ಹಿಂದೂ ಜನಜಾಗ್ರತಿ ಸಮಿತಿಯಿಂದ ಗುರುಪೂರ್ಣಿಮ ಮಹೋತ್ಸವ

Thursday, July 18th, 2013
Sanatana

ಮಂಗಳೂರು : ಹಿಂದೂ ಜನಜಾಗ್ರತಿ ಸಮಿತಿ, ಸನಾತನ ಸಂಸ್ಥೆ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ವತಿಯಿಂದ ದೇಶಾದಾದ್ಯಂತ ಗುರುಪೂರ್ಣಿಮ ಮಹೋತ್ಸವನ್ನು ಜುಲೈ 22 ರಂದು ಆಚರಿಸಲಾಗುವುದು. ಆ ಪ್ರಯುಕ್ತ ಅದೇ ದಿನ ಸಂಜೆ 4 ಗಂಟೆಗೆ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಶ್ರೀ ಗುರುಗಳಿಲ್ಲದೇ ಶಿಷ್ಯನಿಗೆ ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ ಅದುದರಿಂದ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯು ನಮ್ಮ ಗಮನಕ್ಕೆ ಬರುತ್ತದೆ. ಗುರುಪೂರ್ಣಿಮ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪರಮ ಪೂಜ್ಯ. ಭಕ್ತರಾಜ ಮಹಾರಾಜರ ಪ್ರತಿಮಾಪೂಜೆ ನಡೆಯಲಿದೆ. ಅಂದು […]

ಹಡಗು ಅಪಹರಣ : 24 ಮಂದಿ ಭಾರತೀಯರ ಜೊತೆ ಕಾಸರಗೋಡಿನ ಇಬ್ಬರಿಗೆ ದಿಗ್ಬಂಧನ

Thursday, July 18th, 2013
Kasagod Sailors

ಕಾಸರಗೋಡು:  ಸೋಮವಾರ, ಜುಲೈ 15 ರಂದು ಗೆಂಟಿಲ್ ಪೋರ್ಟ್ ನಿಂದ 15 ನ್ಯುಟ್ರಿಕಲ್ ಮೈಲಿ ದೂರದಲ್ಲಿ ಸೊಮಾಲಿಯಾದ ಕಡಲ್ಗಳ್ಳರಿಂದ ಅಪರಿಸಲ್ಪಟ್ಟಿರುವ ಎಂ.ವಿ.ಕೋಟನ್ ಹಡಗಿನಲ್ಲಿ 24 ಮಂದಿ ಭಾರತೀಯರಿದ್ದರು. ಹಡಗು ಅಪಹರಣಕಾರರ ಹೋತೋಟಿಯಲ್ಲಿದ್ದು ನೌಕರರಿಗೆ ದಿಗ್ಬಂಧನ ಹೇರಲಾಗಿದೆ, ರವಿವಾರದಿಂದ ಹಡಗು ಸಂಪರ್ಕ ಕಡಿದುಕೊಂಡಿದೆ ಅಪಹರಣಕಾರರು ಹಡಗನ್ನು ನೈಜೀರಿಯಾದ ಕಡೆ ಕೊಂಡೊಯ್ಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಹೃತ ಹಡಗಿನಲ್ಲಿ ಇಬ್ಬರು ಕಾಸರಗೋಡಿನವರಿದ್ದಾರೆ. ಕೆಲವು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ಕಳನಾಡು ನಿವಾಸಿ ವಸಂತ ಕುಮಾರ್(35) ಮತ್ತು ಪಾಲಕುನ್ನು ನಿವಾಸಿ ಬಾಬು(32) ಅವರು  […]

ಬಸ್ ನೌಕರರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಒಪ್ಪಿಕೊಂಡಿದೆ : ಐವನ್

