Blog Archive

ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಇಂದು ಸಮುದ್ರ ಪೂಜೆ ಆಚರಣೆ

Tuesday, August 20th, 2013
Karwar to get captive port soon

ಮಂಗಳೂರು :  ಇಂದು ಶ್ರೀ ಶ್ರೀ ಶ್ರೀ ಪೂಜಾ ಸಂಧ್ಯಾನಾಥ ಜಿ. ಯವರ ನೇತೃತ್ವದಲ್ಲಿ ಊರಿನ ಜನರೆಲ್ಲರೂ ಸೇರಿ ದೇವರ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಕಾರ್ಯಕ್ರಮವು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಆಶ್ರಯದಲ್ಲಿ ನಡೆಯಿತು . ದೇವರ ವಿಧಿವಿಧಾನಗಳ ಬಳಿಕ ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸಾಮೂಹಿಕವಾಗಿ ಸಮುದ್ರ ಪೂಜೆಯನ್ನು ಸ್ವಾಮಿಜಿಗಳ ನೇತೃತ್ವದಲ್ಲಿ ನಡೆಸಿದರು. ನಂತರ ಸಮುದ್ರಕ್ಕೆ ತೆಂಗಿನಕಾಯಿ, ಹೂವು ಸಮರ್ಪಸಿದರು. ಊರಿನ ಬಾಂಧವರೆಲ್ಲರೂ ಹಾಲೆರೆದು ಸಮುದ್ರ ದೇವತೆಯನ್ನು ನೆನೆದು ಪೂಜಿಸಿದರು. ಅಧ್ಯಕ್ಷರಾಗಿ ಶಾಸಕ […]

ಬಲಿಷ್ಠ ಗೋರಕ್ಷಣಾ ಕಾನೂನು ಜಾರಿಗೆ ತರಲು ಜನಜಾಗ್ರತಿ ಸಮಿತಿಯಿಂದ ಪ್ರತಿಭಟನೆ

Monday, August 19th, 2013
Jana Jagruti Samiti to hold protest rally for cattle protection

ಮಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆಯ ವೈಪಲ್ಯವಿದ್ದು ಅದನ್ನು ಸರಿಪಡಿಸುವ ಪರವಾಗಿ ಬಲಿಷ್ಠ ಗೋರಕ್ಷಣಾ ಕಾನೂನು ಜಾರಿಗೆ ತರಲು ಜನಜಾಗ್ರತಿ ಸಮಿತಿಯಿಂದ ಆಗಸ್ಟ್ 19 ಸೋಮವಾರ ರಂದು ಡಿ.ಸಿ. ಆಫೀಸ್ ಬಳಿ ಪ್ರತಿಭಟನೆ ನಡೆಯಿತು. ಜನಜಾಗ್ರತಿ ಸಮಿತಿಯ ಸಂಚಾಲಕರಾದ ಕಟೀಲು ದಿನೇಶ್ ಪೈಯವರು ಮಾತಾಡಿ ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಗೋಸಂಬಂಧಿ ಅಪರಾಧಗಳು ತೀವ್ರವಾಗಿ ಹೆಚ್ಚುತ್ತಿವೆ. ಕೃಷಿಕರ ಮತ್ತು ಹೈನುಗಾರಿಕೆ ಮಾಡುವವರ ಮನೆಯಿಂದ ಗೋವುಗಳನ್ನು ಕಳವು ಮಾಡಿ ಕೊಂಡೊಯ್ಯಲಾಗುತ್ತದೆ. ಗೋಹತ್ಯೆ ಮಾಡಿ ಕದ್ದು ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ಈ […]

