ಕತ್ತಿಯಿಂದ ಕಡಿದು ಅಣ್ಣನ ಕೊಲೆ: ತಮ್ಮ ನ್ಯಾಯಲಯಕ್ಕೆ ಹಾಜರು
Wednesday, February 3rd, 2016ಬದಿಯಡ್ಕ: ಕತ್ತಿಯಿಂದ ಕಡಿದು ಅಣ್ಣನನ್ನು ತಮ್ಮ ಕೊಲೆಗೈದ ಪ್ರಕರಣ ನಡೆದಿದ್ದು ಆರೋಪಿಯನ್ನು ಬದಿಯಡ್ಕ ಪೋಲಿಸರು ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ. ಮುಂಡಿತ್ತಡ್ಕ ಸಮೀಪದ ಸರಳಿ ಕೊರಗಪ್ಪ ಪೂಜಾರಿಯವರ ಪುತ್ರ ವಾಸುದೇವ(35) ಕೊಲೆಗೀಡಾದ ದುರ್ದೈವಿ. ಆರೋಪಿಯಾದ ಇವರ ಸಹೋದರ ಚಂದ್ರಹಾಸ(28)ನನ್ನು ಮನೆ ಬಳಿಯ ಕಾಡಿನಿಂದ ಊರವರ ಸಹಾಯದೊಂದಿಗೆ ಬದಿಯಡ್ಕ ಪೋಲಿಸರು ಬಂಧಿಸಿ ಕೊಲೆಗೆ ಬಳಸಿದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ವಿದ್ಯಾನಗರ ಸಿ.ಐ ತನಿಖೆ ನಡೆಸುತ್ತಿದ್ದಾರೆ. ತರವಾಡು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವಾಸುದೇವ 7.15 ರ ವೇಳೆಗೆ ಮನೆಗೆ ತೆರಳಿದಾಗ […]