ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಹುಲಿ ಶಾಂಭವಿ

Friday, November 9th, 2012
Pilkula tiger Shaambhavi

ಮಂಗಳೂರು :ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದ ವನ್ಯಜೀವಿ ಸಂಕುಲಕ್ಕೆ ಐದು ಹೊಸ ಸದಸ್ಯರ ಸೇರ್ಪಡೆಯಾಗಿದೆ. 4 ವರ್ಷ ಪ್ರಾಯದ ಹುಲಿ ಶಾಂಭವಿ ಬುಧವಾರ ಅವಳಿ ಮರಿಗಳಿಗೆ ಜನ್ಮನೀಡಿದೆ. ಹೊಸ ಅತಿಥಿಗಳ ಆಗಮನದಿಂದ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 9ಕ್ಕೆ ಏರಿದೆ. ಉದ್ಯಾನದ ಸಿಬ್ಬಂದಿ ವಿಶೇಷ ಕಾಳಜಿಯಿಂದ ಶಾಂಭವಿಯ ಆರೈಕೆ ಮಾಡುತ್ತಿದ್ದು, ಪ್ರಸ್ತುತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಜ, ವಿಕ್ರಮ, ನೇತ್ರಾವತಿ, ಶರಾವತಿ, ಕೃಷ್ಣ, ಕದಂಬ ಸೇರಿದಂತೆ 7 ಹುಲಿಗಳಿವೆ. ಈ ಉದ್ಯಾನವನದಲ್ಲಿಯೇ ಗೌರಿ ಎಂಬ ಹೆಸರಿನ ಚಿರತೆಯೊಂದು ಒಂದು […]

ನಕಲಿ ಅಂಕಪಟ್ಟಿ, ಸರ್ಟಿಫಿಕೆಟ್ ಮಾರಾಟ ಜಾಲ ಪತ್ತೆ ಇಬ್ಬರು ಆರೋಪಿಗಳ ಬಂಧನ

Friday, November 9th, 2012
Fake Certificate

ಮಂಗಳೂರು :ಮಂಗಳೂರು ಸಿಸಿಬಿ ಪೊಲೀಸರು ದೇಶದ ನಾನಾ ವಿಶ್ವವಿದ್ಯಾನಿಲಯಗಳ ಅಂಕಪಟ್ಟಿ ಹಾಗೂ ಪದವಿ ಸರ್ಟಿಫಿಕೇಟ್‌ಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುರತ್ಕಲ್ ಮಾರಿಗುಡಿ ಸಮೀಪದ ಶ್ರೀದೇವಿ ಅಪಾರ್ಟ್‌ಮೆಂಟ್ ನಿವಾಸಿ ಅವಿನಾಶ್ ಶೆಟ್ಟಿ (31) ಹಾಗೂ ಕಾಸರಗೋಡು ಜಿಲ್ಲೆಯ ವಲುಕ್ಕಾಡ್ ಎಲಂಬಾಚಿ ನಿವಾಸಿ ಮೊಹಮ್ಮದ್ ಶಾಹಿದ್ ಎನ್.ಪಿ. ಬಂಧಿತ ಆರೋಪಿಗಳಾಗಿದ್ದಾರೆ. ಆಗ್ರಾದ ಡಾ.ಬಿ.ಆರ್.ಅಂಬೇಡ್ಕರ್ ವಿವಿ, ಚತ್ತಿಸ್‌ಘಡ ವಿವಿ, ಬಿಸ್ಲಾಪುರ್ ಡಾ.ಸಿ.ವಿ.ರಾಮನ್ ವಿವಿ, ಕರ್ನಾಟಕದ ಎಸ್ಸೆಸ್ಸೆಲ್ಸಿ ಬೋರ್ಡ್, ಮೀರತ್‌ನ ಚೌದರಿ ಚರಣಸಿಂಹ ವಿವಿ, […]