Thursday, July 18th, 2013
Bus owners and workers

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ಅಧ್ಯಕ್ಷ ಐವನ್ ಡಿಸೋಜಾ ಅವರು ಬುಧವಾರ ನಗರದ ವುಡ್ ಲ್ಯಾಂಡ್ಸ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಿಟಿ, ಸರ್ವೀಸ್ ಮತ್ತು ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸುಮಾರು 18 ಬೇಡಿಕೆಗಳನ್ನು ಈಡೇರಿಸಲು ಬಸ್ ಮಾಲಕರು ಹಾಗೂ ಜಿಲ್ಲಾಡಳಿತ ಒಪ್ಪಿಕೊಂಡಿದೆ ಎಂದು ತಿಳಿಸಿದರು. ಬಸ್ಸ್ ಕಾರ್ಮಿಕರು ಹಲವು ವರ್ಷಗಳಿಂದ ತಮ್ಮ ಬೇಡಿಕೆ ಈಡೇರಿಸಲು ಸಂಬಂಧ […]

ಶಾಲೆಗಳಲ್ಲಿ ಮಕ್ಕಳಿಗೆ ಡಬ್ಲ್ಯು.ಐ.ಎಫ್.ಎಸ್ ಮಾತ್ರೆಗಳನ್ನು ನೀಡುವ ಕಾರ್‍ಯಕ್ರಮಕ್ಕೆ ಚಾಲನೆ

Wednesday, July 17th, 2013
Folic and Iron tablet

ಮಂಗಳೂರು : ನಗರದ ಅತ್ತಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಕಬ್ಬಿಣಾಂಶಯುಕ್ತ ಮಾತ್ರೆಗಳ(ಡಬ್ಲ್ಯು.ಐ.ಎಫ್.ಎಸ್.) ವಿತರಣಾ ಕಾರ್‍ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಎನ್.ಪ್ರಕಾಶ್ ಉದ್ಘಾಟಿಸಿದರು. ಕಬ್ಬಿಣಾಂಶಯುತ ಮಾತ್ರೆಗಳನ್ನು ಸೇವಿಸುವುದರಿಂದ ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆ, ಕಲಿಕಾ ಏಕಾಗ್ರತೆ ಕುಂಠಿತ, ದೈಹಿಕ ತೊಂದರೆಗಳು ದೂರವಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀ ಎನ್.ಪ್ರಕಾಶ್ ಅಭಿಪ್ರಾಯ ಪಟ್ಟರು. ಕಬ್ಬಿಣಾಂಶಯುತ ಮಾತ್ರೆಗಳ(ಡಬ್ಲ್ಯು.ಐ.ಎಫ್.ಎಸ್.) […]

ಮೂಡಬಿದಿರೆ ಬಸದಿ ವಿಗ್ರಹ ಕಳವು, ಬಂಧಿತ ಆರೋಪಿಗಳಿಗೆ ಜುಲೈ30ರವರೆಗೆ ನ್ಯಾಯಾಂಗ ಬಂಧನ

Wednesday, July 17th, 2013
jain basadi theft

ಮಂಗಳೂರು: ಮಂಗಳೂರು ಮತ್ತು  ಭುವನೇಶ್ವರ ಪೊಲೀಸರು ಜಂಟಿಯಾಗಿ ಮೂಡಬಿದಿರೆ ಬಸದಿಯಲ್ಲಿ ನಡೆದ ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಸ್ಸಾದ ಭುವನೇಶ್ವರದಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರನ್ನು ಬುಧವಾರ ನಗರಕ್ಕೆ ಕರೆತಂದಿದ್ದು, ಆರೋಪಿಗಳನ್ನು ನ್ಯಾಯಾದೀಶರ ಮುಂದೆ ಹಾಜರು ಪಡಿಸಿದ್ದು ಅವರಿಗೆ ಜುಲೈ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಗ್ರಹ ಕಳವು ಮಾಡಿರುವ ಸಂತೋಷ್ ದಾಸ್ ನ ಪತ್ನಿ ದೀಪ್ತಿಮಯಿ ಮೋಹಂತಿ ಮತ್ತು ಆಕೆಯ ತಂದೆ ದಿಗಂಬರ್ ಮೋಹಂತಿಯನ್ನು ಭುವನೇಶ್ವರದಲ್ಲಿ ಬಂಧಿಸಿದ್ದರು. ಬಂಧಿತ ಆರೋಪಿಗಳು ಪ್ರಮುಖ ಆರೋಪಿಯ ಮಾಹಿತಿ ನೀಡಲು ನಿರಾಕರಿಸಿದ್ದುದರಿಂದ ಪೊಲೀಸರು […]

