ ಪೊಲೀಸರು ಕನ್ಯಾನದಲ್ಲಿ ಬಂಧಿಸಿದ್ದಾರೆ. ಕಳ್ಳತನ ಮಾಡಿದ್ದ ಹೆಚ್ಚಿನ ಬಂಗಾರವನ್ನು ಇಬ್ರಾಹಿಂ ತನ್ನ […]

10 ಮಂದಿಯ ಬಂಧನ: 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

Monday, November 7th, 2016
Bhushan-gulabrao-borase

ಮಂಗಳೂರು: ಪುತ್ತೂರು ಪೆರಿಗೇರಿ ಪಾದೆಕರಿಯದಲ್ಲಿ ನಡೆದ ದರೋಡೆ ಪ್ರಕರಣವನ್ನು ಬೇಧಿಸಿರುವ ದ.ಕ. ಜಿಲ್ಲಾ ಪೊಲೀಸರು 12 ಮಂದಿ ಆರೋಪಿಗಳ ಪೈಕಿ 10 ಮಂದಿಯನ್ನು ಬಂಧಿಸಿ, 2 ವಾಹನಗಳ ಸಹಿತ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‌‌ಪಿ ಭೂಷಣರಾವ್ ಬೊರಸೆ, ಕೃತ್ಯ ನಡೆಸಿದ 12 ಮಂದಿಯ ಪೈಕಿ 10 ಮಂದಿಯನ್ನು ಬಂಧಿಸಲಾಗಿದೆ. 50 ಸಾವಿರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ, 7 ಲಕ್ಷ ರೂ. ಮೌಲ್ಯದ ಕ್ಸೈಲೋ […]

ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ

Saturday, November 5th, 2016
jewellery-worth

ಮಂಗಳೂರು: ರಾತ್ರಿ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಬಂಟ್ವಾಳದ ಬೋಗೋಡಿಯ ಎಸ್‌.ಎಂ ನಗರ ಎಂಬಲ್ಲಿ ನಡೆದಿದೆ. ಅಬೂಬಕ್ಕರ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ರಾತ್ರಿ ವೇಳೆ ಮನೆ ಮಂದಿಯೆಲ್ಲಾ ಮಲಗಿದ ಮೇಲೆ ಮನೆಗೆ ನುಗ್ಗಿದ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಮುಂಜಾನೆ ಎದ್ದಾಗಲೇ ಮನೆಯವರಿಗೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಮನೆಯ ಮೇಲಿನ ಮಹಡಿಯಲ್ಲಿ ಹೊಸ ಕಿಚನ್ ರೂಂ ನಿರ್ಮಾಣದ ಕಾಮಗಾರಿ ಕೆಲ ದಿನಗಳಿಂದ […]

ಅರ್ಚಕ ವಾಸುದೇವ ಅವರ ಮನೆಯಿಂದ ಚಿನ್ನಾಭರಣ-ನಗದು ದೋಚಿದ ನಾಲ್ವರು ಪ್ರಮುಖ ಆರೋಪಿಗಳ ಬಂಧನ

Wednesday, November 2nd, 2016
kateelu

ಮಂಗಳೂರು: ಕಟೀಲು ದೇವಳದ ಅರ್ಚಕ ವಾಸುದೇವ ಅವರ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಪ್ರಮುಖ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಭಂಡಾರಿಬೆಟ್ಟು ಬೈಲು ಮನೆ ನಿವಾಸಿ ಭರತ್ ಶೆಟ್ಟಿ (30), ಮೆಲ್ಕಾರ್ ನಿವಾಸಿ ಮುಹಮ್ಮದ್ ಅಲಿ (35), ಹಳೆಯಂಗಡಿ ಪಾವಂಜೆ ನಿವಾಸಿ ಪುರುಷೋತ್ತಮ (44) ಮತ್ತು ಸೋಮೇಶ್ವರ ಸಂಕೊಲಿಗೆ ನಿವಾಸಿ ಹರೀಶ್ ಗಟ್ಟಿ (41) ಬಂಧಿತರು. ಬಂಧಿತರಿಂದ 450 ಗ್ರಾಂ ಚಿನ್ನಾಭರಣ, ರಿವಾಲ್ವರ್, ಸಜೀವ ಗುಂಡುಗಳು, […]

ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರರ ಮನೆಗೆ ಮುಸುಕುಧಾರಿಗಳಿಂದ ದಾಳಿ

Tuesday, October 4th, 2016
vasudev-asranna-home

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಾಸುದೇವ ಅಸ್ರಣ್ಣ ಅವರ ಮನೆಗೆ ಸೋಮವಾರ ತಡರಾತ್ರಿ ಎಂಟು ಮಂದಿ ಮುಸುಕುಧಾರಿಗಳ ತಂಡ ನುಗ್ಗಿ ಸುಮಾರು 55 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿ ಪರಾರಿಯಾದ ಘಟನೆ ನಡೆದಿದೆ. ಕಟೀಲು ದೇವಸ್ಥಾನದಲ್ಲಿ ರಾತ್ರಿ ಹುಲಿವೇಷಗಳ ವಿಶೇಷ ಪೂಜೆ ಹಾಗೂ ಕುಣಿತವಿದ್ದ ಕಾರಣ ರಾತ್ರಿ 12.10 ಕ್ಕೆ ವಾಸುದೇವ ಅಸ್ರಣ್ಣ ದೇವಸ್ಥಾನದ ಪಕ್ಕವೇ ಇರುವ ಮನೆಗೆ ದುಷ್ಕರ್ಮಿಗಳು ಬಂದಿದ್ದಾರೆ. ಮನೆಯಲ್ಲಿ ತಾಯಿ, ಪತ್ನಿ, ಸೊಸೆ, ಮಗಳು, ಅವರ ಮಕ್ಕಳು ಇದ್ದರು […]