ಆಗಸ್ಟ್ 21ಕ್ಕೆ ಅಡಿಕೆ ಮತ್ತು ತೆಂಗು ಬೆಳೆಗಾರರ ಸಂಘಟನೆಗಳ ಮುಖಂಡರ ಸಮಾಲೋಚನೆ ಸಭೆ

Saturday, August 17th, 2013
protest

ಮಂಗಳೂರು : ನಗರದ ಜ್ಯೋತಿ ಸರ್ಕಲ್ ಬಳಿ ಇರುವ ಹೋಟೆಲ್  ವುಡ್ ಲ್ಯಾಂಡ್ ನಲ್ಲಿ ಆಗಸ್ಟ್ 21ಕ್ಕೆ  ಅಡಿಕೆ ಮತ್ತು ತೆಂಗು ಬೆಳೆಗಾರರ ಸಂಘಟನೆಗಳ ಮುಖಂಡರ ಸಮಾಲೋಚನೆ ಸಭೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ರೋಹಿತಾಕ್ಷ ರೈ ಕೆ.ರವರು  ಆಗಸ್ಟ್ 17ರಂದು ನಡದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ತಿಳಿಸಿದರು. ಬೃಹತ್ ಕೃಷಿಕ್ಷೇತ್ರಕ್ಕೆ  ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನಾಧಾರ ತೋರುತ್ತಿರುವುದು ಬೆಳೆಗಾರರಿಗೆ ಸರಕಾದ ಮೇಲೆ ಜಿಗುಪ್ಸೆ ತಂದಿದೆ. ರೈತರ ಸಾಲ ಮನ್ನಾ,ಅಡಿಕೆ ಎಲೆ ಹಲದಿ […]

900 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Wednesday, June 5th, 2013
Mutton Merchants Association book distributes

ಮಂಗಳೂರು : ಮಂಗಳೂರಿನ ಜಮಿಯತುಲ್ ಸಾ-ಅದಾ (ಮಾಂಸ ವ್ಯಾಪಾರಸ್ತರ ಸಂಘ) ವತಿಯಿಂದ 1ರಿಂದ 10ನೆ ತರಗತಿಯ ವರೆಗಿನ 900 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುವ ಕಾರ್ಯಕ್ರಮ ಇಂದು ಕುದ್ರೋಳಿಯ ಏಒನ್ ಬಾಗ್ ನಲ್ಲಿರುವ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂದರ್ ಠಾಣೆಯ ಇನ್ಸ್ ಪೆಕ್ಟರ್ ವಿ.ಟಿ. ಸುಬ್ರಹ್ಮಣ್ಯ ಮಾತನಾಡಿ, ಓದು ಬರಹ ಇಲ್ಲದ ವ್ಯಕ್ತಿಗೆ ಕಾನೂನಿನ ಅರಿವು ಇರುವುದಿಲ್ಲ. ಇಂತಹವರು ಸಮಾಜದಲ್ಲಿ ತಪ್ಪು ಹೆಜ್ಜೆಗಳನ್ನು ಇಡುತ್ತಾರೆ. ಜ್ಞಾನವೇ ಆಸ್ತಿ, ಅದನ್ನು ಗಳಿಸಲು ಶ್ರಮಿಸಿರಿ […]

ಡಾ.ಜಿ.ಎಸ್. ವೃದ್ದಾಶ್ರಮದ ವತಿಯಿಂದ ಮೂವರು ಗಣ್ಯರಿಗೆ ಅಭಯಶ್ರೀ ಪ್ರಶಸ್ತಿ

Wednesday, May 15th, 2013
ಡಾ.ಜಿ.ಎಸ್. ವೃದ್ದಾಶ್ರಮದ ವತಿಯಿಂದ ಮೂವರು ಗಣ್ಯರಿಗೆ ಅಭಯಶ್ರೀ ಪ್ರಶಸ್ತಿ

ಮಂಗಳೂರು : ವೃದ್ಧರ ಹಾಗು ದೀನ ದಲಿತರ ಆಶ್ರಯಧಾಮವಾಗಿರುವ, ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಡಾ.ಗಿರಿಧರ್ ರಾವ್ ಸಂಜೀವಿ ಬಾಯಿ ವೃದ್ದಾಶ್ರಮದ ವತಿಯಿಂದ ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿರುವ ಅಭಯ ಆಶ್ರಯದ ಸಂಸ್ಥಾಪಕ ದಿ.ಬೇಕಲ್  ಲಿಂಗಪ್ಪಯ್ಯ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಡಾ. ರಾಮ್ ದಾಸ್ ಪೈ ಈ ಮೂವರಿಗೆ ಅಭಯ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಡಾ.ಜಿ.ಎಸ್. ವೃದ್ದಾಶ್ರಮದ ಸಂಚಾಲಕ ಶ್ರೀನಾಥ್ ಹೆಗ್ಡೆ  ತಿಳಿಸಿದರು. ಮಂಗಳವಾರ ವೃದ್ದಾಶ್ರಮದಲ್ಲಿ […]

ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್

Tuesday, May 14th, 2013
Shivraj Kumar

ಮಂಗಳೂರು : ಅಕ್ಷಯ ತದಿಗೆ ಮತ್ತು ಬಸವ ಜಯಂತಿಯ ವಿಶೇಷ ದಿನವಾದ ಸೋಮವಾರ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ರವರು ಕುಂಟುಂಬ ಸಮೇತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ  ನಗರಕ್ಕೆ ಆಗಮಿಸಿದ್ದ ಅವರ ಜೊತೆಯಲ್ಲಿ ಪತ್ನಿ ಗೀತಾ, ಹಿರಿಯ ನಟ ಚಂದ್ರಶೇಖರ್, ಗುರುದತ್ ಹಾಗು ಇತರರು ಆಗಮಿಸಿದ್ದರು. ಶ್ರೀ ಕ್ಷೇತ್ರದ ಪರವಾಗಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ರವರು ಶಿವರಾಜ್ ಕುಮಾರ್ […]

ಫ್ಯಾಕ್ಸ್‌,ಈಮೇಲ್‌ ಮುಖಾಂತರ ದೂರು ಸಲ್ಲಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೊಳಿಸಲಾಗುವುದು : ವೈ. ಭಾಸ್ಕರ್ ರಾವ್

Saturday, April 20th, 2013
Lokayukta office Mangalore

ಮಂಗಳೂರು :  ನಗರದ ಉರ್ವಸ್ಟೋರ್  ಬಳಿ ನಿರ್ಮಿಸಲಾದ ಮಂಗಳೂರು ಲೋಕಾಯುಕ್ತ ಅಧೀಕ್ಷಕರ ಕಚೇರಿಯ ಮೊದಲ ಹಂತದ ಕಟ್ಟಡವನ್ನು ಕರ್ನಾಟಕ ಲೋಕಾಯುಕ್ತ ವೈ. ಭಾಸ್ಕರ್ ರಾವ್ ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಲೋಕಾಯುಕ್ತರ ಬಳಿ ಬರುವ ಸಾರ್ವಜನಿಕ ಅಹವಾಲುಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವ ಕಡೆ ಹೆಚ್ಚಿನ ಗಮನ ಕೊಡಲಾಗುವುದು. ಲೋಕಾಯುಕ್ತ ವ್ಯವಸ್ಥೆಯಲ್ಲಿ ಇದುವರೆಗೆ ಸಾರ್ವಜನಿಕರು ಖುದ್ದಾಗಿ ಲಿಖಿತವಾಗಿ ದೂರು ಸಲ್ಲಿಸುವ ಕ್ರಮ ಇದ್ದು, ಇದೀಗ ಫ್ಯಾಕ್ಸ್‌ ಮತ್ತು ಈಮೇಲ್‌ ಮುಖಾಂತರವೂ ದೂರು ಸಲ್ಲಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೊಳಿಸಲಾಗುವುದು […]

ಯುವ ನಿರ್ದೇಶಕ ಸಾಯಿ ಕೃಷ್ಣ ಕುಡ್ಲ ನಿರ್ದೇಶನದ ಕನ್ನಡ ಚಲನಚಿತ್ರ ಚೆಲ್ಲಾಪಿಲ್ಲಿಯ ದ್ವನಿಸುರುಳಿ ಬಿಡುಗಡೆ ಸಮಾರಂಭ