ಭೂಗತ ಪಾತಕಿ ರವಿಪೂಜಾರಿಯ ಇಬ್ಬರು ಸಹಚರರ ಬಂಧನ

Friday, November 9th, 2012
Ravi Poojari aides

ಮಂಗಳೂರು :ಮಂಗಳೂರು ನಗರ ಪೊಲೀಸ್ ಅಯುಕ್ತ ಮನೀಷ್ ಕರ್ಬಿಕರ್ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಭೂಗತ ಪಾತಕಿಗಳಾದ ರವಿಪೂಜಾರಿ ಮತ್ತು ಕಲಿಯೋಗೀಶ ರವರುಗಳ ಇಬ್ಬರು ಸಹಚರರನ್ನು ಹಫ್ತಾ ಹಣದೊಂದಿಗೆ ಬಂಧಿಸಿರುವುದಾಗಿ ತಿಳಿಸಿದರು. ಬಂಧಿತರನ್ನು ಸುರತ್ಕಲ್ ಸಮೀಪದ ತಾರಾನಾಥ ಮತ್ತು ಸುಬ್ರಮಣ್ಯ ಅಲಿಯಾಸ್ ಸುಬ್ಬು ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳಿಂದ ಒಂದು ಲಕ್ಷ ರೂಪಾಯಿ ನಗದು ಹಣ ಮತ್ತು 8 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರವಿಪೂಜಾರಿ ಮತ್ತು ಕಲಿಯೋಗೀಶ ರವರುಗಳು ಶ್ರೀಮಂತ ಉಧ್ಯಮಿಗಳಿಂದ ಹಫ್ತಾ ಹಣಕ್ಕಾಗಿ ಬೇಡಿಕೆ ಒಡ್ಡುತ್ತಿದ್ದು, ಅದನ್ನು […]

ತುಳು ಸಿನಿಮಾ ತೆಲಿಕೆದ ಬೊಳ್ಳಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ

Friday, November 9th, 2012
Telikeda Bolli

ಮಂಗಳೂರು :ತುಳು ರಂಗಭೂಮಿಯಲ್ಲಿ ಅತ್ಯಂತ ಪ್ರಸಿದ್ಧಿ ಪಡೆದು ತೆಲಿಕೆದ ಬೊಳ್ಳಿ ಎಂಬ ಬಿರುದು ಹೊಂದಿರುವ ಪ್ರಸಿದ್ಧ ನಟ ದೇವದಾಸ್ ಕಾಪಿಕಾಡ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಬಹು ನಿರೀಕ್ಷೆಯ ತೆಲಿಕೆದ ಬೊಳ್ಳಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವು ನಗರದ ಪ್ರತಿಷ್ಠಿತ ಹೊಟೇಲ್ ಓಶಿಯನ್‌ ಪರ್ಲ್‌ನಲ್ಲಿ ಜರಗಿತು. ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ತೆಲಿಕೆದ ಬೊಳ್ಳಿ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿದರು. ಚಿತ್ರವು ಅತ್ಯುತ್ತಮ ಹಾಡುಗಳನ್ನು ಹೊಂದಿದ್ದು, ದಕ್ಷಿಣ ಕನ್ನಡದಲ್ಲಿ ಉತ್ತಮ ಕಥಾಹಂದರಗಳುಳ್ಳ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಸಂತಸದ […]

ಹಿಂದಿ, ತೆಲುಗು, ತಮಿಳಿನಲ್ಲೂ ಸುದೀಪ್ ಬಚ್ಚನ್ ರಿಲೀಸ್?

Thursday, November 8th, 2012
Sudeep

ಬೆಂಗಳೂರು :ಕಿಚ್ಚ ಸುದೀಪ್ ಈಗ ತೆಲುಗು ಮಾತ್ರವಲ್ಲ, ತಮಿಳು ಮತ್ತು ಹಿಂದಿಯಲ್ಲೂ ಸಿನಿರಸಿಕರ ಗಮನ ಸೆಳೆದಿದ್ದಾರೆ. ಒಂದು ರೀತಿಯಲ್ಲಿ ಅವರೀಗ ಕನ್ನಡಕ್ಕಷ್ಟೇ ಸೀಮಿತವಾದ ನಾಯಕರಲ್ಲ. ‘ಬಚ್ಚನ್’ ಚಿತ್ರವನ್ನು ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯಾವುದೇ ಯೋಚನೆ ಇರಲಿಲ್ಲ.ಆದರೆ ಈಗ ನಿರ್ಧಾರ ಬದಲಾಗುವ ಸಾಧ್ಯತೆಗಳು ಕಾಣುತ್ತಿದ್ದು. ನಿರ್ದೇಶಕ ಶಶಾಂಕ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಸುದೀಪ್‌ಗೆ ಭಾರತೀಯ ಚಿತ್ರರಂಗದಲ್ಲಿ ಭಾರೀ ಅಭಿಮಾನಿಗಳಿದ್ದಾರೆ. ಅವರೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಬಚ್ಚನ್ ಚಿತ್ರವನ್ನು ಇತರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಸಾಧ್ಯತೆಗಳನ್ನು ಈಗಲೇ […]