ಹಾಸ್ಯಗಾರ ಕರ್ಕಿಯವರಿಗೆ ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭ

Wednesday, July 17th, 2013
Comedian Karki

ಮಂಗಳೂರು : ಯಕ್ಷಗಾನ ಕಲಾಕ್ಷೇತ್ರದ ಕಲಾಶಕ ಪುರುಷ ಶೇಣಿ ಗೊಪಾಲ ಕೃಷ್ಣಭಟ್ ಸಂಸ್ಮರಣಾರ್ಥವಾಗಿ ತಾ| 20-07-13 ಹಾಗೂ 21-07-13ರಂದು ಶ್ರೀ ವಿದ್ಯಾದಿರಾಜಕಲಾಕ್ಷೆತ್ರ, ಶಿರಸಿಯಲ್ಲಿ, ಯಕ್ಷಸಂಭ್ರಮ ಶಿರಸಿ ಇವರ ಸಹಯೋಗದಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ “ಪಾದುಕ ಪ್ರದಾನ” ಹಾಗೂ “ವಿಭೀಷಣ ಪ್ರಪತ್ತಿ” ಎಂಬ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಗಲಿದೆ ಮತ್ತು ಶ್ರೀ ಎಂ.ಎಲ್.ಸಾಮಗರ ಅಧ್ಯಕ್ಷತೆಯಲ್ಲಿ, ಹಾಸ್ಯಗಾರ ಪರಮಯ್ಯ ನಾರಾಯಣ ಕರ್ಕಿಯವರಿಗೆ “ಶೇಣಿ ಪ್ರಶಸ್ತಿ” ಕಾರ್ಯಕ್ರಮವು ಜರಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ […]

ಹೂವಿನ ವ್ಯಾಪಾರಿ ದಂಪತಿಗಳ ಬೈಕಿಗೆ ಟೆಂಪೋ ಡಿಕ್ಕಿ, ಪತ್ನಿ ಸಾವು, ಪತಿ ಗಂಭೀರ

Wednesday, July 17th, 2013
Flower Merchants Killed

ಮಂಗಳೂರು : ಹೂವಿನ ಅಂಗಡಿಯನ್ನು ಮುಚ್ಚಿದ ಬಳಿಕ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ದಂಪತಿಗಳಿಗೆ ಅತಿವೇಗದಲ್ಲಿ ಬಂದ ಟೆಂಪೋ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಮಹಿಳೆ ಮೃತಪಟ್ಟು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಪಡೀಲ್ ಜಂಕ್ಷನ್ ನಲ್ಲಿ ನಡೆದಿದೆ. ಮೃತಮಹಿಳೆಯನ್ನು ಪಡೀಲ್ ಸಮೀಪದ ಕೋಡಕಲ್ ನ ಸಾವಿತ್ರಿ ಜೆ. ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಜವ್ರೆ ಗೌಡ(50) ಅವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ದ.ಕ. ಹಾಲು ಉತ್ಪಾದಕರ ಒಕ್ಕೂಟದಿಂದ ಉತ್ತರಾಖಂಡ ಪ್ರಕೃತಿ ವಿಕೋಪ ಸಂತ್ರಸ್ಥರಿಗೆ 10 ಲಕ್ಷ ಸಹಾಯಧನ