Saturday, April 6th, 2013
Chellapilli Kannada movie

ಮಂಗಳೂರು : ಕರಾವಳಿಯ ಯುವ ನಿರ್ದೇಶಕ ಸಾಯಿ ಕೃಷ್ಣ ಕುಡ್ಲ ನಿರ್ದೆಶನದಲ್ಲಿ ಮೂಡಿ ಬಂದಿರುವ, ಕರಾವಳಿಯ ಬಹಿತೇಕ ಕಲಾವಿದರನ್ನು ಒಳಗೊಂಡ ಕನ್ನಡ ಚಲನಚಿತ್ರ ಚೆಲ್ಲಾಪಿಲ್ಲಿಯ ದ್ವನಿಸುರುಳಿ ಬಿಡುಗಡೆ ಸಮಾರಂಭ ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ಶುಕ್ರವಾರ ನಡೆಯಿತು. ಚಿತ್ರದ ದ್ವನಿ ಸುರುಳಿಯನ್ನು ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಎನ್‌. ರಾಜೇಂದ್ರಕುಮಾರ್‌ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಇದೀಗ ಕರಾವಳಿಯಲ್ಲೂ ಕನ್ನಡ ಚಿತ್ರಗಳನ್ನು ನಿರ್ಮಿಸಬಲ್ಲ, ನಿರ್ದೇಶಿಸಬಲ್ಲ ಪ್ರತಿಭೆಗಳಿವೆ ಎಂಬುದನ್ನು […]

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಆರ್‌ಒ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರ ಸ್ಥಾಪನೆ

Thursday, April 4th, 2013
Ekagavaakshi Center

ಮಂಗಳೂರು : ಚುನಾವಣೆಯ ಸಂದರ್ಭಗಳಲ್ಲಿ ನಡೆಸುವ ವಿವಿಧ ಕಾರ್ಯಕ್ರಮಗಳಿಗೆ ಪರವಾನಗಿ ಪಡೆಯಲು ವಿವಿಧ ಇಲಾಖೆಗಳಿಗೆ ತೆರಳಿ ಅನುಮತಿಯನ್ನು ಪಡೆಯಬೇಕಾಗಿದ್ದು ಇದರಿಂದ ಸಮಾರಂಭಗಳು ವಿಳಂಭವಾಗುತ್ತವೆ ಎಂಬ ದೂರುಗಳು ಕೇಳಿಬರುತ್ತಿದ್ದ ಇದನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತಾ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ವಿಚಾರವನ್ನು ತಿಳಿಸಿದರು.  ಏಕಗವಾಕ್ಷಿ ವ್ಯವಸ್ಥೆ ಯಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರನ್ನು ನೋಡೆಲ್‌ ಅಧಿಕಾರಿಯಾಗಿ ನೇಮಿಸಲಾಗುವುದಾಗಿ ಮತ್ತು  ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ  […]

ಕರ್ನಾಟಕ ರಾಜ್ಯ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆ

Wednesday, April 3rd, 2013
Police Flag Day

ಮಂಗಳೂರು : ಪೊಲೀಸರು ಕಾನೂನಿನ ಬಗ್ಗೆ ಸ್ಪಷ್ಟ ಜ್ಞಾನ ಹೊಂದುವುದು ಆವಶ್ಯ. ಆಗ ಯಾವುದೇ ಕ್ಲಿಷ್ಟಕರ ಸನ್ನಿವೇಶಗಳನ್ನು ಸುಲಲಿತವಾಗಿ ನಿಭಾಯಿಸಲು ಸಾಧ್ಯ. ಇಲ್ಲವಾದರೆ ಮುಜುಗರದ ಸಂದರ್ಭ ಎದುರಿಸಬೇಕಾಗುತ್ತದೆ ಎಂದು ನಿವೃತ್ತ ಪೊಲೀಸ್‌ ಉಪಾಧೀಕ್ಷಕ ವಿಶ್ವನಾಥ ಪಂಡಿತ್‌ ಹೇಳಿದರು. ಅವರು  ಮಂಗಳವಾರ ನಗರದ ಡಿ.ಎ.ಆರ್‌. ಪೊಲೀಸ್‌ ಕವಾಯತು ಮೈದಾನದಲ್ಲಿ ಜರಗಿದ ಕರ್ನಾಟಕ ರಾಜ್ಯ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ನಿವೃತ್ತರಾದ 61 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿಗಳನ್ನು  ಈ ಸಂದರ್ಭ ಸನ್ಮಾನಿಸಲಾಯಿತು.  ನಿವೃತ್ತ ಪೊಲೀಸರ ಕಲ್ಯಾಣ […]