ನಗರ ಸಭೆ ವತಿಯಿಂದ ಮಣಿಪಾಲದಲ್ಲಿ ಗೂಡಂಗಡಿ ತೆರವು ಕಾರ್ಯಾಚರಣೆ

Thursday, November 8th, 2012
Udupi TMC

ಮಣಿಪಾಲ :ಮಣಿಪಾಲದ ಈಶ್ವರನಗರದಲ್ಲಿ “ಬಸ್ ಬೇ” ಅಭಿವೃದ್ಧಿಗಾಗಿ ಗುರುವಾರ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಯಿತು. ಬೆಳಿಗ್ಗೆ ಜೆಸಿಬಿ ಹಾಗೂ ಇಂಜಿನೀಯರ್ ಸ್ಥಳಕ್ಕೆ ಧಾವಿಸಿ ವ್ಯಾಪಾರಸ್ಥರಿಗೆ ಯಾವುದೇ ನೋಟಿಸ್ ನೀಡದೇ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದರು. ತೆರವು ಕೆಲಸ ಆರಂಭವಾಗುತ್ತಲೇ ಕಾಂಗ್ರೇಸ್ ಮುಂಖಂಡರು ಹಾಗೂ ಸ್ಥಳೀಯರು ಸೇರಿ ಕೆಲಸಕ್ಕೆ ಅಡ್ಡಿ ಪಡಿಸಿ ಕಾರ್ಯಾಚರಣೆಯನ್ನು ವಿರೋಧಿಸಿದರು. ವ್ಯಾಪಾರಸ್ಥರಿಗೆ ಯಾವುದೇ ನೋಟಿಸ್ ನೀಡದೇ ಒಮ್ಮೆಲೆ ತೆರವು ಮಾಡಿಸುವುದು ನ್ಯಾಯಸಮ್ಮತವಲ್ಲ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ವ್ಯಾಪಾರಸ್ಥರಿಗೆ […]

ಪಿಲಿಕುಳ :ರಾಜ್ಯಮಟ್ಟದ ಸ್ಕೌಟರ್ ಸಮಾವೇಶ

Thursday, November 8th, 2012
Skautar convention

ಮಂಗಳೂರು :ಪಿಲಿಕುಳದಲ್ಲಿ ಇಂದು ನಡೆದ ರಾಜ್ಯಮಟ್ಟದ ಸ್ಕೌಟರ್ ಸಮಾವೇಶ ಇಂಡಬಾವನ್ನು ಕರ್ನಾಟಕ ಬ್ಯಾಂಕ್ ನ ಅಧ್ಯಕ್ಷ ಅನಂತ ಕೃಷ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಯುವ ಜನತೆಯಲ್ಲಿ ಇಂದು ಶಿಸ್ತು ಕಡಿಮೆಯಾಗುತ್ತಿದ್ದು ಅದನ್ನು ಬೆಳೆಸುವುದು ಅಗತ್ಯವಾಗಿದೆ. ಸ್ಕೌಟ್ ಹಾಗೂ ಗೈಡ್ ಈ ನಿಟ್ಟಿನಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿವೆ ಎಂದರು. ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಕಡ್ಡಾಯವಾಗಿ 2 ವರ್ಷಗಳ ಕಾಲ ಮಿಲಿಟರಿಯಲ್ಲಿ ಕೆಲಸ ಮಾಡಬೇಕು. ಇದರಿಂದಾಗಿ ಅಲ್ಲಿನ ಜನರಲ್ಲಿ ಶಿಸ್ತು, ಸಂಯಮ, ಸಹಬಾಳ್ವೆ ಹೆಚ್ಚಾಗಿ ಕಂಡು ಬರುತ್ತದೆ. […]