Wednesday, July 17th, 2013
kmf cheque

ಮಂಗಳೂರು : ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವು  ಉತ್ತರಾಖಂಡ ದಲ್ಲಿ ಪ್ರಕೃತಿ ವಿಕೋಪದಿಂದ ಕೇದಾರನಾಥ, ಉತ್ತರಕಾಶಿ ಹಾಗೂ ಇತರ ಪ್ರದೇಶಗಳಲ್ಲಿ ಅಪಾರ ಜನರು ಪ್ರಾಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿ, ಅಪಾರ ಆಸ್ತಿ ನಷ್ಟವಾಗಿರುವುದನ್ನು ಮನಗಂಡು ಮುಖ್ಯಮಂತ್ರಿಗಳ ಮೂಲಕ ಸಹಾಯಧನ ಚೆಕ್ಕನ್ನು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈರವರೊಂದಿಗೆ ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ ಕೊಡವೂರು ಮತ್ತು ನಿರ್ದೇಶಕರಾದ ಶ್ರೀ ಸೀತರಾಮ ರೈ ಸವಣೂರು, ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ […]

ಮೋದಿಯವರನ್ನು ಪ್ರಧಾನಿ ಹುದ್ದೆಗೇರಲು ಅವಕಾಶ ಮಾಡಿಕೊಡಬಾರದು : ಪೂಜಾರಿ

Wednesday, July 17th, 2013
Poojary Press

ಮಂಗಳೂರು : ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಅಸಮರ್ಥ ವ್ಯಕ್ತಿಯಾಗಿದ್ದು, ಅವರ ಸಿದ್ದಾಂತಗಳು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಅಪಾಯಕಾರಿಯಾಗಿರದೆ ಎಲ್ಲಾ ಸಮುದಾಯಗಳಿಗೂ ಅಪಾಯಕಾರಿಯಾಗಿದೆ. ಮೋದಿ ತನ್ನ ಹುಸಿ ಮಾತುಗಳಿಂದ ದೇಶವನ್ನು ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ , ಮೋದಿ  ಓರ್ವ ‘ಸುಳ್ಳಿನ ಸರದಾರ’ ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಹೇಳಿದ್ದಾರೆ. ಮಂಗಳವಾರ ಕಾಂಗ್ರೆಸ್ಸ್ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ಸಿದ್ದಾಂತಗಳಿಗೆ ಬಿಜೆಪಿಯ ಉನ್ನತ ಮಟ್ಟದ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಅಡ್ವಾಣಿಯವರು ಕೂಡ […]

ಕಾಲಮಿತಿ ಯಕ್ಷಗಾನ ಪ್ರದರ್ಶನ ಅಪೇಕ್ಷಣೀಯವಾಗಿದೆ : ಪ್ರೊ.ಸಾಮಗ

Tuesday, July 16th, 2013
Darmasthala Yakshagana

ಉಜಿರೆ: ಇಂದಿನ ಯುವಜನತೆ ಹಾಗೂ ಮುಂದಿನ ತಲೆಮಾರಿಗೆ ಯಕ್ಷಗಾನದ ಸೊಗಡನ್ನು ಪರಿಚಯಿಸುವ ದೃಷ್ಟಿಯಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನ ಅಪೇಕ್ಷಣಿಯವಾಗಿದೆ. ಇದರಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಅದನ್ನು ಸುಲಭದಲ್ಲಿ ಪರಿಹರಿಸಬಹುದು ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಹೇಳಿದರು. ಧರ್ಮಸ್ಥಳದಲ್ಲಿ ಮಂಗಳವಾರ ಆಯೋಜಿಸಲಾದ ಯಕ್ಷಗಾನ ಪ್ರದರ್ಶನದ ಬಗ್ಯೆ ಚಿಂತನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬದಲಾದ ಆಧುನಿಕ ಜೀವನ ಶೈಲಿ ಹಾಗೂ ಕಾಲಧರ್ಮಕ್ಕೆ ಅನುಗುಣವಾಗಿ ಯಕ್ಷಗಾನ ಪ್ರದರ್ಶನದಲ್ಲಿ ಕೆಲವು ಆಂತರಿಕ […]