ಸುದ್ದಿವಾಹಿನಿಯ ವರದಿಗಾರ ನವೀನ್‌ ಸೂರಿಂಜೆ ಬಂಧನ

Thursday, November 8th, 2012
Naveen Soorinje

ಮಂಗಳೂರು :ಸುದ್ದಿವಾಹಿನಿಯೊಂದರ ವರದಿಗಾರ ನವೀನ್‌ ಸೂರಿಂಜೆ ಅವರನ್ನು ಪಡೀಲ್‌ ಬಳಿ ಬುಧವಾರ ರಾತ್ರಿ ಗ್ರಾಮಾಂತರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸುಳ್ಯದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಭಾಗಿಯಾಗಿ ಹಿಂತಿರುಗಿದ ಸಂದರ್ಭ ರವೀಶ್ ನಾಯಕ್ ನೇತೃತ್ವದಲ್ಲಿ ಕಂಕನಾಡಿ ಪೊಲೀಸರು ಅವರನ್ನು ಬಂಧಿಸಿದರು. ಕಳೆದ ಜುಲೈ 28ರಂದು ಮೋರ್ನಿಂಗ್‌ ಮಿಸ್ಟ್‌ ಹೋಂಸ್ಟೇಯಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವತಿಯರ ಮೇಲೆ ದಾಳಿ ನಡೆದ ಸಂದರ್ಭ ಸ್ಥಳದಲ್ಲಿದ್ದ ನವೀನ್‌ ತಮಗೆ ಸಕಾಲದಲ್ಲಿ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಅವರ ಮೇಲೆ ಕೇಸು ದಾಖಲಿಸಿದ್ದರು. […]

ನಗರದಲ್ಲಿ ಎನ್ ಇಇಟಿ ಪರೀಕ್ಷೆ ಜಾರಿ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ ಪ್ರತಿಭಟನೆ

Wednesday, November 7th, 2012
NEET Exams

ಮಂಗಳೂರು :ಕರ್ನಾಟಕ ರಾಜ್ಯಸರ್ಕಾರ ಪ್ರಸಕ್ತ ವರ್ಷದಿಂದಲೇ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು NEET (National Eligibility Entrance Test) ಪರೀಕ್ಷೆ ಬರೆಯುದನ್ನು ಜಾರಿಗೆ ತಂದಿರುವುದನ್ನು ಅಂತ್ಯತ ಅವೈಜ್ಞಾನಿಕ ಕ್ರಮ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ಇಂದು ಪ್ರತಿಭಟನೆಯನ್ನು ನಡೆಸಲಾಯಿತು. ಎ.ಬಿ.ವಿ.ಪಿ. ರಾಜ್ಯ ಕಾರ್ಯದರ್ಶಿ ರಮೇಶ್ ಕೆ ಮಾತನಾಡಿ ರಾಜ್ಯ ಸರಕಾರವು ಈ ಪರೀಕ್ಷೆಯ ಕುರಿತಂತೆ ಕೇಂದ್ರ ಸರಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲೇ ಪರೀಕ್ಷೆಯನ್ನು ನಡೆಸುವುದಾಗಿ […]

ಅಂತರ್ ರಾಜ್ಯ ವಾಹನ ಕಳ್ಳತನದ ನಾಲ್ವರು ಆರೋಪಿಗಳ ಸೆರೆ

Wednesday, November 7th, 2012
SP Abhishek Goel

ಮಂಗಳೂರು :ದ.ಕ ಜಿಲ್ಲೆಯ ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಕಡಬ, ಉಳ್ಳಾಲ ಹಾಗೂ ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಾಹನ ಕಳ್ಳತನ ಹಾಗೂ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿದ 4 ಜನ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಿಗೆ ಹಸ್ತಾಂತರಿಸಿರುವುದಾಗಿ ಬುಧವಾರ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ […]